ಕೊಪ್ಪಳ: ನಾಳೆ ಏಪ್ರಿಲ್ 5 ರಂದು ರಾತ್ರಿ 9 ಗಂಟೆ 9 ನಿಮಿಷಕ್ಕೆ ದೀಪ ಬೆಳಗಲು ಪ್ರಧಾನಿ ಮೋದಿ ಕರೆ ನೀಡಿದ ಹಿನ್ನೆಲೆ ಪಟ್ಟಣ ಪಂಚಾಯತ್ ಸದಸ್ಯ ಮನೆ, ಮನೆಗೆ ತೆರಳಿ ಮೇಣದ ಬತ್ತಿಗಳನ್ನು ವಿತರಿಸಿದ್ದಾರೆ.
![supports-to-modi-calls-in-koppal](https://etvbharatimages.akamaized.net/etvbharat/prod-images/6661947_832_6661947_1586004723497.png)
ಕೊಪ್ಪಳದ ಭಾಗ್ಯನಗರ ಪಟ್ಟಣ ಪಂಚಾಯಿತಿ ಸದಸ್ಯ ಮಂಜುನಾಥ ಸಾಲಿಮಠ ಎಂಬುವವರು ಉಚಿತವಾಗಿ ಸುಮಾರು 2 ಸಾವಿರಕ್ಕೂ ಅಧಿಕ ಮೇಣದ ಬತ್ತಿಗಳನ್ನು ವಿತರಿಸಿದ್ದಾರೆ.
ಅಲ್ಲದೇ ನಾಳೆ ರಾತ್ರಿ ಮೇಣದ ಬತ್ತಿ ಬೆಳಗಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆಗೆ ಬೆಂಬಲಿಸುವಂತೆ, ಇದೇ ಸಂದರ್ಭದಲ್ಲಿ ಮನವಿ ಮಾಡಿದರು.