ETV Bharat / state

ನೆರೆ ಪರಿಹಾರ ಚರ್ಚೆ... ಒಬ್ಬೊಬ್ಬರಾಗಿ ಕೇಂದ್ರದ ವಿರುದ್ಧ ತಿರುಗಿ ಬೀಳ್ತಿದ್ದಾರೆ ಬಿಜೆಪಿ ಸಂಸದರು - Flood relief fund

ಕೇಂದ್ರ ಸರ್ಕಾರದಿಂದ ನೆರೆ ಪರಿಹಾರಕ್ಕೆಂದು ಇದೂವರೆಗೂ ಬಿಡಿಗಾಸು ದೊರೆಯದ ಹಿನ್ನೆಲೆ ಒಬ್ಬಬ್ಬರಾಗಿ ಅಸಮಧಾನ ಹೊರಹಾಕುತ್ತಿದ್ದು, ಈಗ ಬಿಜೆಪಿ ಸಂಸದ ರಾಜಾ ಅಮರೇಶ್ವರ ನಾಯಕ ಸಹ ಕೇಂದ್ರ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

ರಾಜಾ ಅಮರೇಶ್ವರ ನಾಯಕ
author img

By

Published : Oct 4, 2019, 5:04 PM IST

ರಾಯಚೂರು: ಕೇಂದ್ರ ಸರಕಾರ ನೆರೆ ಪರಿಹಾರ ಬಿಡುಗಡೆ ಮಾಡುವುದಕ್ಕೆ ವಿಳಂಬ ಮಾಡುತ್ತಿರುವುದಕ್ಕೆ ಅಸಮಾಧಾನವಿದೆ ಎಂದು ರಾಯಚೂರು ಬಿಜೆಪಿ ಸಂಸದ ರಾಜಾ ಅಮರೇಶ್ವರ ನಾಯಕ ಸ್ವ ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆರೆ ಪರಿಹಾರ ನೀಡುವ ವಿಚಾರದಲ್ಲಿ ಯಾವುದೇ ಸರಕಾರವಿರಲಿ ಪರಿಹಾರವನ್ನ ತುರ್ತು ವಿತರಣೆ ಮಾಡಬೇಕು ಹೊರತು ವಿಳಂಬ ಮಾಡುವುದು ಸರಿಯಲ್ಲ. ಕೇಂದ್ರ ಸರ್ಕಾರ ನೆರೆ ಪರಿಹಾರ ವಿಳಂಬ ಮಾಡುತ್ತಿರುವುದಕ್ಕೆ ನನಗೆ ಬೇಸರವಿದೆ ಎಂದು ತಮ್ಮದೆ ಸರಕಾರ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು.

ರಾಜಾ ಅಮರೇಶ್ವರ ನಾಯಕ

ಪರಿಹಾರ ಪ್ರಸ್ತಾವನೆ ಸಲ್ಲಿಸುವ ವೇಳೆ ಅಧಿಕಾರಿಗಳು ಸಮರ್ಪಕವಾದ ಪ್ರಸ್ತಾವನೆ ಸಲ್ಲಿಸಬೇಕು. ಇಲ್ಲದಿದ್ದರೆ ಅಧಿಕಾರಿಗಳ ತಪ್ಪಿನಿಂದ ಅನುದಾನ ಬರುವುದಕ್ಕೆ ವಿಳಂಬವಾಗುತ್ತದೆ ಹಾಗೂ ಎರಡು ಸರ್ಕಾರದ ನಡುವೆ ವೈಮನಸ್ಸು ಉಂಟಾಗುತ್ತದೆ ಎಂದರು. ನೆರೆಯ ವಿಚಾರಕ್ಕೆ ಯಾವುದಾದರೂ ಅನುದಾನವನ್ನು ಕಡಿತ ಮಾಡಿ ಮೊದಲು ನೆರೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.‌.

ರಾಯಚೂರು: ಕೇಂದ್ರ ಸರಕಾರ ನೆರೆ ಪರಿಹಾರ ಬಿಡುಗಡೆ ಮಾಡುವುದಕ್ಕೆ ವಿಳಂಬ ಮಾಡುತ್ತಿರುವುದಕ್ಕೆ ಅಸಮಾಧಾನವಿದೆ ಎಂದು ರಾಯಚೂರು ಬಿಜೆಪಿ ಸಂಸದ ರಾಜಾ ಅಮರೇಶ್ವರ ನಾಯಕ ಸ್ವ ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆರೆ ಪರಿಹಾರ ನೀಡುವ ವಿಚಾರದಲ್ಲಿ ಯಾವುದೇ ಸರಕಾರವಿರಲಿ ಪರಿಹಾರವನ್ನ ತುರ್ತು ವಿತರಣೆ ಮಾಡಬೇಕು ಹೊರತು ವಿಳಂಬ ಮಾಡುವುದು ಸರಿಯಲ್ಲ. ಕೇಂದ್ರ ಸರ್ಕಾರ ನೆರೆ ಪರಿಹಾರ ವಿಳಂಬ ಮಾಡುತ್ತಿರುವುದಕ್ಕೆ ನನಗೆ ಬೇಸರವಿದೆ ಎಂದು ತಮ್ಮದೆ ಸರಕಾರ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು.

ರಾಜಾ ಅಮರೇಶ್ವರ ನಾಯಕ

ಪರಿಹಾರ ಪ್ರಸ್ತಾವನೆ ಸಲ್ಲಿಸುವ ವೇಳೆ ಅಧಿಕಾರಿಗಳು ಸಮರ್ಪಕವಾದ ಪ್ರಸ್ತಾವನೆ ಸಲ್ಲಿಸಬೇಕು. ಇಲ್ಲದಿದ್ದರೆ ಅಧಿಕಾರಿಗಳ ತಪ್ಪಿನಿಂದ ಅನುದಾನ ಬರುವುದಕ್ಕೆ ವಿಳಂಬವಾಗುತ್ತದೆ ಹಾಗೂ ಎರಡು ಸರ್ಕಾರದ ನಡುವೆ ವೈಮನಸ್ಸು ಉಂಟಾಗುತ್ತದೆ ಎಂದರು. ನೆರೆಯ ವಿಚಾರಕ್ಕೆ ಯಾವುದಾದರೂ ಅನುದಾನವನ್ನು ಕಡಿತ ಮಾಡಿ ಮೊದಲು ನೆರೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.‌.

Intro:ಸ್ಲಗ್: ರಾಯಚೂರು ಸಂಸದ ಹೇಳಿಕೆ
ಫಾರ್ಮೇಟ್: ಎವಿಬಿ
ರಿಪೋರ್ಟರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: ೦೪-೧೦-೨೦೧೯
ಸ್ಥಳ: ರಾಯಚೂರು

ಆಂಕರ್: ಕೇಂದ್ರ ಸರಕಾರ ನೆರೆ ಪರಿಹಾರ ಬಿಡುಗಡೆ ಮಾಡುವುದಕ್ಕೆ ವಿಳಂಬ ಮಾಡುತ್ತಿರುವುದಕ್ಕೆ ಅಸಮಾಧಾನವಿದೆ ಎಂದು ರಾಯಚೂರು ಬಿಜೆಪಿ ಸಂಸದ ರಾಜಾ ಅಮರೇಶ್ವರ ನಾಯಕ ಸ್ವ ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. Body:ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ರು. ನೆರೆ ಪರಿಹಾರ ನೀಡುವ ವೇಳೆ ವಿಚಾರದಲ್ಲಿ ಯಾವುದೇ ಸರಕಾರವಿರಲಿ ಪರಿಹಾರವನ್ನ ತುರ್ತು ವಿತರಣೆ ಮಾಡಬೇಕು ಹೊರತು ವಿಳಂಬ ಮಾಡುವುದು ಸರಿಯಿಲ್ಲ. ಕೇಂದ್ರ ಈಗ ನೆರೆ ಪರಿಹಾರ ವಿಳಂಬ ಮಾಡುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿ, ತಮ್ಮ ದೆ ಸರಕಾರ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು. ಪರಿಹಾರ ಪ್ರಸ್ತಾವನೆ ಸಲ್ಲಿಸುವಾಗ ಅಧಿಕಾರಿಗಳು ಸಮರ್ಪಕದ ಪ್ರಸ್ತಾವನೆ ಸಲ್ಲಿಸಬೇಕು. ಇಲ್ಲದಿದ್ದಾರೆ ಅಧಿಕಾರಿಗಳ ತಪ್ಪಿನಿಂದ ಅನುದಾನ ಬರುವುದಕ್ಕೆ ವಿಳಂಬ ವಾಗುತ್ತದೆ ಎಂದರು. ಅಲ್ಲದೇ ನೆರೆಯ ವಿಚಾರಕ್ಕೆ ಯಾವುದಾದರೂ ಅನುದಾನ ಕಡಿತ ಮಾಡಿ ಮೊದಲು ನೆರೆ ಪರಿಹಾರ ನೀಡಬೇಕು ಒತ್ತಾಯಿಸಿದ್ರು‌.
Conclusion:ಬೈಟ್.೧: ರಾಜಾ ಅಮರೇಶ್ವರ ನಾಯಕ, ಬಿಜೆಪಿ ಸಂಸದ, ರಾಯಚೂರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.