ETV Bharat / state

ವಕೀಲರ ಮೇಲೆ ದೌರ್ಜನ್ಯ ಪ್ರಕರಣ,ಪಿಎಸ್​ಐ ಸಸ್ಪೆಂಡ್‌!

author img

By

Published : Apr 26, 2019, 9:05 PM IST

ರಾಯಚೂರಿನಲ್ಲಿ ವಕೀಲ ವೀರಯ್ಯ ಮೇಲೆ ಹಲ್ಲೆ ನಡೆಸಿ, ಕೈಗೆ ಕೋಳ ಹಾಕಿದ ಪಿಎಸ್​ಐ ನಾಗರಾಜ ಮೇಕಾ ಎಂಬುವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ಪಿಎಸ್​ಐ ಅಮಾನತು

ರಾಯಚೂರು: ವಕೀಲರೊಬ್ಬರ ಜತೆ ಅನುಚಿತ ವರ್ತನೆ ತೋರಿದ್ದಲ್ಲದೆ, ಅವರ ಕೈಗೆ ಕೋಳ ತೊಡಿಸಿದ ಪಿಎಸ್‌ಐ ಅಮಾನತುಗೊಂಡಿದ್ದಾರೆ.

ನಗರದ ಪಶ್ಚಿಮ ಠಾಣೆಯ ಪಿಎಸ್​ಐ ನಾಗರಾಜ ಮೇಕಾ ಅಮಾನತುಗೊಂಡ ಪೊಲೀಸ್ ಅಧಿಕಾರಿ.

ಪ್ರಕರಣದ ಹಿನ್ನೆಲೆ:

ಕಳೆದ ಏಪ್ರಿಲ್​ 22ರಂದು ರಾತ್ರಿ ನಗರದ ಸ್ಟೇಷನ್ ವೃತ್ತದಲ್ಲಿ ವಕೀಲ ವೀರಯ್ಯ ಮೇಲೆ ಹಲ್ಲೆ ನಡೆಸಿದ ಪಿಎಸ್​ಐ ನಾಗರಾಜ ಮೇಕಾ, ಠಾಣೆಗೆ ಕರೆದೊಯ್ದು ಕೈಗೆ ಕೋಳ ಹಾಕಿದ್ದರು. ಈ ಫೋಟೋ ಸಾಕಷ್ಟು ವೈರಲ್ ಆಗಿತ್ತು. ಪಿಎಸ್​ಐ ಕೃತ್ಯವನ್ನು ವಕೀಲರ ಸಂಘಟನೆ ತೀವ್ರವಾಗಿ ಖಂಡಿಸಿ, ಪ್ರತಿಭಟನೆ ನಡೆಸಿತ್ತು. ಪ್ರಕರಣದ ತನಿಖೆ ನಡೆಸಲಾಗಿದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಕಿಶೋರ್ ಬಾಬು, ಪಿಎಸ್‌ಐ ನಾಗರಾಜ ಮೇಕಾರನ್ನು ಅಮಾನತು ಮಾಡಿ ಆದೇಶಿಸಿದ್ದಾರೆ.

ರಾಯಚೂರು: ವಕೀಲರೊಬ್ಬರ ಜತೆ ಅನುಚಿತ ವರ್ತನೆ ತೋರಿದ್ದಲ್ಲದೆ, ಅವರ ಕೈಗೆ ಕೋಳ ತೊಡಿಸಿದ ಪಿಎಸ್‌ಐ ಅಮಾನತುಗೊಂಡಿದ್ದಾರೆ.

ನಗರದ ಪಶ್ಚಿಮ ಠಾಣೆಯ ಪಿಎಸ್​ಐ ನಾಗರಾಜ ಮೇಕಾ ಅಮಾನತುಗೊಂಡ ಪೊಲೀಸ್ ಅಧಿಕಾರಿ.

ಪ್ರಕರಣದ ಹಿನ್ನೆಲೆ:

ಕಳೆದ ಏಪ್ರಿಲ್​ 22ರಂದು ರಾತ್ರಿ ನಗರದ ಸ್ಟೇಷನ್ ವೃತ್ತದಲ್ಲಿ ವಕೀಲ ವೀರಯ್ಯ ಮೇಲೆ ಹಲ್ಲೆ ನಡೆಸಿದ ಪಿಎಸ್​ಐ ನಾಗರಾಜ ಮೇಕಾ, ಠಾಣೆಗೆ ಕರೆದೊಯ್ದು ಕೈಗೆ ಕೋಳ ಹಾಕಿದ್ದರು. ಈ ಫೋಟೋ ಸಾಕಷ್ಟು ವೈರಲ್ ಆಗಿತ್ತು. ಪಿಎಸ್​ಐ ಕೃತ್ಯವನ್ನು ವಕೀಲರ ಸಂಘಟನೆ ತೀವ್ರವಾಗಿ ಖಂಡಿಸಿ, ಪ್ರತಿಭಟನೆ ನಡೆಸಿತ್ತು. ಪ್ರಕರಣದ ತನಿಖೆ ನಡೆಸಲಾಗಿದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಕಿಶೋರ್ ಬಾಬು, ಪಿಎಸ್‌ಐ ನಾಗರಾಜ ಮೇಕಾರನ್ನು ಅಮಾನತು ಮಾಡಿ ಆದೇಶಿಸಿದ್ದಾರೆ.

Intro:ನ್ಯಾಯವಾದಿಯೊಂದಿಗೆ ಅನುಚಿತ ವರ್ತನೆ ಮತ್ತು ಕೈಗೆ ಕೋಳ ತೊಡಿಸಿದ ಪ್ರಕರಣದ ಹಿನ್ನಲೆಯಲ್ಲಿ ಪಿಎಸ್‌ಐ ಅಮಾನತುಗೊಳಿಸಲಾಗಿದೆ.Body:ನಗರದ ಪಶ್ಚಿಮ ಠಾಣೆ ನಾಗರಾಜ ಮೇಕಾ ಅಮಾನತುಗೊಂಡ ಪಿಎಸ್‌ಐ ಆಗಿದ್ದಾರೆ. ಕಳೆದ ಏ.೨೨ ರ ರಾತ್ರಿ ನಗರದ ಸ್ಟೇಷನ್ ವೃತ್ತದಲ್ಲಿ ವಕೀಲ ವೀರಯ್ಯ ಅವರ ಮೇಲೆ ಹಲ್ಲೆ ಮತ್ತು ನಂತರ ಠಾಣೆಗೆ ಕರೆದೊಯ್ದು ಕೈಗೆ ಕೋಳ ಹಾಕಿದ ಫೋಟೋ ವೈರಲ್ ಆಗಿ, ನ್ಯಾಯವಾದಿಗಳು ಈ ಘಟನೆ ತೀವ್ರವಾಗಿ ಖಂಡಿಸಿ, ಪ್ರತಿಭಟನೆ, ಅಮಾನತುಗೊಳಿಸುವಂತೆ ಒತ್ತಾಯಿಸಿದ್ರು.Conclusion:ಹೀಗಾಗಿ ಎಸ್ಪಿ ಡಿ.ಕಿಶೋರ್ ಬಾಬು ಪಿಎಸ್‌ಐ ಅಮಾನತುಗೊಳಿಸಿ ಆದೇಶ ಮಾಡಿದ್ದಾರೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.