ಶಿವಮೊಗ್ಗ: ಜಿಲ್ಲೆಯ ಬರಪಿಡಿತ ತಾಲೂಕುಗಳಾದ ಸೊರಬ, ಶಿಕಾರಿಪುರಕ್ಕೆ ತುಂಗಾಭದ್ರ ನದಿಯಿಂದ ಏತ ನೀರಾವರಿ ಯೋಜನೆ ಮೂಲಕ ನೀರು ತರುವ ಕಾಮಗಾರಿಯನ್ನು ಸಂಸದ ಬಿ.ವೈ. ರಾಘವೇಂದ್ರ ಹಾಗೂ ಸೊರಬ ಶಾಸಕ ಕುಮಾರ ಬಂಗಾರಪ್ಪ ಅವರು ಜಂಟಿಯಾಗಿ ವೀಕ್ಷಿಸಿದರು.
ಸೊರಬ ತಾಲೂಕಿನ ಮೂಡಿ ಹಾಗೂ ಮೂಗೂರು ಏತ ನೀರಾವರಿ ಕಾಮಗಾರಿಯನ್ನು ಪರಿವೀಕ್ಷಣೆ ನಡೆಸಿದರು. ಈ ಯೋಜನೆಯು 31 ಕೆರೆಗಳನ್ನು ತುಂಬಿಸುವ ಯೋಜನೆ. ಇದಕ್ಕೆ ₹ 105 ಕೋಟಿ ನಿಗದಿ ಮಾಡಲಾಗಿದೆ. 0.328 ಟಿಎಂಸಿ ನೀರು ಸಂಗ್ರಹದ ಯೋಜನೆಯಾಗಿದೆ.
ಅದೇ ರೀತಿ ಮೂಡಿ ಏತ ನೀರಾವರಿ ಯೋಜನೆಗೆ ₹ 221 ಕೋಟಿ ವೆಚ್ಚದಲ್ಲಿ 62 ಕೆರೆಗಳನ್ನು ತುಂಬಿಸಲಾಗುತ್ತದೆ. ಒಂದು ವರ್ಷದಲ್ಲಿ ಪೂರ್ಣ ಮಾಡುವ ಉದ್ದೇಶದಿಂದ ಕಾಮಗಾರಿಯನ್ನು ವೇಗವಾಗಿ ನಡೆಸಲಾಗುತ್ತಿದೆ ಎಂದು ಸಂಸದ ರಾಘವೇಂದ್ರ ತಿಳಿಸಿದ್ದಾರೆ.