ETV Bharat / state

'ಚೌಕಿದಾರ'ರ ಎಲ್ಲಾ ನಾಟಕಗಳು ಈ ಚುನಾವಣೆಯಲ್ಲಿ ಮುಗಿಯುತ್ತವೆ: ಮಾಯಾವತಿ - undefined

ಸ್ವಾತಂತ್ರ ನಂತರ ಅನೇಕ ವರ್ಷಗಳ ಕಾಲ ಕಾಂಗ್ರೆಸ್, ಬಿಜೆಪಿ ಹಾಗೂ ಇತರ ಪಕ್ಷಗಳ ಕೈಯಲ್ಲಿ ಕೇಂದ್ರದ ಚುಕ್ಕಾಣಿ ಇತ್ತು. ಕಾಂಗ್ರೆಸ್​ನವರ ಪ್ರಚಾರಗಳು, ನಾಟಕಗಳು ಮುಗಿದಿವೆ. ಇನ್ನು ಬಿಜೆಪಿಯ ಚೌಕಿದಾರ್ ಕತೆ ಕೂಡಾ ಈ ಚುನಾವಣೆಯಲ್ಲಿ ಮುಗಿಯಲಿದೆ. ಚೌಕಿದಾರರ ಹೊಸ ನಾಟಕಗಳು ಈ ಚುನಾವಣೆಯಲ್ಲಿ ನಡೆಯುವುದಿಲ್ಲ ಎಂದು ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ, ಚುನಾವಣಾ ರ‍್ಯಾಲಿಯಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಎಸ್‌ಪಿ ನಾಯಕಿ ಮಾಯಾವತಿ
author img

By

Published : Apr 10, 2019, 7:07 PM IST

ಮೈಸೂರು: ಚೌಕಿದಾರರ ಹೊಸ ನಾಟಕ ಈ ಚುನಾವಣೆಯಲ್ಲಿ ನಡೆಯುವುದಿಲ್ಲ.ಇವರ ಎಲ್ಲಾ ನಾಟಕಗಳು ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಮುಗಿಯುತ್ತವೆ ಎಂದು ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ ಚುನಾವಣಾ ರ‍್ಯಾಲಿಯಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಬಿಎಸ್​ಪಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಸ್ವಾತಂತ್ರ ನಂತರ ತುಂಬಾ ವರ್ಷಗಳ ಕಾಲ ಕಾಂಗ್ರೆಸ್, ಬಿಜೆಪಿ ಹಾಗೂ ಇತರ ಪಕ್ಷಗಳ ಕೈಯಲ್ಲಿ ಕೇಂದ್ರ ಸರ್ಕಾರವಿತ್ತು. ಕಾಂಗ್ರೆಸ್​ ಪಕ್ಷದ ಪ್ರಚಾರಗಳು, ನಾಟಕಗಳು ಮುಗಿದಿವೆ. ಇನ್ನು ಬಿಜೆಪಿಯ ಚೌಕಿದಾರ್ ಕತೆ ಕೂಡಾ ಈ ಚುನಾವಣೆಯಲ್ಲಿ ಮುಗಿಯಲಿದೆ. ಚೌಕಿದಾರರ ಹೊಸ ನಾಟಕಗಳು ಈ ಚುನಾವಣೆಯಲ್ಲಿ ನಡೆಯುವುದಿಲ್ಲ ಎಂದರು.

ಮಾಯಾವತಿ

ಕಳೆದ 5 ವರ್ಷಗಳ ಮೋದಿ ಅವಧಿ, ಬರೀ ಘೋಷಣೆಗಳಲ್ಲಿಯೇ ಮುಗಿದಿದೆ. ಇದರಿಂದ ಸಾಮಾನ್ಯ ಜನರಿಗೆ ಯಾವುದೇ ಅನುಕೂಲವಾಗಿಲ್ಲ ಎಂದು ವಾಗ್ದಾಳಿ ನಡೆಸಿದರು. ವಿರೋಧ ಪಕ್ಷದವರನ್ನು ಬೆದರಿಸಲು ಬಿಜೆಪಿ ಆದಾಯ ತೆರಿಗೆ ಇಲಾಖೆಯನ್ನು ಬಳಸಿಕೊಳ್ಳುತ್ತಿದೆ. ದೇಶವನ್ನು ಬಿಜೆಪಿ ಸರ್ಕಾರ ಸುರಕ್ಷಿತವಾಗಿ ಇಟ್ಟಿಲ್ಲ. ದೇಶದ ಭದ್ರತೆ ವಿಚಾರದಲ್ಲೂ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದರು.

ನಾವು ಚುನಾವಣೆ ಪ್ರಣಾಳಿಕೆ ಮೂಲಕ ಸುಳ್ಳು ಹೇಳುವುದಿಲ್ಲ. ನಮ್ಮ ಸರ್ಕಾರ ಕೇಂದ್ರದಲ್ಲಿ ಅಧಿಕಾರಿಕ್ಕೆ ಬಂದರೆ ಬಡವರಿಗೆ 6 ಸಾವಿರ ರೂಪಾಯಿ ಹಣ ಕೊಡುವ ಚಿಂತನೆ ಮಾಡಿದ್ದು, ಆ ಮೂಲಕ ಬಡತನ ನಿರ್ಮೂಲನೆಗೆ ಪಣ ತೊಡುವುದಾಗಿ ಹೇಳಿದರು. ಈ ಬಾರಿ ಕರ್ನಾಟಕದಿಂದಲೂ ಬಿಎಸ್ಪಿ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

ಮೈಸೂರು: ಚೌಕಿದಾರರ ಹೊಸ ನಾಟಕ ಈ ಚುನಾವಣೆಯಲ್ಲಿ ನಡೆಯುವುದಿಲ್ಲ.ಇವರ ಎಲ್ಲಾ ನಾಟಕಗಳು ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಮುಗಿಯುತ್ತವೆ ಎಂದು ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ ಚುನಾವಣಾ ರ‍್ಯಾಲಿಯಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಬಿಎಸ್​ಪಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಸ್ವಾತಂತ್ರ ನಂತರ ತುಂಬಾ ವರ್ಷಗಳ ಕಾಲ ಕಾಂಗ್ರೆಸ್, ಬಿಜೆಪಿ ಹಾಗೂ ಇತರ ಪಕ್ಷಗಳ ಕೈಯಲ್ಲಿ ಕೇಂದ್ರ ಸರ್ಕಾರವಿತ್ತು. ಕಾಂಗ್ರೆಸ್​ ಪಕ್ಷದ ಪ್ರಚಾರಗಳು, ನಾಟಕಗಳು ಮುಗಿದಿವೆ. ಇನ್ನು ಬಿಜೆಪಿಯ ಚೌಕಿದಾರ್ ಕತೆ ಕೂಡಾ ಈ ಚುನಾವಣೆಯಲ್ಲಿ ಮುಗಿಯಲಿದೆ. ಚೌಕಿದಾರರ ಹೊಸ ನಾಟಕಗಳು ಈ ಚುನಾವಣೆಯಲ್ಲಿ ನಡೆಯುವುದಿಲ್ಲ ಎಂದರು.

ಮಾಯಾವತಿ

ಕಳೆದ 5 ವರ್ಷಗಳ ಮೋದಿ ಅವಧಿ, ಬರೀ ಘೋಷಣೆಗಳಲ್ಲಿಯೇ ಮುಗಿದಿದೆ. ಇದರಿಂದ ಸಾಮಾನ್ಯ ಜನರಿಗೆ ಯಾವುದೇ ಅನುಕೂಲವಾಗಿಲ್ಲ ಎಂದು ವಾಗ್ದಾಳಿ ನಡೆಸಿದರು. ವಿರೋಧ ಪಕ್ಷದವರನ್ನು ಬೆದರಿಸಲು ಬಿಜೆಪಿ ಆದಾಯ ತೆರಿಗೆ ಇಲಾಖೆಯನ್ನು ಬಳಸಿಕೊಳ್ಳುತ್ತಿದೆ. ದೇಶವನ್ನು ಬಿಜೆಪಿ ಸರ್ಕಾರ ಸುರಕ್ಷಿತವಾಗಿ ಇಟ್ಟಿಲ್ಲ. ದೇಶದ ಭದ್ರತೆ ವಿಚಾರದಲ್ಲೂ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದರು.

ನಾವು ಚುನಾವಣೆ ಪ್ರಣಾಳಿಕೆ ಮೂಲಕ ಸುಳ್ಳು ಹೇಳುವುದಿಲ್ಲ. ನಮ್ಮ ಸರ್ಕಾರ ಕೇಂದ್ರದಲ್ಲಿ ಅಧಿಕಾರಿಕ್ಕೆ ಬಂದರೆ ಬಡವರಿಗೆ 6 ಸಾವಿರ ರೂಪಾಯಿ ಹಣ ಕೊಡುವ ಚಿಂತನೆ ಮಾಡಿದ್ದು, ಆ ಮೂಲಕ ಬಡತನ ನಿರ್ಮೂಲನೆಗೆ ಪಣ ತೊಡುವುದಾಗಿ ಹೇಳಿದರು. ಈ ಬಾರಿ ಕರ್ನಾಟಕದಿಂದಲೂ ಬಿಎಸ್ಪಿ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

Intro:ಮೈಸೂರು: ಚೌಕಿದಾರ ಹೊಸ ನಾಟಕವು ಕೂಡ ಈ ಚುನಾವಣೆಯಲ್ಲಿ ನಡೆಯುವುದಿಲ್ಲ ಇವರ ಎಲ್ಲಾ ನಾಟಕಗಳು ಈ ಲೋಕಸಭೆ ಚುನಾವಣೆಯಲ್ಲಿ ಮುಗಿಯುತ್ತವೆ ಎಂದು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಚುನಾವಣಾ ರ್ಯಾಲಿಯಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.


Body:ಇಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಬಿಎಸ್ಪಿ ರ್ಯಾಲಿಯಲ್ಲಿ ಮಾಯಾವತಿ ಮಾತನಾಡಿ ಸ್ವತಂತ್ರ ನಂತರ ತುಂಬಾ ವರ್ಷಗಳ ಕಾಲ ಕಾಂಗ್ರೆಸ್ ಬಿಜೆಪಿ ಹಾಗೂ ಇತರ ಪಕ್ಷಗಳ ಕೈಯಲ್ಲಿ ಕೇಂದ್ರದ ಅಧಿಕಾರವಿತ್ತು ಕಾಂಗ್ರೆಸ್ ಅವರ ಪ್ರಚಾರಗಳು, ನಾಟಕಗಳು ಮುಗಿದಿದವೆ ಇನ್ನು ಬಿಜೆಪಿಯ ಚೌಕಿದಾರ್ ಕತೆಯು ಈ ಚುನಾವಣೆಯಲ್ಲಿ ಮುಗಿಯಲಿದೆ ಚೌಕಿದಾರರ ಹೊಸ ನಾಟಕಗಳು ಕೂಡ ಈ ಚುನಾವಣೆಯಲ್ಲಿ ನಡೆಯುವುದಿಲ್ಲ ಇವರ ಎಲ್ಲಾ ಕತೆಯು ಈ ಲೋಕಸಭಾ ಚುನಾವಣೆಯಲ್ಲಿ ಮುಗಿಯಲಿದೆ.
ಕಳೆದ ೫ ವರ್ಷಗಳಲ್ಲಿ ಕೇಂದ್ರ ಸರ್ಕಾರ ಮೋದಿ ಬರಿ ಘೋಷಣೆಗಳಲ್ಲೆ ಮುಗಿದಿದೆ ಸಾಮಾನ್ಯ ಜನರಿಗೆ ಯಾವುದೇ ಅನುಕೂಲವಾಗಿಲ್ಲ ಎಂದು ವಾಗ್ದಾಳಿ ನಡೆಸಿದ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಐಟಿ ಅಧಿಕಾರಿಗಳು ವಿರೋಧ ಪಕ್ಷದವರನ್ನು ಬೆದರಿಸಲು ಬಿಜೆಪಿ ಬಳಸಿಕೊಳ್ಳುತ್ತಿದೆ.
ದೇಶವನ್ನು ಬಿಜೆಪಿ ಸರ್ಕಾರ ಸುರಕ್ಷಿತವಾಗಿ ಇಟ್ಟಿಲ್ಲ ದೇಶದ ಭದ್ರತೆ ವಿಚಾರದಲ್ಲೂ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದರು.
ನಾವು ಪ್ರಣಾಳಿಕೆ ಮೂಲಕ ಸುಳ್ಳನ್ನು ಹೇಳುವುದಿಲ್ಲ ನಮ್ಮ ಸರ್ಕಾರ ಕೇಂದ್ರದಲ್ಲಿ ಅಧಿಕಾರಿಕ್ಕೆ ಬಂದರೆ ಬಡವರಿಗೆ ೬ ಸಾವಿರ ರೂಪಾಯಿ ಹಣ ಕೊಡುವ ಚಿಂತನೆ ಮಾಡಿದ್ದು ಆ ಮೂಲಕ ಬಡತನ ನಿರ್ಮೂಲನೆಗೆ ಪಣ ತೊಡುವುದಾಗಿ ಹೇಳಿದ ಮಾಯಾವತಿ ಉತ್ತರಪ್ರದೇಶದಲ್ಲಿ ೮೦ ಲೋಕಸಭಾ ಕ್ಷೇತ್ರಗಳಿವೆ ಅದರಲ್ಲಿ ಬಿಜೆಪಿ ೧ ಕ್ಷೇತ್ರವನ್ನು ಗೆಲ್ಲಲೂ ಆಗದ ರೀತಿಯಲ್ಲಿ ನಮ್ಮ ಮೈತ್ರಿ ಎಲ್ಲಾ ಕ್ಷೇತ್ರಗಳನ್ನು ಗೆಲ್ಲಲಿದೆ ಎಂದ ಮಾಯಾವತಿ ಈ ಬಾರಿ ಕರ್ನಾಟಕದಿಂದಲೂ ಬಿಎಸ್ಪಿ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಮನವಿಮಾಡಿದ ಇವರು ಕಾರ್ಯಕ್ರಮದಲ್ಲಿ ಮಕ್ಕಳ ನೈತ್ಯ ನೋಡಿ ಭಾವುಕರಾದ ಘಟನೆಯು ಸಹ ನಡೆಯಿತು.


Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.