ETV Bharat / state

ದಸರಾಗೆ ಸಜ್ಜಾಗ್ತಿದೆ ಗಜಪಡೆ: ಆನೆಗಳಿಗೆ ಅಂಬಾರಿ ಹೊರುವ ಟ್ರೈನಿಂಗ್​​​​ - dasara captain elephant abhimanyu

ಸರಳ ಹಾಗೂ ಸಾಂಪ್ರದಾಯಿಕ ದಸರಾದ ಹಿನ್ನೆಲೆಯಲ್ಲಿ ಕೇವಲ 5 ಆನೆಗಳನ್ನು ಮಾತ್ರ ಕರೆಸಲಾಗಿದ್ದು, ಮೊದಲ ಬಾರಿಗೆ ಜಂಬೂ ಸವಾರಿಯಲ್ಲಿ ಅಭಿಮನ್ಯು ಮೇಲೆ ಚಿನ್ನದ ಅಂಬಾರಿ ಹೊರಿಸಲು ತೀರ್ಮಾನಿಸಲಾಗಿದೆ.

elephant training for dasara
ದಸರಾಗೆ ಸಜ್ಜಾಗ್ತಿದೆ ಗಜಪಡೆ : ಆನೆಗಳಿಗೆ ಅಂಬಾರಿ ಹೊರುವ ಟ್ರೈನಿಂಗ್​​​​
author img

By

Published : Oct 14, 2020, 12:15 PM IST

ಮೈಸೂರು: ಜಂಬೂಸವಾರಿಗೆ ಗಜಪಡೆಯನ್ನು ಸಿದ್ಧಗೊಳಿಸುತ್ತಿರುವ ಅರಣ್ಯ ಇಲಾಖೆ, ಮೂರು ಗಂಡಾನೆಗಳಿಗೂ ಭಾರ ಹೊರುವ ತಾಲೀಮು ನಡೆಸುತ್ತಿದೆ.

ಈ ಬಾರಿ ಸರಳ ಹಾಗೂ ಸಾಂಪ್ರದಾಯಿಕ ದಸರಾ ಆಚರಿಸುವ ಹಿನ್ನೆಲೆಯಲ್ಲಿ ಕೇವಲ 5 ಆನೆಗಳನ್ನು ಮಾತ್ರ ಕರೆಸಲಾಗಿದ್ದು, ಮೊದಲ ಬಾರಿಗೆ ಜಂಬೂಸವಾರಿಯಲ್ಲಿ ಅಭಿಮನ್ಯು ಮೇಲೆ ಚಿನ್ನದ ಅಂಬಾರಿ ಹೊರಿಸಲು ತೀರ್ಮಾನಿಸಲಾಗಿದೆ.

ದಸರಾಗೆ ಸಜ್ಜಾಗ್ತಿದೆ ಗಜಪಡೆ : ಆನೆಗಳಿಗೆ ಅಂಬಾರಿ ಹೊರುವ ಟ್ರೈನಿಂಗ್​​​​

ಆದರೂ ಆ ಸಮಯಕ್ಕೆ ಏನಾದರೂ ಘಟನೆಗಳಾದರೇ ಪರ್ಯಾಯವಾಗಿ ಅಂಬಾರಿ ಹೊರಲು ಪಟ್ಟದ ಆನೆ ವಿಕ್ರಮ ಹಾಗೂ ನಿಶಾನೆ ಆನೆ ಗೋಪಿಗೂ ದಿನಬಿಟ್ಟು ದಿನ 2 ಬಾರಿ, 500 ಕೆಜಿ ತೂಕದ ಮರಳು ಮೂಟೆಯನ್ನು ಹಾಕಿ ಅರಮನೆ ಒಳಗಡೆ ತಾಲೀಮು ನಡೆಸಲಾಗುತ್ತಿದೆ. ಕಳೆದ ಭಾನುವಾರ ವಿಕ್ರಮ ಆನೆಗೆ, ಇಂದು ಗೋಪಿ ಆನೆಗೆ ಮರಳು ಮೂಟೆ ಹಾಕಿ ತಾಲೀಮು ನಡೆಸಲಾಯಿತು.

ಈ ಬಾರಿ ದಸರಾದಲ್ಲಿ ಅಭಿಮನ್ಯು, ವಿಕ್ರಮ, ಗೋಪಿ, ಕಾವೇರಿ ಮತ್ತು ವಿಜಯ ಆನೆಗಳು ಭಾಗವಹಿಸಲಿದ್ದು, ಪ್ರತಿನಿತ್ಯ ಈ ಆನೆಗಳಿಗೆ ವಿಶೇಷ ಆಹಾರ ಜೊತೆಗೆ ಸೊಪ್ಪು, ಒಣ ಹುಲ್ಲು, ಹೆಸರುಕಾಳು, ಉದ್ದಿನಕಾಳು, ಗೋಧಿ, ಬೆಲ್ಲ ನೀಡಲಾಗುತ್ತಿದೆ.

ಇದರ ಜೊತೆಗೆ ಪ್ರತಿದಿನವೂ ಆನೆಗಳ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ ಎಂದು ಪಶು ವೈದ್ಯ ಡಾ.ನಾಗರಾಜ್ 'ಈಟಿವಿ ಭಾರತ' ಮಾಹಿತಿ ನೀಡಿದರು.

ಮೈಸೂರು: ಜಂಬೂಸವಾರಿಗೆ ಗಜಪಡೆಯನ್ನು ಸಿದ್ಧಗೊಳಿಸುತ್ತಿರುವ ಅರಣ್ಯ ಇಲಾಖೆ, ಮೂರು ಗಂಡಾನೆಗಳಿಗೂ ಭಾರ ಹೊರುವ ತಾಲೀಮು ನಡೆಸುತ್ತಿದೆ.

ಈ ಬಾರಿ ಸರಳ ಹಾಗೂ ಸಾಂಪ್ರದಾಯಿಕ ದಸರಾ ಆಚರಿಸುವ ಹಿನ್ನೆಲೆಯಲ್ಲಿ ಕೇವಲ 5 ಆನೆಗಳನ್ನು ಮಾತ್ರ ಕರೆಸಲಾಗಿದ್ದು, ಮೊದಲ ಬಾರಿಗೆ ಜಂಬೂಸವಾರಿಯಲ್ಲಿ ಅಭಿಮನ್ಯು ಮೇಲೆ ಚಿನ್ನದ ಅಂಬಾರಿ ಹೊರಿಸಲು ತೀರ್ಮಾನಿಸಲಾಗಿದೆ.

ದಸರಾಗೆ ಸಜ್ಜಾಗ್ತಿದೆ ಗಜಪಡೆ : ಆನೆಗಳಿಗೆ ಅಂಬಾರಿ ಹೊರುವ ಟ್ರೈನಿಂಗ್​​​​

ಆದರೂ ಆ ಸಮಯಕ್ಕೆ ಏನಾದರೂ ಘಟನೆಗಳಾದರೇ ಪರ್ಯಾಯವಾಗಿ ಅಂಬಾರಿ ಹೊರಲು ಪಟ್ಟದ ಆನೆ ವಿಕ್ರಮ ಹಾಗೂ ನಿಶಾನೆ ಆನೆ ಗೋಪಿಗೂ ದಿನಬಿಟ್ಟು ದಿನ 2 ಬಾರಿ, 500 ಕೆಜಿ ತೂಕದ ಮರಳು ಮೂಟೆಯನ್ನು ಹಾಕಿ ಅರಮನೆ ಒಳಗಡೆ ತಾಲೀಮು ನಡೆಸಲಾಗುತ್ತಿದೆ. ಕಳೆದ ಭಾನುವಾರ ವಿಕ್ರಮ ಆನೆಗೆ, ಇಂದು ಗೋಪಿ ಆನೆಗೆ ಮರಳು ಮೂಟೆ ಹಾಕಿ ತಾಲೀಮು ನಡೆಸಲಾಯಿತು.

ಈ ಬಾರಿ ದಸರಾದಲ್ಲಿ ಅಭಿಮನ್ಯು, ವಿಕ್ರಮ, ಗೋಪಿ, ಕಾವೇರಿ ಮತ್ತು ವಿಜಯ ಆನೆಗಳು ಭಾಗವಹಿಸಲಿದ್ದು, ಪ್ರತಿನಿತ್ಯ ಈ ಆನೆಗಳಿಗೆ ವಿಶೇಷ ಆಹಾರ ಜೊತೆಗೆ ಸೊಪ್ಪು, ಒಣ ಹುಲ್ಲು, ಹೆಸರುಕಾಳು, ಉದ್ದಿನಕಾಳು, ಗೋಧಿ, ಬೆಲ್ಲ ನೀಡಲಾಗುತ್ತಿದೆ.

ಇದರ ಜೊತೆಗೆ ಪ್ರತಿದಿನವೂ ಆನೆಗಳ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ ಎಂದು ಪಶು ವೈದ್ಯ ಡಾ.ನಾಗರಾಜ್ 'ಈಟಿವಿ ಭಾರತ' ಮಾಹಿತಿ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.