ETV Bharat / state

ದೇವರಾಯನ ದುರ್ಗದ ದೇಗುಲದ ಬಳಿ ಪಾರ್ಕಿಂಗ್ ಅವ್ಯವಸ್ಥೆ - ತುಮಕೂರು ದೇವರಾಯದುರ್ಗಾದ ಯೋಗನರಸಿಂಹ ದೇವಾಯಲ

ಜಿಲ್ಲೆಯ ದೇವರಾಯನ ದುರ್ಗದ ಯೋಗನರಸಿಂಹ ದೇವಾಲಯಕ್ಕೆ ಬರುವ ಭಕ್ತರು ತಮ್ಮ ವಾಹನಗಳ ನಿಲುಗಡೆಗೆ ಸ್ಥಳಾವಕಾಶವಿಲ್ಲದೆ ತೊಂದರೆ ಅನುಭವಿಸುವಂತಾಗಿದೆ.

ದೇವರಾಯನ ದುರ್ಗದ ದೇಗುಲದ ಬಳಿ ಪಾರ್ಕಿಂಗ್ ಅವ್ಯವಸ್ಥೆ
vehicles parking problem in Devarayanadurga Temple
author img

By

Published : Jan 9, 2020, 5:36 PM IST

ತುಮಕೂರು : ಜಿಲ್ಲೆಯ ದೇವರಾಯನ ದುರ್ಗದ ಯೋಗನರಸಿಂಹ ದೇವಾಲಯಕ್ಕೆ ಬರುವ ಭಕ್ತರು ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ತೊಂದರೆ ಅನುಭವಿಸುವಂತಾಗಿದೆ.

ದೇವರಾಯನ ದುರ್ಗದ ದೇಗುಲದ ಬಳಿ ಪಾರ್ಕಿಂಗ್ ಅವ್ಯವಸ್ಥೆ

ಮುಜರಾಯಿ ಇಲಾಖೆಗೆ ಸೇರಿರುವ ಈ ದೇಗುಲದ ಸುತ್ತಮುತ್ತ ವಾಹನ ನಿಲುಗಡೆಗೆ ಸೂಕ್ತ ರೀತಿಯ ವ್ಯವಸ್ಥೆ ಇಲ್ಲ. ಅಲ್ಲದೇ ರಸ್ತೆ ಪಕ್ಕದ ವ್ಯಾಪಾರಿಗಳು ಎಲ್ಲೆಂದರಲ್ಲಿ ಗೂಡಂಗಡಿಗಳನ್ನು ಹಾಕಿಕೊಂಡಿದ್ದು, ವಾಹನ ನಿಲುಗಡೆಗೆ ತೀವ್ರ ತೊಂದರೆಯಾಗುತ್ತದೆ. ಕಿರಿದಾದ ರಸ್ತೆಗಳಲ್ಲಿ ದೇಗುಲಕ್ಕೆ ಬರುವ ಪ್ರವಾಸಿಗರು ಭಯದಿಂದಲೇ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಅಷ್ಟೇ ಅಲ್ಲದೇ ವಾಹನ ನಿಲುಗಡೆ ಮಾಡಿ ದೇವರ ದರ್ಶನ ಪಡೆದು ವಾಪಸ್ ಬರುವ ವೇಳೆಗೆ ವಾಹನದಲ್ಲಿ ಇದ್ದಂತಹ ಸಾಮಾಗ್ರಿಗಳು ಕೂಡ ಕಳ್ಳರ ಪಾಲಾಗುತ್ತಿದೆ ಎಂದು ಭಕ್ತರು ದೂರಿದ್ದು, ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಅನ್ನೋದು ಸ್ಥಳೀಯರ ಆಗ್ರಹ.

ತುಮಕೂರು : ಜಿಲ್ಲೆಯ ದೇವರಾಯನ ದುರ್ಗದ ಯೋಗನರಸಿಂಹ ದೇವಾಲಯಕ್ಕೆ ಬರುವ ಭಕ್ತರು ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ತೊಂದರೆ ಅನುಭವಿಸುವಂತಾಗಿದೆ.

ದೇವರಾಯನ ದುರ್ಗದ ದೇಗುಲದ ಬಳಿ ಪಾರ್ಕಿಂಗ್ ಅವ್ಯವಸ್ಥೆ

ಮುಜರಾಯಿ ಇಲಾಖೆಗೆ ಸೇರಿರುವ ಈ ದೇಗುಲದ ಸುತ್ತಮುತ್ತ ವಾಹನ ನಿಲುಗಡೆಗೆ ಸೂಕ್ತ ರೀತಿಯ ವ್ಯವಸ್ಥೆ ಇಲ್ಲ. ಅಲ್ಲದೇ ರಸ್ತೆ ಪಕ್ಕದ ವ್ಯಾಪಾರಿಗಳು ಎಲ್ಲೆಂದರಲ್ಲಿ ಗೂಡಂಗಡಿಗಳನ್ನು ಹಾಕಿಕೊಂಡಿದ್ದು, ವಾಹನ ನಿಲುಗಡೆಗೆ ತೀವ್ರ ತೊಂದರೆಯಾಗುತ್ತದೆ. ಕಿರಿದಾದ ರಸ್ತೆಗಳಲ್ಲಿ ದೇಗುಲಕ್ಕೆ ಬರುವ ಪ್ರವಾಸಿಗರು ಭಯದಿಂದಲೇ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಅಷ್ಟೇ ಅಲ್ಲದೇ ವಾಹನ ನಿಲುಗಡೆ ಮಾಡಿ ದೇವರ ದರ್ಶನ ಪಡೆದು ವಾಪಸ್ ಬರುವ ವೇಳೆಗೆ ವಾಹನದಲ್ಲಿ ಇದ್ದಂತಹ ಸಾಮಾಗ್ರಿಗಳು ಕೂಡ ಕಳ್ಳರ ಪಾಲಾಗುತ್ತಿದೆ ಎಂದು ಭಕ್ತರು ದೂರಿದ್ದು, ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಅನ್ನೋದು ಸ್ಥಳೀಯರ ಆಗ್ರಹ.

Intro:ದೇವರಾಯನದುರ್ಗದ ಶ್ರೀ ಯೋಗನರಸಿಂಹ ಸ್ವಾಮಿ ದೇಗುಲದ ಬಳಿ ಪಾರ್ಕಿಂಗ್ ಅವ್ಯವಸ್ಥೆ.....

ತುಮಕೂರು
ತುಮಕೂರು ಜಿಲ್ಲೆಯ ದೇವರಾಯನದುರ್ಗ ಪ್ರದೇಶದಲ್ಲಿ ಇರುವ ಯೋಗನರಸಿಂಹಸ್ವಾಮಿ ದೇಗುಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯಲು ಬರುವ ಭಕ್ತರು ತಮ್ಮ ವಾಹನಗಳನ್ನು ನಿಲುಗಡೆ ಗೊಳಿಸಲು ಸಾಕಷ್ಟು ಪರದಾಡುತ್ತಿದ್ದಾರೆ.
ಬೆಟ್ಟದ ಮೇಲೆ ಇರುವ ಈ ದೇಗುಲಕ್ಕೆ ತೆರಳಲು ವಾಹನಗಳಲ್ಲಿ ಬರುವಂತಹ ಭಕ್ತರು ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ತೊಂದರೆ ಅನುಭವಿಸುವಂತಾಗಿದೆ. ಮುಜರಾಯಿ ಇಲಾಖೆಗೆ ಸೇರಿದಂತಹ ಈ ದೇಗುಲದ ಸುತ್ತಲೂ ಭಕ್ತರಿಗೆ ಪೂರಕವಾದ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿಲ್ಲ. ಅಲ್ಲದೇ ರಸ್ತೆಬದಿ ವ್ಯಾಪಾರಿಗಳು ಕೂಡ ಎಲ್ಲೆಂದರಲ್ಲಿ ಗೂಡಂಗಡಿಗಳನ್ನು ಹಾಕಿರುವುದರಿಂದ ವಾಹನ ನಿಲುಗಡೆಗೆ ತೀವ್ರ ತೊಂದರೆಯಾಗುತ್ತದೆ. ಕಿರಿದಾದ ರಸ್ತೆಗಳಲ್ಲಿ ದೇಗುಲಕ್ಕೆ ಬರುವ ಪ್ರವಾಸಿಗರು ಭಯದಿಂದಲೇ ಓಡಾಡಬೇಕಾದ ಪರಿಸ್ಥಿತಿ ಪರಿಸ್ಥಿತಿ ಸಹ ನಿರ್ಮಾಣವಾಗಿದೆ.
ಇನ್ನು ಇಲ್ಲಿರುವಂತಹ ಸ್ಥಳದಲ್ಲಿ ವಾಹನ ನಿಲುಗಡೆಗೊಳಿಸಿ ಬೆಟ್ಟದ ಮೇಲೆ ಇರುವ ದೇಗುಲ ದರ್ಶನ ಪಡೆದು ವಾಪಸ್ ಬರುವ ವೇಳೆಗೆ ವಾಹನದಲ್ಲಿ ಇದ್ದಂತಹ ಸಾಮಗ್ರಿಗಳು ಕೂಡ ಕಳ್ಳರ ಪಾಲಾಗುತ್ತಿವೆ.
ಇನ್ನು ಮುಂದಾದರೂ ಹೊಣೆಗಾರರು ಇತ್ತ ಗಮನಹರಿಸಿ ಪೂರಕವಾದ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕೆಂದು ಭಕ್ತರು ಆಗ್ರಹಿಸಿದ್ದಾರೆ



Body:ತುಮಕೂರು


Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.