ETV Bharat / state

ಕೆ.ಆರ್‌ ಪೇಟೆಯಲ್ಲಿ ಬೈ ಎಲೆಕ್ಷನ್ ಜ್ವರ: ಜೆಡಿಎಸ್‌ಗೆ ತಲೆನೋವಾದ ಅಭ್ಯರ್ಥಿಗಳ ಆಯ್ಕೆ

author img

By

Published : Sep 21, 2019, 8:49 PM IST

ಉಪ ಚುನಾವಣೆಯಲ್ಲಿ ಮಂಡ್ಯದ ಕೆ.ಆರ್.ಪೇಟೆ ಕ್ಷೇತ್ರದಿಂದ ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ಸ್ಪರ್ಧಿಸಲು ಅಭ್ಯರ್ಥಿಗಳ ಆಯ್ಕೆ ಬಹುತೇಕ ಅಂತಿಮವಾಗಿದ್ದು, ಜೆಡಿಎಸ್​ನಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ.

ಜೆಡಿಎಸ್ ಆಕಾಂಕ್ಷಿಗಳು

ಮಂಡ್ಯ: ಉಪ ಚುನಾವಣೆ ದಿನಾಂಕ ಘೋಷಣೆ ಆಗಿದ್ದು, ಪಕ್ಷಗಳು ಸಮರ್ಥ ಅಭ್ಯರ್ಥಿಗಳ ಆಯ್ಕೆ ಕಸರತ್ತಿಗೆ ಮುಂದಾಗಿವೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಸೂಕ್ತ ಹುರಿಯಾಳುಗಳ ಹುಡುಕುವ ಕೆಲಸ ಮುಗಿಸಿದ್ರೆ, ಜೆಡಿಎಸ್​ನಲ್ಲಿ ಆಕಾಂಕ್ಷಿಗಳ ದೊಡ್ಡ ಪಟ್ಟಿಯೇ ಇದೆ. ಇನ್ನು ಬಿಜೆಪಿಯಿಂದಲೂ ಅಭ್ಯರ್ಥಿ ಆಯ್ಕೆ ಅಂತಿಮಗೊಂಡಿದೆ.

ಮಂಡ್ಯದ ಕೆ.ಆರ್.ಪೇಟೆಯಿಂದ ಕಾಂಗ್ರೆಸ್‌ನ ಮಾಜಿ ಶಾಸಕ ಕೆ.ಬಿ. ಚಂದ್ರಶೇಖರ್ ಕಣಕ್ಕಿಳಿಯಿವುದು ಬಹುತೇಕ ಖಚಿತ. ಬಿಜೆಪಿಯಿಂದ ಕೆ.ಸಿ. ನಾರಾಯಣಗೌಡ ಅಥವಾ ದೇವಕಿ ನಾರಾಯಣಗೌಡ ಅಭ್ಯರ್ಥಿ ಆಗುವ ಸಾಧ್ಯತೆ ಹೆಚ್ಚಾಗಿದೆ.

ಕೆ.ಆರ್.ಪೇಟೆಯನ್ನು ಜೆಡಿಎಸ್ ಭದ್ರಕೋಟೆ ಎಂದೇ ಕರೆಯಲಾಗುತ್ತಿದ್ದು, ಆಕಾಂಕ್ಷಿತರ ಸಂಖ್ಯೆಯೂ ಹೆಚ್ಚುತ್ತಿದೆ. ಮುಖಂಡರಾದ ಕೃಷ್ಣೇಗೌಡ, ಮನ್ ಮುಲ್ ನಿರ್ದೇಶಕ ಹೆಚ್.ಟಿ. ಮಂಜುನಾಥ್, ಬಿ.ಎಲ್ ದೇವರಾಜು, ರಾಜಾಹುಲಿ ದಿನೇಶ್ ಹೆಸರಿನ ಜೊತೆಗೆ ದೇವೇಗೌಡರ ಪುತ್ರಿ ಅನುಸೂಯ ಹೆಸರು ಕೂಡ ಕೇಳಿ ಬಂದಿದೆ.

ಬಸ್ ಕೃಷ್ಣೇಗೌಡ, ದೇವೇಗೌಡರ ಪುತ್ರಿ ಅನುಸೂಯ ಕಡೆಯಿಂದಲೂ, ಬಿ.ಎಲ್ ದೇವರಾಜು, ಮಾಜಿ ಸಚಿವ ರೇವಣ್ಣ ಕಡೆಯಿಂದಲೂ, ಹೆಚ್.ಟಿ. ಮಂಜುನಾಥ್​, ಮಾಜಿ ಸಿಎಂ ಕುಮಾರಸ್ವಾಮಿ ಕಡೆಯಿಂದಲೂ, ರಾಜಾಹುಲಿ ದಿನೇಶ್ ಸ್ವಂತ ಬಲದ ಮೇಲೆ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಇವರ ಅಭಿಮಾನಿಗಳು ಪ್ರಚಾರ ಕಾರ್ಯ ಶುರು ಮಾಡಿದ್ದಾರೆ.

ಒಂದೊಮ್ಮೆ ಕ್ಷೇತ್ರದಲ್ಲಿ ಟಿಕೆಟ್​ಗಾಗಿ ಪೈಪೋಟಿ ಎದುರಾದರೆ ಸ್ಥಳೀಯ ಹಾಗೂ ದೇವೇಗೌಡರ ಕುಟುಂಬ ಎರಡೂ ಕಡೆಯ ಅಭ್ಯರ್ಥಿಯಾಗಿ ಅನುಸೂಯ ಅವರಿಗೆ ಟಿಕೆಟ್​ ಕೊಟ್ಟು, ಕಣಕ್ಕೆ ಇಳಿಸಲು ವರಿಷ್ಠರು ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಈಗಾಗಲೇ ದೇವೇಗೌಡರು ಸ್ಥಳೀಯ ಅಭ್ಯರ್ಥಿ ಗೆಲ್ಲಿಸಿ ಎಂದು ಮನವಿ ಮಾಡಿದ್ದಾರೆ. ಇದನ್ನು ನೋಡಿದರೆ ಸ್ಥಳೀಯರಿಗೆ ಅವಕಾಶ ನೀಡುವ ಸಾಧ್ಯತೆ ಹೆಚ್ಚಾಗಿದ್ದು, ಇದರಲ್ಲಿ ಅನುಸೂಯ ಅವರ ಹೆಸರು ಮುಂಚೂಣಿಯಲ್ಲಿದೆ.

ಮಂಡ್ಯ: ಉಪ ಚುನಾವಣೆ ದಿನಾಂಕ ಘೋಷಣೆ ಆಗಿದ್ದು, ಪಕ್ಷಗಳು ಸಮರ್ಥ ಅಭ್ಯರ್ಥಿಗಳ ಆಯ್ಕೆ ಕಸರತ್ತಿಗೆ ಮುಂದಾಗಿವೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಸೂಕ್ತ ಹುರಿಯಾಳುಗಳ ಹುಡುಕುವ ಕೆಲಸ ಮುಗಿಸಿದ್ರೆ, ಜೆಡಿಎಸ್​ನಲ್ಲಿ ಆಕಾಂಕ್ಷಿಗಳ ದೊಡ್ಡ ಪಟ್ಟಿಯೇ ಇದೆ. ಇನ್ನು ಬಿಜೆಪಿಯಿಂದಲೂ ಅಭ್ಯರ್ಥಿ ಆಯ್ಕೆ ಅಂತಿಮಗೊಂಡಿದೆ.

ಮಂಡ್ಯದ ಕೆ.ಆರ್.ಪೇಟೆಯಿಂದ ಕಾಂಗ್ರೆಸ್‌ನ ಮಾಜಿ ಶಾಸಕ ಕೆ.ಬಿ. ಚಂದ್ರಶೇಖರ್ ಕಣಕ್ಕಿಳಿಯಿವುದು ಬಹುತೇಕ ಖಚಿತ. ಬಿಜೆಪಿಯಿಂದ ಕೆ.ಸಿ. ನಾರಾಯಣಗೌಡ ಅಥವಾ ದೇವಕಿ ನಾರಾಯಣಗೌಡ ಅಭ್ಯರ್ಥಿ ಆಗುವ ಸಾಧ್ಯತೆ ಹೆಚ್ಚಾಗಿದೆ.

ಕೆ.ಆರ್.ಪೇಟೆಯನ್ನು ಜೆಡಿಎಸ್ ಭದ್ರಕೋಟೆ ಎಂದೇ ಕರೆಯಲಾಗುತ್ತಿದ್ದು, ಆಕಾಂಕ್ಷಿತರ ಸಂಖ್ಯೆಯೂ ಹೆಚ್ಚುತ್ತಿದೆ. ಮುಖಂಡರಾದ ಕೃಷ್ಣೇಗೌಡ, ಮನ್ ಮುಲ್ ನಿರ್ದೇಶಕ ಹೆಚ್.ಟಿ. ಮಂಜುನಾಥ್, ಬಿ.ಎಲ್ ದೇವರಾಜು, ರಾಜಾಹುಲಿ ದಿನೇಶ್ ಹೆಸರಿನ ಜೊತೆಗೆ ದೇವೇಗೌಡರ ಪುತ್ರಿ ಅನುಸೂಯ ಹೆಸರು ಕೂಡ ಕೇಳಿ ಬಂದಿದೆ.

ಬಸ್ ಕೃಷ್ಣೇಗೌಡ, ದೇವೇಗೌಡರ ಪುತ್ರಿ ಅನುಸೂಯ ಕಡೆಯಿಂದಲೂ, ಬಿ.ಎಲ್ ದೇವರಾಜು, ಮಾಜಿ ಸಚಿವ ರೇವಣ್ಣ ಕಡೆಯಿಂದಲೂ, ಹೆಚ್.ಟಿ. ಮಂಜುನಾಥ್​, ಮಾಜಿ ಸಿಎಂ ಕುಮಾರಸ್ವಾಮಿ ಕಡೆಯಿಂದಲೂ, ರಾಜಾಹುಲಿ ದಿನೇಶ್ ಸ್ವಂತ ಬಲದ ಮೇಲೆ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಇವರ ಅಭಿಮಾನಿಗಳು ಪ್ರಚಾರ ಕಾರ್ಯ ಶುರು ಮಾಡಿದ್ದಾರೆ.

ಒಂದೊಮ್ಮೆ ಕ್ಷೇತ್ರದಲ್ಲಿ ಟಿಕೆಟ್​ಗಾಗಿ ಪೈಪೋಟಿ ಎದುರಾದರೆ ಸ್ಥಳೀಯ ಹಾಗೂ ದೇವೇಗೌಡರ ಕುಟುಂಬ ಎರಡೂ ಕಡೆಯ ಅಭ್ಯರ್ಥಿಯಾಗಿ ಅನುಸೂಯ ಅವರಿಗೆ ಟಿಕೆಟ್​ ಕೊಟ್ಟು, ಕಣಕ್ಕೆ ಇಳಿಸಲು ವರಿಷ್ಠರು ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಈಗಾಗಲೇ ದೇವೇಗೌಡರು ಸ್ಥಳೀಯ ಅಭ್ಯರ್ಥಿ ಗೆಲ್ಲಿಸಿ ಎಂದು ಮನವಿ ಮಾಡಿದ್ದಾರೆ. ಇದನ್ನು ನೋಡಿದರೆ ಸ್ಥಳೀಯರಿಗೆ ಅವಕಾಶ ನೀಡುವ ಸಾಧ್ಯತೆ ಹೆಚ್ಚಾಗಿದ್ದು, ಇದರಲ್ಲಿ ಅನುಸೂಯ ಅವರ ಹೆಸರು ಮುಂಚೂಣಿಯಲ್ಲಿದೆ.

Intro:ಮಂಡ್ಯ: ಉಪ ಚುನಾವಣೆ ಘೋಷಣೆ ಆಗಿದೆ. ಈಗೇನಿದ್ದರೂ ಪಕ್ಷಗಳ ತಯಾರಿ ಮಾತ್ರ ಉಳಿದಿದೆ. ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಕಸರತ್ತು ಮುಗಿಸಿದ್ದರೆ,ಜೆಡಿಎಸ್ ನಲ್ಲಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಇನ್ನು ಬಿಜೆಪಿಯಿಂದಲೂ ಅಭ್ಯರ್ಥಿ ಆಯ್ಕೆ ಅಂತಿಮಗೊಂಡಿದೆ.

ಕಾಂಗ್ರೆಸ್ ನಿಂದ ಮಾಜಿ ಶಾಸಕ ಕೆ.ಬಿ. ಚಂದ್ರಶೇಖರ್ ಬಹುತೇಕ ಅಭ್ಯರ್ಥಿ ಆದರೆ, ಬಿಜೆಪಿಯಿಂದ ಕೆ.ಸಿ. ನಾರಾಯಣಗೌಡ ಅಥವಾ ದೇವಕಿ ನಾರಾಯಣಗೌಡ ಅಭ್ಯರ್ಥಿ ಆಗುವ ಸಾಧ್ಯತೆ ಹೆಚ್ಚಾಗಿದೆ. ಕೋರ್ಟ್ ತೀರ್ಪಿನ ಮೇಲೆ ಬಿಜೆಪಿ ಅಭ್ಯರ್ಥಿ ಕಣಕ್ಕೆ ಇಳಿಯಲಿದ್ದಾರೆ.

ಇನ್ನು ಜೆಡಿಎಸ್ ಭದ್ರಕೋಟೆ ಅಂತ ಜಿಲ್ಲೆಯನ್ನು ಕರೆಯಲಾಗುತ್ತಿದೆ. ಹೀಗಾಗಿ ಆಕಾಂಕ್ಷಿತರ ಪಟ್ಟಿಯೂ ಹೆಚ್ಚಾಗಿದೆ. ಮುಖಂಡರಾದ ಬಸ್ ಕೃಷ್ಣೇಗೌಡ, ಮನ್ ಮುಲ್ ನಿರ್ದೇಶಕ ಎಚ್.ಟಿ. ಮಂಜುನಾಥ್, ಬಿ.ಎಲ್ ದೇವರಾಜು, ರಾಜಹುಲಿ ದಿನೇಶ್ ಹೆಸರಿನ ಜೊತೆಗೆ ಕೆ.ಆರ್.ಪೇಟೆ ತಾಲ್ಲೂಕಿನ ಸೊಸೆ, ದೇವೇಗೌಡರ ಪುತ್ರಿ ಅನಸೂಯ ಹೆಸರು ಕೇಳಿ ಬಂದಿದೆ.

ಬಸ್ ಕೃಷ್ಣೇಗೌಡ ದೇವೇಗೌಡರ ಪುತ್ರಿ ಅನುಸೂಯ ಕಡೆಯಿಂದಲೂ, ಬಿ.ಎಲ್ ದೇವರಾಜು ಮಾಜಿ ಸಚಿವ ರೇವಣ್ಣ ಕಡೆಯಿಂದಲೂ, ಎಚ್.ಟಿ. ಮಂಜು ಮಾಜಿ ಸಿಎಂ ಕುಮಾರಸ್ವಾಮಿ ಕಡೆಯಿಂದಲೂ, ರಾಜಹುಲಿ ದಿನೇಶ್ ಸ್ವಂತ ಬಲದ ಮೇಲೆ ಟಿಕೇಟ್ ಆಕಾಂಕ್ಷಿಗಳಾಗಿದ್ದಾರೆ. ಈಗಾಗಲೇ ಸೋಷಿಯಲ್ ಮೀಡಿಯಾದಲ್ಲೂ ಎಲ್ಲರ ಅಭಿಮಾನಿಗಳು ಪ್ರಚಾರ ಕಾರ್ಯ ಆರಂಭ ಮಾಡಿದ್ದಾರೆ.

ಒಂದೊಮ್ಮೆ ಕ್ಷೇತ್ರದಲ್ಲಿ ಟಿಕೇಟ್ ಗಾಗಿ ಪೈಪೋಟಿ ಎದುರಾದರೆ ಕೆ.ಆರ್.ಪೇಟೆ ತಾಲ್ಲೂಕಿನ ಸೊಸೆಯಾಗಿರುವ ದೇವೇಗೌಡರ ಪುತ್ರಿ ಅನಸೂಯಮ್ಮಗೆ ಟಿಕೇಟ್ ಕೊಟ್ಟು, ಸ್ಥಳೀಯ ಹಾಗೂ ದೇವೇಗೌಡರ ಕುಟುಂಬ ಎರಡೂ ಕಡೆಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಲು ವರಿಷ್ಠರು ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಈಗಾಗಲೇ ದೇವೇಗೌಡರು ಸ್ಥಳೀಯ ಅಭ್ಯರ್ಥಿ ಗೆಲ್ಲಿಸಿ ಎಂದು ಮನವಿ ಮಾಡಿದ್ದಾರೆ. ಇದನ್ನು ನೋಡಿದರೆ ಸ್ಥಳೀಯರಿಗೆ ಅವಕಾಶ ನೀಡುವ ಸಾಧ್ಯತೆ ಹೆಚ್ಚಾಗಿದ್ದು, ಇದರಲ್ಲಿ ಅನುಸೂಯರವರೂ ಸ್ಥಳೀಯ ಕೋಟದಲ್ಲಿ ಸ್ಪರ್ಧೆ ಮಾಡುವ ಸಾಧ್ಯತೆ ಹೆಚ್ಚಾಗಿದೆ.


Body:ಯತೀಶ್ ಬಾಬುConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.