ETV Bharat / state

ಇತ್ತ ಕೆಲಸವೂ ಇಲ್ಲ, ಅತ್ತ ಸಂಬಳವೂ ಇಲ್ಲ... ಬೀದಿಗೆ ಬಿದ್ದ ಬಿಎಸ್​ಎನ್​ಎಲ್​ ಗುತ್ತಿಗೆ ನೌಕರರು!

ಬಿಎಸ್​ಎನ್​ಎಲ್​ ಕಚೇರಿಯಲ್ಲಿ ಕಾಂಟ್ರ್ಯಾಕ್ಟ್ ಬೇಸ್ ಮೇಲೆ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿ ಈಗ ಅಕ್ಷರಶಹ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರನ್ನು ಕೆಲಸದಿಂದ ತೆಗೆದುಹಾಕಿದ್ದಕ್ಕೆ ಸಿಬ್ಬಂದಿ ಬದುಕು ಬೀದಿಗೆ ಬರುವಂವತಾಗಿದೆ.

author img

By

Published : Sep 9, 2019, 9:27 AM IST

ಬಿಎಸ್​ಎನ್​ಎಲ್​

ರಾಯಚೂರು: ಜಿಲ್ಲೆಯ ಬಿಎಸ್ಎನ್ಎಲ್ ಕಚೇರಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಯನ್ನು ಎರಡು ತಿಂಗಳಿನಿಂದ ಕೆಲಸದಿಂದ ತೆಗೆದು ಹಾಕಲಾಗಿದೆ. ಕಳೆದ 7 ತಿಂಗಳಿಂದ ವೇತನವೂ ಸಿಗದೇ ಇರೋದರಿಂದ ಅವರೆಲ್ಲ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಬಿಎಸ್ಎನ್ಎಲ್ ನೌಕರರ ಪ್ರತಿಭಟನೆ

ಟೆಂಡರ್ ಮುಗಿದ ಕಾರಣ ಕೆಲಸದಿಂದ ತೆಗೆದುಹಾಕಿದ್ದು, ಕೊಪ್ಪಳ ಸೇರಿ ರಾಯಚೂರಿನ 49 ಒಟ್ಟು 160 ಸಿಬ್ಬಂದಿ ಬೀದಿಗೆ ಬಿದ್ದಿದ್ದಾರೆ. ಇತ್ತ ಕೆಲಸವೂ ಇಲ್ಲದೇ ಅತ್ತ 7 ತಿಂಗಳ ವೇತನವು ಇಲ್ಲದೇ ತೀರ ಸಂಕಷ್ಟ ಎದುರಾಗಿದ್ದು, ಕುಟುಂಬ ನಿರ್ವಹಣೆ, ಮಕ್ಕಳ ಶಿಕ್ಷಣ ಹಾಗೂ ಇತರೆ ಖರ್ಚು ವೆಚ್ಚಕ್ಕೆ ಕೈಯಲ್ಲಿ ಕಾಸಿಲ್ಲದೇ ಸಂಕಷ್ಟ ಪರಿಸ್ಥಿತಿಯಲ್ಲಿದ್ದೇವೆ ಎಂದು ನೊಂದಿರುವ ಸಿಬ್ಬಂದಿ ದೂರುತ್ತಿದ್ದಾರೆ.

ಇವರ ಪರಿಸ್ಥಿತಿ ಹೀಗಾದರೆ ಬಿಎಸ್ಎನ್ಎಲ್ ಬಳಕೆದಾರರಿಗೂ ಸರ್ವಿಸ್ ಸಿಗದೇ ಸಿಮ್ ಬಳಕೆದಾರರಿಗೂ ಬಿಸಿ ತಟ್ಟಿದೆ. ಟವರ್ ಬಂದ್ ಅಗಿವೆ, ನೆಟ್ವರ್ಕ್ ಸಮಸ್ಯೆ, ಸಾರ್ವಜನಿಕರ ದೂರಿಗೆ ಸ್ಪಂದಿಸುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.

ಬಿಎಸ್ಎನ್ಎಲ್ ಕಚೇರಿಯಲ್ಲಿ ಅರೆಕಾಲಿಕ ಸಿಬ್ಬಂದಿಯೇ ಆಧಾರವಾಗಿದ್ದ ಕಾರಣ ಈಗ ಅವರ ಅನುಪಸ್ಥಿತಿಯಲ್ಲಿ ಕಚೇರಿಯಿದ್ದರೂ ಕಾರ್ಯನಿರ್ವಹಣೆಯಿಲ್ಲದಂತಾಗಿದೆ.
ಪ್ರಸ್ತುತ ಅಂದಾಜು 30 ಸಿಬ್ಬಂದಿ ಮಾತ್ರ ಖಾಯಂ ನೌಕರರಿದ್ದು, ಕಚೇರಿಯಲ್ಲಿ ಕೆಲಸದ ಒತ್ತಡದ ಜೊತೆಗೆ ಸಾರ್ವಜನಿಕರ ಮೇಲೆ ತೀವ್ರ ಪರಿಣಾಮ ಬೀರಿದೆ.

ರಾಯಚೂರು: ಜಿಲ್ಲೆಯ ಬಿಎಸ್ಎನ್ಎಲ್ ಕಚೇರಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಯನ್ನು ಎರಡು ತಿಂಗಳಿನಿಂದ ಕೆಲಸದಿಂದ ತೆಗೆದು ಹಾಕಲಾಗಿದೆ. ಕಳೆದ 7 ತಿಂಗಳಿಂದ ವೇತನವೂ ಸಿಗದೇ ಇರೋದರಿಂದ ಅವರೆಲ್ಲ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಬಿಎಸ್ಎನ್ಎಲ್ ನೌಕರರ ಪ್ರತಿಭಟನೆ

ಟೆಂಡರ್ ಮುಗಿದ ಕಾರಣ ಕೆಲಸದಿಂದ ತೆಗೆದುಹಾಕಿದ್ದು, ಕೊಪ್ಪಳ ಸೇರಿ ರಾಯಚೂರಿನ 49 ಒಟ್ಟು 160 ಸಿಬ್ಬಂದಿ ಬೀದಿಗೆ ಬಿದ್ದಿದ್ದಾರೆ. ಇತ್ತ ಕೆಲಸವೂ ಇಲ್ಲದೇ ಅತ್ತ 7 ತಿಂಗಳ ವೇತನವು ಇಲ್ಲದೇ ತೀರ ಸಂಕಷ್ಟ ಎದುರಾಗಿದ್ದು, ಕುಟುಂಬ ನಿರ್ವಹಣೆ, ಮಕ್ಕಳ ಶಿಕ್ಷಣ ಹಾಗೂ ಇತರೆ ಖರ್ಚು ವೆಚ್ಚಕ್ಕೆ ಕೈಯಲ್ಲಿ ಕಾಸಿಲ್ಲದೇ ಸಂಕಷ್ಟ ಪರಿಸ್ಥಿತಿಯಲ್ಲಿದ್ದೇವೆ ಎಂದು ನೊಂದಿರುವ ಸಿಬ್ಬಂದಿ ದೂರುತ್ತಿದ್ದಾರೆ.

ಇವರ ಪರಿಸ್ಥಿತಿ ಹೀಗಾದರೆ ಬಿಎಸ್ಎನ್ಎಲ್ ಬಳಕೆದಾರರಿಗೂ ಸರ್ವಿಸ್ ಸಿಗದೇ ಸಿಮ್ ಬಳಕೆದಾರರಿಗೂ ಬಿಸಿ ತಟ್ಟಿದೆ. ಟವರ್ ಬಂದ್ ಅಗಿವೆ, ನೆಟ್ವರ್ಕ್ ಸಮಸ್ಯೆ, ಸಾರ್ವಜನಿಕರ ದೂರಿಗೆ ಸ್ಪಂದಿಸುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.

ಬಿಎಸ್ಎನ್ಎಲ್ ಕಚೇರಿಯಲ್ಲಿ ಅರೆಕಾಲಿಕ ಸಿಬ್ಬಂದಿಯೇ ಆಧಾರವಾಗಿದ್ದ ಕಾರಣ ಈಗ ಅವರ ಅನುಪಸ್ಥಿತಿಯಲ್ಲಿ ಕಚೇರಿಯಿದ್ದರೂ ಕಾರ್ಯನಿರ್ವಹಣೆಯಿಲ್ಲದಂತಾಗಿದೆ.
ಪ್ರಸ್ತುತ ಅಂದಾಜು 30 ಸಿಬ್ಬಂದಿ ಮಾತ್ರ ಖಾಯಂ ನೌಕರರಿದ್ದು, ಕಚೇರಿಯಲ್ಲಿ ಕೆಲಸದ ಒತ್ತಡದ ಜೊತೆಗೆ ಸಾರ್ವಜನಿಕರ ಮೇಲೆ ತೀವ್ರ ಪರಿಣಾಮ ಬೀರಿದೆ.

Intro:ರಾಯಚೂರಿನ ಬಿಎಸ್ಎನ್ಎಲ್ ಕಚೇರಿಯಲ್ಲಿ ಕಳೆದ ಹಕವಾರು ವರ್ಷಗಳಿಂದ ಕಾಂಟ್ರ್ಯಾಕ್ಟ್ ಬೇಸ್ ಮೇಲೆ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಗಳಿಗೆ ಎರಡು ತಿಂಗಳಿನಿಂದ ತೆಗೆದು ಹಾಕಿದ್ದಲ್ಲದೇ 7 ತಿಂಗಳ ವೇತನವೂ ನೀಡದ ಕಾರಣ ತೀವ್ರವಸಂಕಷ್ಟಕ್ಕೆ ಸಿಲುಕಿದ್ದಾರೆ.



Body:ಟೆಂಡರ್ ಮುಗಿದ ಕಾರಣ ಕೆಲಸದಿಂದ ತೆಗೆದುಹಾಕಿದ್ದು ಕೊಪ್ಪಳ ಸೇರಿ ರಾಯಚೂರಿನ( 49) ಒಟ್ಟು 160 ಸಿಬ್ಬಂದಿಗಳು ಬೀದಿಗೆ ಬಂದಿದ್ದಾರೆ.
ಇತ್ತ ಕೆಲಸವೂ ಇಲ್ಲದೇ ಅತ್ತ 7 ತಿಂಗಳ ವೇತನವು ಇಲ್ಲದೇ ಸಿಬ್ಬಂದಿಗಳಿಗೆ ತೀರ ಸಂಕಷ್ಟ ಎದುರಾಗಿದ್ದು ಕುಟುಂಬ ನಿರ್ವಹಣೆ,ಮಕ್ಕಳ ಶಿಕ್ಷಣ ಹಾಗೂ ಇತರೆ ಖರ್ಚು ವೆಚ್ಚಕ್ಕೆ ಕೈಯಲ್ಲಿ ಕಾಸಿಲ್ಲದೇ ಸಂಕಷ್ಟ ಪರಿಸ್ಥಿತಿಯಲ್ಲಿದ್ದೇವೆ ಎಂದು ದೂರುತ್ತಾರೆ ಸಿಬ್ಬಂದಿಗಳು.
ಸಿಬ್ಬಂದಿಗಳ ಸ್ಥಿತಿ ಹೀಗಾದರೆ ಬಿಎಸ್ಎನ್ಎಲ್ ಬಳಕೆದಾರರಿಗೂ ಸರ್ವಿಸ್ ಸಿಗದೇ ಸಿಮ್ ಬಳಕೆದಾರರಿಗೂ ಬಿಸಿ ತಟ್ಟಿದೆ.ಟವರ್ ಬಂದ್ ಅಗಿವೆ,ನೆಟ್ವರ್ಕ್ ಸಮಸ್ಯೆ,ಸಾರ್ವಜನಿಕರ ದೂರಿಗೆ ಸ್ಪಂದಿಸುತ್ತಿಲ್ಲ.
ಬಿಎಸ್ಎನ್ಎಲ್ ಕಚೇರಿಯಲ್ಲಿ ಅರೆಕಾಲಿಕ ಸಿಬ್ಬಂದಿಗಳೇ ಆಧಾರವಾಗಿದ್ದ ಕಾರಣ ಈಗ ಅವರ ಅನುಪಸ್ಥಿತಿಯಲ್ಲಿ ಕಚೇರಿ ಯಿದ್ದರೂ ಕಾರ್ಯನಿರ್ವಹಣೆ ಯಿಲ್ಲದಂತಾಗಿದೆ.
ಪ್ರಸ್ತುತ ಅಂದಾಜು 30 ಸಿಬ್ಬಂದಿಗಳು ಮಾತ್ರ ಪರ್ಮನೆಂಟ್ ಇದ್ದು ಕಚೇರಿಯಲ್ಲಿ ಕೆಲಸದ ಒತ್ತಡದ ಜೊತೆಗೆ ಸಾರ್ವಜನಿಕರ ಮೇಲೆ ತೀವ್ರ ಪರಿಣಾಮ ಬೀರಿದೆ.




Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.