ETV Bharat / state

ರಾಯಚೂರಲ್ಲಿ ಇಬ್ಬರು ಬಾಲಕರು ನೀರುಪಾಲು: ಓರ್ವನ ಮೃತದೇಹ ಪತ್ತೆ

author img

By

Published : Feb 13, 2021, 12:34 PM IST

ಕಾಲುವೆ ಕಡೆ ತೆರಳಿದ ಇಬ್ಬರು ಬಾಲಕರು ನೀರುಪಾಲಾಗಿರುವ ಘಟನೆ ರಾಯಚೂರು ತಾಲೂಕಿನಲ್ಲಿ ನಡೆದಿದೆ. ಸದ್ಯ ಓರ್ವ ಬಾಲಕನ ಮೃತದೇಹ ಪತ್ತೆಯಾಗಿದ್ದು, ಇನ್ನೋರ್ವ ಬಾಲಕ ಸಹ ಕಾಲುವೆಯಲ್ಲಿ ಹೋಗಿರಬಹುದೆಂದು ಶಂಕಿಸಲಾಗಿದೆ.

raichur
ರಾಯಚೂರಲ್ಲಿ ಇಬ್ಬರು ಬಾಲಕರು ನೀರುಪಾಲು: ಓರ್ವನ ಮೃತ ದೇಹ ಪತ್ತೆ

ರಾಯಚೂರು: ಕಾಲುವೆ ಕಡೆ ತೆರಳಿದ್ದ ಬಾಲಕರಿಬ್ಬರು ನೀರು ಪಾಲಾಗಿರುವ ಘಟನೆ ತಾಲೂಕಿನ ರಾಮರಾವ್ ಕ್ಯಾಂಪ್‌ನಲ್ಲಿ ನಡೆದಿದೆ.

ರಾಯಚೂರಲ್ಲಿ ಇಬ್ಬರು ಬಾಲಕರು ನೀರುಪಾಲು: ಓರ್ವನ ಮೃತದೇಹ ಪತ್ತೆ

ಪ್ರವೀಣ್ (8) ಎಂಬಾತನ ಮೃತದೇಹ ಪತ್ತೆಯಾಗಿದೆ. ಚಿನ್ನಿ ಎಂಬ ಬಾಲಕನ ಬಗ್ಗೆ ಸುಳಿವು ದೊರೆತಿಲ್ಲ. ಫೆ. 12 ರಂದು ಇಬ್ಬರು ಬಾಲಕರು ಶಾಲೆಗೆ ತೆರಳಿದ್ದರು. ಮಧ್ಯಾಹ್ನ ವೇಳೆ ಶಾಲೆಯಲ್ಲಿ ಬಿಟ್ಟು ಹೊರಗಡೆ ಹೋಗಿದ್ದಾರೆ. ಆಗ ಮನೆಯವರು ಶಾಲೆಯಲ್ಲಿ ಆಟವಾಡಲು ತೆರಳಿರಬಹುದೆಂದು ಸುಮ್ಮನಾಗಿದ್ದಾರೆ. ಆದ್ರೆ ಸಂಜೆ ವೇಳೆ ಇಬ್ಬರು ಮನೆಗೆ ಮರಳಿಲ್ಲ. ಇದರಿಂದ ಗಾಬರಿಗೊಂಡ ಪಾಲಕರು, ಸಂಬಂಧಿಕರು ಹಾಗೂ ಗ್ರಾಮಸ್ಥರು ಹುಡಾಕಾಟ ನಡೆಸಿದ್ದಾರೆ. ಆದ್ರೆ ಅವರ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ.

ಇಂದು ಬೆಳಗ್ಗೆ ಬಾಲಕ ಪ್ರವೀಣ್ ಮೃತದೇಹ ಕಾಲುವೆಯಲ್ಲಿ ಪತ್ತೆಯಾದ್ದು, ಇನ್ನೋರ್ವ ಬಾಲಕ ಸಹ ಕಾಲುವೆಯಲ್ಲಿ ಹೋಗಿರಬಹುದೆಂದು ಶಂಕಿಸಲಾಗಿದೆ. ಸದ್ಯ ಬಾಲಕನ ಶೋಧ ಕಾರ್ಯ ನಡೆಸಲಾಗುತ್ತಿದ್ದು, ಮಕ್ಕಳ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಇಡಪನೂರು ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಾಯಚೂರು: ಕಾಲುವೆ ಕಡೆ ತೆರಳಿದ್ದ ಬಾಲಕರಿಬ್ಬರು ನೀರು ಪಾಲಾಗಿರುವ ಘಟನೆ ತಾಲೂಕಿನ ರಾಮರಾವ್ ಕ್ಯಾಂಪ್‌ನಲ್ಲಿ ನಡೆದಿದೆ.

ರಾಯಚೂರಲ್ಲಿ ಇಬ್ಬರು ಬಾಲಕರು ನೀರುಪಾಲು: ಓರ್ವನ ಮೃತದೇಹ ಪತ್ತೆ

ಪ್ರವೀಣ್ (8) ಎಂಬಾತನ ಮೃತದೇಹ ಪತ್ತೆಯಾಗಿದೆ. ಚಿನ್ನಿ ಎಂಬ ಬಾಲಕನ ಬಗ್ಗೆ ಸುಳಿವು ದೊರೆತಿಲ್ಲ. ಫೆ. 12 ರಂದು ಇಬ್ಬರು ಬಾಲಕರು ಶಾಲೆಗೆ ತೆರಳಿದ್ದರು. ಮಧ್ಯಾಹ್ನ ವೇಳೆ ಶಾಲೆಯಲ್ಲಿ ಬಿಟ್ಟು ಹೊರಗಡೆ ಹೋಗಿದ್ದಾರೆ. ಆಗ ಮನೆಯವರು ಶಾಲೆಯಲ್ಲಿ ಆಟವಾಡಲು ತೆರಳಿರಬಹುದೆಂದು ಸುಮ್ಮನಾಗಿದ್ದಾರೆ. ಆದ್ರೆ ಸಂಜೆ ವೇಳೆ ಇಬ್ಬರು ಮನೆಗೆ ಮರಳಿಲ್ಲ. ಇದರಿಂದ ಗಾಬರಿಗೊಂಡ ಪಾಲಕರು, ಸಂಬಂಧಿಕರು ಹಾಗೂ ಗ್ರಾಮಸ್ಥರು ಹುಡಾಕಾಟ ನಡೆಸಿದ್ದಾರೆ. ಆದ್ರೆ ಅವರ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ.

ಇಂದು ಬೆಳಗ್ಗೆ ಬಾಲಕ ಪ್ರವೀಣ್ ಮೃತದೇಹ ಕಾಲುವೆಯಲ್ಲಿ ಪತ್ತೆಯಾದ್ದು, ಇನ್ನೋರ್ವ ಬಾಲಕ ಸಹ ಕಾಲುವೆಯಲ್ಲಿ ಹೋಗಿರಬಹುದೆಂದು ಶಂಕಿಸಲಾಗಿದೆ. ಸದ್ಯ ಬಾಲಕನ ಶೋಧ ಕಾರ್ಯ ನಡೆಸಲಾಗುತ್ತಿದ್ದು, ಮಕ್ಕಳ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಇಡಪನೂರು ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.