ETV Bharat / state

ಶಿವಮೊಗ್ಗ: ಬಸ್ ಸೌಲಭ್ಯವಿಲ್ಲದೆ ವಿದ್ಯಾರ್ಥಿಗಳ ಪರದಾಟ

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಚೂರಿಕಟ್ಟೆ ಗ್ರಾಮದಲ್ಲಿನ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾದ ಬಸ್​ ವ್ಯವಸ್ಥೆಯಿಲ್ಲದೆ ಶಾಲಾ- ಕಾಲೇಜಿಗೆ ಹೋಗಲು ಪರದಾಡುತ್ತಿದ್ದಾರೆ. ಕೂಡಲೇ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

author img

By

Published : Feb 6, 2021, 8:05 AM IST

ಬಸ್​ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳ ಪರದಾಟ
Shimoga district churikatte students facing bus problem

ಶಿವಮೊಗ್ಗ: ಸರಿಯಾದ ಸಮಯಕ್ಕೆ ಬಸ್​​​​ ಸೌಲಭ್ಯವಿಲ್ಲದೆ ತರಗತಿಗಳಿಗೆ ಗೈರಾಗುವಂತಹ ಪರಿಸ್ಥಿತಿ ಸಾಗರದ ಚೂರಿಕಟ್ಟೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ನಿರ್ಮಾಣವಾಗಿದೆ.

ಬಸ್​ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳ ಪರದಾಟ

ಜಿಲ್ಲೆಯ ಸಾಗರ ತಾಲೂಕಿನ ಚೂರಿಕಟ್ಟೆ ಗ್ರಾಮದಲ್ಲಿ ಸುಮಾರು 200ಕ್ಕೂ ಅಧಿಕ ವಿದ್ಯಾರ್ಥಿಗಳು ಸಾಗರದ ವಿವಿಧ ಕಾಲೇಜುಗಳಿಗೆ ವಿದ್ಯಾಭ್ಯಾಸಕ್ಕೆಂದು ಹೋಗುತ್ತಾರೆ. ಆದರೆ ಇವರೆಲ್ಲರಿಗೂ ಸೂಕ್ತ ಬಸ್ ಸೌಲಭ್ಯವಿಲ್ಲದೆ ತರಗತಿಗಳಿಗೆ ಸರಿಯಾದ ಸಮಯಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ.

ವಿದ್ಯಾರ್ಥಿಗಳೆಲ್ಲ ಬೆಳ್ಳಂಬೆಳಗ್ಗೆ ತಮ್ಮ ತಮ್ಮ ಹಳ್ಳಿಯಿಂದ ನಾಲ್ಕೈದು ಕಿ.ಮೀ ದೂರು ನಡೆದು ಚೂರಿಕಟ್ಟೆಗೆ ಬಂದು ಬಸ್​​ಗಾಗಿ ಕಾಯುತ್ತ ನಿಲ್ಲುತ್ತಾರೆ. ಆದರೆ ಇಲ್ಲಿ ಸಂಚರಿಸುವ ಬಸ್​ಗಳು ನಿಲ್ಲಿಸದೆ ಹಾಗೆ ಹೋಗುತ್ತಿವೆ. ಇದರಿಂದ ಕಾಲೇಜಿಗೆ ಸಮಯಕ್ಕೆ‌ ಸರಿಯಾಗಿ ಹೋಗಲು ಆಗದೆ ಪಾಠಗಳಿಂದ ವಂಚಿತರಾಗುತ್ತಿದ್ದಾರೆ.‌ ತಮಗೆ ಬಸ್ ಸೌಲಭ್ಯ ಕಲ್ಪಿಸಬೇಕೆಂದು ವಿದ್ಯಾರ್ಥಿಗಳು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಶಿವಮೊಗ್ಗ: ಸರಿಯಾದ ಸಮಯಕ್ಕೆ ಬಸ್​​​​ ಸೌಲಭ್ಯವಿಲ್ಲದೆ ತರಗತಿಗಳಿಗೆ ಗೈರಾಗುವಂತಹ ಪರಿಸ್ಥಿತಿ ಸಾಗರದ ಚೂರಿಕಟ್ಟೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ನಿರ್ಮಾಣವಾಗಿದೆ.

ಬಸ್​ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳ ಪರದಾಟ

ಜಿಲ್ಲೆಯ ಸಾಗರ ತಾಲೂಕಿನ ಚೂರಿಕಟ್ಟೆ ಗ್ರಾಮದಲ್ಲಿ ಸುಮಾರು 200ಕ್ಕೂ ಅಧಿಕ ವಿದ್ಯಾರ್ಥಿಗಳು ಸಾಗರದ ವಿವಿಧ ಕಾಲೇಜುಗಳಿಗೆ ವಿದ್ಯಾಭ್ಯಾಸಕ್ಕೆಂದು ಹೋಗುತ್ತಾರೆ. ಆದರೆ ಇವರೆಲ್ಲರಿಗೂ ಸೂಕ್ತ ಬಸ್ ಸೌಲಭ್ಯವಿಲ್ಲದೆ ತರಗತಿಗಳಿಗೆ ಸರಿಯಾದ ಸಮಯಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ.

ವಿದ್ಯಾರ್ಥಿಗಳೆಲ್ಲ ಬೆಳ್ಳಂಬೆಳಗ್ಗೆ ತಮ್ಮ ತಮ್ಮ ಹಳ್ಳಿಯಿಂದ ನಾಲ್ಕೈದು ಕಿ.ಮೀ ದೂರು ನಡೆದು ಚೂರಿಕಟ್ಟೆಗೆ ಬಂದು ಬಸ್​​ಗಾಗಿ ಕಾಯುತ್ತ ನಿಲ್ಲುತ್ತಾರೆ. ಆದರೆ ಇಲ್ಲಿ ಸಂಚರಿಸುವ ಬಸ್​ಗಳು ನಿಲ್ಲಿಸದೆ ಹಾಗೆ ಹೋಗುತ್ತಿವೆ. ಇದರಿಂದ ಕಾಲೇಜಿಗೆ ಸಮಯಕ್ಕೆ‌ ಸರಿಯಾಗಿ ಹೋಗಲು ಆಗದೆ ಪಾಠಗಳಿಂದ ವಂಚಿತರಾಗುತ್ತಿದ್ದಾರೆ.‌ ತಮಗೆ ಬಸ್ ಸೌಲಭ್ಯ ಕಲ್ಪಿಸಬೇಕೆಂದು ವಿದ್ಯಾರ್ಥಿಗಳು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.