ETV Bharat / state

ಮನೆಗಳಲ್ಲಿಯೇ ರಂಜಾನ್​ ಪ್ರಾರ್ಥನೆ: ಸರ್ಕಾರದ ನಿಯಮಾವಳಿ ಗೌರವಿಸಿದ ಮುಸ್ಲಿಂ ಬಾಂಧವರು - Ramadhan prayer done by muslims in shimoga

ಲಾಕ್​ಡೌನ್​ ಹಾಗೂ ಸರ್ಕಾರದ ಆದೇಶದಂತೆ ತುಮಕೂರು, ಶಿವಮೊಗ್ಗ ನಗರದ ಮುಸ್ಮಿಮರು ಸರಳವಾಗಿ ರಂಜಾನ್​ ಹಬ್ಬವನ್ನು ಆಚರಿಸಿದ್ದಾರೆ.

ramadhan-prayer-done-by-muslims-at-home
ತುಮಕೂರಿನಲ್ಲಿ ಸರಳವಾಗಿ ರಂಜಾನ್​ ಹಬ್ಬವನ್ನು ಆಚರಿಸಿದ ಮುಸ್ಮಿಂ ಬಾಂಧವರು
author img

By

Published : May 14, 2021, 5:37 PM IST

ತುಮಕೂರು: ಲಾಕ್​ಡೌನ್​ ಹಿನ್ನೆಲೆ ರಂಜಾನ್ ಹಬ್ಬದ ಸಾಮೂಹಿಕ ಪ್ರಾರ್ಥನೆಗೆ ಮುಸ್ಲಿಂ ಬಾಂಧವರು ಕಡಿವಾಣ ಹಾಕಿ ತಮ್ಮ ಮನೆಗಳಲ್ಲಿಯೇ ನಮಾಜ್ ಮಾಡಿದ್ದಾರೆ.

ತಮ್ಮ ಮನೆಗಳ ಆವರಣದಲ್ಲಿಯೇ ಸಾಮೂಹಿಕ ಪ್ರಾರ್ಥನೆಯನ್ನು ಸಾಮಾಜಿಕ ಅಂತರ ಕಾಪಾಡುವ ಮೂಲಕ ನೆರವೇರಿಸಿದ ಅವರು, ಸೋಂಕು ಹರಡುವಿಕೆ ಭೀತಿ ಹಿನ್ನೆಲೆ ಈ ಬಾರಿ ಅತಿ ಸರಳವಾಗಿ ಆಚರಣೆಯಲ್ಲಿ ತೊಡಗಿದ್ದಾರೆ.

ತುಮಕೂರಿನಲ್ಲಿ ಸರಳವಾಗಿ ರಂಜಾನ್​ ಹಬ್ಬವನ್ನು ಆಚರಿಸಿದ ಮುಸ್ಮಿಂ ಬಾಂಧವರು

ಶಿವಮೊಗ್ಗದಲ್ಲೂ ನಿಯಮ ಪಾಲಿಸಿದ ಮುಸ್ಲಿಂ ಬಾಂಧವರು

ಕೋವಿಡ್ ಹಿನ್ನೆಲೆ ಸರ್ಕಾರ ರಂಜಾನ್​ ಹಬ್ಬದ ಸಾಮೂಹಿಕ ಪ್ರಾರ್ಥನೆ ನಿಷೇಧ ಮಾಡಿದ ಕಾರಣದಿಂದಾಗಿ ನಗರದ ಮುಸ್ಲಿಂಮರು ತಮ್ಮ ಕುಟುಂಬಸ್ಥರೊಂದಿಗೆ ಮನೆಯಲ್ಲಿಯೇ ನಮಾಜ್ ಮಾಡಿ ಅಲ್ಲಾಹುವಿನಲ್ಲಿ ಪ್ರಾರ್ಥನೆ ಮಾಡಿದ್ದಾರೆ. ವಿಶ್ವಕ್ಕೆ ಅಂಟಿರುವ ಕೋವಿಡ್ ರೋಗವನ್ನು ತಡೆದು ಆರೋಗ್ಯ ಕರುಣಿಸುವಂತೆ ಪ್ರಾರ್ಥನೆ ಮಾಡಿದ್ದಾರೆ.

ಶಿವಮೊಗ್ಗದಲ್ಲಿ ಸರಳವಾಗಿ ರಂಜಾನ್​ ಹಬ್ಬವನ್ನು ಆಚರಿಸಿದ ಮುಸ್ಮಿಂ ಬಾಂಧವರು

ಒಂದು ತಿಂಗಳು ಉಪವಾಸ ನಡೆಸಿ, ಪವಿತ್ರ ರಂಜಾನ್ ಆಚರಣೆ ನಡೆಸುವುದು ಮುಸ್ಲಿಮರ ಸಂಪ್ರದಾಯವಾಗಿದೆ. ಸೂರ್ಯೋದಯಕ್ಕೂ ಮುನ್ನ ಹಾಗೂ ಸೂರ್ಯಾಸ್ತದ ನಂತರ ಆಹಾರ ಸೇವಿಸುವುದು ರಂಜಾನ್​ನ ವಿಶೇಷತೆಯಾಗಿದೆ. ಕಠಿಣ ಒಂದು ತಿಂಗಳ ಉಪವಾಸದ ನಂತರ ಹಬ್ಬದ ಆಚರಣೆಗೆ ಕೋವಿಡ್ ಅಡ್ಡಿಯಾಗಿದ್ದರೂ ಮುಸ್ಲಿಂ ಭಾಂದವರು ಮನೆಯಲ್ಲಿಯೇ ನಮಾಜ್ ನಡೆಸಿ, ಕುಟುಂಬಸ್ಥರೊಂದಿಗೆ ಹಬ್ಬವನ್ನು ಆಚರಿಸಿದ್ದಾರೆ.

ಓದಿ: "ಅತಿ ಹೆಚ್ಚು ಜನರ ಸಾವಿಗೆ ಲಸಿಕೆ ಬಗ್ಗೆ ದಾರಿ ತಪ್ಪಿಸಿದ ಪಕ್ಷಗಳೇ ಕಾರಣ"

ತುಮಕೂರು: ಲಾಕ್​ಡೌನ್​ ಹಿನ್ನೆಲೆ ರಂಜಾನ್ ಹಬ್ಬದ ಸಾಮೂಹಿಕ ಪ್ರಾರ್ಥನೆಗೆ ಮುಸ್ಲಿಂ ಬಾಂಧವರು ಕಡಿವಾಣ ಹಾಕಿ ತಮ್ಮ ಮನೆಗಳಲ್ಲಿಯೇ ನಮಾಜ್ ಮಾಡಿದ್ದಾರೆ.

ತಮ್ಮ ಮನೆಗಳ ಆವರಣದಲ್ಲಿಯೇ ಸಾಮೂಹಿಕ ಪ್ರಾರ್ಥನೆಯನ್ನು ಸಾಮಾಜಿಕ ಅಂತರ ಕಾಪಾಡುವ ಮೂಲಕ ನೆರವೇರಿಸಿದ ಅವರು, ಸೋಂಕು ಹರಡುವಿಕೆ ಭೀತಿ ಹಿನ್ನೆಲೆ ಈ ಬಾರಿ ಅತಿ ಸರಳವಾಗಿ ಆಚರಣೆಯಲ್ಲಿ ತೊಡಗಿದ್ದಾರೆ.

ತುಮಕೂರಿನಲ್ಲಿ ಸರಳವಾಗಿ ರಂಜಾನ್​ ಹಬ್ಬವನ್ನು ಆಚರಿಸಿದ ಮುಸ್ಮಿಂ ಬಾಂಧವರು

ಶಿವಮೊಗ್ಗದಲ್ಲೂ ನಿಯಮ ಪಾಲಿಸಿದ ಮುಸ್ಲಿಂ ಬಾಂಧವರು

ಕೋವಿಡ್ ಹಿನ್ನೆಲೆ ಸರ್ಕಾರ ರಂಜಾನ್​ ಹಬ್ಬದ ಸಾಮೂಹಿಕ ಪ್ರಾರ್ಥನೆ ನಿಷೇಧ ಮಾಡಿದ ಕಾರಣದಿಂದಾಗಿ ನಗರದ ಮುಸ್ಲಿಂಮರು ತಮ್ಮ ಕುಟುಂಬಸ್ಥರೊಂದಿಗೆ ಮನೆಯಲ್ಲಿಯೇ ನಮಾಜ್ ಮಾಡಿ ಅಲ್ಲಾಹುವಿನಲ್ಲಿ ಪ್ರಾರ್ಥನೆ ಮಾಡಿದ್ದಾರೆ. ವಿಶ್ವಕ್ಕೆ ಅಂಟಿರುವ ಕೋವಿಡ್ ರೋಗವನ್ನು ತಡೆದು ಆರೋಗ್ಯ ಕರುಣಿಸುವಂತೆ ಪ್ರಾರ್ಥನೆ ಮಾಡಿದ್ದಾರೆ.

ಶಿವಮೊಗ್ಗದಲ್ಲಿ ಸರಳವಾಗಿ ರಂಜಾನ್​ ಹಬ್ಬವನ್ನು ಆಚರಿಸಿದ ಮುಸ್ಮಿಂ ಬಾಂಧವರು

ಒಂದು ತಿಂಗಳು ಉಪವಾಸ ನಡೆಸಿ, ಪವಿತ್ರ ರಂಜಾನ್ ಆಚರಣೆ ನಡೆಸುವುದು ಮುಸ್ಲಿಮರ ಸಂಪ್ರದಾಯವಾಗಿದೆ. ಸೂರ್ಯೋದಯಕ್ಕೂ ಮುನ್ನ ಹಾಗೂ ಸೂರ್ಯಾಸ್ತದ ನಂತರ ಆಹಾರ ಸೇವಿಸುವುದು ರಂಜಾನ್​ನ ವಿಶೇಷತೆಯಾಗಿದೆ. ಕಠಿಣ ಒಂದು ತಿಂಗಳ ಉಪವಾಸದ ನಂತರ ಹಬ್ಬದ ಆಚರಣೆಗೆ ಕೋವಿಡ್ ಅಡ್ಡಿಯಾಗಿದ್ದರೂ ಮುಸ್ಲಿಂ ಭಾಂದವರು ಮನೆಯಲ್ಲಿಯೇ ನಮಾಜ್ ನಡೆಸಿ, ಕುಟುಂಬಸ್ಥರೊಂದಿಗೆ ಹಬ್ಬವನ್ನು ಆಚರಿಸಿದ್ದಾರೆ.

ಓದಿ: "ಅತಿ ಹೆಚ್ಚು ಜನರ ಸಾವಿಗೆ ಲಸಿಕೆ ಬಗ್ಗೆ ದಾರಿ ತಪ್ಪಿಸಿದ ಪಕ್ಷಗಳೇ ಕಾರಣ"

ETV Bharat Logo

Copyright © 2025 Ushodaya Enterprises Pvt. Ltd., All Rights Reserved.