ETV Bharat / state

ಸಿಡಿಲು ಬಡಿದು ಸಹೋದರರಿಬ್ಬರು ಬಲಿ - North Karnataka Rainfall

ಮಳೆಯಾಗುತ್ತಿದ್ದ ವೇಳೆ ಜಮೀನಿನ ಜೋಪಡಿ ಬಳಿ ಬಂದಿದ್ದ ಸಹೋದರರಿಬ್ಬರು ಸಿಡಿಲಿಗೆ ಬಲಿಯಾದರೆ ತಾಯಿ ಗಾಯಗೊಂಡಿರುವ ಘಟನೆ ನಡೆದಿದೆ. ಘಟನೆ ಸಂಬಂಧ ಯಾಪಲದಿನ್ನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

Two brothers killed and mother injured in Lighting at Raichur
ರಾಯಚೂರು: ಸಿಡಿಲು ಬಡಿದು ಸಹೋದರರಿಬ್ಬರು ಬಲಿ
author img

By

Published : Jul 24, 2020, 8:09 PM IST

ರಾಯಚೂರು : ಸಿಡಿಲು ಬಡಿದು ಸಹೋದರರಿಬ್ಬರು ಅಸುನೀಗಿದ ಘಟನೆ ರಾಯಚೂರು ತಾಲೂಕಿನಲ್ಲಿ ನಡೆದಿದೆ. ಇಲ್ಲಿನ ಸಿಂಗನೋಡಿ ಗ್ರಾಮದ ಹೊರವಲಯದಲ್ಲಿರುವ ಗೋವಿಂದ ಎಂಬುವರ ಹೊಲದಲ್ಲಿ ಈ ದುರ್ಘಟನೆ ಸಂಭವಿಸಿದೆ.

ರವಿಚಂದ್ರ(23), ವಿಷ್ಣು(18) ಮೃತ ಅಣ್ಣ ಮತ್ತು ತಮ್ಮಂದಿರಾಗಿದ್ದು, ತಾಯಿ ಮಹಾದೇವಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮನೆಯ ಜಮೀನಿನಲ್ಲಿ ದನಗಳಿಗಾಗಿ ಜೋಪಡಿ ಹಾಕಿದ್ದು, ಜೋಪಡಿಗೆ ತೆರಳಿ ಮಾತನಾಡುತ್ತಿದ್ದ ವೇಳೆ ಸಿಡಿಲು ಬಡಿದಿದೆ.

ಇದರಿಂದ ಅಣ್ಣ-ತಮ್ಮ ಸ್ಥಳದಲ್ಲಿಯೇ ಸಾವನಪ್ಪಿದ್ರೆ, ತಾಯಿ ಸಣ್ಣ-ಪುಟ್ಟ ಗಾಯದೊಂದಿಗೆ ಬದುಕುಳಿದಿದ್ದಾಳೆ. ಇನ್ನೂ ಇಬ್ಬರೂ ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಯಾಪಲದಿನ್ನಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರಾಯಚೂರು : ಸಿಡಿಲು ಬಡಿದು ಸಹೋದರರಿಬ್ಬರು ಅಸುನೀಗಿದ ಘಟನೆ ರಾಯಚೂರು ತಾಲೂಕಿನಲ್ಲಿ ನಡೆದಿದೆ. ಇಲ್ಲಿನ ಸಿಂಗನೋಡಿ ಗ್ರಾಮದ ಹೊರವಲಯದಲ್ಲಿರುವ ಗೋವಿಂದ ಎಂಬುವರ ಹೊಲದಲ್ಲಿ ಈ ದುರ್ಘಟನೆ ಸಂಭವಿಸಿದೆ.

ರವಿಚಂದ್ರ(23), ವಿಷ್ಣು(18) ಮೃತ ಅಣ್ಣ ಮತ್ತು ತಮ್ಮಂದಿರಾಗಿದ್ದು, ತಾಯಿ ಮಹಾದೇವಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮನೆಯ ಜಮೀನಿನಲ್ಲಿ ದನಗಳಿಗಾಗಿ ಜೋಪಡಿ ಹಾಕಿದ್ದು, ಜೋಪಡಿಗೆ ತೆರಳಿ ಮಾತನಾಡುತ್ತಿದ್ದ ವೇಳೆ ಸಿಡಿಲು ಬಡಿದಿದೆ.

ಇದರಿಂದ ಅಣ್ಣ-ತಮ್ಮ ಸ್ಥಳದಲ್ಲಿಯೇ ಸಾವನಪ್ಪಿದ್ರೆ, ತಾಯಿ ಸಣ್ಣ-ಪುಟ್ಟ ಗಾಯದೊಂದಿಗೆ ಬದುಕುಳಿದಿದ್ದಾಳೆ. ಇನ್ನೂ ಇಬ್ಬರೂ ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಯಾಪಲದಿನ್ನಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.