ETV Bharat / state

ಉದ್ಯಮಿ ತಂದೆ ಮತ್ತು ಪುತ್ರನ ಅಪಹರಣ ಕೇಸ್​: ಮಾಜಿ ನೌಕರ ಸೇರಿ 10 ಮಂದಿಯ ಬಂಧನ

author img

By

Published : Feb 14, 2023, 7:45 AM IST

ಉದ್ಯಮಿ ತಂದೆ ಹಾಗೂ ಮಗನ ಅಪಹರಣ- ಮಾಜಿ ನೌಕರನೇ ಕೃತ್ಯದ ಸೂತ್ರಧಾರ- 10 ಆರೋಪಿಗಳನ್ನು ಬಂಧಿಸಿದ ಮೈಸೂರು ಜಿಲ್ಲಾ ಪೊಲೀಸರು

arrested
10 ಮಂದಿಯ ಬಂಧನ

ಮೈಸೂರು: ಉದ್ಯಮಿ ತಂದೆ ಹಾಗೂ ಮಗನನ್ನು ಅಪಹರಣ ಮಾಡಿ ಹಣ ಪಡೆದು ಬಿಟ್ಟು ಕಳುಹಿಸಿದ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಸಂಸ್ಥೆಯ ನೌಕರನೇ ನಿಜವಾದ ಖಳನಾಯಕ ಎಂಬ ಸತ್ಯಾಂಶ ಹೊರಬಿದ್ದಿದೆ. ಈ ಪ್ರಕರಣದ ಆರೋಪಿಗಳ ಪತ್ತೆ ಹಚ್ಚುವುದು ಮೈಸೂರು ಜಿಲ್ಲಾ ಪೊಲೀಸರಿಗೆ ಸವಾಲಾಗಿತ್ತು. ಅಪಹರಣಕಾರರು ಉದ್ಯಮಿ ಮತ್ತು ಪುತ್ರನ ಕಣ್ಣಿಗೆ ಬಟ್ಟೆ ಕಟ್ಟಿದ್ದಲ್ಲದೇ, ಬ್ಲಾಕ್​ಮೇಲ್​ ಮಾಡಲು ಉದ್ಯಮಿಯ ಮೊಬೈಲ್​ ಫೋನ್​ ಅನ್ನೇ ಬಳಕೆ ಮಾಡಿದ್ದರು.

ಆದರೆ ವರ್ಷದ ಹಿಂದೆ ಉದ್ಯಮಿಗೆ ಅಪಹರಿಸುವುದಾಗಿ ಬೆದರಿಕೆ ಹಾಕಿದ್ದವನ ಬಗ್ಗೆ ಸಿಕ್ಕ ಸಣ್ಣ ಸುಳಿವಿನಿಂದ ಪೊಲೀಸರು ಇಡೀ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ್ದಾರೆ. ಉದ್ಯಮಿಯ ಕಾರ್ಖಾನೆಯಲ್ಲಿದ್ದ ಮಾಜಿ ನೌಕರನೇ ಅಪಹರಣದ ಸೂತ್ರಧಾರ ಎಂಬುದು ತನಿಖೆ ವೇಳೆ ಬಯಲಾಗಿದೆ. ಉದ್ಯಮಿ ದೀಪಕ್ ಕಾರ್ಖಾನೆಯ ಮಾಜಿ ನೌಕರನೇ ಅಪಹರಣಕ್ಕೆ ಸ್ಕೆಚ್​ ಹಾಕಿದ್ದು, ಕೊನೆಗೂ ಆರೋಪಿಗಳನ್ನು ಮೈಸೂರು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.

ಘಟನೆ ನಡೆದ ವಾರದೊಳಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಒಟ್ಟು 10 ಮಂದಿಯನ್ನು ಬಂಧಿಸಿದ್ದು, ಇನ್ನೋರ್ವನ ಬಂಧನಕ್ಕೆ ಶೋಧ ಕಾರ್ಯ ನಡೆಸಲಾಗುತ್ತಿದೆ. ಆರೋಪಿಗಳಿಂದ 21 ಲಕ್ಷದ ಹತ್ತು ಸಾವಿರ ರೂ. ನಗದು, ಕೃತ್ಯಕ್ಕೆ ಬಳಸಿದ್ದ ಕಾರು, ಬೈಕ್‌ಗಳು ಮತ್ತು ಮೊಬೈಲ್ ಫೋನ್‌ಗಳ ಜೊತೆ ಮಾರಾಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್​ಪಿ ಸೀಮಾ ಲಾಟ್ಕರ್ ಸೋಮವಾರ ಮಾಧ್ಯಮಗೋಷ್ಟಿಯಲ್ಲಿ ತಿಳಿಸಿದ್ದಾರೆ.

ಏನಿದು ಪ್ರಕರಣ?: ಫೆಬ್ರವರಿ 6 ರಂದು ಮಧ್ಯಾಹ್ನದ ವೇಳೆ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಅಡಕನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಹರ್ಷ ಇಂಪೆಕ್ಸ್ ಫ್ಯಾಕ್ಟರಿಗೆ ಬೈಕ್ ಮತ್ತು ಕಾರಿನಲ್ಲಿ ಬಂದ ಅಪಹರಣಕಾರರು ಮಾರಕಾಸ್ತ್ರಗಳಿಂದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರನ್ನು ಬೆದರಿಸಿ ಒಂದು ಕೋಣೆಯಲ್ಲಿ ಕೂಡಿ ಹಾಕಿದ್ದರು. ಬಳಿಕ ಕಾರ್ಖಾನೆ ಮಾಲೀಕರಾದ ದೀಪಕ್ ಮತ್ತು ಹರ್ಷ ಅವರನ್ನು ಅವರದೇ ಕಾರಿನಲ್ಲಿ ಅಪಹರಿಸಿದ್ದರು. ಈ ವೇಳೆ ಅಪ್ಪ ಮಗನ ಕಣ್ಣಿಗೆ ಬಟ್ಟೆ ಕಟ್ಟಿದ್ದರು.

ಅಪಹರಣದ ಬಳಿಕ ದೀಪಕ್ ಕುಟುಂಬದವರಿಗೆ ದೀಪಕ್ ಮೊಬೈಲ್ ಫೋನ್‌ನಿಂದ ಕರೆ ಮಾಡಿ ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಅಷ್ಟು ಹಣ ಸಕಾಲದಲ್ಲಿ ಹೊಂದಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಕ್ಕೆ ಕೊನೆಗೆ 35 ಲಕ್ಷ ರೂಪಾಯಿ ನೀಡುವಂತೆ ಒತ್ತಡ ಹೇರಿದ್ದಾರೆ. ಅಷ್ಟು ಹಣವನ್ನು ದೀಪಕ್ ಕುಟುಂಬದವರು ಹೊಂದಿಸಿ ಸ್ನೇಹಿತರ ಮೂಲಕ ಕಳುಹಿಸಿಕೊಟ್ಟಿದ್ದಾರೆ. ಹಣ ಪಡೆದ ಅಪಹರಣಕಾರರು ಅವರಿಬ್ಬರನ್ನು ಬನ್ನೂರು ರಸ್ತೆಯಲ್ಲಿನ ಜಲಮಹಲ್ ಬಳಿ ಬಿಟ್ಟು ಪರಾರಿಯಾಗಿದ್ದಾರೆ ಎಂದು ಎಸ್​ಪಿ ಮಾಹಿತಿ ನೀಡಿದರು.

ಅಪಹರಣಕ್ಕೂ ಮುಂಚೆ ಬೆದರಿಕೆ ಕರೆ: ಉದ್ಯಮಿ ದೀಪಕ್ ಅವರ ವ್ಯವಹಾರದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದ ಅದೇ ಕಾರ್ಖಾನೆಯ ಮಾಜಿ ನೌಕರ, ಹಣಕ್ಕಾಗಿ ಬೇಡಿಕೆ ಇಟ್ಟಿದ್ದನಲ್ಲದೇ ಬೆದರಿಕೆ ಹಾಕಿದ್ದ. ಆದರೆ ಉದ್ಯಮಿ ದೀಪಕ್ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡದೆ ನಿರ್ಲಕ್ಷ್ಯ ವಹಿಸಿದ್ದರು. ಈ ಮಾಹಿತಿಯನ್ನು ಮಾಜಿ ನೌಕರ ಅಪಹರಣಕಾರರ ಗುಂಪಿನಲ್ಲಿದ್ದ ಒಬ್ಬನಲ್ಲಿ ಹಂಚಿಕೊಂಡಿದ್ದಾನೆ. ಉದ್ಯಮಿಯನ್ನು ಅಪಹರಿಸಿದರೆ ಕೋಟಿಗಟ್ಟಲ್ಲೇ ಹಣ ಸಂಪಾದಿಸಬಹುದು ಎಂದು ಆತ ಹೇಳಿದ್ದಾನೆ. ತಕ್ಷಣ ಕಾರ್ಯ ಪ್ರವೃತ್ತನಾದ ಮೊದಲನೇ ಆರೋಪಿ, ಮೂರ್ನಾಲ್ಕು ಮಂದಿ ಸ್ನೇಹಿತರೊಂದಿಗೆ ಮಾತನಾಡಿ 11 ಮಂದಿಯ ತಂಡವನ್ನು ರಚಿಸಿಕೊಂಡು ಅಪಹರಣ ಕೃತ್ಯ ನಡೆಸಿದ್ದಾರೆ ಎಂದು ವಿವರಿಸಿದರು.

ಇದನ್ನೂ ಓದಿ: ಪತ್ನಿಯ ಕತ್ತು ಸೀಳಿ ಹತ್ಯೆ ಮಾಡಿದ ಪತಿ; ಹಾಡಹಗಲೇ ಅಶೋಕನಗರ ವ್ಯಾಪ್ತಿಯಲ್ಲಿ ಘಟನೆ

ಪ್ರಕರಣದಲ್ಲಿ ಮಂಡ್ಯದ ಇಬ್ಬರು, ಬನ್ನೂರಿನ ನಾಲ್ವರು, ತುಮಕೂರಿನ ಇಬ್ಬರು ಮತ್ತು ಕೆ.ಆರ್ ನಗರದ ಇಬ್ಬರು ಭಾಗಿಯಾಗಿದ್ದರು. ಒಂದನೇ ಆರೋಪಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಇತ್ತೀಚೆಗೆ ಬಿಡುಗಡೆಯಾಗಿದ್ದ. ಆತನ ವಿರುದ್ದ ಮಂಡ್ಯ, ಮೈಸೂರು, ಕೆ.ಆರ್ ಪೇಟೆ ಠಾಣೆಗಳಲ್ಲಿ ಕೊಲೆ, ಅಕ್ರಮ ಶಸ್ತ್ರಾಸ್ತ್ರ ಕಾಯಿದೆ ಸೇರಿ 9 ಪ್ರಕರಣಗಳು ದಾಖಲಾಗಿದೆ. ಎರಡನೇ ಆರೋಪಿ ವಿರುದ್ಧ ಆರ್ಮ್ಸ್ ಆಕ್ಟ್​​ ನಡಿ ಪ್ರಕರಣ, ಮೂರನೇ ಆರೋಪಿ ವಿರುದ್ದ ಐದು ಕಳ್ಳತನ ಪ್ರಕರಣ, ಐದು ಮತ್ತು 7ನೇ ಆರೋಪಿ ವಿರುದ್ಧ ಹಲ್ಲೆ ಪ್ರಕರಣಗಳು ದಾಖಲಾಗಿವೆ.

ದೇವರಿಗೆ ಹರಕೆ ಹೊತ್ತುಕೊಂಡಿದ್ದ ಆರೋಪಿಗಳು: ಮಾಡುವ ಕೆಲಸದ ಯಶಸ್ಸಿಗಾಗಿ ಹರಕೆ ಹೊತ್ತುಕೊಳ್ಳುವುದು ಸಾಮಾನ್ಯ. ಅದರಂತೆ ಉದ್ಯಮಿಯ ಅಪಹರಣದ ಕೆಲಸ ಯಶಸ್ವಿಯಾಗಲು ಆರೋಪಿಗಳು ಹರಕೆ ಹೊತ್ತುಕೊಂಡಿದ್ದರು. ಕೃತ್ಯ ಯಶಸ್ವಿಯಾದ ಬಳಿಕ ಹರಕೆಯಂತೆ 35 ಲಕ್ಷ ರೂ. ನಲ್ಲಿ 55 ಸಾವಿರ ರೂಪಾಯಿಯನ್ನು ದೇವರ ಹುಂಡಿಗೆ ಹಾಕಿದ್ದರು.

ಅಪಹರಿಸಿ ಕಾರಿನಲ್ಲಿ ಸುತ್ತಾಟ: ಮಧ್ಯಾಹ್ನ 12.50ರ ಹೊತ್ತಿಗೆ ಉದ್ಯಮಿ ದೀಪಕ್​ ಮತ್ತು ಅವರ ಪುತ್ರನನ್ನು ಅಪಹರಿಸಿದ ದುಷ್ಕರ್ಮಿಗಳು ರಾತ್ರಿ 7 ಗಂಟೆಯವರೆಗೂ ಬಿಡದೇ ಕಾರಿನಲ್ಲಿಯೇ ನಂಜನಗೂಡು, ಮೈಸೂರು ನಗರ ಮತ್ತು ತಾಲೂಕಿನ ಹೆದ್ದಾರಿಗಳಲ್ಲಿ ಸಂಚರಿಸುತ್ತ ಸುತ್ತಾಟ ನಡೆಸಿದ್ದರು. ಮೂರ್ನಾಲ್ಕು ಕಡೆ ಹಣ ತರುವಂತೆ ಹೇಳಿ ಕೊನೆಗೂ ಒಂದು ಕಡೆಯಲ್ಲಿ ಹಣ ಪಡೆದು ನಂತರ ಕಾರಿನ ಸಮೇತ ಅಪ್ಪ-ಮಗನನ್ನು ಬಿಟ್ಟು ಪರಾರಿಯಾಗಿದ್ದಾರೆ.

ಬಿಡುಗಡೆಯಾದ ತಕ್ಷಣ ಕಾರ್ಯಾಚರಣೆ: ಘಟನೆಯ ಮಾಹಿತಿ ಪಡೆದ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿದರೆ, ಅಪಹರಣಕ್ಕೊಳಗಾದವರ ಜೀವಕ್ಕೆ ತೊಂದರೆಯಾಗಬಹುದು ಎಂದು ಅವರು ಬಿಡುಗಡೆಯಾಗುವವರೆಗೂ ಸುಮ್ಮನಿದ್ದು, ನಂತರ ಶೋಧ ಕಾರ್ಯ ನಡೆಸಿದ್ದಾರೆ. ಜಿಲ್ಲೆಯ ಹೆದ್ದಾರಿ ಮತ್ತು ಚೆಕ್​ಪೋಸ್ಟ್‌ಗಳನ್ನು ತಪಾಸಣೆ ಮಾಡಿದ್ದಾರೆ. ಅಷ್ಟರಲ್ಲಿ ದುಷ್ಕರ್ಮಿಗಳು ಪರಾರಿಯಾಗಿದ್ದು, ಯಾವುದೇ ಸುಳಿವು ಲಭ್ಯವಾಗಿರಲಿಲ್ಲ. ಬಳಿಕ ಉದ್ಯಮಿ ದೀಪಕ್​ ನೀಡಿದ ಸಣ್ಣ ಮಾಹಿತಿ ಮೇರೆಗೆ ತನಿಖೆ ನಡೆಸಿದಾಗ ಆರೋಪಿಗಳು ಬಲೆಗೆ ಬಿದ್ದಿದ್ದಾರೆ. ತನಿಖಾ ತಂಡದಲ್ಲಿದ್ದ ಪೊಲೀಸರಿಗೆ 25 ಸಾವಿರ ರೂಪಾಯಿಯ ಬಹುಮಾನ ನೀಡಲಾಗುತ್ತಿದೆ ಎಂದು ಎಸ್​ಪಿ ಸೀಮಾ ಲಾಟ್ಕರ್ ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ನಂಜನಗೂಡು ಉಪ ವಿಭಾಗದ ಡಿವೈಎಸ್​ಪಿ ಗೋವಿಂದ ರಾಜು, ನಂಜನಗೂಡು ಗ್ರಾಮಾಂತರ ಠಾಣೆಯ ಇನ್ಸ್‌ಪೆಕ್ಟರ್ ಶಿವನಂಜ ಶೆಟ್ಟಿ, ಎಸ್‌ಐಗಳಾದ ಚೇತನ್, ರಮೇಶ್ ಕರಕಿಕಟ್ಟಿ, ಕೃಷ್ಣಕಾಂತಕೋಳಿ, ಕಮಲಾಕ್ಷಿ, ಸಿ.ಕೆ. ಮಹೇಶ್, ಪ್ರೊಬೇಷನರಿ ಎಸ್‌ಐ ಚರಣ್ ಗೌಡ, ಎಎಸ್‌ಐಗಳಾದ ಶಿವಕುಮಾರ್, ವಸಂತ ಕುಮಾರ್, ಸಿಬ್ಬಂದಿಗಳಾದ ಸುರೇಶ, ವಸಂತ ಕುಮಾರ್, ಸುನೀತ, ಕೃಷ್ಣ, ಭಾಸ್ಕರ್, ಅಬ್ದುಲ್ ಲತೀಫ್, ನಿಂಗರಾಜು, ಸುರೇಶ, ಸುಶೀಲ್ ಕುಮಾರ್, ರಾಜು, ಚೇತನ್, ವಿಜಯ್ ಕುಮಾರ್, ಮಂಜು, ಚೆಲುವರಾಜು ಇದ್ದರು.

ಇದನ್ನೂ ಓದಿ: ಬೆಳಗಾವಿಯಲ್ಲಿ ಎಫ್‌ಡಿಎ ಅನುಮಾನಾಸ್ಪದ ಸಾವು.. ಆತ್ಮಹತ್ಯೆ ಶಂಕೆ

ಮೈಸೂರು: ಉದ್ಯಮಿ ತಂದೆ ಹಾಗೂ ಮಗನನ್ನು ಅಪಹರಣ ಮಾಡಿ ಹಣ ಪಡೆದು ಬಿಟ್ಟು ಕಳುಹಿಸಿದ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಸಂಸ್ಥೆಯ ನೌಕರನೇ ನಿಜವಾದ ಖಳನಾಯಕ ಎಂಬ ಸತ್ಯಾಂಶ ಹೊರಬಿದ್ದಿದೆ. ಈ ಪ್ರಕರಣದ ಆರೋಪಿಗಳ ಪತ್ತೆ ಹಚ್ಚುವುದು ಮೈಸೂರು ಜಿಲ್ಲಾ ಪೊಲೀಸರಿಗೆ ಸವಾಲಾಗಿತ್ತು. ಅಪಹರಣಕಾರರು ಉದ್ಯಮಿ ಮತ್ತು ಪುತ್ರನ ಕಣ್ಣಿಗೆ ಬಟ್ಟೆ ಕಟ್ಟಿದ್ದಲ್ಲದೇ, ಬ್ಲಾಕ್​ಮೇಲ್​ ಮಾಡಲು ಉದ್ಯಮಿಯ ಮೊಬೈಲ್​ ಫೋನ್​ ಅನ್ನೇ ಬಳಕೆ ಮಾಡಿದ್ದರು.

ಆದರೆ ವರ್ಷದ ಹಿಂದೆ ಉದ್ಯಮಿಗೆ ಅಪಹರಿಸುವುದಾಗಿ ಬೆದರಿಕೆ ಹಾಕಿದ್ದವನ ಬಗ್ಗೆ ಸಿಕ್ಕ ಸಣ್ಣ ಸುಳಿವಿನಿಂದ ಪೊಲೀಸರು ಇಡೀ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ್ದಾರೆ. ಉದ್ಯಮಿಯ ಕಾರ್ಖಾನೆಯಲ್ಲಿದ್ದ ಮಾಜಿ ನೌಕರನೇ ಅಪಹರಣದ ಸೂತ್ರಧಾರ ಎಂಬುದು ತನಿಖೆ ವೇಳೆ ಬಯಲಾಗಿದೆ. ಉದ್ಯಮಿ ದೀಪಕ್ ಕಾರ್ಖಾನೆಯ ಮಾಜಿ ನೌಕರನೇ ಅಪಹರಣಕ್ಕೆ ಸ್ಕೆಚ್​ ಹಾಕಿದ್ದು, ಕೊನೆಗೂ ಆರೋಪಿಗಳನ್ನು ಮೈಸೂರು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.

ಘಟನೆ ನಡೆದ ವಾರದೊಳಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಒಟ್ಟು 10 ಮಂದಿಯನ್ನು ಬಂಧಿಸಿದ್ದು, ಇನ್ನೋರ್ವನ ಬಂಧನಕ್ಕೆ ಶೋಧ ಕಾರ್ಯ ನಡೆಸಲಾಗುತ್ತಿದೆ. ಆರೋಪಿಗಳಿಂದ 21 ಲಕ್ಷದ ಹತ್ತು ಸಾವಿರ ರೂ. ನಗದು, ಕೃತ್ಯಕ್ಕೆ ಬಳಸಿದ್ದ ಕಾರು, ಬೈಕ್‌ಗಳು ಮತ್ತು ಮೊಬೈಲ್ ಫೋನ್‌ಗಳ ಜೊತೆ ಮಾರಾಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್​ಪಿ ಸೀಮಾ ಲಾಟ್ಕರ್ ಸೋಮವಾರ ಮಾಧ್ಯಮಗೋಷ್ಟಿಯಲ್ಲಿ ತಿಳಿಸಿದ್ದಾರೆ.

ಏನಿದು ಪ್ರಕರಣ?: ಫೆಬ್ರವರಿ 6 ರಂದು ಮಧ್ಯಾಹ್ನದ ವೇಳೆ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಅಡಕನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಹರ್ಷ ಇಂಪೆಕ್ಸ್ ಫ್ಯಾಕ್ಟರಿಗೆ ಬೈಕ್ ಮತ್ತು ಕಾರಿನಲ್ಲಿ ಬಂದ ಅಪಹರಣಕಾರರು ಮಾರಕಾಸ್ತ್ರಗಳಿಂದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರನ್ನು ಬೆದರಿಸಿ ಒಂದು ಕೋಣೆಯಲ್ಲಿ ಕೂಡಿ ಹಾಕಿದ್ದರು. ಬಳಿಕ ಕಾರ್ಖಾನೆ ಮಾಲೀಕರಾದ ದೀಪಕ್ ಮತ್ತು ಹರ್ಷ ಅವರನ್ನು ಅವರದೇ ಕಾರಿನಲ್ಲಿ ಅಪಹರಿಸಿದ್ದರು. ಈ ವೇಳೆ ಅಪ್ಪ ಮಗನ ಕಣ್ಣಿಗೆ ಬಟ್ಟೆ ಕಟ್ಟಿದ್ದರು.

ಅಪಹರಣದ ಬಳಿಕ ದೀಪಕ್ ಕುಟುಂಬದವರಿಗೆ ದೀಪಕ್ ಮೊಬೈಲ್ ಫೋನ್‌ನಿಂದ ಕರೆ ಮಾಡಿ ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಅಷ್ಟು ಹಣ ಸಕಾಲದಲ್ಲಿ ಹೊಂದಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಕ್ಕೆ ಕೊನೆಗೆ 35 ಲಕ್ಷ ರೂಪಾಯಿ ನೀಡುವಂತೆ ಒತ್ತಡ ಹೇರಿದ್ದಾರೆ. ಅಷ್ಟು ಹಣವನ್ನು ದೀಪಕ್ ಕುಟುಂಬದವರು ಹೊಂದಿಸಿ ಸ್ನೇಹಿತರ ಮೂಲಕ ಕಳುಹಿಸಿಕೊಟ್ಟಿದ್ದಾರೆ. ಹಣ ಪಡೆದ ಅಪಹರಣಕಾರರು ಅವರಿಬ್ಬರನ್ನು ಬನ್ನೂರು ರಸ್ತೆಯಲ್ಲಿನ ಜಲಮಹಲ್ ಬಳಿ ಬಿಟ್ಟು ಪರಾರಿಯಾಗಿದ್ದಾರೆ ಎಂದು ಎಸ್​ಪಿ ಮಾಹಿತಿ ನೀಡಿದರು.

ಅಪಹರಣಕ್ಕೂ ಮುಂಚೆ ಬೆದರಿಕೆ ಕರೆ: ಉದ್ಯಮಿ ದೀಪಕ್ ಅವರ ವ್ಯವಹಾರದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದ ಅದೇ ಕಾರ್ಖಾನೆಯ ಮಾಜಿ ನೌಕರ, ಹಣಕ್ಕಾಗಿ ಬೇಡಿಕೆ ಇಟ್ಟಿದ್ದನಲ್ಲದೇ ಬೆದರಿಕೆ ಹಾಕಿದ್ದ. ಆದರೆ ಉದ್ಯಮಿ ದೀಪಕ್ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡದೆ ನಿರ್ಲಕ್ಷ್ಯ ವಹಿಸಿದ್ದರು. ಈ ಮಾಹಿತಿಯನ್ನು ಮಾಜಿ ನೌಕರ ಅಪಹರಣಕಾರರ ಗುಂಪಿನಲ್ಲಿದ್ದ ಒಬ್ಬನಲ್ಲಿ ಹಂಚಿಕೊಂಡಿದ್ದಾನೆ. ಉದ್ಯಮಿಯನ್ನು ಅಪಹರಿಸಿದರೆ ಕೋಟಿಗಟ್ಟಲ್ಲೇ ಹಣ ಸಂಪಾದಿಸಬಹುದು ಎಂದು ಆತ ಹೇಳಿದ್ದಾನೆ. ತಕ್ಷಣ ಕಾರ್ಯ ಪ್ರವೃತ್ತನಾದ ಮೊದಲನೇ ಆರೋಪಿ, ಮೂರ್ನಾಲ್ಕು ಮಂದಿ ಸ್ನೇಹಿತರೊಂದಿಗೆ ಮಾತನಾಡಿ 11 ಮಂದಿಯ ತಂಡವನ್ನು ರಚಿಸಿಕೊಂಡು ಅಪಹರಣ ಕೃತ್ಯ ನಡೆಸಿದ್ದಾರೆ ಎಂದು ವಿವರಿಸಿದರು.

ಇದನ್ನೂ ಓದಿ: ಪತ್ನಿಯ ಕತ್ತು ಸೀಳಿ ಹತ್ಯೆ ಮಾಡಿದ ಪತಿ; ಹಾಡಹಗಲೇ ಅಶೋಕನಗರ ವ್ಯಾಪ್ತಿಯಲ್ಲಿ ಘಟನೆ

ಪ್ರಕರಣದಲ್ಲಿ ಮಂಡ್ಯದ ಇಬ್ಬರು, ಬನ್ನೂರಿನ ನಾಲ್ವರು, ತುಮಕೂರಿನ ಇಬ್ಬರು ಮತ್ತು ಕೆ.ಆರ್ ನಗರದ ಇಬ್ಬರು ಭಾಗಿಯಾಗಿದ್ದರು. ಒಂದನೇ ಆರೋಪಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಇತ್ತೀಚೆಗೆ ಬಿಡುಗಡೆಯಾಗಿದ್ದ. ಆತನ ವಿರುದ್ದ ಮಂಡ್ಯ, ಮೈಸೂರು, ಕೆ.ಆರ್ ಪೇಟೆ ಠಾಣೆಗಳಲ್ಲಿ ಕೊಲೆ, ಅಕ್ರಮ ಶಸ್ತ್ರಾಸ್ತ್ರ ಕಾಯಿದೆ ಸೇರಿ 9 ಪ್ರಕರಣಗಳು ದಾಖಲಾಗಿದೆ. ಎರಡನೇ ಆರೋಪಿ ವಿರುದ್ಧ ಆರ್ಮ್ಸ್ ಆಕ್ಟ್​​ ನಡಿ ಪ್ರಕರಣ, ಮೂರನೇ ಆರೋಪಿ ವಿರುದ್ದ ಐದು ಕಳ್ಳತನ ಪ್ರಕರಣ, ಐದು ಮತ್ತು 7ನೇ ಆರೋಪಿ ವಿರುದ್ಧ ಹಲ್ಲೆ ಪ್ರಕರಣಗಳು ದಾಖಲಾಗಿವೆ.

ದೇವರಿಗೆ ಹರಕೆ ಹೊತ್ತುಕೊಂಡಿದ್ದ ಆರೋಪಿಗಳು: ಮಾಡುವ ಕೆಲಸದ ಯಶಸ್ಸಿಗಾಗಿ ಹರಕೆ ಹೊತ್ತುಕೊಳ್ಳುವುದು ಸಾಮಾನ್ಯ. ಅದರಂತೆ ಉದ್ಯಮಿಯ ಅಪಹರಣದ ಕೆಲಸ ಯಶಸ್ವಿಯಾಗಲು ಆರೋಪಿಗಳು ಹರಕೆ ಹೊತ್ತುಕೊಂಡಿದ್ದರು. ಕೃತ್ಯ ಯಶಸ್ವಿಯಾದ ಬಳಿಕ ಹರಕೆಯಂತೆ 35 ಲಕ್ಷ ರೂ. ನಲ್ಲಿ 55 ಸಾವಿರ ರೂಪಾಯಿಯನ್ನು ದೇವರ ಹುಂಡಿಗೆ ಹಾಕಿದ್ದರು.

ಅಪಹರಿಸಿ ಕಾರಿನಲ್ಲಿ ಸುತ್ತಾಟ: ಮಧ್ಯಾಹ್ನ 12.50ರ ಹೊತ್ತಿಗೆ ಉದ್ಯಮಿ ದೀಪಕ್​ ಮತ್ತು ಅವರ ಪುತ್ರನನ್ನು ಅಪಹರಿಸಿದ ದುಷ್ಕರ್ಮಿಗಳು ರಾತ್ರಿ 7 ಗಂಟೆಯವರೆಗೂ ಬಿಡದೇ ಕಾರಿನಲ್ಲಿಯೇ ನಂಜನಗೂಡು, ಮೈಸೂರು ನಗರ ಮತ್ತು ತಾಲೂಕಿನ ಹೆದ್ದಾರಿಗಳಲ್ಲಿ ಸಂಚರಿಸುತ್ತ ಸುತ್ತಾಟ ನಡೆಸಿದ್ದರು. ಮೂರ್ನಾಲ್ಕು ಕಡೆ ಹಣ ತರುವಂತೆ ಹೇಳಿ ಕೊನೆಗೂ ಒಂದು ಕಡೆಯಲ್ಲಿ ಹಣ ಪಡೆದು ನಂತರ ಕಾರಿನ ಸಮೇತ ಅಪ್ಪ-ಮಗನನ್ನು ಬಿಟ್ಟು ಪರಾರಿಯಾಗಿದ್ದಾರೆ.

ಬಿಡುಗಡೆಯಾದ ತಕ್ಷಣ ಕಾರ್ಯಾಚರಣೆ: ಘಟನೆಯ ಮಾಹಿತಿ ಪಡೆದ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿದರೆ, ಅಪಹರಣಕ್ಕೊಳಗಾದವರ ಜೀವಕ್ಕೆ ತೊಂದರೆಯಾಗಬಹುದು ಎಂದು ಅವರು ಬಿಡುಗಡೆಯಾಗುವವರೆಗೂ ಸುಮ್ಮನಿದ್ದು, ನಂತರ ಶೋಧ ಕಾರ್ಯ ನಡೆಸಿದ್ದಾರೆ. ಜಿಲ್ಲೆಯ ಹೆದ್ದಾರಿ ಮತ್ತು ಚೆಕ್​ಪೋಸ್ಟ್‌ಗಳನ್ನು ತಪಾಸಣೆ ಮಾಡಿದ್ದಾರೆ. ಅಷ್ಟರಲ್ಲಿ ದುಷ್ಕರ್ಮಿಗಳು ಪರಾರಿಯಾಗಿದ್ದು, ಯಾವುದೇ ಸುಳಿವು ಲಭ್ಯವಾಗಿರಲಿಲ್ಲ. ಬಳಿಕ ಉದ್ಯಮಿ ದೀಪಕ್​ ನೀಡಿದ ಸಣ್ಣ ಮಾಹಿತಿ ಮೇರೆಗೆ ತನಿಖೆ ನಡೆಸಿದಾಗ ಆರೋಪಿಗಳು ಬಲೆಗೆ ಬಿದ್ದಿದ್ದಾರೆ. ತನಿಖಾ ತಂಡದಲ್ಲಿದ್ದ ಪೊಲೀಸರಿಗೆ 25 ಸಾವಿರ ರೂಪಾಯಿಯ ಬಹುಮಾನ ನೀಡಲಾಗುತ್ತಿದೆ ಎಂದು ಎಸ್​ಪಿ ಸೀಮಾ ಲಾಟ್ಕರ್ ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ನಂಜನಗೂಡು ಉಪ ವಿಭಾಗದ ಡಿವೈಎಸ್​ಪಿ ಗೋವಿಂದ ರಾಜು, ನಂಜನಗೂಡು ಗ್ರಾಮಾಂತರ ಠಾಣೆಯ ಇನ್ಸ್‌ಪೆಕ್ಟರ್ ಶಿವನಂಜ ಶೆಟ್ಟಿ, ಎಸ್‌ಐಗಳಾದ ಚೇತನ್, ರಮೇಶ್ ಕರಕಿಕಟ್ಟಿ, ಕೃಷ್ಣಕಾಂತಕೋಳಿ, ಕಮಲಾಕ್ಷಿ, ಸಿ.ಕೆ. ಮಹೇಶ್, ಪ್ರೊಬೇಷನರಿ ಎಸ್‌ಐ ಚರಣ್ ಗೌಡ, ಎಎಸ್‌ಐಗಳಾದ ಶಿವಕುಮಾರ್, ವಸಂತ ಕುಮಾರ್, ಸಿಬ್ಬಂದಿಗಳಾದ ಸುರೇಶ, ವಸಂತ ಕುಮಾರ್, ಸುನೀತ, ಕೃಷ್ಣ, ಭಾಸ್ಕರ್, ಅಬ್ದುಲ್ ಲತೀಫ್, ನಿಂಗರಾಜು, ಸುರೇಶ, ಸುಶೀಲ್ ಕುಮಾರ್, ರಾಜು, ಚೇತನ್, ವಿಜಯ್ ಕುಮಾರ್, ಮಂಜು, ಚೆಲುವರಾಜು ಇದ್ದರು.

ಇದನ್ನೂ ಓದಿ: ಬೆಳಗಾವಿಯಲ್ಲಿ ಎಫ್‌ಡಿಎ ಅನುಮಾನಾಸ್ಪದ ಸಾವು.. ಆತ್ಮಹತ್ಯೆ ಶಂಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.