ETV Bharat / state

ರಾಯಚೂರಿನಲ್ಲಿ ಧಾರಾಕಾರ ಮಳೆ: ನೂರಾರು ಟನ್ ಈರುಳ್ಳಿ ನೀರುಪಾಲು

ಇಂದು ಮಧ್ಯಾಹ್ನ ರಾಯಚೂರಿನಲ್ಲಿ ಭಾರೀ ಮಳೆ ಸುರಿದಿದೆ. ಪರಿಣಾಮ ಎಪಿಎಂಸಿ ಮಾರುಕಟ್ಟೆಗೆ ನೀರು ನುಗ್ಗಿದ್ದು, ನೂರಾರು ಟನ್​ ಈರುಳ್ಳಿ ನೀರು ಪಾಲಾಗಿದೆ.

author img

By

Published : Oct 4, 2019, 7:38 PM IST

ರಾಯಚೂರಿನಲ್ಲಿ ಭಾರೀ ಮಳೆ

ರಾಯಚೂರು: ಇಂದು ಮಧ್ಯಾಹ್ನ ಸುರಿದ ಧಾರಾಕಾರ ಮಳೆಯಿಂದಾಗಿ ನಗರದ ಎಪಿಎಂಸಿ ಆವರಣದಲ್ಲಿ ಮಾರಾಟಕ್ಕೆ ಇಡಲಾಗಿದ್ದ ಈರುಳ್ಳಿ ‌ನೀರು ಪಾಲಾಗಿದೆ.

ಕಳೆದ ಎರಡ್ಮೂರು ದಿನಗಳಿಂದ ಮಾರಾಟ ಮಾಡಲು ನಗರದ ಎಪಿಎಂಸಿಯಲ್ಲಿ ರೈತರು ಆಗಮಿಸಿದ್ದರು. ಆದ್ರೆ ಎರಡು ದಿನಗಳಿಂದ ಟೆಂಡರ್ ಅಗದ ಕಾರಣ ಮಾರಾಟ ಮಾಡದೇ ಮಾರುಕಟ್ಟೆಯ ಆವರಣದಲ್ಲಿ ಇರಿಸಲಾಗಿತ್ತು .

ನೂರಾರು ಟನ್ ಈರುಳ್ಳಿ ನೀರು ಪಾಲು

ಇಂದು ಟೆಂಡರ್ ಪ್ರಕ್ರಿಯೆ ಆರಂಭವಾಗಿ ಖರೀದಿಯಲ್ಲಿ ವರ್ತಕರು ತೊಡಗಿದ್ದರು. ಆದ್ರೆ ಏಕಾಏಕಿ ಮಳೆ ಸುರಿದ ಕಾರಣ ಹಲವಾರು ರೈತರ ಈರುಳ್ಳಿ ನೀರು ಪಾಲಾಯಿತು.ಇದ್ದ ಬದ್ದ ಈರುಳ್ಳಿ ಉಳಿಸಿಕೊಳ್ಳಲು ರೈತರು ನೀರು ಹೊರಹಾಕಲು ಹರಸಾಹಸ ನಡೆಸಿದ್ರು.

ಮೊದಲೇ ಎರಡು ದಿನಗಳಿಂದ ಆವರಣದಲ್ಲಿ ಈರುಳ್ಳಿ ಇರಿಸಿಕೊಂಡು ಪರಿತಪಿಸುತ್ತಿದ್ದ ರೈತರು, ನೂರಾರು ಟನ್ ಈರುಳ್ಳಿ ನೀರುಪಾಲಾಗಿದ್ದರಿಂದ ಸಂಕಷ್ಟಕ್ಕೀಡಾಗಿದ್ದಾರೆ.

ರಾಯಚೂರು: ಇಂದು ಮಧ್ಯಾಹ್ನ ಸುರಿದ ಧಾರಾಕಾರ ಮಳೆಯಿಂದಾಗಿ ನಗರದ ಎಪಿಎಂಸಿ ಆವರಣದಲ್ಲಿ ಮಾರಾಟಕ್ಕೆ ಇಡಲಾಗಿದ್ದ ಈರುಳ್ಳಿ ‌ನೀರು ಪಾಲಾಗಿದೆ.

ಕಳೆದ ಎರಡ್ಮೂರು ದಿನಗಳಿಂದ ಮಾರಾಟ ಮಾಡಲು ನಗರದ ಎಪಿಎಂಸಿಯಲ್ಲಿ ರೈತರು ಆಗಮಿಸಿದ್ದರು. ಆದ್ರೆ ಎರಡು ದಿನಗಳಿಂದ ಟೆಂಡರ್ ಅಗದ ಕಾರಣ ಮಾರಾಟ ಮಾಡದೇ ಮಾರುಕಟ್ಟೆಯ ಆವರಣದಲ್ಲಿ ಇರಿಸಲಾಗಿತ್ತು .

ನೂರಾರು ಟನ್ ಈರುಳ್ಳಿ ನೀರು ಪಾಲು

ಇಂದು ಟೆಂಡರ್ ಪ್ರಕ್ರಿಯೆ ಆರಂಭವಾಗಿ ಖರೀದಿಯಲ್ಲಿ ವರ್ತಕರು ತೊಡಗಿದ್ದರು. ಆದ್ರೆ ಏಕಾಏಕಿ ಮಳೆ ಸುರಿದ ಕಾರಣ ಹಲವಾರು ರೈತರ ಈರುಳ್ಳಿ ನೀರು ಪಾಲಾಯಿತು.ಇದ್ದ ಬದ್ದ ಈರುಳ್ಳಿ ಉಳಿಸಿಕೊಳ್ಳಲು ರೈತರು ನೀರು ಹೊರಹಾಕಲು ಹರಸಾಹಸ ನಡೆಸಿದ್ರು.

ಮೊದಲೇ ಎರಡು ದಿನಗಳಿಂದ ಆವರಣದಲ್ಲಿ ಈರುಳ್ಳಿ ಇರಿಸಿಕೊಂಡು ಪರಿತಪಿಸುತ್ತಿದ್ದ ರೈತರು, ನೂರಾರು ಟನ್ ಈರುಳ್ಳಿ ನೀರುಪಾಲಾಗಿದ್ದರಿಂದ ಸಂಕಷ್ಟಕ್ಕೀಡಾಗಿದ್ದಾರೆ.

Intro:ಇಂದು ಸುರಿದ ಧಾರಾಕಾರ ಮಳೆಯಿಂದಾಗಿ ರಾಯಚೂರು ನಗರದ ಎಪಿಎಂಸಿ ಆವರಣದಲ್ಲಿ‌ ಮಾರಾಟಕ್ಕೆ ತರಲಾಗಿದ್ದ ಈರುಳ್ಳಿ ನೀರು ಪಾಲಾಗಿದ್ದು ರೈತರ ಕಣ್ಣಲ್ಲಿ ನೀರು ತರಿಸಿತು.



Body:ಜಿಲ್ಲೆಯ ರೈತರು ಹಾಗೂ ನೆರೆಯ ಆಂದ್ರಪ್ರದೇಶ,ತೆಲಂಗಾಣದಿಂದ ರೈತರು ಎಪಿಎಂಸಿಗೆ ಈರುಳ್ಳಿ ತಂದಿದ್ದರು ಆದ್ರೆ ಕಳೆದ ಎರಡ್ಮೂರು ದಿನಗಳಿಂದ ಟೆಂಡರ್ ಕರೆಯದ ಕಾರಣ ಈರುಳ್ಳಿ ಮಾರಾಟವಾಗದೇ ಎಪಿಎಂಸಿ ಆವರಣದಲ್ಲಿ ಹಾಕಿಕೊಂಡಿದ್ದರು.
ಇಂದು ಮಧ್ಯಾಹ್ನ ಸುರಿದ ಮಳೆಯಿಂದಾಗಿ ಎಪಿಎಂಸಿಯ ಅವರಣಕ್ಕೆ ನುಗ್ಗಿದ ನೀರು ನೂರಾರು ಕ್ವಿಂಟಲ್ ಈರುಳ್ಳಿ ನೀರು ಪಾಲಾದವು.
ಅವೈಜ್ಞಾನಿಕವಾಗಿ ಟೀನ್ ಶೆಡ್ ಹಾಕಿದ್ದೇ ಈರುಳ್ಳಿ ನೀರು ಪಾಲಾಗಿದೆ ಎರಡು ದಿನಗಳಿಂದ ಮಾರಾಟಕ್ಕೆ ತಂದರೂ ಟೆಂಡರ್ ಕರೆದು ಖರೀದಿಸದ ವರ್ತಕರು ಇಂದು ಟೆಂಡರ್ ಕರೆದಿದ್ದಾರೆ ಆದ್ರೆ ಅಷ್ಟೊತ್ತಿಗೆ ವರುಣ ತನ್ನ ಕರಾಮತ್ತು ತೋರಿಸಿದ ಕಾರಣ ನೂರಾರು ಟನ್ ಈರುಳ್ಳಿ ನೀರುಪಾಲಾಗಿದ್ದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಯಿತು.

ಮಳೆ ಆರಂಭವಾಗಿದೆ ಹಿನ್ನೆಲೆಯಲ್ಲಿ ಇದ್ದಬದ್ದ ಉಳಿಸಿಕೊಳ್ಳಲು ರೈತರು ಹೆಣಗಾಡಿದರು ಅಷ್ಟೊತ್ತಿಗೆ ನೂರಾರು ಎಂಟು ಈರುಳ್ಳಿ ಈರುಳ್ಳಿ ನೀರು ಪಾಲಾಗಿತ್ತು.
ಮೊದಲೇ ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ ಈರುಳ್ಳಿ ಹಾನಿಯಾಗಿದ್ದು ಅದನ್ನು ರಕ್ಷಿಸಿಕೊಳ್ಳಲು ವಿಫಲವಾಗಿ ಸಂಕಷ್ಟಕ್ಕೆ ಸಿಲುಕಿದ್ದಾನೆ.
ನೀರು ಪಾಲಾಗಿದ್ದ ಈರುಳ್ಳಿಗೆ ಕನಿಷ್ಟ ದರಕ್ಕೂ ಕೊಳ್ಳದ ವರ್ತರು ಈ ವರ್ತನೆಯಿಂದ ರೈತರು ಕೆಂಗೆಟ್ಟರು.

ಬೈಟ್: ಅನುಕ್ರಮವಾಗಿ.1)ಲಕ್ಷ್ಮಣಗೌಡ ಕಡಗಂದೊಡ್ಡಿ.ರೈತ ಮುಖಂಡ.ಹಸಿರುಶಾಲು ಧರಿಸಿದವರು.

2) ನೂರಪ್ಪ, ರೈತ.




Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.