ಮೈಸೂರು: ವ್ಯಕ್ತಿಯೋರ್ವನನ್ನು ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಕೆ. ಆರ್ ನಗರ ತಾಲೂಕಿನ ಅರ್ಜುನ ಹಳ್ಳಿ ಗ್ರಾಮದ ತೋಟದ ಮನೆಯಲ್ಲಿ ನಡೆದಿದೆ.

ಗ್ರಾಮದ ರಮೇಶ್ ರಾಜ್ (58) ಕೊಲೆಯಾದವ. ಹಾಸನ-ಮೈಸೂರು ಹೆದ್ದಾರಿಯ ಪಕ್ಕದ ಜಮೀನಿನ ತೋಟದ ಪಂಪ್ಸೆಟ್ ಶೆಡ್ಡ್ನಲ್ಲಿ ಕೊಲೆ ಮಾಡಲಾಗಿದ್ದು, ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಈ ಘಟನೆಯಿಂದ ಗ್ರಾಮದ ಜನರಲ್ಲಿ ಆತಂಕ ಮನೆ ಮಾಡಿದೆ.

ಕೊಲೆಯಾದ ರಮೇಶ್ ರಾಜ್ ಅವರಿಗೆ ಇಬ್ಬರು ಪತ್ನಿಯರು, ನಾಲ್ವರು ಗಂಡು ಮಕ್ಕಳು ಮತ್ತು ಓರ್ವ ಪುತ್ರಿ ಇದ್ದಾಳೆ. ಈ ಸಂಬಂಧ ರಮೇಶ್ರಾಜ್ ಪತ್ನಿ ಸುಧಾ ಕೆ.ಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಎಸ್ಪಿ ಆರ್. ಚೇತನ್, ಡಿವೈಎಸ್ಪಿ ಡಾ. ಸುಮೀತ್ ಅವರು ಸ್ಥಳ ಪರಿಶೀಲಿಸಿ ಕೊಲೆ ಸಂಬಂಧ ಮಾಹಿತಿ ಪಡೆದರು. ಕೊಲೆ ಪ್ರಕರಣ ಭೇದಿಸಲು ತಂಡ ರಚಿಸಿದ್ದಾರೆ.
ಓದಿ: ರೈಲ್ವೆ ಕಾಮಗಾರಿಗಾಗಿ ತೆಗೆದಿದ್ದ ಗುಂಡಿಯಲ್ಲಿ ಮುಳುಗಿ ಮೂವರು ಮಕ್ಕಳು ಸಾವು!