ಲಿಂಗಸುಗೂರು : ಲಿಂಗಸುಗೂರು ಕ್ಷೇತ್ರದ ಏತ ನೀರಾವರಿ ಯೋಜನೆಗಳ ಸಮರ್ಪಕ ಮಾಹಿತಿ ನನ್ನ ಬಳಿ ಇಲ್ಲ ಎಂದು ಜೆ.ಸಿ ಮಾಧುಸ್ವಾಮಿ ಕ್ಷಮೆಯಾಚಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಗುಂತಗೋಳ, ಕಡದರಗಡ್ಡಿ, ಅಂಕನಾಳ - ಉಪನಾಳ, ವ್ಯಾಕರನಾಳ, ಜಲದುರ್ಗ ಸೇರಿದಂತೆ ಯಾವ ಯೋಜನೆಗಳ ಮಾಹಿತಿ ಗಮನಕ್ಕೆ ಬಂದಿಲ್ಲ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಕೆರೆಗಳ ಒತ್ತುವರಿ, ಯೋಜನೆಗಳ ವಾಸ್ತವ ಸ್ಥಿತಿಗತಿ ಕುರಿತಂತೆ ಖುದ್ದು ಭೇಟಿ ನೀಡಿ ವರದಿ ಸಲ್ಲಿಸಲು ಸೂಚಿಸುವೆ. ಯೋಜನೆಗಳ ಪುನಶ್ಚೇತನಕ್ಕೆ ಹೆಚ್ಚುವರಿ ಅನುದಾನ ನೀಡಲು ಸಿದ್ಧನಿರುವೆ. ಕೆರೆಗಳ ಭರ್ತಿಗೆ ಈಗಾಗಲೆ ಕೋಟ್ಯಂತರ ಅನುದಾನ ನೀಡಿರುವೆ ಎಂದು ತಿಳಿಸಿದ್ರು.