ETV Bharat / state

ಹಳೆ ವೈಷಮ್ಯ ಶಂಕೆ: ಕಲ್ಲಿನಿಂದ ಜಜ್ಜಿ ಮಹಿಳೆಯ ಬರ್ಬರ ಕೊಲೆ - Mysore latest News

ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಮಚ್ಚಿನಿಂದ ಹಾಗೂ ಕಲ್ಲಿನಿಂದ ಹೊಡೆದು ಮಹಿಳೆಯನ್ನು ಹತ್ಯೆ ಮಾಡಿರುವ ಘಟನೆ ಮೈಸೂರಿನ ನಂಜನಗೂಡು ತಾಲ್ಲೂಕಿನ ಹಾಡ್ಯ ಗ್ರಾಮದಲ್ಲಿ ನಡೆದಿದೆ.

ಹಳೇ ವೈಷಮ್ಯ ಹಿನ್ನಲೆ ಮಹಿಳೆಯ ಕೊಲೆ
author img

By

Published : Aug 11, 2019, 3:56 PM IST

ಮೈಸೂರು: ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಮಹಿಳೆಯನ್ನು ಮಚ್ಚಿನಿಂದ ಹಾಗೂ ಕಲ್ಲಿನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಂಜನಗೂಡು ತಾಲ್ಲೂಕಿನ ಹಾಡ್ಯ ಗ್ರಾಮದಲ್ಲಿ ನಡೆದಿದೆ.

ಹಳೇ ವೈಷಮ್ಯ ಹಿನ್ನಲೆ ಮಹಿಳೆಯ ಕೊಲೆ

ಗೌರಮ್ಮ(45) ಕೊಲೆಯಾದ ಮಹಿಳೆ.

ನಂಜನಗೂಡು ತಾಲ್ಲೂಕಿನ ಕೌಲಂದೆ ಗ್ರಾಮದ ಸಮೀಪವಿರುವ ಹಾಡ್ಯ ಗ್ರಾಮದಲ್ಲಿ ಅವಿವಾಹಿತೆಯಾದ ಗೌರಮ್ಮ ತನ್ನ ತಾಯಿಯೊಂದಿಗೆ ವಾಸವಾಗಿದ್ದರು. ಇನ್ನು ಇವರಿಗೂ ಹಾಗೂ ಪಕ್ಕದ ಮನೆಯವರಿಗೂ ಆಗಾಗ ಗಲಾಟೆ ನಡೆಯುತ್ತಿತ್ತು ಎಂದು ತಿಳಿದುಬಂದಿದೆ.

ಶನಿವಾರ ಮಧ್ಯಾಹ್ನ ಹೊಲದ ಬಳಿ ಗೌರಮ್ಮ ಹೋಗುತ್ತಿದ್ದಾಗ ಹೊಂಚು ಹಾಕಿ ಕುಳಿತಿದ್ದ ನೆರೆ‌ ಮನೆಯವರು ಮಚ್ಚು ಹಾಗೂ ಕಲ್ಲಿನಿಂದ ಜಜ್ಜಿ ಆಕೆಯನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಗೌರಮ್ಮ ಮನೆಗೆ ಹಿಂದಿರುಗದೇ ಇದ್ದಾಗ ಸಂಬಂಧಿಕರು ಹುಡುಕಿಕಲು ಶುರು ಮಾಡಿದ್ದಾರೆ. ಈ ವೇಳೆ ರಕ್ತದ ಮಡುವಿನಲ್ಲಿ ಗೌರಮ್ಮ ಮೃತದೇಹ ಪತ್ತೆಯಾಗಿತ್ತು.

ಘಟನೆ ಬಗ್ಗೆ ಮಾತನಾಡಿದ ಮೃತಳ ಸಂಬಂಧಿ ದಿವ್ಯಾ, ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಸಂಬಂಧ ಕೌಲಂದೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತದೇಹವನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಯ ಶವಾಗಾರಕ್ಕೆ ಕಳುಹಿಸಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಬಳಿಕ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮೈಸೂರು: ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಮಹಿಳೆಯನ್ನು ಮಚ್ಚಿನಿಂದ ಹಾಗೂ ಕಲ್ಲಿನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಂಜನಗೂಡು ತಾಲ್ಲೂಕಿನ ಹಾಡ್ಯ ಗ್ರಾಮದಲ್ಲಿ ನಡೆದಿದೆ.

ಹಳೇ ವೈಷಮ್ಯ ಹಿನ್ನಲೆ ಮಹಿಳೆಯ ಕೊಲೆ

ಗೌರಮ್ಮ(45) ಕೊಲೆಯಾದ ಮಹಿಳೆ.

ನಂಜನಗೂಡು ತಾಲ್ಲೂಕಿನ ಕೌಲಂದೆ ಗ್ರಾಮದ ಸಮೀಪವಿರುವ ಹಾಡ್ಯ ಗ್ರಾಮದಲ್ಲಿ ಅವಿವಾಹಿತೆಯಾದ ಗೌರಮ್ಮ ತನ್ನ ತಾಯಿಯೊಂದಿಗೆ ವಾಸವಾಗಿದ್ದರು. ಇನ್ನು ಇವರಿಗೂ ಹಾಗೂ ಪಕ್ಕದ ಮನೆಯವರಿಗೂ ಆಗಾಗ ಗಲಾಟೆ ನಡೆಯುತ್ತಿತ್ತು ಎಂದು ತಿಳಿದುಬಂದಿದೆ.

ಶನಿವಾರ ಮಧ್ಯಾಹ್ನ ಹೊಲದ ಬಳಿ ಗೌರಮ್ಮ ಹೋಗುತ್ತಿದ್ದಾಗ ಹೊಂಚು ಹಾಕಿ ಕುಳಿತಿದ್ದ ನೆರೆ‌ ಮನೆಯವರು ಮಚ್ಚು ಹಾಗೂ ಕಲ್ಲಿನಿಂದ ಜಜ್ಜಿ ಆಕೆಯನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಗೌರಮ್ಮ ಮನೆಗೆ ಹಿಂದಿರುಗದೇ ಇದ್ದಾಗ ಸಂಬಂಧಿಕರು ಹುಡುಕಿಕಲು ಶುರು ಮಾಡಿದ್ದಾರೆ. ಈ ವೇಳೆ ರಕ್ತದ ಮಡುವಿನಲ್ಲಿ ಗೌರಮ್ಮ ಮೃತದೇಹ ಪತ್ತೆಯಾಗಿತ್ತು.

ಘಟನೆ ಬಗ್ಗೆ ಮಾತನಾಡಿದ ಮೃತಳ ಸಂಬಂಧಿ ದಿವ್ಯಾ, ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಸಂಬಂಧ ಕೌಲಂದೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತದೇಹವನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಯ ಶವಾಗಾರಕ್ಕೆ ಕಳುಹಿಸಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಬಳಿಕ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Intro:ಕೊಲೆ


Body:ಕೊಲೆ


Conclusion:ಹಳೆ ವೈಷಮ್ಯಕ್ಕೆ ಬರ್ಬರವಾಗಿ ಮಹಿಳೆ ಕೊಲೆ
ಮೈಸೂರು: ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಮಹಿಳೆಯನ್ನು ಬರ್ಬರವಾಗಿ ಮಚ್ಚಿನಿಂದ ಹಾಗೂ ಕಲ್ಲಿ ಹೊಡೆದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಂಜನಗೂಡು ತಾಲ್ಲೂಕಿನ ಹಾಡ್ಯ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಗೌರಮ್ಮ(45) ಕೊಲೆಯಾದವರು. ನಂಜನಗೂಡು ತಾಲ್ಲೂಕಿನ ಕೌಲಂದೆಗ್ರಾಮದ ಸಮೀಪ ವಿರುವ ಹಾಡ್ಯ ಗ್ರಾಮದಲ್ಲಿ ಅವಿವಾಹಿತವಾಗಿರುವ ಗೌರಮ್ಮ, ತಾಯಿಯೊಂದಿಗೆ ವಾಸವಾಗಿದ್ದರು. ಇವರ ಪಕ್ಕದ ಮನೆಯವರು ಹಾಗೂ ಇವರಿಗೂ ಆಗಾಗ ಗಲಾಟೆ ನಡೆಯುತ್ತಿತ್ತು.
ಶನಿವಾರ ಮಧ್ಯಾಹ್ನ ಹೊಲದ ಬಳಿ ಗೌರಮ ಅವರು ಹೋಗುತ್ತಿದ್ದಾಗ ಕೊಂಚು ಹಾಕಿ ಕುಳಿತ್ತಿದ್ದ ನೆರೆ‌ ಮನೆಯವರು ಮಚ್ಚು ಹಾಗೂ ಕಲ್ಲಿನಿಂದ ಕೊಲೆ ಮಾಡಿ ಪರಾರಿಯಾಗಿದ್ದಾರೆ.ಗೌರಮ್ಮ ಎಷ್ಟೊತ್ತಾದರು ಮನೆಗೆ ಹಿಂದಿರುಗದೆ ಇದ್ದಾಗ ಹೊಲಕ್ಕೆ ಸಂಬಂಧಿಗಳು ಹೋಗುತ್ತಿದ್ದಾಗ ರಕ್ತದ ಮಡುವಿನಲ್ಲಿ ಗೌರಮ್ಮ ಸಾವನ್ನಪ್ಪಿದ್ದರು.ಕೂಡಲೇ ಸಂಬಂಧಿಕರು ಕೌಲಂದೆ ಪೊಲೀಸರಿಗೆ ಮಾಹಿತಿ ನೀಡಿದಾಗ, ಸ್ಥಳಕ್ಕೆ ಆಗಮಿಸಿದ ಪೊಲೀಸರು.ಮೃತದೇಹವನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಯ ಶವಾಗಾರಕ್ಕೆ ಕಳುಹಿಸಿ ಮರಣೋತ್ತರ ಪರೀಕ್ಷೆ ಮಾಡಿಸಿ ಮೃತದೇಹವನ್ನು ಸಂಬಂಧಿಗಳಿಗೆ ಹಸ್ತಾಂತರ ಮಾಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಈ ಸಂಬಂಧ 'ಈಟಿವಿ ಭಾರತ್'ನೊಂದಿಗೆ ಮಾತನಾಡಿದ ಮೃತಳ ಸಂಬಂಧಿ ದಿವ್ಯಾ, ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಿದ್ದಾರೆ ಎಂದು ತಿಳಿಸಿದರು.

(ಕೊಲೆ ಫೋಟೋ ಗಳನ್ನು ನ್ಯೂಸ್ ವ್ರ್ಯಾಪ್ ನಲ್ಲಿ ಕಳುಹಿಸಲಾಗಿದೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.