ಮೈಸೂರು: ಸಾಂಸ್ಕೃತಿನಗರಿಯಲ್ಲಿ ಈವರೆಗೂ ಭಾರತ ಬಂದ್ನ ಬಿಸಿ ಇನ್ನೂ ತಟ್ಟಿಲ್ಲ. ಒಂಚೂರು ಅಳುಕಿನಿಂದ ಜನ ಎಂದಿನಂತೆ ವಾಹನಗಳಲ್ಲಿ ಸಂಚರಿಸ್ತಿದ್ದಾರೆ.
ಶಾಲಾ-ಕಾಲೇಜುಗಳು,ಸಾರಿಗೆ ಸಂಸ್ಥೆ ಬಸ್, ಹೋಟೆಲ್ಗಳು ಎಂದಿನಂತಿವೆ. ಬಂದ್ ಹಿನ್ನೆಲೆಯಲ್ಲಿ ಜನ ಸಂಚಾರ ಸ್ವಲ್ಪ ಕಡಿಮೆ ಇದೆ. ನಗರದ ಪ್ರಮುಖ ಸ್ಥಳಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಬ್ಯಾಂಕ್ ನೌಕರರು ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸಲಿವೆ. ಪ್ರತಿಭಟನಾ ಮೆರವಣಿಗೆಯನ್ನು ಜೆಕೆ ಮೈದಾನದಿಂದ ಪುರಭವನದವರಗೆ ಮಾತ್ರ ನಡೆಸಲು ಅನುಮತಿ ನೀಡ್ಲಾಗಿದೆ.
ಪ್ರವಾಸಿ ಸ್ಥಳಗಳಾದ ಅರಮನೆ, ಮೃಗಾಲಯ ಮತ್ತು ಚಾಮುಂಡಿ ಬೆಟ್ಟಕ್ಕೆ ಪ್ರವಾಸಿಗರು ಕಡಿಮೆ ಇರುವುದು ಕಂಡು ಬಂದಿದೆ. ಕೆಲ ಕಡೆ ಬಂದ್ ಭೀತಿಯಿಂದಾಗಿ ಅಂಗಡಿ-ಮುಂಗಟ್ಟುಗಳು ಅಲ್ಲಲ್ಲಿ ಮುಚ್ಚಿವೆ. ಬಹುತೇಕ ಪ್ರಮುಖ ತಾಲೂಕು ಕೇಂದ್ರಗಳಲ್ಲಿ ಬಂದ್ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕಾಂಗ್ರೆಸ್ ಕೂಡ ಬಂದ್ಗೆ ಬೆಂಬಲ ವ್ಯಕ್ತಪಡಿಸಿದೆ. ಇವತ್ತು ಪಕ್ಷದ ಕಚೇರಿಯಲ್ಲಿ ಸಭೆ ನಡೆಸಿ ನಂತರ ಕಾಂಗ್ರೆಸ್ ಮುಖಂಡರು ಬಂದ್ನಲ್ಲಿ ಭಾಗವಹಿಸಲಿದ್ದಾರೆ.