ETV Bharat / state

ಅವಧಿ ಮುಗಿದ ಹಿನ್ನೆಲೆ ಶಿವಮೊಗ್ಗ ಜಿಲ್ಲಾ ಪಂಚಾಯತ್​​​ಗೆ ಆಡಳಿತಾಧಿಕಾರಿ ನೇಮಕ - Administrative Officer for shimogga ZP

ಮೇ. 5 ರಿಂದ ಸೆಲ್ವರಾಜ್ ಅವರು ಶಿವಮೊಗ್ಗ ಜಿಲ್ಲಾ ಪಂಚಾಯತ್​ನ ಚುಕ್ಕಾಣಿ ಹಿಡಿದಿದ್ದಾರೆ.

shimogga ZP
ಶಿವಮೊಗ್ಗ ಜಿಲ್ಲಾ ಪಂಚಾಯತ್
author img

By

Published : May 8, 2021, 9:23 PM IST

ಶಿವಮೊಗ್ಗ: ಕೋವಿಡ್​​ ಸೋಂಕು ದಿನೇ ದಿನೆ ಹೆಚ್ಚುತ್ತಿರುವುದರಿಂದಾಗಿ ಜಿಲ್ಲಾ ಪಂಚಾಯತ್​​​ ಚುನಾವಣೆಯನ್ನು ಆರು ತಿಂಗಳುಗಳ ಕಾಲ ಮುಂದೂಡುವಂತೆ ರಾಜ್ಯ ಸರ್ಕಾರ ಚುನಾವಣಾ ಆಯೋಗಕ್ಕೆ ಪತ್ರವನ್ನು ಬರೆದಿದೆ. ಹೀಗಾಗಿ ಅವಧಿ ಮುಗಿದಿದ್ದರೂ ಚುನಾವಣೆ ನಡೆಯುವುದು ಇನ್ನು ಆರು ತಿಂಗಳ ಬಳಿಕವೇ. ಅಲ್ಲಿಯವರೆಗೆ ಜಿಲ್ಲಾ ಪಂಚಾಯತ್​ನಲ್ಲಿ ಅಧಿಕಾರ ನಡೆಸುವುದು ಯಾರು ಎಂಬುದರ ಕಂಪ್ಲೀಟ್ ಡೀಟೇಲ್ಸ್​​ ಇಲ್ಲಿದೆ.

ಶಿವಮೊಗ್ಗ ಜಿಲ್ಲಾ ಪಂಚಾಯತ್​​​ಗೆ ಆಡಳಿತಾಧಿಕಾರಿ ನೇಮಕ

ಮೇ. 5ಕ್ಕೆ ಶಿವಮೊಗ್ಗ ಜಿಲ್ಲಾ ಪಂಚಾಯತ್​​ ಸದಸ್ಯರ ಅಧಿಕಾರಾವಧಿ ಮುಕ್ತಾಯಗೊಂಡಿದೆ. ಕೋವಿಡ್​​ ಇಲ್ಲದೇ ಇದ್ದರೆ ಇನ್ನೊಂದು ತಿಂಗಳ ಒಳಗಾಗಿ ಶಿವಮೊಗ್ಗ ಜಿಲ್ಲಾ ಪಂಚಾಯತ್​ಗೆ ಚುನಾವಣೆ ನಡೆಯುತ್ತಿತ್ತು. ಆದರೆ, ಕೋವಿಡ್​​​​ನಿಂದಾಗಿ ಆರು ತಿಂಗಳು ಚುನಾವಣೆ ನಡೆಸಬಾರದು ಎಂದು ಸರ್ಕಾರವೇ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ.

ಹೀಗಾಗಿ ಇನ್ನು ಆರು ತಿಂಗಳು ಚುನಾವಣೆ ನಡೆಯುವುದು ಡೌಟ್. ಹೀಗಾಗಿ ಜಿಲ್ಲಾ ಪಂಚಾಯಿತಿಯನ್ನು ಈ ಆರು ತಿಂಗಳ ಕಾಲ ಮುನ್ನಡೆಸಲು ಸರ್ಕಾರ ಈಗಾಗಲೇ ಸೆಲ್ವರಾಜ್ ಎಂಬ ಆಡಳಿತಾಧಿಕಾರಿಯನ್ನು ನೇಮಕ ಮಾಡಿದೆ. ಮೇ 5 ರಿಂದ ಸೆಲ್ವರಾಜ್ ಅವರು ಜಿಲ್ಲಾ ಪಂಚಾಯತ್ ಚುಕ್ಕಾಣಿ ಹಿಡಿದಿದ್ದಾರೆ.

ಇದನ್ನೂ ಓದಿ: ಬೀದಿಗೆ ಹಾಸಿಗೆ ತಂದು ಸರ್ಕಾರದ ವಿರುದ್ಧ ವಾಟಾಳ್ ಪ್ರತಿಭಟನೆ!

ಸರ್ಕಾರಗಳು ಆರು ತಿಂಗಳ ಕಾಲ ಚುನಾವಣೆಯನ್ನು ಮುಂದೂಡುವ ಅಧಿಕಾರವನ್ನು ಹೊಂದಿವೆ. ಆರು ತಿಂಗಳ ಒಳಗಾಗಿ ಕೋವಿಡ್​​ ನಿಯಂತ್ರಣಕ್ಕೆ ಬಂದಲ್ಲಿ ಚುನಾವಣೆ ನಡೆಯಲಿದೆ. ಒಂದು ವೇಳೆ ಕೋವಿಡ್​​ ನಿಯಂತ್ರಣಕ್ಕೆ ಬರದಿದಲ್ಲಿ ಮುಂದೇನು ಎಂಬ ಸಮಸ್ಯೆ ಎಲ್ಲ ರಾಜಕೀಯ ಪಕ್ಷಗಳನ್ನು ಕಾಡಲಾರಂಭಿಸಿದೆ. ಕೋವಿಡ್ ಅವಧಿಯಲ್ಲಿ ಜಿಲ್ಲಾ ಪಂಚಾಯತ್​​​ನಲ್ಲಿ ಜನಪ್ರತಿನಿಧಿಗಳಿದ್ದರೆ ಜನರ ಸೇವೆಗೆ ಹೆಚ್ಚಿನ ಅವಕಾಶವಾಗುತ್ತಿತ್ತು. ಆದರೆ, ಇದೇ ಸಮಯಕ್ಕೆ ಅಧಿಕಾರಾವಧಿ ಮುಗಿದಿದ್ದು, ಆಡಳಿತಾಧಿಕಾರಿ ನೇಮಕವಾಗಿದೆ.

ಶಿವಮೊಗ್ಗ: ಕೋವಿಡ್​​ ಸೋಂಕು ದಿನೇ ದಿನೆ ಹೆಚ್ಚುತ್ತಿರುವುದರಿಂದಾಗಿ ಜಿಲ್ಲಾ ಪಂಚಾಯತ್​​​ ಚುನಾವಣೆಯನ್ನು ಆರು ತಿಂಗಳುಗಳ ಕಾಲ ಮುಂದೂಡುವಂತೆ ರಾಜ್ಯ ಸರ್ಕಾರ ಚುನಾವಣಾ ಆಯೋಗಕ್ಕೆ ಪತ್ರವನ್ನು ಬರೆದಿದೆ. ಹೀಗಾಗಿ ಅವಧಿ ಮುಗಿದಿದ್ದರೂ ಚುನಾವಣೆ ನಡೆಯುವುದು ಇನ್ನು ಆರು ತಿಂಗಳ ಬಳಿಕವೇ. ಅಲ್ಲಿಯವರೆಗೆ ಜಿಲ್ಲಾ ಪಂಚಾಯತ್​ನಲ್ಲಿ ಅಧಿಕಾರ ನಡೆಸುವುದು ಯಾರು ಎಂಬುದರ ಕಂಪ್ಲೀಟ್ ಡೀಟೇಲ್ಸ್​​ ಇಲ್ಲಿದೆ.

ಶಿವಮೊಗ್ಗ ಜಿಲ್ಲಾ ಪಂಚಾಯತ್​​​ಗೆ ಆಡಳಿತಾಧಿಕಾರಿ ನೇಮಕ

ಮೇ. 5ಕ್ಕೆ ಶಿವಮೊಗ್ಗ ಜಿಲ್ಲಾ ಪಂಚಾಯತ್​​ ಸದಸ್ಯರ ಅಧಿಕಾರಾವಧಿ ಮುಕ್ತಾಯಗೊಂಡಿದೆ. ಕೋವಿಡ್​​ ಇಲ್ಲದೇ ಇದ್ದರೆ ಇನ್ನೊಂದು ತಿಂಗಳ ಒಳಗಾಗಿ ಶಿವಮೊಗ್ಗ ಜಿಲ್ಲಾ ಪಂಚಾಯತ್​ಗೆ ಚುನಾವಣೆ ನಡೆಯುತ್ತಿತ್ತು. ಆದರೆ, ಕೋವಿಡ್​​​​ನಿಂದಾಗಿ ಆರು ತಿಂಗಳು ಚುನಾವಣೆ ನಡೆಸಬಾರದು ಎಂದು ಸರ್ಕಾರವೇ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ.

ಹೀಗಾಗಿ ಇನ್ನು ಆರು ತಿಂಗಳು ಚುನಾವಣೆ ನಡೆಯುವುದು ಡೌಟ್. ಹೀಗಾಗಿ ಜಿಲ್ಲಾ ಪಂಚಾಯಿತಿಯನ್ನು ಈ ಆರು ತಿಂಗಳ ಕಾಲ ಮುನ್ನಡೆಸಲು ಸರ್ಕಾರ ಈಗಾಗಲೇ ಸೆಲ್ವರಾಜ್ ಎಂಬ ಆಡಳಿತಾಧಿಕಾರಿಯನ್ನು ನೇಮಕ ಮಾಡಿದೆ. ಮೇ 5 ರಿಂದ ಸೆಲ್ವರಾಜ್ ಅವರು ಜಿಲ್ಲಾ ಪಂಚಾಯತ್ ಚುಕ್ಕಾಣಿ ಹಿಡಿದಿದ್ದಾರೆ.

ಇದನ್ನೂ ಓದಿ: ಬೀದಿಗೆ ಹಾಸಿಗೆ ತಂದು ಸರ್ಕಾರದ ವಿರುದ್ಧ ವಾಟಾಳ್ ಪ್ರತಿಭಟನೆ!

ಸರ್ಕಾರಗಳು ಆರು ತಿಂಗಳ ಕಾಲ ಚುನಾವಣೆಯನ್ನು ಮುಂದೂಡುವ ಅಧಿಕಾರವನ್ನು ಹೊಂದಿವೆ. ಆರು ತಿಂಗಳ ಒಳಗಾಗಿ ಕೋವಿಡ್​​ ನಿಯಂತ್ರಣಕ್ಕೆ ಬಂದಲ್ಲಿ ಚುನಾವಣೆ ನಡೆಯಲಿದೆ. ಒಂದು ವೇಳೆ ಕೋವಿಡ್​​ ನಿಯಂತ್ರಣಕ್ಕೆ ಬರದಿದಲ್ಲಿ ಮುಂದೇನು ಎಂಬ ಸಮಸ್ಯೆ ಎಲ್ಲ ರಾಜಕೀಯ ಪಕ್ಷಗಳನ್ನು ಕಾಡಲಾರಂಭಿಸಿದೆ. ಕೋವಿಡ್ ಅವಧಿಯಲ್ಲಿ ಜಿಲ್ಲಾ ಪಂಚಾಯತ್​​​ನಲ್ಲಿ ಜನಪ್ರತಿನಿಧಿಗಳಿದ್ದರೆ ಜನರ ಸೇವೆಗೆ ಹೆಚ್ಚಿನ ಅವಕಾಶವಾಗುತ್ತಿತ್ತು. ಆದರೆ, ಇದೇ ಸಮಯಕ್ಕೆ ಅಧಿಕಾರಾವಧಿ ಮುಗಿದಿದ್ದು, ಆಡಳಿತಾಧಿಕಾರಿ ನೇಮಕವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.