ETV Bharat / state

ನೇರ ಫೋನ್​​ ಇನ್​​ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಸಮಸ್ಯೆ ಆಲಿಸಿದ ರಾಯಚೂರು ಎಸ್ಪಿ

author img

By

Published : Jul 1, 2019, 4:26 PM IST

ನಗರದ ಎಸ್​​ಪಿ ಕಚೇರಿಯಲ್ಲಿ ಇಂದು ಹಮ್ಮಿಕೊಂಡ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ವೇದಮೂರ್ತಿ ಅವರಿಗೆ ದೂರವಾಣಿ ಮೂಲಕ ಅಹವಾಲು ಸಲ್ಲಿಸಿದರು. ಸಾರ್ವಜನಿಕರ ದೂರುಗಳಿಗೆ ಸ್ಪಂದಿಸಿದ ಎಸ್​ಪಿ, ಸೂಕ್ತ ರೀತಿಯಲ್ಲಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಸಮಸ್ಯೆ: ಸಿ.ಬಿ.ವೇದ ಮೂರ್ತಿ

ರಾಯಚೂರು: ದೇವದುರ್ಗದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ನಗರದ ಎಸ್​ಪಿ ಕಚೇರಿಯಲ್ಲಿ ಇಂದು ಹಮ್ಮಿಕೊಂಡ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ವೇದ ಮೂರ್ತಿ ಅವರಿಗೆ ದೂರವಾಣಿ ಮೂಲಕ ಅಹವಾಲು ಸಲ್ಲಿಸಿದರು.

ರಾಯಚೂರಿನ ಶಿವಮೂರ್ತಿ ಎಂಬುವರು ಕರೆ ಮಾಡಿ ರಾಯಚೂರಿನ ಉಸ್ಮಾನಿಯಾ ತರಕಾರಿ ಮಾರುಕಟ್ಟೆ ವ್ಯಾಪ್ತಿಯಲ್ಲಿ ಟ್ರಾಫಿಕ್ ಜಾಮ್ ಹೆಚ್ಚಾಗಿ ಸಾರ್ವಜನಿಕರಿಗೆ ನಿತ್ಯ ಕಿರಿಕಿರಿಯಾಗುತ್ತಿದೆ ಎಂದರು. ಇದಕ್ಕೆ ಎಸ್​ಪಿ ಸ್ಪಂದಿಸಿ, ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದು ಈ ಕುರಿತು ಸಂಚಾರಿ ಪೊಲೀಸರಿಗೆ ತಿಳಿಸಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದರು.

ಎಸ್ಪಿಯಿಂದ ನೇರ ಫೋನ್​​ ಇನ್​​ ಕಾರ್ಯಕ್ರಮ

ಇನ್ನು ಕವಿತಾಳ ಪಟ್ಟಣದಲ್ಲಿ ರಸ್ತೆ ಅಗಲೀಕರಣ ನಡೆದಿದ್ದು, ಡೆಮಾಲಿಶ್​ನಿಂದ ತೀವ್ರ ಸಮಸ್ಯೆಯಾಗಿದೆ. ಈ ಬಗ್ಗೆ ಸ್ಥಳೀಯ ಅಧಿಕಾರಿಗಳಿಗೆ ತಿಳಿಸದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಮತ್ತೊಬ್ಬರು ಕರೆ ಮಾಡಿ ಸಮಸ್ಯೆ ಹೇಳಿಕೊಂಡರು. ಇನ್ನು ತಾಯಿ-ಮಗಳು, ನಾವು ಹೊಸ ಮನೆ ನಿರ್ಮಾಣ ಮಾಡುತ್ತೇವೆ. ಆದ್ರೆ ನಮ್ಮ ಅತ್ತಿಗೆ ನಮ್ಮ ಮೇಲೆ ದೌರ್ಜನ್ಯ ನಡೆಸುತಿದ್ದಾರೆ ಎಂದು ದೂರಿದರು. ಜೊತೆಗೆ ನೀರಿನ ಸಮಸ್ಯೆ, ಚರಂಡಿ, ಸ್ವಚ್ಛತೆ ಹಾಗೂ ಇತರೆ ಅಭಿವೃದ್ಧಿ ಕಾರ್ಯವಾಗುತ್ತಿಲ್ಲ ಎಂಬ ದೂರುಗಳು ಬಂದವು.

ಈ ಎಲ್ಲಾ ಸಮಸ್ಯೆಗಳನ್ನು ಕೇಳಿ ದಂಗಾದ ಎಸ್​​​ಪಿ, ಫೋನ್ ಕಟ್ ಮಾಡದೇ ಸೂಕ್ಷ್ಮವಾಗಿ ಆಲಿಸಿ ನಿಮ್ಮ ವ್ಯಾಪ್ತಿಯ ಪಿಡಿಒಗಳ ಜೊತೆ ಮಾತನಾಡಿ ಸಮಸ್ಯೆ ತಿಳಿಸುತ್ತೇನೆ ಎಂದು ಸಾರ್ವಜನಿಕರಿಗೆ ಭರವಸೆ ನೀಡಿದರು.

ರಾಯಚೂರು: ದೇವದುರ್ಗದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ನಗರದ ಎಸ್​ಪಿ ಕಚೇರಿಯಲ್ಲಿ ಇಂದು ಹಮ್ಮಿಕೊಂಡ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ವೇದ ಮೂರ್ತಿ ಅವರಿಗೆ ದೂರವಾಣಿ ಮೂಲಕ ಅಹವಾಲು ಸಲ್ಲಿಸಿದರು.

ರಾಯಚೂರಿನ ಶಿವಮೂರ್ತಿ ಎಂಬುವರು ಕರೆ ಮಾಡಿ ರಾಯಚೂರಿನ ಉಸ್ಮಾನಿಯಾ ತರಕಾರಿ ಮಾರುಕಟ್ಟೆ ವ್ಯಾಪ್ತಿಯಲ್ಲಿ ಟ್ರಾಫಿಕ್ ಜಾಮ್ ಹೆಚ್ಚಾಗಿ ಸಾರ್ವಜನಿಕರಿಗೆ ನಿತ್ಯ ಕಿರಿಕಿರಿಯಾಗುತ್ತಿದೆ ಎಂದರು. ಇದಕ್ಕೆ ಎಸ್​ಪಿ ಸ್ಪಂದಿಸಿ, ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದು ಈ ಕುರಿತು ಸಂಚಾರಿ ಪೊಲೀಸರಿಗೆ ತಿಳಿಸಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದರು.

ಎಸ್ಪಿಯಿಂದ ನೇರ ಫೋನ್​​ ಇನ್​​ ಕಾರ್ಯಕ್ರಮ

ಇನ್ನು ಕವಿತಾಳ ಪಟ್ಟಣದಲ್ಲಿ ರಸ್ತೆ ಅಗಲೀಕರಣ ನಡೆದಿದ್ದು, ಡೆಮಾಲಿಶ್​ನಿಂದ ತೀವ್ರ ಸಮಸ್ಯೆಯಾಗಿದೆ. ಈ ಬಗ್ಗೆ ಸ್ಥಳೀಯ ಅಧಿಕಾರಿಗಳಿಗೆ ತಿಳಿಸದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಮತ್ತೊಬ್ಬರು ಕರೆ ಮಾಡಿ ಸಮಸ್ಯೆ ಹೇಳಿಕೊಂಡರು. ಇನ್ನು ತಾಯಿ-ಮಗಳು, ನಾವು ಹೊಸ ಮನೆ ನಿರ್ಮಾಣ ಮಾಡುತ್ತೇವೆ. ಆದ್ರೆ ನಮ್ಮ ಅತ್ತಿಗೆ ನಮ್ಮ ಮೇಲೆ ದೌರ್ಜನ್ಯ ನಡೆಸುತಿದ್ದಾರೆ ಎಂದು ದೂರಿದರು. ಜೊತೆಗೆ ನೀರಿನ ಸಮಸ್ಯೆ, ಚರಂಡಿ, ಸ್ವಚ್ಛತೆ ಹಾಗೂ ಇತರೆ ಅಭಿವೃದ್ಧಿ ಕಾರ್ಯವಾಗುತ್ತಿಲ್ಲ ಎಂಬ ದೂರುಗಳು ಬಂದವು.

ಈ ಎಲ್ಲಾ ಸಮಸ್ಯೆಗಳನ್ನು ಕೇಳಿ ದಂಗಾದ ಎಸ್​​​ಪಿ, ಫೋನ್ ಕಟ್ ಮಾಡದೇ ಸೂಕ್ಷ್ಮವಾಗಿ ಆಲಿಸಿ ನಿಮ್ಮ ವ್ಯಾಪ್ತಿಯ ಪಿಡಿಒಗಳ ಜೊತೆ ಮಾತನಾಡಿ ಸಮಸ್ಯೆ ತಿಳಿಸುತ್ತೇನೆ ಎಂದು ಸಾರ್ವಜನಿಕರಿಗೆ ಭರವಸೆ ನೀಡಿದರು.

Intro:ದೇವದುರ್ಗದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದೆ, ಅಮಾಯಕರಿಂದ ಪೋಲೀಸರು ಹಣ ವಸೂಲಿ ನಡೆಯುತ್ತಿದೆ ತಡೆಯಬೇಕು ಮಾನ್ವಿ ತಾಲೂಕಿನ ಸಾದಾಪುರದಲ್ಲಿ ಕಿರಾಣಿ ಅಂಗಡಿಗಳಲ್ಲಿ ಮದ್ಯ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದೆ ಅದ್ರೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಸಾರ್ವಜನಿಕರು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಸಿ.ಬಿ.ವೇದ ಮೂರ್ತಿ ಅವರಿಗೆ ದೂರವಾಣಿ ಮೂಲಕ ಅಹವಾಲು ಸಲ್ಲಿಸಿದರು.


Body:ನಗರದ ಎಸ್.ಪಿ.ಕಚೇರಿಯಲ್ಲಿ ಇಂದುವ ಹಮ್ಮಿಕೊಂಡ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರ ದೂರುಗಳಿಗೆ ಸ್ಪಂದಿಸಿದ ಎಸ್.ಪಿ.ವೇದಮೂರ್ತಿ ಅವರು ಸೂಕ್ತ ರೀತಿಯಲ್ಲಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಫೋನ್ ಇನ್ ಕಾರ್ಯಕ್ರಮದಲ್ಲಿ ರಾಯಚೂರಿನ ಶಿವಮೂರ್ತಿ ಅವರು ಕರೆ ಮಾಡಿ ರಾಯಚೂರಿನ ಉಸ್ಮಾನಿಯಾ ತರಕಾರಿ ಮಾರುಕಟ್ಟೆ ವ್ಯಾಪ್ತಿಯಲ್ಲಿ ಟ್ರಾಫಿಕ್ ಜಾಮ್ ಹೆಚ್ಷಾಗಿ ಸಾರ್ವಜನಿಕರಿಗೆ ನಿತ್ಯ ಕಿರಿಕಿರಿಯಾಗುತ್ತಿದೆ ಎಂದರು.
ಇದಕ್ಕೆ ಎಸ್.ಪಿ ಅವರು ಸ್ಪಂದಿಸಿ ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದು ಈ ಕುರಿತು ಸಂಚಾರಿ ಪೊಲೀಸರಿಗೆ ತಿಳಿಸಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದರು.
ಕವಿತಾಳ ಪಟ್ಟಣದಲ್ಲಿ ರಸ್ತೆ ಅಗಲೀಕರಣ ನಡೆದಿದ್ದು ಡೆಮಾಲಿಶ್ನಿಂದ ತೀವ್ರ ಸಮಸ್ಯೆಯಾಗಿದೆ ಈಬಗ್ಗೆ ಸ್ಥಳೀಯ ಅಧಿಕಾರಿಗಳಿಗೆ ತಿಳಿಸದರೂ ಕ್ರಮ ಕೈಗೊಳ್ಳುತ್ತಿಲ್ಲ, ಮತ್ತೊಬ್ಬರು ಕರೆ ಮಾಡಿ ತಾಯಿ ಮಗಳು ಸೇರಿ ನಾವು ಹೊಸ ಮನೆ ನಿರ್ಮಾಣ ಮಾಡುತ್ತೇವೆ ಆದ್ರೆ ನಮ್ಮ ಅತ್ತಿಗೆ ನಮ್ಮ ಮೇಲೆ ದೌರ್ಜನ್ಯ ನಡೆಸುತಿದ್ದಾರೆ ಸೇರಿದಂತೆ ಹಲವು ದೂರುಗಳು ಬಂದವು ಇದರ ಜೊತೆಗೆ ನೀರಿನ ಸಮಸ್ಯೆ, ಚರಂಡಿ,ಸ್ವಚ್ಛತೆ ಹಾಗೂ ಇತರೆ ಅಭಿವೃದ್ಧಿ ಕಾರ್ಯವಾಗುತ್ತಿಲ್ಲ ರಾಮಬ ದೂರುಗಳು ಬಂದವು ಇದಕ್ಕೆ ದಂಗಾದ ಎಸ್.ಪಿ ಫೋನ್ ಕಟ್ ಮಾಡದೇ ಸೂಕ್ಷ್ಮವಾಗಿ ಆಲಿಸಿದ ಎಸ್ಪಿ ಅವರು ನಿಮ್ಮ ವ್ಯಾಪ್ತಿಯ ಪಿಡಿಓ ಗಳಿಗೆ ಮಾತನಾಡಿ ಸಮಸ್ಯೆ ತಿಳಿಸುತ್ತೇನೆ ಎಂದು ಎಸ್.ಪಿ ವೇದಮೂರ್ತಿ ಭರವಸೆ ನೀಡಿದರು.
ನಂತರ ಅವರು ಎಲ್.ಬಿ.ಎಸ್ ನಗರದಲ್ಲಿ ಇತ್ತೀಚಿಗೆ ಕ್ಷುಲ್ಲಕ ಕಾರಣಕ್ಕೆ ನಡೆದ ಚೂರಿ ಇರಿತ ಪ್ರಕರಣಗಳ ಬಗ್ಗೆ ಮಾಹಿತಿ ಪಡೆದು ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳ ಮೇಲೆ ಕಡಿವಾಣ ಹಾಕಿ ಸೂಕ್ತ ವ್ಯವಸ್ಥೆ ಮಾಡಲಾಗುವುದು ಯಾವುದೇ ಸಮಯದಲ್ಲಿ ಏನಾದರೂ ನಡೆದರೂ ನನ್ನ ಹಾಗೂ 100 ಸಂಖ್ಯೆಗೆ ನಾಗರಿಕರು ಕರೆಮಾಡಿ ದೂರು ನೀಡಬಹುದು ರಂದು ತಿಳಿಸಿದರು.


Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.