ETV Bharat / state

ನಿಯಮಗಳಿಗೆ ಮೂರುಕಾಸಿನ ಮರ್ಯಾದೆಯಿಲ್ಲ.. ಗಾಳಿಯಲ್ಲಿ ಹಾರೂಬೂದಿ ಬಿಡುತ್ತಿದೆ ಆರ್​ಟಿಪಿಎಸ್ ಕೇಂದ್ರ - vis, bites and script

ರಾಯಚೂರು ತಾಲೂಕಿನ ಶಕ್ತಿ ನಗರದಲ್ಲಿ ದಿನೇದಿನೆ ಹಾರೂಬೂದಿ ಮಟ್ಟ ಹೆಚ್ಚುತ್ತಿದ್ದು ಇದರಿಂದ ಸಾರ್ವಜನಿಕರು ಆತಂಕ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಆರ್​ಟಿಪಿಎಸ್ ಕೇಂದ್ರ
author img

By

Published : May 7, 2019, 12:11 PM IST

ರಾಯಚೂರು : ರಾಜ್ಯಕ್ಕೆ ಶೇ.40ರಷ್ಟು ವಿದ್ಯುತ್ ಉತ್ಪಾದಿಸುವ ಮೂಲಕ ನಮಗೆ ಬೆಳಕು ನೀಡುವ ಆರ್​ಟಿಪಿಎಸ್ ವಿದ್ಯುತ್ ಕೇಂದ್ರದಲ್ಲಿ ಚಿಮಣಿಯ ಮೂಲಕ ಹೆಚ್ಚಿನ ಮಟ್ಟದಲ್ಲಿ ಹಾರೂಬೂದಿ ಹೊರ ಬರುತ್ತಿದ್ದು, ಇದರಿಂದ ಗ್ರಾಮಸ್ಥರು ಆತಂಕಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಆರ್​ಟಿಪಿಎಸ್ ವಿದ್ಯುತ್ ಕೇಂದ್ರದಲ್ಲಿ ಹೆಚ್ಚಿರುವ ಹಾರೂಬೂದಿ

ರಾಯಚೂರು ತಾಲೂಕಿನ ಶಕ್ತಿನಗರದ ವಿದ್ಯುತ್ ಶಾಖೋತ್ಪನ್ನ ಕೇಂದ್ರದಲ್ಲಿ ದಿನದಿಂದ ದಿನಕ್ಕೆ ಹಾರೂಬೂದಿ ಪ್ರಮಾಣ ಹೆಚ್ಚಾಗುತ್ತಿದ್ದು, ಇದರಿಂದ ಶಕ್ತಿನಗರದ ಸುತ್ತಮುತ್ತಲಿರುವ ಯಾದ್ಲಾಪುರ, ಕಡ್ಲೂರು, ದೇವಸೂಗೂರು ಗ್ರಾಮ ಸೇರಿದಂತೆ ಹಲವು ಗ್ರಾಮಗಳ ಜನರು ನಾನಾ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಅಲ್ಲದೇ ಅಸ್ತಮಾ, ಕ್ಯಾನ್ಸರ್, ಉಸಿರಾಟದ ತೊಂದರೆ ಸೇರಿದಂತೆ ಹಲವು ರೋಗಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ. ಇದರ ಮಧ್ಯೆ ಮತ್ತೆ ಆರ್‌ಟಿಪಿಎಸ್‌ನಿಂದ ಹಾರೂಬೂದಿ ವಿಪರೀತವಾಗಿ ಬರುತ್ತಿರುವುದು ಗ್ರಾಮಸ್ಥರಿಗೆ ಮತ್ತಷ್ಟು ತಲೆನೋವಾಗಿ ಪರಿಣಮಿಸಿದೆ.

ಆರ್‌ಟಿಪಿಎಸ್‌ನಿಂದ ಪರಿಸರ ಹಾಗೂ ಆರೋಗ್ಯದ ಮೇಲೆ ಪ್ರಭಾವ ಬೀರುತ್ತಿದ್ದರೂ ವಾಯು ಮಾಲಿನ್ಯ ನಿಯಂತ್ರಣ ಇಲಾಖೆ ಕಂಡು ಕಾಣದ ರೀತಿಯಲ್ಲಿ ವರ್ತಿಸುತ್ತಿದೆ. ಇತ್ತ ಆರ್‌ಟಿಪಿಎಸ್ ಮಂಡಳಿ ತನ್ನ ನಿಯಮವನ್ನ ಗಾಳಿಗೆ ತೂರಿ, ಗಾಳಿಯಲ್ಲಿ ಹಾರೂಬೂದಿಯನ್ನ ಬಿಡುವ ಮೂಲಕ ಜನರ ಜೀವನದ ಜತೆ ಚೆಲ್ಲಾಟವಾಡುತ್ತಿದೆ. ಇಡೀ ರಾಜ್ಯಕ್ಕೆ ಬೆಳಕು ನೀಡುವ ಆರ್‌ಟಿಪಿಎಸ್ ವಿದ್ಯುತ್ ಕೇಂದ್ರ ಸ್ಥಳೀಯರಿಗೆ ಶಾಪವಾಗಿ ಪರಿಣಮಿಸಿದೆ. ಇನ್ನಾದರೂ ಕೂಡ ವಾಯು ಮಾಲಿನ್ಯ ನಿಯಂತ್ರಣ ಇಲಾಖೆ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಸುತ್ತಲಿನ ಪರಿಸರವನ್ನು ಕಾಪಾಡಿಕೊಳ್ಳಬೇಕಾಗಿದೆ.

ರಾಯಚೂರು : ರಾಜ್ಯಕ್ಕೆ ಶೇ.40ರಷ್ಟು ವಿದ್ಯುತ್ ಉತ್ಪಾದಿಸುವ ಮೂಲಕ ನಮಗೆ ಬೆಳಕು ನೀಡುವ ಆರ್​ಟಿಪಿಎಸ್ ವಿದ್ಯುತ್ ಕೇಂದ್ರದಲ್ಲಿ ಚಿಮಣಿಯ ಮೂಲಕ ಹೆಚ್ಚಿನ ಮಟ್ಟದಲ್ಲಿ ಹಾರೂಬೂದಿ ಹೊರ ಬರುತ್ತಿದ್ದು, ಇದರಿಂದ ಗ್ರಾಮಸ್ಥರು ಆತಂಕಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಆರ್​ಟಿಪಿಎಸ್ ವಿದ್ಯುತ್ ಕೇಂದ್ರದಲ್ಲಿ ಹೆಚ್ಚಿರುವ ಹಾರೂಬೂದಿ

ರಾಯಚೂರು ತಾಲೂಕಿನ ಶಕ್ತಿನಗರದ ವಿದ್ಯುತ್ ಶಾಖೋತ್ಪನ್ನ ಕೇಂದ್ರದಲ್ಲಿ ದಿನದಿಂದ ದಿನಕ್ಕೆ ಹಾರೂಬೂದಿ ಪ್ರಮಾಣ ಹೆಚ್ಚಾಗುತ್ತಿದ್ದು, ಇದರಿಂದ ಶಕ್ತಿನಗರದ ಸುತ್ತಮುತ್ತಲಿರುವ ಯಾದ್ಲಾಪುರ, ಕಡ್ಲೂರು, ದೇವಸೂಗೂರು ಗ್ರಾಮ ಸೇರಿದಂತೆ ಹಲವು ಗ್ರಾಮಗಳ ಜನರು ನಾನಾ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಅಲ್ಲದೇ ಅಸ್ತಮಾ, ಕ್ಯಾನ್ಸರ್, ಉಸಿರಾಟದ ತೊಂದರೆ ಸೇರಿದಂತೆ ಹಲವು ರೋಗಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ. ಇದರ ಮಧ್ಯೆ ಮತ್ತೆ ಆರ್‌ಟಿಪಿಎಸ್‌ನಿಂದ ಹಾರೂಬೂದಿ ವಿಪರೀತವಾಗಿ ಬರುತ್ತಿರುವುದು ಗ್ರಾಮಸ್ಥರಿಗೆ ಮತ್ತಷ್ಟು ತಲೆನೋವಾಗಿ ಪರಿಣಮಿಸಿದೆ.

ಆರ್‌ಟಿಪಿಎಸ್‌ನಿಂದ ಪರಿಸರ ಹಾಗೂ ಆರೋಗ್ಯದ ಮೇಲೆ ಪ್ರಭಾವ ಬೀರುತ್ತಿದ್ದರೂ ವಾಯು ಮಾಲಿನ್ಯ ನಿಯಂತ್ರಣ ಇಲಾಖೆ ಕಂಡು ಕಾಣದ ರೀತಿಯಲ್ಲಿ ವರ್ತಿಸುತ್ತಿದೆ. ಇತ್ತ ಆರ್‌ಟಿಪಿಎಸ್ ಮಂಡಳಿ ತನ್ನ ನಿಯಮವನ್ನ ಗಾಳಿಗೆ ತೂರಿ, ಗಾಳಿಯಲ್ಲಿ ಹಾರೂಬೂದಿಯನ್ನ ಬಿಡುವ ಮೂಲಕ ಜನರ ಜೀವನದ ಜತೆ ಚೆಲ್ಲಾಟವಾಡುತ್ತಿದೆ. ಇಡೀ ರಾಜ್ಯಕ್ಕೆ ಬೆಳಕು ನೀಡುವ ಆರ್‌ಟಿಪಿಎಸ್ ವಿದ್ಯುತ್ ಕೇಂದ್ರ ಸ್ಥಳೀಯರಿಗೆ ಶಾಪವಾಗಿ ಪರಿಣಮಿಸಿದೆ. ಇನ್ನಾದರೂ ಕೂಡ ವಾಯು ಮಾಲಿನ್ಯ ನಿಯಂತ್ರಣ ಇಲಾಖೆ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಸುತ್ತಲಿನ ಪರಿಸರವನ್ನು ಕಾಪಾಡಿಕೊಳ್ಳಬೇಕಾಗಿದೆ.

Intro:ಕಲ್ಲಿದಲ್ಲು ಆಧಾರಿತ ಬೃಹತ್ ಶಾಖೋತ್ಪನ ವಿದ್ಯುತ್ ಕೇಂದ್ರಗಳು ಕಡ್ಡಾಯವಾಗಿ ಪರಿಸರ ಹಾನಿ ಮತ್ತು ಸಾರ್ವಜನಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಎಚ್ಚರಿಕೆ ಕ್ರಮವನ್ನ ಪಾಲಿಸಬೇಕು. ಆದ್ರೆ ಇಡೀ ರಾಜ್ಯಕ್ಕೆ ಬೆಳಕು ಒದಗಿಸುವ ರಾಯಚೂರು ವಿದ್ಯುತ್ ಶಾಖೋತ್ಪನ್ನ ಇಂತಹ ಯಾವುದೇ ಕ್ರಮ ಕೈಗೊಳ್ಳದೆ ಸಾರ್ವಜನಿಕರ ಆರೋಗ್ಯದ ಚೆಲ್ಲಾಡವಾಡುತ್ತಿದೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ. ಈ ಕುರಿತು ಒಂದು ರಿಪೋರ್ಟ್ ಇಲ್ಲಿದೆ ನೋಡಿ. Body:ವಾಯ್ಸ್ ಓವರ್.1: ಹೀಗೆ ಒಂದು ಕಡೆ ಮನೆಯಯಲ್ಲಿ ನುಗ್ಗಿರುವ ಹಾರೂಬೂದಿ, ಮತ್ತೊಂದು ಕಡೆ ಮರ ಗಿಡಗಳ ಮೇಲೆ ಹರಡಿರುವ ಬೂದಿ. ಈ ಎಲ್ಲಾ ದೃಶ್ಯಗಳು ಕಂಡು ಬಂದಿರುವುದು. ರಾಯಚೂರು ತಾಲೂಕಿ ಶಕ್ತಿನಗರದಲ್ಲಿ. ಹೌದು, ರಾಜ್ಯಕ್ಕೆ ವಿದ್ಯುತ್ ಶೇ.40ರಷ್ಟು ವಿದ್ಯುತ್ ಉತ್ಪಾದಿಸುವ ಮೂಲಕ ಬೆಳಕು ನೀಡುವ ಆರ್ ಟಿಪಿಎಸ್ ವಿದ್ಯುತ್ ಕೇಂದ್ರದಿಂದ ಚಿಮಣಿಯ ಮೂಲಕ ಹಾರೂಬೂದಿಯಿಂದ ಗ್ರಾಮಸ್ಥರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿ ನಿತ್ಯ ಜನರು ರೋಗದ ಭೀತಿಯಲ್ಲಿ ಬದುಕುವಂತಹ ವಾತಾವರಣ ನಿರ್ಮಾಣವಾಗಿದೆ.
ಬೈಟ್.1: ಸೂಗುಲಿಂಗಪ್ಪ, ಯದ್ಲಾಪುರ ಗ್ರಾಮಸ್ಥ
ವಾಯ್ಸ್ ಓವರ್.2: ಆರ್ ಟಿಪಿಎಸ್ ಕಲ್ಲಿದಲ್ಲು ವಿದ್ಯುತ್ ಕೇಂದ್ರವಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಹಾರೂಬೂದಿ ಹೊರ ಹಾಕುತ್ತಿದೆ. ಈ ಹಾರೂಬೂದಿಯನ್ನ ಸಾರ್ವಜನಿಕರು ವಾಸಿಸುವ ಗ್ರಾಮಗಳಿಗೆ ಮತ್ತು ಪರಿಸರಕ್ಕೆ ಹಾನಿಯಾಗದಂತೆ ಎಚ್ಚರಿಕೆ ಕ್ರಮವನ್ನ ಕಡ್ಡಾಯವಾಗಿ ಪಾಲಿಸಬೇಕು. ಆದ್ರೆ ಅಂತಹ ಯಾವುದೇ ಪಾಲಿಸಿದ ಪರಿಣಾಮ ಚಿಮಣಿಗಳಿಂದ ವಿಪರಿತವಾಗಿ ಹಾರೂಬೂದಿಯನ್ನ ಹೊರ ಬಿಡಲಾಗುತ್ತಿದೆ. ಇದರಿಂದ ಶಕ್ತಿನಗರದ ಸುತ್ತಮುತ್ತಲಿರುವ ಯಾದ್ಲಾಪುರ, ಕಡ್ಲೂರು, ದೇವಸೂಗೂರು ಗ್ರಾಮ ಸೇರಿದಂತೆ ಹಲವು ಗ್ರಾಮಗಳಿಗೆ ಹಾರೂಬೂದಿ ಬಂದು ನಾನಾ ರೋಗ ರುಜನಿಗಳಿಗೆ ತುತ್ತಾಗಿದ್ದೆ. ಅಲ್ಲದೇ ಆಸ್ತಮ, ಕ್ಯಾನ್ಸರ್, ಉಸಿರಾಟದ ತೊಂದರೆ ಸೇರಿದಂತೆ ಹಲವು ರೋಗಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ. ಇದರ ಮದ್ಯ ಮತ್ತೆ ಆರ್ ಟಿಪಿಎಸ್ ನಿಂದ ಹಾರೂಬೂದಿ ವಿಪರಿತವಾಗಿ ಬರುತ್ತಿರುವುದು ಗ್ರಾಮಸ್ಥರಿಗೆ ಸಂಕಷ್ಟ ಎದುರಾಗಿದೆ.
ಬೈಟ್.2: ಭೀರಲಿಂಗಪ್ಪ, ಸ್ಥಳೀಯ ನಿವಾಸಿ
Conclusion:ವಾಯ್ಸ್ ಓವರ್.3: ಇನ್ನು ಆರ್ ಟಿಪಿಎಸ್ ನಿಂದ ಇಷ್ಟೆಲ್ಲ ಪರಿಸರ ಮಾಲಿನ್ಯ ಮತ್ತು ಪರಿಸರದ ಮೇಲೆ ಹಾನಿ ಉಂಟಾಗುತ್ತಿದ್ದರು. ಕಂಡು ಕಾಣದಂತೆ ವಾಯು ಮಾಲಿನ್ಯ ನಿಯಂತ್ರಣ ಇಲಾಖೆ, ಪರಿಸರ ಇಲಾಖೆ ಕಂಡು ಕಾಣದಂತೆ ಜಾಣಕುರುಡರಂತೆ ವರ್ತನೆ ಮಾಡುತ್ತಿದೆ. ಇತ್ತ ಆರ್ ಟಿಪಿಎಸ್ ಮಂಡಳಿ ನಿಯಮವನ್ನ ಗಾಳಿಗೆ ತೂರಿ, ಗಾಳಿಯಲ್ಲಿ ಹಾರೂಬೂದಿಯನ್ನ ಬಿಡುವ ಮೂಲಕ ಜನರ ಜೀವನದ ಜತೆ ಚೆಲ್ಲಾಟವಾಡುತ್ತಿದೆ. ಒಟ್ನಿಲ್ಲಿ, ದೀಪದ ಕೆಳಗೆ ಎನ್ನುವಂತೆ ಇಡೀ ರಾಜ್ಯಕ್ಕೆ ಬೆಳಕು ನೀಡುವ ಆರ್ ಟಿಪಿಎಸ್ ವಿದ್ಯುತ್ ಕೇಂದ್ರ, ಸ್ಥಳೀಯರಿಗೆ ಶಾಪವಾಗಿ ಪರಿಣಾಮಿಸಿದ್ದು, ಹಾರೂಬೂದಿಯನ್ನ ಗಾಳಿಯಲ್ಲಿ ಹರಿದುಬಿಡದಂತೆ ತಡೆಯುವ ಮೂಲಕ ಜನರ ಮತ್ತು ಪರಿಸರ ಮೇಲೆ ಹಾನಿಯಾಗದಂತೆ ಕ್ರಮ ಕೈಗೊಳ್ಳಬೇಕಾಗಿದೆ.
-ಮಲ್ಲಿಕಾರ್ಜುನ ಸ್ವಾಮಿ, ಈಟಿವಿ ಭಾರತ, ರಾಯಚೂರು

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.