ಶಿವಮೊಗ್ಗ: ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ಬೇಳೂರು ಗೋಪಾಲಕೃಷ್ಣ ಬಿಜೆಪಿ ಕಾರ್ಯಕರ್ತರಿಂದ ಇರಿಸುಮುರಿಸಿಗೊಳಗಾದ ಘಟನೆ ನಿನ್ನೆ ರಾತ್ರಿ ನಡೆದಿದೆ.
ಸಾಗರ ಪಟ್ಟಣದ ಅಣಲೆಕೊಪ್ಪ ಬಡಾವಣೆಯಲ್ಲಿ ಬಿಜೆಪಿ ಕಾರ್ಯಕರ್ತರು ರಾತ್ರಿ ಸುಮಾರು 8:30 ರ ವೇಳೆಗೆ ಸ್ಥಳೀಯ ಸಂಸ್ಥೆ ಚುನಾವಣೆಯ ಪ್ರಚಾರ ನಡೆಸಿತ್ತಿದ್ದರು. ವಾರ್ಡ್ ನಂ.5 ಹಾಗೂ 7 ರಲ್ಲಿ ಪ್ರಚಾರಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಕ್ಯಾಂಪೇನ್ಗೆ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಕಾರ್ಯಕರ್ತರ ಜೊತೆ ಕಾರಿನಲ್ಲಿ ಬಂದಿದ್ದರು. ಈ ವೇಳೆ ಬಿಜೆಪಿ ಕಾರ್ಯಕರ್ತರು ಮೋದಿ...ಮೋದಿ..ಎಂದು ಘೋಷಣೆ ಹಾಕಿದ್ದಾರೆ.
ಇದರಿಂದ ಕೋಪಗೊಂಡ ಬೇಳೂರು ಗೋಪಾಲಕೃಷ್ಣ ಕಾರಿನಿಂದ ಇಳಿದು ಏನ್ರೂ ಇದು ಎಂದು ಕೇಳುತ್ತಿದ್ದಂತೆಯೇ ಬಿಜೆಪಿ ಕಾರ್ಯಕರ್ತರು ಜೋರಾಗಿ ಮೋದಿ...ಮೋದಿ ಎಂದು ಜೋರಾಗಿ ಘೋಷಣೆ ಹಾಕುತ್ತಿದ್ದಂತೆಯೇ ಬೇಳೂರು ಕಾಂಗ್ರೆಸ್ ..ಕಾಂಗ್ರೆಸ್.. ಘೋಷಣೆ ಹಾಕಿದ್ದಾರೆ. ಅಷ್ಟರಲ್ಲಿ ಬೇಳೂರು ಕಾರು ಡ್ರೈವರ್, ಬೇಳೂರು ಗೋಪಾಲಕೃಷ್ಣರನ್ನು ಬಲವಂತವಾಗಿ ಕಾರಿನಲ್ಲಿ ಕುರಿಸಿಕೊಂಡು ಹೋಗಿದ್ದಾರೆ.
ಗೋಪಾಲಕೃಷ್ಣರವರಿಗೆ ಅವಮಾನವಾಗುವಂತೆ ಬಿಜೆಪಿ ಕಾರ್ಯಕರ್ತರು ಮಾಡಿದ್ದಾರೆ. ಅಷ್ಟೆಲ್ಲಾ ಆದ್ರೂ ಸಹ ಕಾಂಗ್ರೆಸ್ನ ಯಾವ ಕಾರ್ಯಕರ್ತರೂ ಸಹ ಬೇಳೂರು ಗೋಪಾಲಕೃಷ್ಣರವರ ನೆರವಿಗೆ ಬಂದಿರಲಿಲ್ಲ.