ಶಿವಮೊಗ್ಗ: ಮಹಾನಗರ ಪಾಲಿಕೆಯಿಂದ ಅನುಮತಿ ಪಡೆಯದೆ ನಗರದ ವಿವಿಧ ಸರ್ಕಲ್ಗಳಲ್ಲಿ ಹಾಕಿದ್ದ ಫ್ಲೆಕ್ಸ್ಗಳನ್ನ ಪಾಲಿಕೆ ಸಿಬ್ಬಂದಿ ತೆರವುಗೊಳಿಸಿದ್ದಾರೆ.
ಮಹಾನಗರ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್ ರವರ ಆದೇಶದ ಮೇರೆಗೆ ಪಾಲಿಕೆ ಸಿಬ್ಬಂದಿಗಳು ಅನಧಿಕೃತ ಪ್ಲೆಕ್ಸ್ಗಳನ್ನ ತೆಗೆದುಹಾಕಿದ್ದಾರೆ. ನಗರದ ಅಂಬೇಡ್ಕರ್ ವೃತ್ತ, ಲಕ್ಷ್ಮಿ ಟಾಕೀಸ್ ವೃತ್ತ ಹಾಗೂ ಪೊಲೀಸ್ ಚೌಕಿ ಬಳಿಯಲ್ಲಿ ಹಾಕಿದ್ದ 20 ಕ್ಕೂ ಹೆಚ್ಚು ಫ್ಲೆಕ್ಸ್ಗಳನ್ನ ತೆರವು ಮಾಡಿ, ತಮ್ಮ ವಾಹನದಲ್ಲಿ ತುಂಬಿ ಕೊಂಡು ಹೋಗಿದ್ದಾರೆ.
ಶಿವಮೊಗ್ಗದಲ್ಲಿ ನಡೆಯುವ ಅಧಿಕೃತಿಕೆ ಜಾತ್ರೆ ಹಿನ್ನಲೆಯಲ್ಲಿ ತಮಿಳು ಸಮಾಜದ ಮುಖಂಡರುಗಳು ತಮ್ಮ ನೆಚ್ಚಿನ ನಾಯಕರುಗಳೊಂದಿಗೆ ಶುಭಾಷಯಕೋರುವ ಫ್ಲೆಕ್ಸ್ಗಳನ್ನು ಹಾಕಿದ್ದರು.