ETV Bharat / entertainment

ತಿರುಪತಿ ಲಡ್ಡು ವಿವಾದ: 'ನಿಮ್ಮ ಪ್ರತಿ ಮಾತಿಗೂ ಉತ್ತರಿಸುತ್ತೇನೆ'; ಪವನ್​ ಕಲ್ಯಾಣ್ -​ಪ್ರಕಾಶ್​​ ರಾಜ್​​ ಜಟಾಪಟಿ - Prakash Raj on Pawan Kalyan

author img

By ETV Bharat Entertainment Team

Published : 3 hours ago

ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಬಳಸಲಾಗಿತ್ತು ಎಂಬ ಆರೋಪ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿಂದೆ ಡಿಸಿಎಂ ಪವನ್​ ಕಲ್ಯಾಣ್ ಅವರ ಟ್ವೀಟ್​ಗೆ ನಟ ಪ್ರಕಾಶ್ ರಾಜ್​ ಪ್ರತಿಕ್ರಿಯಿಸಿದ್ದರು. ಈ ಬಗ್ಗೆ ​ಪವನ್​ ಕಲ್ಯಾಣ್ ತಮ್ಮ ಅಸಮಾಧಾನ ಹೊರಹಾಕಿದ್ದರು. ಇದೀಗ ಪ್ರಕಾಶ್ ರಾಜ್ ವಿಡಿಯೋ ಸಂದೇಶದ ಮೂಲಕ ರಿಯಾಕ್ಟ್​ ಮಾಡಿದ್ದಾರೆ.

Prakash Raj, Pawan Kalyan
ಪ್ರಕಾಶ್ ರಾಜ್​, ಪವನ್​ ಕಲ್ಯಾಣ್ (Photo: ANI)

ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಬಳಸಲಾಗಿತ್ತು ಎಂಬ ಆರೋಪ ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಗುರಿಯಾಗಿದೆ. ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಮತ್ತು ನಟ ಪವನ್​ ಕಲ್ಯಾಣ್​​​ 11 ದಿನಗಳ ಪ್ರಾಯಶ್ಚಿತ್ತ ಉಪವಾಸ ವ್ರತ ಕೈಗೊಂಡಿದ್ದಾರೆ. ಲಡ್ಡು ಕುರಿತ ಕೆಲವರ ಹೇಳಿಕೆಗೆ ಇವರು ಅಸಮಾಧಾನ ವ್ಯಕ್ತಪಡಿಸಿರುವ ಬೆನ್ನಲ್ಲೇ, ಬಹುಭಾಷಾ ನಟ ಪ್ರಕಾಶ್ ರಾಜ್​​​ ತಮ್ಮ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಮೂಲತಃ ಕನ್ನಡದವರಾದ ಬಹುಭಾಷಾ ನಟ ಪ್ರಕಾಶ್ ರಾಜ್​ ತಮ್ಮ ಅಧಿಕೃತ ಎಕ್ಸ್​​ ಖಾತೆಯಲ್ಲಿ, ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಅವರನ್ನು ಉದ್ದೇಶಿಸಿ ಮಾತನಾಡಿ, ಸಾಮಾಜಿಕ ಮಾಧ್ಯಮದಲ್ಲಿನ ತಮ್ಮ ಹಿಂದಿನ ಕಾಮೆಂಟ್ ಅನ್ನು ಹೇಗೆ ತಪ್ಪಾಗಿ ಅರ್ಥೈಸಲಾಗಿದೆ ಎಂಬುದರ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದರು. ಪ್ರಕಾಶ್​ ರಾಜ್ ಅವರು ಪ್ರಸ್ತುತ ವಿದೇಶದಲ್ಲಿದ್ದಾರೆ. ದೇಶಕ್ಕೆ ಹಿಂದಿರುಗಿದ ನಂತರ ವಿವರವಾಗಿ ಪ್ರತಿಕ್ರಿಯಿಸಲಿದ್ದಾರೆ. ಸ್ಪಷ್ಟತೆಗಾಗಿ ತಮ್ಮ ಹಿಂದಿನ ಕಾಮೆಂಟ್‌ಗಳನ್ನು ಪರಿಶೀಲಿಸುವಂತೆ ಒತ್ತಾಯಿಸಿದರು. ನಡೆಯುತ್ತಿರುವ ತಿರುಪತಿ ಲಡ್ಡು ವಿವಾದದ ನಡುವೆ ಸನಾತನ ಧರ್ಮದ ಬಗ್ಗೆ ನಕಾರಾತ್ಮಕ ಹೇಳಿಕೆ ನೀಡುವವರ ವಿರುದ್ಧ ಪವನ್​​ ಕಲ್ಯಾಣ್ ಅವರ ನಿಲುವಿನ ಹಿನ್ನೆಲೆಯಲ್ಲಿ ಈ ಹೇಳಿಕೆಗಳು ಬಂದಿವೆ.

ತಮ್ಮ ಟ್ವಿಟರ್​​ನಲ್ಲಿ ವಿಡಿಯೋ ಸಂದೇಶ ಹಂಚಿಕೊಂಡಿರುವ ಪ್ರಕಾಶ್​ ರಾಜ್​, "ಆತ್ಮೀಯ ಪವನ್​ ಕಲ್ಯಾಣ್​​ ಗಾರು, ನಾನು ನಿಮ್ಮ ಪತ್ರಿಕಾಗೋಷ್ಠಿಯನ್ನು ನೋಡಿದೆ. ನಾನು ಹೇಳಿದ್ದು ಮತ್ತು ನೀವು ತಪ್ಪಾಗಿ ಅರ್ಥೈಸಿಕೊಂಡಿರುವುದು ಬಹಳ ಆಶ್ಚರ್ಯಕರವಾಗಿದೆ. ನಾನು ವಿದೇಶದಲ್ಲಿ ಶೂಟಿಂಗ್​ನಲ್ಲಿ ಭಾಗಿಯಾಗಿದ್ದೇನೆ. ಹಿಂದಿರುಗಿ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ. ಅಷ್ಟರಲ್ಲಿ, ನೀವು ನನ್ನ ಹಿಂದಿನ ಟ್ವೀಟ್​ಗಳನ್ನು ಅರ್ಥಮಾಡಿಕೊಂಡರೆ ಅದನ್ನು ಪ್ರಶಂಸಿಸುತ್ತೇನೆ" ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: 'ಲಡ್ಡು ಸೂಕ್ಷ್ಮ ವಿಷಯ': ಪವನ್​ ಕಲ್ಯಾಣ್​ ಆಕ್ರೋಶಕ್ಕೆ ಗುರಿಯಾಯ್ತು ಕಾರ್ತಿ ಹೇಳಿಕೆ; ಡಿಸಿಎಂ ಬಳಿ ಕ್ಷಮೆಯಾಚಿಸಿದ ನಟ - Karthi Apologises To Pawan Kalyan

ಪವನ್​​ ಕಲ್ಯಾಣ್ ಅವರು ತಮ್ಮ ಹೇಳಿಕೆ ನೀಡುವ ಸಂದರ್ಭ, ನಿರ್ದಿಷ್ಟವಾಗಿ ಪ್ರಕಾಶ್ ರಾಜ್ ಅವರ ಹೆಸರನ್ನು ಉಲ್ಲೇಖಿಸಿದರು. ಜಾತ್ಯತೀತತೆಯ ಸುತ್ತಲಿನ ಚರ್ಚೆಗಳು ಎಲ್ಲಾ ಸಮುದಾಯಗಳ ಭಾವನೆಗಳನ್ನು ಪರಿಗಣಿಸಬೇಕು ಎಂದು ಸಲಹೆ ನೀಡಿದರು. ಭಕ್ತರ ನೋವನ್ನು ಕ್ಷುಲ್ಲಕಗೊಳಿಸಬಾರದು ಎಂದು ಒತ್ತಿ ಹೇಳಿದ ಡಿಸಿಎಂ ಧಾರ್ಮಿಕ ವಿಚಾರಗಳಲ್ಲಿ ಗೌರವ ಇಡುವಂತೆ, ಅರ್ಥ ಮಾಡಿಕೊಳ್ಳುವಂತೆ ಒತ್ತಾಯಿಸಿದರು. ಜನಸೇನಾ ಪಕ್ಷದ ಮುಖ್ಯಸ್ಥರೂ ಆಗಿರುವ ಆಂಧ್ರ ಡಿಸಿಎಂ ಪವನ್ ಕಲ್ಯಾಣ್​​ ಸನಾತನ ಧರ್ಮದ ರಕ್ಷಣೆ ವಿಚಾರಗಳಿಂದ ಸಖತ್​​ ಸುದ್ದಿಯಲ್ಲಿದ್ದಾರೆ. ತಮ್ಮ ಧಾರ್ಮಿಕ ನಂಬಿಕೆಗಳ ಮೇಲಿನ ದಾಳಿಯನ್ನು ಸಹಿಸುವುದಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ: ಲೈಂಗಿಕ ಕಿರುಕುಳ ಆರೋಪ: ನಟ, ಶಾಸಕ ಮುಕೇಶ್ ಬಂಧನದ ಬೆನ್ನಲ್ಲೇ ಸಿಕ್ತು ಜಾಮೀನು - MLA Mukesh Arrested

ಸೆಪ್ಟೆಂಬರ್​ 20ರಂದು ನಟ ಪವನ್​ ಕಲ್ಯಾಣ್​​​ ಅವರ ಟ್ವೀಟ್​​ ಒಂದಕ್ಕೆ ನಟ ಪ್ರಕಾಶ್​ ರಾಜ್​​ ಪ್ರತಿಕ್ರಿಯಿಸಿದ್ದರು. ''ಆತ್ಮೀಯ ಪವನ್​​ ಕಲ್ಯಾಣ್​​, ನೀವು ಡಿಸಿಎಂ ಆಗಿರುವ ರಾಜ್ಯದಲ್ಲಿ ಈ ಘಟನೆ ಸಂಭವಿಸಿದೆ. ದಯವಿಟ್ಟು ತನಿಖೆ ನಡೆಸಿ. ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಿ. ನೀವೇಕೆ ಆತಂಕ ಹರಡುತ್ತಿದ್ದೀರಿ? ಸಮಸ್ಯೆಯನ್ನು ರಾಷ್ಟ್ರಮಟ್ಟದಲ್ಲಿ ಸ್ಫೋಟಿಸುತ್ತಿದ್ದೀರಿ. (ಕೇಂದ್ರದಲ್ಲಿರುವ ನಿಮ್ಮ ಸ್ನೇಹಿತರಿಗೆ ಧನ್ಯವಾದಗಳು) ಎಂದು ನಟ ಪ್ರಕಾಶ್ ರಾಜ್​​ ಬರೆದುಕೊಂಡಿದ್ದರು.

ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಬಳಸಲಾಗಿತ್ತು ಎಂಬ ಆರೋಪ ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಗುರಿಯಾಗಿದೆ. ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಮತ್ತು ನಟ ಪವನ್​ ಕಲ್ಯಾಣ್​​​ 11 ದಿನಗಳ ಪ್ರಾಯಶ್ಚಿತ್ತ ಉಪವಾಸ ವ್ರತ ಕೈಗೊಂಡಿದ್ದಾರೆ. ಲಡ್ಡು ಕುರಿತ ಕೆಲವರ ಹೇಳಿಕೆಗೆ ಇವರು ಅಸಮಾಧಾನ ವ್ಯಕ್ತಪಡಿಸಿರುವ ಬೆನ್ನಲ್ಲೇ, ಬಹುಭಾಷಾ ನಟ ಪ್ರಕಾಶ್ ರಾಜ್​​​ ತಮ್ಮ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಮೂಲತಃ ಕನ್ನಡದವರಾದ ಬಹುಭಾಷಾ ನಟ ಪ್ರಕಾಶ್ ರಾಜ್​ ತಮ್ಮ ಅಧಿಕೃತ ಎಕ್ಸ್​​ ಖಾತೆಯಲ್ಲಿ, ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಅವರನ್ನು ಉದ್ದೇಶಿಸಿ ಮಾತನಾಡಿ, ಸಾಮಾಜಿಕ ಮಾಧ್ಯಮದಲ್ಲಿನ ತಮ್ಮ ಹಿಂದಿನ ಕಾಮೆಂಟ್ ಅನ್ನು ಹೇಗೆ ತಪ್ಪಾಗಿ ಅರ್ಥೈಸಲಾಗಿದೆ ಎಂಬುದರ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದರು. ಪ್ರಕಾಶ್​ ರಾಜ್ ಅವರು ಪ್ರಸ್ತುತ ವಿದೇಶದಲ್ಲಿದ್ದಾರೆ. ದೇಶಕ್ಕೆ ಹಿಂದಿರುಗಿದ ನಂತರ ವಿವರವಾಗಿ ಪ್ರತಿಕ್ರಿಯಿಸಲಿದ್ದಾರೆ. ಸ್ಪಷ್ಟತೆಗಾಗಿ ತಮ್ಮ ಹಿಂದಿನ ಕಾಮೆಂಟ್‌ಗಳನ್ನು ಪರಿಶೀಲಿಸುವಂತೆ ಒತ್ತಾಯಿಸಿದರು. ನಡೆಯುತ್ತಿರುವ ತಿರುಪತಿ ಲಡ್ಡು ವಿವಾದದ ನಡುವೆ ಸನಾತನ ಧರ್ಮದ ಬಗ್ಗೆ ನಕಾರಾತ್ಮಕ ಹೇಳಿಕೆ ನೀಡುವವರ ವಿರುದ್ಧ ಪವನ್​​ ಕಲ್ಯಾಣ್ ಅವರ ನಿಲುವಿನ ಹಿನ್ನೆಲೆಯಲ್ಲಿ ಈ ಹೇಳಿಕೆಗಳು ಬಂದಿವೆ.

ತಮ್ಮ ಟ್ವಿಟರ್​​ನಲ್ಲಿ ವಿಡಿಯೋ ಸಂದೇಶ ಹಂಚಿಕೊಂಡಿರುವ ಪ್ರಕಾಶ್​ ರಾಜ್​, "ಆತ್ಮೀಯ ಪವನ್​ ಕಲ್ಯಾಣ್​​ ಗಾರು, ನಾನು ನಿಮ್ಮ ಪತ್ರಿಕಾಗೋಷ್ಠಿಯನ್ನು ನೋಡಿದೆ. ನಾನು ಹೇಳಿದ್ದು ಮತ್ತು ನೀವು ತಪ್ಪಾಗಿ ಅರ್ಥೈಸಿಕೊಂಡಿರುವುದು ಬಹಳ ಆಶ್ಚರ್ಯಕರವಾಗಿದೆ. ನಾನು ವಿದೇಶದಲ್ಲಿ ಶೂಟಿಂಗ್​ನಲ್ಲಿ ಭಾಗಿಯಾಗಿದ್ದೇನೆ. ಹಿಂದಿರುಗಿ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ. ಅಷ್ಟರಲ್ಲಿ, ನೀವು ನನ್ನ ಹಿಂದಿನ ಟ್ವೀಟ್​ಗಳನ್ನು ಅರ್ಥಮಾಡಿಕೊಂಡರೆ ಅದನ್ನು ಪ್ರಶಂಸಿಸುತ್ತೇನೆ" ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: 'ಲಡ್ಡು ಸೂಕ್ಷ್ಮ ವಿಷಯ': ಪವನ್​ ಕಲ್ಯಾಣ್​ ಆಕ್ರೋಶಕ್ಕೆ ಗುರಿಯಾಯ್ತು ಕಾರ್ತಿ ಹೇಳಿಕೆ; ಡಿಸಿಎಂ ಬಳಿ ಕ್ಷಮೆಯಾಚಿಸಿದ ನಟ - Karthi Apologises To Pawan Kalyan

ಪವನ್​​ ಕಲ್ಯಾಣ್ ಅವರು ತಮ್ಮ ಹೇಳಿಕೆ ನೀಡುವ ಸಂದರ್ಭ, ನಿರ್ದಿಷ್ಟವಾಗಿ ಪ್ರಕಾಶ್ ರಾಜ್ ಅವರ ಹೆಸರನ್ನು ಉಲ್ಲೇಖಿಸಿದರು. ಜಾತ್ಯತೀತತೆಯ ಸುತ್ತಲಿನ ಚರ್ಚೆಗಳು ಎಲ್ಲಾ ಸಮುದಾಯಗಳ ಭಾವನೆಗಳನ್ನು ಪರಿಗಣಿಸಬೇಕು ಎಂದು ಸಲಹೆ ನೀಡಿದರು. ಭಕ್ತರ ನೋವನ್ನು ಕ್ಷುಲ್ಲಕಗೊಳಿಸಬಾರದು ಎಂದು ಒತ್ತಿ ಹೇಳಿದ ಡಿಸಿಎಂ ಧಾರ್ಮಿಕ ವಿಚಾರಗಳಲ್ಲಿ ಗೌರವ ಇಡುವಂತೆ, ಅರ್ಥ ಮಾಡಿಕೊಳ್ಳುವಂತೆ ಒತ್ತಾಯಿಸಿದರು. ಜನಸೇನಾ ಪಕ್ಷದ ಮುಖ್ಯಸ್ಥರೂ ಆಗಿರುವ ಆಂಧ್ರ ಡಿಸಿಎಂ ಪವನ್ ಕಲ್ಯಾಣ್​​ ಸನಾತನ ಧರ್ಮದ ರಕ್ಷಣೆ ವಿಚಾರಗಳಿಂದ ಸಖತ್​​ ಸುದ್ದಿಯಲ್ಲಿದ್ದಾರೆ. ತಮ್ಮ ಧಾರ್ಮಿಕ ನಂಬಿಕೆಗಳ ಮೇಲಿನ ದಾಳಿಯನ್ನು ಸಹಿಸುವುದಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ: ಲೈಂಗಿಕ ಕಿರುಕುಳ ಆರೋಪ: ನಟ, ಶಾಸಕ ಮುಕೇಶ್ ಬಂಧನದ ಬೆನ್ನಲ್ಲೇ ಸಿಕ್ತು ಜಾಮೀನು - MLA Mukesh Arrested

ಸೆಪ್ಟೆಂಬರ್​ 20ರಂದು ನಟ ಪವನ್​ ಕಲ್ಯಾಣ್​​​ ಅವರ ಟ್ವೀಟ್​​ ಒಂದಕ್ಕೆ ನಟ ಪ್ರಕಾಶ್​ ರಾಜ್​​ ಪ್ರತಿಕ್ರಿಯಿಸಿದ್ದರು. ''ಆತ್ಮೀಯ ಪವನ್​​ ಕಲ್ಯಾಣ್​​, ನೀವು ಡಿಸಿಎಂ ಆಗಿರುವ ರಾಜ್ಯದಲ್ಲಿ ಈ ಘಟನೆ ಸಂಭವಿಸಿದೆ. ದಯವಿಟ್ಟು ತನಿಖೆ ನಡೆಸಿ. ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಿ. ನೀವೇಕೆ ಆತಂಕ ಹರಡುತ್ತಿದ್ದೀರಿ? ಸಮಸ್ಯೆಯನ್ನು ರಾಷ್ಟ್ರಮಟ್ಟದಲ್ಲಿ ಸ್ಫೋಟಿಸುತ್ತಿದ್ದೀರಿ. (ಕೇಂದ್ರದಲ್ಲಿರುವ ನಿಮ್ಮ ಸ್ನೇಹಿತರಿಗೆ ಧನ್ಯವಾದಗಳು) ಎಂದು ನಟ ಪ್ರಕಾಶ್ ರಾಜ್​​ ಬರೆದುಕೊಂಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.