ETV Bharat / state

ಕೈ ನಾಯಕರು ಅಧಿಕಾರ ಕಳೆದುಕೊಂಡ ಮೇಲೆ ನಿರುದ್ಯೋಗಿಗಳಾಗಿದ್ದಾರೆ: ಸಚಿವ

ಬಿಜೆಪಿಗೆ 104 ಸ್ಥಾನ ದಕ್ಕಿದ್ದರೂ ಅಧಿಕಾರ ಕೈತಪ್ಪಿ ಹೋಗಿತ್ತು. ಆದರೆ, ಈಗ ಮತ್ತೆ ಕೈ ಸೇರಿದೆ. ಇನ್ನೂ ಮೈತ್ರಿ ಸರ್ಕಾರದವರೂ ತಮ್ಮ ಕೈಯಿಂದಲೇ ತಮ್ಮ ಅಧಿಕಾರವನ್ನ ಪತನ ಮಾಡಿಕೊಂಡಿದ್ದಾರೆ. ಕೈ ನಾಯಕರು ಅಧಿಕಾರ ಕಳೆದುಕೊಂಡ ಮೇಲೆ ನಿರುದ್ಯೋಗಿಗಳಾಗಿದ್ದು, ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಸಚಿವ ಬಿ.ಶ್ರೀರಾಮುಲು ವ್ಯಂಗ್ಯವಾಡಿದ್ದಾರೆ.

author img

By

Published : Oct 15, 2019, 5:01 AM IST

ಕೈ ನಾಯಕರು ಅಧಿಕಾರ ಕಳೆದುಕೊಂಡ ಮೇಲೆ ನಿರುದ್ಯೋಗಿಗಳಾಗಿದ್ದಾರೆ:ಸಚಿವ ಬಿ.ಶ್ರೀರಾಮುಲು ವ್ಯಂಗ್ಯ

ರಾಯಚೂರು: ಕೈ ನಾಯಕರು ಅಧಿಕಾರ ಕಳೆದುಕೊಂಡ ಮೇಲೆ ನಿರುದ್ಯೋಗಿಗಳಾಗಿದ್ದು, ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಸಚಿವ ಬಿ.ಶ್ರೀರಾಮುಲು ವ್ಯಂಗ್ಯವಾಡಿದ್ದಾರೆ.

ಕೈ ನಾಯಕರು ಅಧಿಕಾರ ಕಳೆದುಕೊಂಡ ಮೇಲೆ ನಿರುದ್ಯೋಗಿಗಳಾಗಿದ್ದಾರೆ:ಸಚಿವ ಬಿ.ಶ್ರೀರಾಮುಲು ವ್ಯಂಗ್ಯ

ರಾಯಚೂರಿನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಗೆ 104 ಸ್ಥಾನ ದಕ್ಕಿದ್ದರೂ ಅಧಿಕಾರ ಕೈತಪ್ಪಿ ಹೋಗಿತ್ತು. ಆದರೆ, ಈಗ ಮತ್ತೆ ಕೈ ಸೇರಿದೆ. ಇನ್ನೂ ಮೈತ್ರಿ ಸರ್ಕಾರದವರೂ ತಮ್ಮ ಕೈಯಿಂದಲೇ ತಮ್ಮ ಅಧಿಕಾರವನ್ನ ಪತನ ಮಾಡಿಕೊಂಡಿದ್ದಾರೆ ಅಷ್ಟೇ ಎಂದರು.

ಇನ್ನೂ, ಉಪಮುಖ್ಯಮಂತ್ರಿ ಸ್ಥಾನದ ಕುರಿತು ನಾನೇನು ಹೇಳಲಾರೆ. ಪಕ್ಷದ ನಿರ್ಧಾರಕ್ಕೆ ನಾನು ಬದ್ಧ. ಪಕ್ಷ ನೀಡಿದ ಕೆಲಸವನ್ನ ನಾನು ಮಾಡುತ್ತೀನಿ ಅಷ್ಟೇ ಎಂದರು.

ಇನ್ನೂ ವಿಜಯನಗರ ಜಿಲ್ಲೆ ಸ್ಥಾಪನೆ ವಿಚಾರವನ್ನು ಸದ್ಯಕ್ಕೆ ಕೈ ಬಿಟ್ಟಿದ್ದು, ಉಪ ಚುನಾವಣೆ ಮುಗಿಯುವವರೆಗೂ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ. ಚುನಾವಣೆ ನಂತರ ಶೀಘ್ರವೇ ಈ ವಿಚಾರವಾಗಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುತ್ತೇನೆ ಎಂದು ಭರವಸೆ ನೀಡಿದರು.

ಇನ್ನೂ ಇದೇ ವೇಳೆ ಆರೋಗ್ಯ, ಆಸ್ಪತ್ರೆಗಳ ಕುರಿತು ಮಾತನಾಡಿದ ಅವರು, ರಾಜ್ಯದ ಸರಕಾರಿ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಸಂಸ್ಥೆಗಳ ಏಕಸ್ವಾಮ್ಯತೆ ಹೆಚ್ಚಿರುವುದು ಗಮನಕ್ಕೆ ಬಂದಿದೆ. ಖಾಸಗಿ ಆಸ್ಪತ್ರೆಗಳಿಗೆ ಅನಗತ್ಯವಾಗಿ ರೋಗಿಗಳನ್ನು ತೆರಳುವಂತೆ ಶಿಫಾರಸು ಮಾಡುವುದು. ಔಷಧಕ್ಕೆ ಚೀಟಿ ಬರೆದು ಹೊರಗಿನಿಂದ ತರುವಂತೆ ಸೂಚಿಸುವುದನ್ನು ಸಹಿಸಲಾಗದು. ಶೀಘ್ರವೇ ಅದಕ್ಕೆಲ್ಲ ಕಡಿವಾಣ ಹಾಕಲಾಗುತ್ತದೆ ಎಂದರು.

ಇದೇ ಸಂದರ್ಭ ಹೊರ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಸ್ವಚ್ಚತೆ ಕಾರ್ಮಿಕರಿಗೆ ವೇತನವನ್ನ ನೇರವಾಗಿ ಅವರ ಖಾತೆಗೆ ಜಮಾ ಮಾಡುವಂತಹ ಕೆಲಸ ಮಾಡಲಾಗುವುದು ಎಂದರು.

ರಾಯಚೂರು: ಕೈ ನಾಯಕರು ಅಧಿಕಾರ ಕಳೆದುಕೊಂಡ ಮೇಲೆ ನಿರುದ್ಯೋಗಿಗಳಾಗಿದ್ದು, ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಸಚಿವ ಬಿ.ಶ್ರೀರಾಮುಲು ವ್ಯಂಗ್ಯವಾಡಿದ್ದಾರೆ.

ಕೈ ನಾಯಕರು ಅಧಿಕಾರ ಕಳೆದುಕೊಂಡ ಮೇಲೆ ನಿರುದ್ಯೋಗಿಗಳಾಗಿದ್ದಾರೆ:ಸಚಿವ ಬಿ.ಶ್ರೀರಾಮುಲು ವ್ಯಂಗ್ಯ

ರಾಯಚೂರಿನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಗೆ 104 ಸ್ಥಾನ ದಕ್ಕಿದ್ದರೂ ಅಧಿಕಾರ ಕೈತಪ್ಪಿ ಹೋಗಿತ್ತು. ಆದರೆ, ಈಗ ಮತ್ತೆ ಕೈ ಸೇರಿದೆ. ಇನ್ನೂ ಮೈತ್ರಿ ಸರ್ಕಾರದವರೂ ತಮ್ಮ ಕೈಯಿಂದಲೇ ತಮ್ಮ ಅಧಿಕಾರವನ್ನ ಪತನ ಮಾಡಿಕೊಂಡಿದ್ದಾರೆ ಅಷ್ಟೇ ಎಂದರು.

ಇನ್ನೂ, ಉಪಮುಖ್ಯಮಂತ್ರಿ ಸ್ಥಾನದ ಕುರಿತು ನಾನೇನು ಹೇಳಲಾರೆ. ಪಕ್ಷದ ನಿರ್ಧಾರಕ್ಕೆ ನಾನು ಬದ್ಧ. ಪಕ್ಷ ನೀಡಿದ ಕೆಲಸವನ್ನ ನಾನು ಮಾಡುತ್ತೀನಿ ಅಷ್ಟೇ ಎಂದರು.

ಇನ್ನೂ ವಿಜಯನಗರ ಜಿಲ್ಲೆ ಸ್ಥಾಪನೆ ವಿಚಾರವನ್ನು ಸದ್ಯಕ್ಕೆ ಕೈ ಬಿಟ್ಟಿದ್ದು, ಉಪ ಚುನಾವಣೆ ಮುಗಿಯುವವರೆಗೂ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ. ಚುನಾವಣೆ ನಂತರ ಶೀಘ್ರವೇ ಈ ವಿಚಾರವಾಗಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುತ್ತೇನೆ ಎಂದು ಭರವಸೆ ನೀಡಿದರು.

ಇನ್ನೂ ಇದೇ ವೇಳೆ ಆರೋಗ್ಯ, ಆಸ್ಪತ್ರೆಗಳ ಕುರಿತು ಮಾತನಾಡಿದ ಅವರು, ರಾಜ್ಯದ ಸರಕಾರಿ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಸಂಸ್ಥೆಗಳ ಏಕಸ್ವಾಮ್ಯತೆ ಹೆಚ್ಚಿರುವುದು ಗಮನಕ್ಕೆ ಬಂದಿದೆ. ಖಾಸಗಿ ಆಸ್ಪತ್ರೆಗಳಿಗೆ ಅನಗತ್ಯವಾಗಿ ರೋಗಿಗಳನ್ನು ತೆರಳುವಂತೆ ಶಿಫಾರಸು ಮಾಡುವುದು. ಔಷಧಕ್ಕೆ ಚೀಟಿ ಬರೆದು ಹೊರಗಿನಿಂದ ತರುವಂತೆ ಸೂಚಿಸುವುದನ್ನು ಸಹಿಸಲಾಗದು. ಶೀಘ್ರವೇ ಅದಕ್ಕೆಲ್ಲ ಕಡಿವಾಣ ಹಾಕಲಾಗುತ್ತದೆ ಎಂದರು.

ಇದೇ ಸಂದರ್ಭ ಹೊರ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಸ್ವಚ್ಚತೆ ಕಾರ್ಮಿಕರಿಗೆ ವೇತನವನ್ನ ನೇರವಾಗಿ ಅವರ ಖಾತೆಗೆ ಜಮಾ ಮಾಡುವಂತಹ ಕೆಲಸ ಮಾಡಲಾಗುವುದು ಎಂದರು.

Intro:¬ಸ್ಲಗ್: ಶ್ರೀರಾಮುಲು ಸುದ್ದಿಗೋಷ್ಠಿ
ಫಾರ್ಮೇಟ್: ಎವಿಬಿಬಿ
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 14-1೦-2019
ಸ್ಥಳ: ರಾಯಚೂರು
ಆಂಕರ್: ಕಾಂಗ್ರೆಸ್ ನಾಯಕರು ಅಧಿಕಾರ ಕಳೆದುಕೊಂಡ ಮೇಲೆ ನಿರುದ್ಯೋಗಿಗಳಾಗಿದ್ದಾರೆ. ಇದರಿಂದಾಗಿ ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಸಚಿವ ಬಿ.ಶ್ರೀರಾಮುಲು ವ್ಯಂಗ್ಯವಾಡಿದ್ದಾರೆ.Body: ರಾಯಚೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ಸತೀಶ ಜಾರಕಿಹೊಳಿ ನಮ್ಮ ಜತೆಯಲ್ಲಿ 20 ಜನ ಬಿಜೆಪಿ ಶಾಸಕರು ಸಂಪರ್ಕದಲ್ಲಿದ್ದಾರೆ ಎನ್ನುವ ಬಗ್ಗೆ ಅವರನ್ನೇ ಕೇಳಬೇಕು. ಆದ್ರೆ ಅಧಿಕಾರಕ್ಕಾಗಿ ಒಂದಾಗಿದ್ದ ಕಾಂಗ್ರೆಸ್ ಜೆಡಿಎಸ್ ಸರ್ಕಾರ ಪತನವಾಗಿದೆ. ಬಿಜೆಪಿಗೆ 104 ಸ್ಥಾನ ನೀಡಿದ್ದರೂ ಅಧಿಕಾರ ಸಿಕ್ಕಿರಲಿಲ್ಲ. ಆದರೆ, ಈಗ ಅಧಿಕಾರ ಸಿಕ್ಕಿದೆ ಎಂದರು. ಉಪಮುಖ್ಯಮಂತ್ರಿ ಸ್ಥಾನ ನೀಡುವ ವಿಚಾರದ ಬಗ್ಗೆ ನಾನೇನು ಹೇಳಲಾರೆ. ಆದ್ರೆ ಪಕ್ಷ ವಹಿಸಿದ ಜವಾಬ್ದಾರಿಯನ್ನ ಮಾಡುವುದು ನನ್ನ ಕಾಯಕವಾಗಿದೆ. ಯಾವ ಸ್ಥಾನಮಾನ ನೀಡಬೇಕು ಎನ್ನುವುದನ್ನು ಪಕ್ಷ ನಿರ್ವಹಿಸುತ್ತದೆ. ವಿಜಯನಗರ ಜಿಲ್ಲೆ ಸ್ಥಾಪನೆ ವಿಚಾರವನ್ನು ಸದ್ಯಕ್ಕೆ ಕೈ ಬಿಟ್ಟಿದ್ದು, ಉಪ ಚುನಾವಣೆ ಮುಗಿಯುವವರೆಗೂ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಸಿಎಂ ಭರವಸೆ ನೀಡಿದ್ರೆ ಎಂದರು. ಅವರ ಒಂದು ವಿಡಿಯೋ ದೃಶ್ಯವನ್ನ ಸೆರೆ ಹಿಡಿಯುವ ದೂರು ನೀಡಿ. ಅವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಅಮಾನತು ಮಾಡುವ ಮೂಲಕ ಕಾನೂನು ರೀತಿಯಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು ಎಂದರು. ಖಾಸಗಿ ಆಸ್ಪತ್ರೆಗಳಿಗೆ ಅನಗತ್ಯವಾಗಿ ರೋಗಿಗಳನ್ನು ತೆರಳುವಂತೆ ಶಿಫಾರಸು ಮಾಡುವುದು, ಔಷಧಕ್ಕೆ ಚೀಟಿ ಬರೆದು ಹೊರಗಿನಿಂದ ತರುವಂತೆ ಸೂಚಿಸುವುದನ್ನು ಸಹಿಸಲಾಗದು. ರಾಜ್ಯದ ಸರಕಾರಿ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಸಂಸ್ಥೆಗಳ ಏಕಸ್ವಾಮ್ಯತೆ ಹೆಚ್ಚಿರುವುದು ಗಮನದಲ್ಲಿದ್ದು ಶೀಘ್ರ ಅದಕ್ಕೆ ಕಡಿವಾಣ ಹಾಕಲಾಗುತ್ತದೆ. ದಂತ ವೈದ್ಯರನ್ನ ಸಹ ಆಸ್ಪತ್ರೆಯಲ್ಲಿ ನೇಮಕಾತಿ ಮಾಡಿಕೊಳ್ಳಲಾಗುವುದು. 108 ಅಂಬ್ಯುಲೇನ್ಸ್ 700 ವಾಹನಗಳನ್ನ ಖರೀದಿಸಲು ತಿರ್ಮಾನಿಸಲಾಗಿದ್ದು, ಅವುಗಳಲ್ಲಿ ಸ್ಕ್ಯಾನಿಂಗ್ ವ್ಯವಸ್ಥೆಯನ್ನ ಮಾಡುವಂತಹ ಚಿಂತನೆ ನೀಡಿ, ಚಿಕಿತ್ಸೆ ಕೊಂಡಿಸುವಂತೆ ಮಾಡಲಾಗುವುದು. ಹೊರ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಸ್ವಚ್ಚತೆ ಕಾರ್ಮಿಕರಿಗೆ ವೇತನವನ್ನ ನೇರವಾಗಿ ಅವರ ಖಾತೆಗೆ ಜಮಾ ಮಾಡುವಂತಹ ಕೆಲಸ ಮಾಡಲಾಗುವುದು ಸೇರಿದಂತೆ ಸಾರ್ವಜನಿಕರಿಗೆ ಉತ್ತಮ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಪೈಪೂಟಿ ನೀಡುವಂತಹ ವ್ಯವಸ್ಥೆ ಮಾಡಲಾಗುವುದು ಎಂದರು. Conclusion:
ಬೈಟ್.1: ಬಿ.ಶ್ರೀರಾಮುಲು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಯಚೂರು
ETV Bharat Logo

Copyright © 2024 Ushodaya Enterprises Pvt. Ltd., All Rights Reserved.