ಶಿವಮೊಗ್ಗ: ಕುರಾನ್ನ 26 ಶ್ಲೋಕಗಳನ್ನು ತೆಗೆದು ಹಾಕಬೇಕೆಂದು ಸುಪ್ರೀಂಕೋರ್ಟ್ ನಲ್ಲಿ ದಾವೆ ಹಾಕಿರುವ ಶಿಯಾ ವಾಸೀಂ ಅವರಿಗೆ ಕಾನೂನಿನ ಪ್ರಕಾರ ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ಜಿಲ್ಲಾ ಸುನ್ನಿ ಜಮಿತ್ ಉಲ್ಮಾ ಕಮಿಟಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಈದ್ಗಾ ಮೈದಾನದಲ್ಲಿ ಮುಸ್ಲಿಂ ಧರ್ಮಿಯರು ಶಿಯಾ ವಾಸೀಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮುಸ್ಲಿಂರ ಪವಿತ್ರ ಗ್ರಂಥ ಇಡೀ ಪ್ರಪಂಚಕ್ಕೆ ಇರುವುದು ಒಂದೇ. ಕುರಾನ್ನಲ್ಲಿ ಎಲ್ಲೂ ಹಿಂಸೆಯನ್ನು ಪ್ರಚೋದಿಸುವುದಿಲ್ಲ. ಪ್ರಪಂಚಕ್ಕೆ ಶಾಂತಿ ಸಾರುವ ಕುರಾನ್ನ 26 ಶ್ಲೋಕವನ್ನು ತೆಗೆದು ಹಾಕಬೇಕೆಂದು ಕೋರಿ ಕೋರ್ಟ್ ಗೆ ಹೋಗಿ ಕುರಾನ್ಗೆ ಅಪಮಾನ ಮಾಡಿದ್ದಾರೆ. ಇಂತಹ ವಾಸೀಂರನ್ನು ಅವರ ಸಮಾಜವೇ ಹೊರ ಹಾಕಿದೆ. ಅವರ ಪತ್ನಿ ಹಾಗೂ ಮಕ್ಕಳು ಸಹ ಇವರನ್ನು ಬಿಟ್ಟು ಹೋಗಿದ್ದಾರೆ ಎಂದರು.
ಓದಿ:ರೈತರ ಪ್ರತಿಭಟನಾ ಸ್ಥಳದಲ್ಲಿ ಪೊಲೀಸರ ಮೇಲೆ ಜೇನು ದಾಳಿ
ಜಿಲ್ಲಾ ಸುನ್ನಿ ಜಮಿತ್ ಉಲ್ಮಾ ಕಮಿಟಿಯಿಂದ ನಡೆದ ಪ್ರತಿಭಟನೆಯಲ್ಲಿ ಶಿಯಾ ವಾಸೀಂ ಪ್ರತಿಕೃತಿಯನ್ನು ದಹಿಸಿ, ಆಕ್ರೋಶ ವ್ಯಕ್ತಪಡಿಸಲಾಯಿತು. ನಂತರ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ಮುಸ್ಲಿಂ ಧರ್ಮದ ಗುರುಗಳು, ಮುಖಂಡರುಗಳು ಭಾಗಿಯಾಗಿದ್ದರು.