ETV Bharat / state

ರಾಯಚೂರಿನ ರಿಮ್ಸ್​​ನಲ್ಲಿ ಆರಂಭಗೊಳ್ಳಲಿದೆ ಗಂಟಲು ದ್ರವ ಪರೀಕ್ಷಾ ಕೇಂದ್ರ

author img

By

Published : May 14, 2020, 11:20 PM IST

ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಗಂಟಲು ದ್ರವ ಪರೀಕ್ಷೆಯ ಪ್ರಯೋಗಾಲಯ ಆರಂಭಗೊಳ್ಳಲಿದ್ದು, ಕೊರೊನಾ ಪರೀಕ್ಷೆ ಇನ್ನಷ್ಟು ಚುರುಕು ಪಡೆದುಕೊಳ್ಳಲಿದೆ. ಸದ್ಯ ಕೊನೆಯ ಹಂತದ ಕಾಮಗಾರಿ ನಡೆಯುತ್ತಿದ್ದು, ಕೆಲವೇ ವಾರದಲ್ಲಿ ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ.

Throat Liquid Testing Center to be started at RIIMS
ರಾಯಚೂರಿನ ರಿಮ್ಸ್​​ನಲ್ಲಿ ಆರಂಭಗೊಳ್ಳಲಿದೆ ಗಂಟಲು ದ್ರವ ಪರೀಕ್ಷಾ ಕೇಂದ್ರ

ರಾಯಚೂರು: ಕೊರೊನಾ ಶಂಕಿತರ ಗಂಟಲು ದ್ರವ ಪರೀಕ್ಷೆ ನಡೆಸಲು ನಗರದ ರಿಮ್ಸ್​​ನಲ್ಲಿ ಪ್ರಯೋಗಾಲಯಕ್ಕೆ ಸ್ಥಾಪನೆ ಕಾರ್ಯ ನಡೆದಿದೆ. ನಗರದ ಹೊರವಲಯದ ರಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್-19 ಪರೀಕ್ಷಾ ಕೇಂದ್ರ ಸ್ಥಾಪನೆ ಕಾಮಗಾರಿ ನಡೆಯುತ್ತಿದೆ. ಪರೀಕ್ಷಾ ಕೇಂದ್ರದ ಸಿವಿಲ್ ಕಾಮಗಾರಿ ಮುಗಿದಿವೆ. ಲ್ಯಾಬ್​ಗೆ ಸಂಬಂಧಿಸಿದ ಉಪಕರಣಗಳು ಬಂದಿದ್ದು, ಅದರ ಜೋಡಣೆ ಕಾರ್ಯ ನಡೆಸಲಾಗುತ್ತಿದೆ.

ಉಪಕರಣಗಳನ್ನು ಆಳವಡಿಕೆ ಮಾಡುವ ಇಂಜಿನಿಯರ್ ಆಗಮಿಸಿದ್ದು, ಸಹ ಎರಡು-ಮೂರು ದಿನಗಳಲ್ಲಿ ಉಪಕರಣ ಆಳವಡಿಕೆಯಾಗಲಿದೆ. ಬಳಿಕ ಐಸಿಎಂಆರ್​ಗೆ ಅನುಮತಿ ಕೋರಲಾಗುವುದು. ಅಗತ್ಯ ಮೂಲಭೂತ ಸೌಕರ್ಯಗಳು ಸಿದ್ಧಗೊಂಡಿರುವುದರಿಂದ ಅವರು ಕೂಡಲೇ ಅನುಮತಿ ನೀಡುವ ಸಾಧ್ಯತೆ ಇದೆ.

ಅಲ್ಲದೇ ಗಂಟಲಿನ ದ್ರವ ಪರೀಕ್ಷೆ ಮಾಡುವ ಸಿಬ್ಬಂದಿಗೆ ಈಗಾಗಲೇ ತರಬೇತಿಯನ್ನು ಸಹ ನೀಡಲಾಗಿದೆ. ಪ್ರಯೋಗಾಲಯ ಕಾರ್ಯಾರಂಭಗೊಂಡ ನಂತರ ಎರಡು ಪಾಳಿಯಲ್ಲಿ ಕಾರ್ಯನಿರ್ವಹಿಸಲು ಸಿಬ್ಬಂದಿ ಸಿದ್ಧರಾಗಿದ್ದಾರೆ.

ಲ್ಯಾಬ್ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಇತ್ತೀಚೆಗೆ ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿ, ನಿಯಮಾನುಸಾರ ಕಾಮಗಾರಿಯನ್ನ ನಡೆಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ರಾಯಚೂರು: ಕೊರೊನಾ ಶಂಕಿತರ ಗಂಟಲು ದ್ರವ ಪರೀಕ್ಷೆ ನಡೆಸಲು ನಗರದ ರಿಮ್ಸ್​​ನಲ್ಲಿ ಪ್ರಯೋಗಾಲಯಕ್ಕೆ ಸ್ಥಾಪನೆ ಕಾರ್ಯ ನಡೆದಿದೆ. ನಗರದ ಹೊರವಲಯದ ರಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್-19 ಪರೀಕ್ಷಾ ಕೇಂದ್ರ ಸ್ಥಾಪನೆ ಕಾಮಗಾರಿ ನಡೆಯುತ್ತಿದೆ. ಪರೀಕ್ಷಾ ಕೇಂದ್ರದ ಸಿವಿಲ್ ಕಾಮಗಾರಿ ಮುಗಿದಿವೆ. ಲ್ಯಾಬ್​ಗೆ ಸಂಬಂಧಿಸಿದ ಉಪಕರಣಗಳು ಬಂದಿದ್ದು, ಅದರ ಜೋಡಣೆ ಕಾರ್ಯ ನಡೆಸಲಾಗುತ್ತಿದೆ.

ಉಪಕರಣಗಳನ್ನು ಆಳವಡಿಕೆ ಮಾಡುವ ಇಂಜಿನಿಯರ್ ಆಗಮಿಸಿದ್ದು, ಸಹ ಎರಡು-ಮೂರು ದಿನಗಳಲ್ಲಿ ಉಪಕರಣ ಆಳವಡಿಕೆಯಾಗಲಿದೆ. ಬಳಿಕ ಐಸಿಎಂಆರ್​ಗೆ ಅನುಮತಿ ಕೋರಲಾಗುವುದು. ಅಗತ್ಯ ಮೂಲಭೂತ ಸೌಕರ್ಯಗಳು ಸಿದ್ಧಗೊಂಡಿರುವುದರಿಂದ ಅವರು ಕೂಡಲೇ ಅನುಮತಿ ನೀಡುವ ಸಾಧ್ಯತೆ ಇದೆ.

ಅಲ್ಲದೇ ಗಂಟಲಿನ ದ್ರವ ಪರೀಕ್ಷೆ ಮಾಡುವ ಸಿಬ್ಬಂದಿಗೆ ಈಗಾಗಲೇ ತರಬೇತಿಯನ್ನು ಸಹ ನೀಡಲಾಗಿದೆ. ಪ್ರಯೋಗಾಲಯ ಕಾರ್ಯಾರಂಭಗೊಂಡ ನಂತರ ಎರಡು ಪಾಳಿಯಲ್ಲಿ ಕಾರ್ಯನಿರ್ವಹಿಸಲು ಸಿಬ್ಬಂದಿ ಸಿದ್ಧರಾಗಿದ್ದಾರೆ.

ಲ್ಯಾಬ್ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಇತ್ತೀಚೆಗೆ ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿ, ನಿಯಮಾನುಸಾರ ಕಾಮಗಾರಿಯನ್ನ ನಡೆಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.