ಮೈಸೂರು: ಹುಣ್ಣಿಮೆ ದಿನದ ಹಿನ್ನೆಲೆ ನಂಜುಂಡೇಶ್ವರ ದರ್ಶನಕ್ಕೆ ಸಹಸ್ರಾರು ಭಕ್ತಾದಿಗಳು ಆಗಮಿಸಿದ್ದರು. ಆದರೆ, ಹಲವು ಭಕ್ತಾದಿಗಳು ಕೊರೊನಾ ರೂಲ್ಸ್ ಬ್ರೇಕ್ ಮಾಡಿದ್ದಾರೆ.
ವಾರಾಂತ್ಯ ಕರ್ಫ್ಯೂ ಹಿನ್ನೆಲೆ ದೇವಾಲಯಗಳಿಗೆ ತೆರಳಲು ಭಕ್ತಾದಿಗಳಿಗೆ ಆಗಿರಲಿಲ್ಲ. ಆದರೆ, ಹುಣ್ಣಿಮೆ ಹಾಗೂ ಸೋಮವಾರದ ಪ್ರಯುಕ್ತ ನಂಜನಗೂಡು ತಾಲೂಕಿನ ಐತಿಹಾಸಿಕ ನಂಜುಂಡೇಶ್ವರ ದರ್ಶನಕ್ಕೆ ಅಪಾರ ಭಕ್ತ ಸಮೂಹವೇ ಹರಿದು ಬಂದಿದೆ. ಈ ವೇಳೆ, ಹಲವು ಭಕ್ತಾದಿಗಳು ಕೊರೊನಾ ರೂಲ್ಸ್ ಮರೆತಿದ್ದಾರೆ.
ಓದಿ: Watch... ವ್ಹಿಲೀಂಗ್ ಮಾಡಿ ಲಾಂಗ್ ಹಿಡಿದುಕೊಂಡು ಕ್ಯಾಮೆರಾಗೆ ಪೋಸ್.. ಆರೋಪಿ ಸೆರೆಗೆ ಖಾಕಿ ತೀವ್ರ ಶೋಧ!
ಮೈಸೂರಿನ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಉಲ್ಬಣವಾಗುತ್ತಿದೆ. ಈ ವಿಷಯವನ್ನು ತಿಳಿದರು ಕೂಡ ಕೊರೊನಾ ನಿಯಮ ಉಲ್ಲಂಘನೆ ಮಾಡುತ್ತಿರುವ ಭಕ್ತರ ವಿರುದ್ಧ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ.
ಕಪಿಲಾ ನದಿಯಲ್ಲಿ ಸಾವಿರಾರು ಭಕ್ತರು ಪುಣ್ಯಸ್ನಾನ ಮಾಡಿದರು. ಈ ವೇಳೆ ಕೊರೊನಾ ರೂಲ್ಸ್ ಬ್ರೇಕ್ ಮಾಡಿರುವುದು ಬೆಳಕಿಗೆ ಬಂದಿದೆ. ಜನ ಹೀಗೆ ನಿರ್ಲಕ್ಷ್ಯ ವಹಿಸಿದರೆ ಕೊರೊನಾ ಸೋಂಕು ರಣಕೇಕೆ ಬೀರಲಿದೆ ಎಂಬುದು ಸ್ಥಳೀಯರ ಆತಂಕವಾಗಿದೆ.