ETV Bharat / state

ಸಿಎಂ ಬಿಎಸ್​ವೈ ಶೀಘ್ರ ಚೇತರಿಕೆಗಾಗಿ ಪೂಜೆ ಸಲ್ಲಿಸಿದ ಸಚಿವ ಡಾ‌. ಕೆ ಸಿ ನಾರಾಯಣಗೌಡ ದಂಪತಿ - Dr K C Narayanagowda made special pooja for B S Yadiyurappa in mandya

45 ವರ್ಷ ತುಂಬಿರುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಿ‌ ಹಾಗೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ..

k-c-narayanagowda-made-special-pooja
ಸಿ ಎಂ ಬಿಎಸ್​ವೈ ಗುಣಮುಖರಾಗಲೆಂದು ಪೂಜೆ ಸಲ್ಲಿಸಿದ ಸಚಿವ ಡಾ‌. ಕೆ ಸಿ ನಾರಾಯಣಗೌಡ
author img

By

Published : Apr 19, 2021, 9:46 PM IST

ಮಂಡ್ಯ : ಸಿಎಂ ಬಿ ಎಸ್​ ಯಡಿಯೂರಪ್ಪಗೆ ಕೊರೊನಾ ದೃಢಪಟ್ಟಿರುವುದರಿಂದ ಅವರು ಶೀಘ್ರ ಗುಣಮುಖರಾಗಲೆಂದು ಸಚಿವ ಡಾ‌. ಕೆ ಸಿ ನಾರಾಯಣಗೌಡ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಜಿಲ್ಲೆಯ ಕೆಆರ್‌ಪೇಟೆ ತಾಲೂಕಿನ ಕಲ್ಲಹಳ್ಳಿಯ ಭೂವರಹನಾಥಸ್ವಾಮಿಗೆ ಸಚಿವರು ತಮ್ಮ ಪತ್ನಿ ದೇವಕಿಯೊಂದಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ನಂತರ ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಿ ಪ್ರಾರ್ಥಿಸಿದರು.

ಕೊರೊನಾ 2ನೇ ಅಲೆಯು ವ್ಯಾಪಕವಾಗಿ ಹೆಚ್ಚಾಗುತ್ತಿರುವ ಹಿನ್ನೆಲೆ ಕೊರೊನಾ ಹೊಡೆದೋಡಿಸಿ ಆರೋಗ್ಯವನ್ನ ಕರುಣಿಸಲೆಂದು ಪ್ರಾರ್ಥನೆ ಮಾಡಿದರಲ್ಲದೇ, ನಾಡಿನ ಜನರು ಕೋವಿಡ್​ ಹಾವಳಿಯನ್ನು ಹಿಮ್ಮೆಟ್ಟಿಸಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ.

ಸಿಎಂ ಚೇತರಿಕೆಗಾಗಿ ಪೂಜೆ ಸಲ್ಲಿಸಿದ ಸಚಿವ ಡಾ‌. ಕೆ ಸಿ ನಾರಾಯಣಗೌಡ ದಂಪತಿ..

45 ವರ್ಷ ತುಂಬಿರುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಿ‌ ಹಾಗೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಆರೋಗ್ಯ ಭಾಗ್ಯಕ್ಕಿಂತ ಮಿಗಿಲಾದ ಭಾಗ್ಯವು ಯಾವುದೂ ಇಲ್ಲವೆಂಬ ಸತ್ಯ ಅರಿಯಬೇಕು ಎಂದಿದ್ದಾರೆ.

ಓದಿ: ಲಾಕ್​​​​ಡೌನ್​ ಮಾಡುವುದಿಲ್ಲ, ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳುತ್ತೇವೆ: ಆರ್. ಅಶೋಕ್ ಘೋಷಣೆ

ಮಂಡ್ಯ : ಸಿಎಂ ಬಿ ಎಸ್​ ಯಡಿಯೂರಪ್ಪಗೆ ಕೊರೊನಾ ದೃಢಪಟ್ಟಿರುವುದರಿಂದ ಅವರು ಶೀಘ್ರ ಗುಣಮುಖರಾಗಲೆಂದು ಸಚಿವ ಡಾ‌. ಕೆ ಸಿ ನಾರಾಯಣಗೌಡ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಜಿಲ್ಲೆಯ ಕೆಆರ್‌ಪೇಟೆ ತಾಲೂಕಿನ ಕಲ್ಲಹಳ್ಳಿಯ ಭೂವರಹನಾಥಸ್ವಾಮಿಗೆ ಸಚಿವರು ತಮ್ಮ ಪತ್ನಿ ದೇವಕಿಯೊಂದಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ನಂತರ ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಿ ಪ್ರಾರ್ಥಿಸಿದರು.

ಕೊರೊನಾ 2ನೇ ಅಲೆಯು ವ್ಯಾಪಕವಾಗಿ ಹೆಚ್ಚಾಗುತ್ತಿರುವ ಹಿನ್ನೆಲೆ ಕೊರೊನಾ ಹೊಡೆದೋಡಿಸಿ ಆರೋಗ್ಯವನ್ನ ಕರುಣಿಸಲೆಂದು ಪ್ರಾರ್ಥನೆ ಮಾಡಿದರಲ್ಲದೇ, ನಾಡಿನ ಜನರು ಕೋವಿಡ್​ ಹಾವಳಿಯನ್ನು ಹಿಮ್ಮೆಟ್ಟಿಸಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ.

ಸಿಎಂ ಚೇತರಿಕೆಗಾಗಿ ಪೂಜೆ ಸಲ್ಲಿಸಿದ ಸಚಿವ ಡಾ‌. ಕೆ ಸಿ ನಾರಾಯಣಗೌಡ ದಂಪತಿ..

45 ವರ್ಷ ತುಂಬಿರುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಿ‌ ಹಾಗೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಆರೋಗ್ಯ ಭಾಗ್ಯಕ್ಕಿಂತ ಮಿಗಿಲಾದ ಭಾಗ್ಯವು ಯಾವುದೂ ಇಲ್ಲವೆಂಬ ಸತ್ಯ ಅರಿಯಬೇಕು ಎಂದಿದ್ದಾರೆ.

ಓದಿ: ಲಾಕ್​​​​ಡೌನ್​ ಮಾಡುವುದಿಲ್ಲ, ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳುತ್ತೇವೆ: ಆರ್. ಅಶೋಕ್ ಘೋಷಣೆ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.