ETV Bharat / state

ವಿಐಎಸ್ಎಲ್ ಕಾರ್ಮಿಕರ ಹೋರಾಟಕ್ಕೆ ಮಣಿದ ಆಡಳಿತ ಮಂಡಳಿ: 13 ದಿನ ಕೆಲಸದ ಭರವಸೆ - Protest by Shimoga VISL workers

ಏಕಾಏಕಿ ಕೆಲಸದಿಂದ ತೆಗೆದು ಹಾಕಿದ್ದ 105 ಗುತ್ತಿಗೆ ಕಾರ್ಮಿಕರನ್ನು ಕೆಲಸಕ್ಕೆ ಮರು ನೇಮಕ ಮಾಡಿಕೊಳ್ಳಬೇಕು ಹಾಗೂ ಹಿಂದೆ ಮಾತು ಕೊಟ್ಟಂತೆ ತಿಂಗಳಲ್ಲಿ 15 ದಿನ ಕೆಲಸ ನೀಡಬೇಕೆಂದು ಆಗ್ರಹಿಸಿ ವಿಐಎಸ್ಎಲ್ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನೆಗೆ ಮಣಿದ ಆಡಳಿತ ಮಂಡಳಿ 13 ದಿನ ಕೆಲಸದ ಭರವಸೆ ನೀಡಿದೆ.

ವಿಐಎಸ್ಎಲ್ ಕಾರ್ಮಿಕರ ಹೋರಾಟ
author img

By

Published : Nov 17, 2019, 11:42 AM IST

ಶಿವಮೊಗ್ಗ: ಭದ್ರಾವತಿಯ ವಿಐಎಸ್ಎಲ್ ಆಡಳಿತ ಮಂಡಳಿ ಕೊನೆಗೂ ಗುತ್ತಿಗೆ ಕಾರ್ಮಿಕರ ಹೋರಾಟಕ್ಕೆ ಮಣಿದಿದೆ. ಹೋರಾಟದ ಫಲವಾಗಿ ಎಫ್‌ಎಸ್​ ಮತ್ತು ಹೆಚ್​ಟಿಎಸ್‌ನ 105 ಗುತ್ತಿಗೆ ಕಾರ್ಮಿಕರಿಗೆ ಸೋಮವಾರದಿಂದ ತಿಂಗಳಿಗೆ 13 ದಿನ ಕೆಲಸ ಸಿಗಲಿದೆ.

ಏಕಾಏಕಿ ಕೆಲಸದಿಂದ ತೆಗೆದು ಹಾಕಿದ್ದ 105 ಗುತ್ತಿಗೆ ಕಾರ್ಮಿಕರನ್ನು ಪುನಃ ಕೆಲಸಕ್ಕೆ ತೆಗೆದುಕೊಳ್ಳಬೇಕು ಹಾಗೂ ಹಿಂದೆ ಮಾತು ಕೊಟ್ಟಂತೆ ತಿಂಗಳಲ್ಲಿ 15 ದಿನ ಕೆಲಸ ನೀಡಬೇಕೆಂದು ಆಗ್ರಹಿಸಿ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದರು. ಮೊದಲ ದಿನ ಟೈರ್​ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದು, ಈ ವೇಳೆ ಓರ್ವ ಕಾರ್ಮಿಕನಿಗೆ ಗಾಯವಾಗಿತ್ತು.

ಹೀಗಾಗಿಯೂ ಆಡಳಿತ ಮಂಡಳಿ ಕಾರ್ಮಿಕರ ಹೋರಾಟಕ್ಕೆ ಮಣಿದಿರಲಿಲ್ಲ. ಆದ್ದರಿಂದ ಕಾರ್ಖಾನೆಯ ನಾಲ್ಕು ಗೇಟ್​ಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದರು. ಕಾರ್ಮಿಕರ ಪ್ರತಿಭಟನೆಯಲ್ಲಿ ಶಾಸಕ ಸಂಗಮೇಶ್, ಮಾಜಿ ಶಾಸಕ ಎಂ.ಜೆ.ಅಪ್ಪಾಜಿ, ಬಿಜೆಪಿಯ ಧರ್ಮಪ್ರಸಾದ್ ಸೇರಿದಂತೆ ವಿವಿಧ ಕಾರ್ಮಿಕರ ಸಂಘಗಳು ಬೆಂಬಲ ಸೂಚಿಸಿದ್ದವು.

ಶಿವಮೊಗ್ಗ: ಭದ್ರಾವತಿಯ ವಿಐಎಸ್ಎಲ್ ಆಡಳಿತ ಮಂಡಳಿ ಕೊನೆಗೂ ಗುತ್ತಿಗೆ ಕಾರ್ಮಿಕರ ಹೋರಾಟಕ್ಕೆ ಮಣಿದಿದೆ. ಹೋರಾಟದ ಫಲವಾಗಿ ಎಫ್‌ಎಸ್​ ಮತ್ತು ಹೆಚ್​ಟಿಎಸ್‌ನ 105 ಗುತ್ತಿಗೆ ಕಾರ್ಮಿಕರಿಗೆ ಸೋಮವಾರದಿಂದ ತಿಂಗಳಿಗೆ 13 ದಿನ ಕೆಲಸ ಸಿಗಲಿದೆ.

ಏಕಾಏಕಿ ಕೆಲಸದಿಂದ ತೆಗೆದು ಹಾಕಿದ್ದ 105 ಗುತ್ತಿಗೆ ಕಾರ್ಮಿಕರನ್ನು ಪುನಃ ಕೆಲಸಕ್ಕೆ ತೆಗೆದುಕೊಳ್ಳಬೇಕು ಹಾಗೂ ಹಿಂದೆ ಮಾತು ಕೊಟ್ಟಂತೆ ತಿಂಗಳಲ್ಲಿ 15 ದಿನ ಕೆಲಸ ನೀಡಬೇಕೆಂದು ಆಗ್ರಹಿಸಿ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದರು. ಮೊದಲ ದಿನ ಟೈರ್​ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದು, ಈ ವೇಳೆ ಓರ್ವ ಕಾರ್ಮಿಕನಿಗೆ ಗಾಯವಾಗಿತ್ತು.

ಹೀಗಾಗಿಯೂ ಆಡಳಿತ ಮಂಡಳಿ ಕಾರ್ಮಿಕರ ಹೋರಾಟಕ್ಕೆ ಮಣಿದಿರಲಿಲ್ಲ. ಆದ್ದರಿಂದ ಕಾರ್ಖಾನೆಯ ನಾಲ್ಕು ಗೇಟ್​ಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದರು. ಕಾರ್ಮಿಕರ ಪ್ರತಿಭಟನೆಯಲ್ಲಿ ಶಾಸಕ ಸಂಗಮೇಶ್, ಮಾಜಿ ಶಾಸಕ ಎಂ.ಜೆ.ಅಪ್ಪಾಜಿ, ಬಿಜೆಪಿಯ ಧರ್ಮಪ್ರಸಾದ್ ಸೇರಿದಂತೆ ವಿವಿಧ ಕಾರ್ಮಿಕರ ಸಂಘಗಳು ಬೆಂಬಲ ಸೂಚಿಸಿದ್ದವು.

Intro:ವಿಐಎಸ್ಎಲ್ ಕಾರ್ಮಿಕರ ಹೋರಾಟಕ್ಕೆ ಮಣಿದ ಆಡಳಿತ ಮಂಡಳಿ: ಹೋರಾಟ ಮುಕ್ತಾಯ.

ಶಿವಮೊಗ್ಗ:ಭದ್ರಾವತಿಯ ವಿಐಎಸ್ಎಲ್ ಆಡಳಿತ ಮಂಡಳಿ ಕೊನೆಗೂ ಗುತ್ತಿಗೆ ಕಾರ್ಮಿಕರ ಹೋರಾಟಕ್ಕೆ ಮಣಿದಿದೆ. ಹೋರಾಟದ ಫಲವಾಗಿ FS & HTS ನ 105 ಗುತ್ತಿಗೆ ಕಾರ್ಮಿಕರಿಗೆ ಸೋಮವಾರದಿಂದ ತಿಂಗಳಿಗೆ 13 ದಿನ ಕೆಲಸ ಸಿಗಲಿದೆ.Body:ಕಳೆದ ಎರಡು ದಿನಗಳಿಂದ ಗುತ್ತಿಗೆ ಕಾರ್ಮಿಕರು ಏಕಾಏಕಿ ಕೆಲಸದಿಂದ ತೆಗೆದು ಹಾಕಿದ್ದ 105 ಜನರನ್ನು ಪುನಃ ಕೆಲಸಕ್ಕೆ ತೆಗೆದು ಕೊಳ್ಳಬೇಕು ಹಾಗೂ ಹಿಂದೆ ಮಾತು ಕೊಟ್ಟಂತೆ ತಿಂಗಳಲ್ಲಿ 15 ದಿನ ಕೆಲಸ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದರು. ಮೊದಲ ದಿನ ಟೈರ್ ಗೆ ಬೆಂಕಿ ಹಾಕಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಓರ್ವ ಕಾರ್ಮಿಕನಿಗೆ ಗಾಯ ಸಹ ಆಗಿತ್ತು.Conclusion:ಇನ್ನೂ ನಿನ್ನೆ ಪೂರ್ಣ ಕಾರ್ಖಾನೆಯ ನಾಲ್ಕು ಗೇಟ್ ಗಳನ್ನು ಬಂದ್ ಮಾಡಿ ಗೇಟ್ ನ ಮುಂದೆ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಯಲ್ಲಿ ಶಾಸಕ ಸಂಗಮೇಶ್, ಮಾಜಿ ಶಾಸಕ ಎಂ.ಜೆ.ಅಪ್ಪಾಜಿ,ಬಿಜೆಪಿಯ ಧರ್ಮ ಪ್ರಸಾದ್ ಸೇರಿದಂತೆ ವಿವಿಧ ಕಾರ್ಮಿಕರ ಸಂಘ ಬೆಂಬಲ ಸೂಚಿಸಿತ್ತು.
( ನಿನ್ನೆ ಕಳುಹಿಸಿದ್ದ ಕಾರ್ಖಾನೆ ವಿಡಿಯೋವನ್ನೆ ಬಳಸಿ ಕೊಳ್ಳಿ)
ETV Bharat Logo

Copyright © 2025 Ushodaya Enterprises Pvt. Ltd., All Rights Reserved.