ಮಂಡ್ಯ: ಆಷಾಢ ಮಾಸದ ನಾಲ್ಕನೇ ಶುಕ್ರವಾರದ ಅಂಗವಾಗಿ ಶ್ರೀರಂಗಪಟ್ಟಣದಲ್ಲಿ ಚಾಮುಂಡೇಶ್ವರಿಗೆ ಬಿಸ್ಕೆಟ್ ಮತ್ತು ಸಿಹಿ ತಿಂಡಿಗಳಿಂದ ಅಲಂಕಾರ ಮಾಡಿದ್ದು ಭಕ್ತ ಜನರನ್ನು ಆಕರ್ಷಣೆ ಮಾಡಿದೆ.
![chamundeshwari](https://etvbharatimages.akamaized.net/etvbharat/prod-images/12689524_thu-1.jpg)
ಶ್ರೀರಂಗಪಟ್ಟಣದ ಚಾಮುಂಡೇಶ್ವರಿ ಬೀದಿಯಲ್ಲಿರುವ ಚಾಮುಂಡೇಶ್ವರಿ ದೇವಾಲಯದಲ್ಲಿ ಕೊನೆಯ ಆಷಾಢ ಶುಕ್ರವಾರದ ಅಂಗವಾಗಿ ಚಾಮುಂಡೇಶ್ವರಿ ಗರ್ಭಗುಡಿಗೆ ಬಿಸ್ಕೆಟ್ ಸೇರಿದಂತೆ ಸಿಹಿ ತಿಂಡಿಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು.
![chamundeshwari](https://etvbharatimages.akamaized.net/etvbharat/prod-images/12689524_thu-2.jpg)
ಭಕ್ತರು ಕೂಡ ವಿಶೇಷ ಅಲಂಕಾರದಲ್ಲಿ ಕಂಗೊಳಿಸ್ತಿರುವ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದು ಪುನೀತರಾದರು.