ETV Bharat / state

ಶಾರ್ಟ್ ಸರ್ಕ್ಯೂಟ್... ಹೊತ್ತಿ ಉರಿದ ವಿದ್ಯುತ್​ ಟ್ರಾನ್ಸ್​​ಫಾರ್ಮರ್

ವಿದ್ಯತ್‌ ಲೈನ್‌ ತುಂಡಾಗಿ‌ ಹೆದ್ದಾರಿಯಲ್ಲೇ ನೆಲಕ್ಕುರುಳಿ ಬಿದ್ದಿತ್ತು. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿಯೇ ಘಟನೆ ಸಂಭವಿಸಿದ್ದು, ಅದೃಷ್ಠವಶಾತ್ ಯಾರಿಗೂ ಯಾವುದೇ ಅಪಾಯವಾಗಿಲ್ಲ.

author img

By

Published : Jun 13, 2019, 12:59 PM IST

ಹೊತ್ತಿ ಉರಿದ ಟ್ರಾನ್ಸ್ ಫಾರ್ಮರ್

ರಾಮನಗರ : ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಇದ್ದಕ್ಕಿದ್ದಂತೆ ಟ್ರಾನ್ಸ್​​​ ಫಾರ್ಮರ್ ಶಾರ್ಟ್ ಆಗಿ ಹೊತ್ತಿ ‌ಉರಿದು ವಿದ್ಯುತ್ ತಂತಿ‌ ತುಂಡಾಗಿ‌ ಕೆಳಗೆ ಬಿದ್ದಿರುವ ಘಟನೆ‌ ನಡೆದಿದೆ.

ನಗರದ ಹೆದ್ದಾರಿಯಲ್ಲಿರುವ ಕೆಂಗಲ್‌ ಹನುಮಂತಯ್ಯ ಭವನದ ಬಳಿ ದಿಢೀರ್​​ ವಿದ್ಯುತ್‌ ಕಂಬದಲ್ಲಿ‌ ಬೆಂಕಿ‌ ಕಾಣಿಸಿಕೊಂಡಿತ್ತು. ನೋಡ ನೋಡುತ್ತಿದ್ದಂತೆಯೇ ಸಿಡಿಯಲಾರಂಭಿಸಿದ ಶಬ್ದ ಅಕ್ಕಪಕ್ಕದ ಹಾಗೂ ದಾರಿಹೋಕರಲ್ಲಿ‌ ಆತಂಕ ಸೃಷ್ಟಿಸಿತ್ತು.

ಹೊತ್ತಿ ಉರಿದ ಟ್ರಾನ್ಸ್ ಫಾರ್ಮರ್

ನಂತರ ವಿದ್ಯತ್‌ ಲೈನ್‌ ತುಂಡಾಗಿ‌ ಹೆದ್ದಾರಿಯಲ್ಲೇ ನೆಲಕ್ಕುರುಳಿ ಬಿದ್ದಿತ್ತು. ಅದೃಷ್ಟವಶಾತ್ ಯಾರಿಗೂ ಯಾವುದೇ ಅಪಾಯವಾಗಿಲ್ಲ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿಯೇ ಘಟನೆ ಸಂಭವಿಸಿದ್ದ ಈ ಪ್ರದೇಶದಲ್ಲಿ ಕಾಲ್ನಡಿಗೆಯಲ್ಲಿ ಸದಾ ಜನ‌ ಸಂಚರಿಸುತ್ತಿರುತ್ತಾರೆ. ಅಲ್ಲದೆ ವಾಹನಗಳ ಸಂಚಾರ ಕೂಡಾ ಹೆಚ್ಚಾಗಿರುತ್ತದೆ. ಆದ್ರೆ ಈ ಅವಘಡ ನಡೆದ ಸಂದರ್ಭದಲ್ಲಿ ಯಾರಿಗೂ ಯಾವುದೇ ಅಪಾಯವಾಗಿಲ್ಲ ಎಂದು ತಿಳಿದುಬಂದಿದೆ.

ಗ್ರೌಂಡ್ ಕೇಬಲಿಂಗ್​ ಮಾಡಿಲ್ಲ, ವಿದ್ಯುತ್ ಪ್ರವಾಹಕಗಳ ಜೊತೆಗೆ ನಗರದ ಯಾವುದೇ ಭಾಗಕ್ಕೆ‌ ಭೂಮಿ ‌ಮೇಲೆ ವಿದ್ಯುತ್ ವಯರ್ ಕೊಂಡೊಯ್ಯದೆ ನೆಲದ‌ ಮೂಲಕ‌ ಕೊಂಡೊಯ್ಯುವ ನಿಯಮ‌ ಬೆಸ್ಕಾಂ‌ನಲ್ಲಿದೆ. ಆದರೆ‌ ಹೆದ್ದಾರಿಯಲ್ಲಿಯೇ ನಿಯಮ‌ಪಾಲಿಸದ ಬೆಸ್ಕಾಂ‌ ನಿರ್ಲಕ್ಷ್ಯ ಈ‌ ಅವಘಡ‌ಕ್ಕೆ ಸಾಕ್ಷಿ‌ಯಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಈ ಅವಘಡದಿಂದಲಾದರೂ ಬೆಸ್ಕಾಂ ಬುದ್ಧಿ ಕಲಿತು ಮುಂದೆ ಅಪಾಯವಾಗದಂತೆ ಕ್ರಮ ವಹಿಸಲಿ‌ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ರಾಮನಗರ : ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಇದ್ದಕ್ಕಿದ್ದಂತೆ ಟ್ರಾನ್ಸ್​​​ ಫಾರ್ಮರ್ ಶಾರ್ಟ್ ಆಗಿ ಹೊತ್ತಿ ‌ಉರಿದು ವಿದ್ಯುತ್ ತಂತಿ‌ ತುಂಡಾಗಿ‌ ಕೆಳಗೆ ಬಿದ್ದಿರುವ ಘಟನೆ‌ ನಡೆದಿದೆ.

ನಗರದ ಹೆದ್ದಾರಿಯಲ್ಲಿರುವ ಕೆಂಗಲ್‌ ಹನುಮಂತಯ್ಯ ಭವನದ ಬಳಿ ದಿಢೀರ್​​ ವಿದ್ಯುತ್‌ ಕಂಬದಲ್ಲಿ‌ ಬೆಂಕಿ‌ ಕಾಣಿಸಿಕೊಂಡಿತ್ತು. ನೋಡ ನೋಡುತ್ತಿದ್ದಂತೆಯೇ ಸಿಡಿಯಲಾರಂಭಿಸಿದ ಶಬ್ದ ಅಕ್ಕಪಕ್ಕದ ಹಾಗೂ ದಾರಿಹೋಕರಲ್ಲಿ‌ ಆತಂಕ ಸೃಷ್ಟಿಸಿತ್ತು.

ಹೊತ್ತಿ ಉರಿದ ಟ್ರಾನ್ಸ್ ಫಾರ್ಮರ್

ನಂತರ ವಿದ್ಯತ್‌ ಲೈನ್‌ ತುಂಡಾಗಿ‌ ಹೆದ್ದಾರಿಯಲ್ಲೇ ನೆಲಕ್ಕುರುಳಿ ಬಿದ್ದಿತ್ತು. ಅದೃಷ್ಟವಶಾತ್ ಯಾರಿಗೂ ಯಾವುದೇ ಅಪಾಯವಾಗಿಲ್ಲ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿಯೇ ಘಟನೆ ಸಂಭವಿಸಿದ್ದ ಈ ಪ್ರದೇಶದಲ್ಲಿ ಕಾಲ್ನಡಿಗೆಯಲ್ಲಿ ಸದಾ ಜನ‌ ಸಂಚರಿಸುತ್ತಿರುತ್ತಾರೆ. ಅಲ್ಲದೆ ವಾಹನಗಳ ಸಂಚಾರ ಕೂಡಾ ಹೆಚ್ಚಾಗಿರುತ್ತದೆ. ಆದ್ರೆ ಈ ಅವಘಡ ನಡೆದ ಸಂದರ್ಭದಲ್ಲಿ ಯಾರಿಗೂ ಯಾವುದೇ ಅಪಾಯವಾಗಿಲ್ಲ ಎಂದು ತಿಳಿದುಬಂದಿದೆ.

ಗ್ರೌಂಡ್ ಕೇಬಲಿಂಗ್​ ಮಾಡಿಲ್ಲ, ವಿದ್ಯುತ್ ಪ್ರವಾಹಕಗಳ ಜೊತೆಗೆ ನಗರದ ಯಾವುದೇ ಭಾಗಕ್ಕೆ‌ ಭೂಮಿ ‌ಮೇಲೆ ವಿದ್ಯುತ್ ವಯರ್ ಕೊಂಡೊಯ್ಯದೆ ನೆಲದ‌ ಮೂಲಕ‌ ಕೊಂಡೊಯ್ಯುವ ನಿಯಮ‌ ಬೆಸ್ಕಾಂ‌ನಲ್ಲಿದೆ. ಆದರೆ‌ ಹೆದ್ದಾರಿಯಲ್ಲಿಯೇ ನಿಯಮ‌ಪಾಲಿಸದ ಬೆಸ್ಕಾಂ‌ ನಿರ್ಲಕ್ಷ್ಯ ಈ‌ ಅವಘಡ‌ಕ್ಕೆ ಸಾಕ್ಷಿ‌ಯಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಈ ಅವಘಡದಿಂದಲಾದರೂ ಬೆಸ್ಕಾಂ ಬುದ್ಧಿ ಕಲಿತು ಮುಂದೆ ಅಪಾಯವಾಗದಂತೆ ಕ್ರಮ ವಹಿಸಲಿ‌ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Intro:Body:R_kn_rmn_01_130619_power problem_script_7204219_Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.