ETV Bharat / state

ಕೊಪ್ಪಳದಲ್ಲಿ ಫೈನಾನ್ಸ್​​​​​ನವರ ಕಿರುಕುಳ ಆರೋಪ.. ಬೇಸತ್ತು ನಡುರಸ್ತೆಯಲ್ಲೇ ವಾಹನಕ್ಕೆ ಬೆಂಕಿ ಹಚ್ಚಿದ ಮಾಲೀಕ! - Owner set fire to vehicles in Koppal

ಕೊಪ್ಪಳ ನಗರದಲ್ಲಿ ವ್ಯಕ್ತಿಯೊಬ್ಬ ಖಾಸಗಿ ಫೈನಾನ್ಸ್​​ನವರ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿ ತನ್ನ ಕ್ರೂಸರ್​ ವಾಹನಕ್ಕೆ ನಡು ರಸ್ತೆಯಲ್ಲಿಯೇ ಬೆಂಕಿ ಹಚ್ಚಿದ್ದಾನೆ.

Owner set fire to vehicles in koppal
ಕೊಪ್ಪಳದಲ್ಲಿ ವಾಹನಕ್ಕೆ ಬೆಂಕಿ ಹಚ್ಚಿದ ಮಾಲೀಕ
author img

By

Published : Jan 30, 2022, 5:38 PM IST

ಕೊಪ್ಪಳ: ಖಾಸಗಿ ಫೈನಾನ್ಸ್​​ನವರ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ ವ್ಯಕ್ತಿಯೋರ್ವ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾನೆ. ಬೇಸತ್ತ ವ್ಯಕ್ತಿ ತನ್ನ ಕ್ರೂಸರ್ ವಾಹನಕ್ಕೆ‌‌ ನಡುರಸ್ತೆಯಲ್ಲಿಯೇ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ನಗರದ ಬಸ್ ನಿಲ್ದಾಣದ ಬಳಿ ನಡೆದಿದೆ.

ಕೊಪ್ಪಳದಲ್ಲಿ ವಾಹನಕ್ಕೆ ಬೆಂಕಿ ಹಚ್ಚಿದ ಮಾಲೀಕ

ವಾಹನದ ಮಾಲೀಕ‌‌ ಸುಭಾಷಚಂದ್ರ ಎಂಬುವವರು ನಡುರಸ್ತೆಯಲ್ಲಿ ವಾಹನಕ್ಕೆ ಬೆಂಕಿ ಹಚ್ಚಿ ಈಗ ಪೊಲೀಸರ ಅತಿಥಿಯಾಗಿದ್ದಾರೆ. ಮಂಜುಳಾ ದಾನಸೂರ ಎಂಬುವವರ ಹೆಸರಿನಲ್ಲಿರುವ ಈ ವಾಹನ ಬಾಗಲಕೋಟೆ ಆರ್​​​​​​ಟಿಒ ಕಚೇರಿಯಲ್ಲಿ ನೋಂದಣಿಯಾಗಿತ್ತು. ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಸಾಲದ ಹಿನ್ನೆಲೆಯಲ್ಲಿ ವಾಹನವನ್ನು ಧಾರವಾಡದ ಆರ್​ಟಿಒ ಬ್ಲಾಕ್ ಲಿಸ್ಟ್​​​​ಗೆ ಸೇರಿಸಿದೆಯಂತೆ.

ವಾಹನದ ಎರಡು ಕಂತು ಬಾಕಿ ಇದ್ದ ಹಿನ್ನೆಲೆಯಲ್ಲಿ ಜನವರಿ 28 ರಂದು ವಾಹನದ ಮಾಲೀಕ‌ ಕಂತು ಕಟ್ಟಬೇಕಿತ್ತು. ಹಣ ಕಟ್ಟುವಂತೆ ಫೈನಾನ್ಸ್​​​​​​ನವರು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ವಾಹನಕ್ಕೂ ಬೆಂಕಿ ಹಚ್ಚಿ, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿರುವುದಾಗಿ ಮಾಲೀಕ ಸುಭಾಷಚಂದ್ರ ಪೊಲೀಸರಿಗೆ ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಮಲಗಿದ್ದ ನಾಯಿ ಮೇಲೆ ಕಾರು ಹತ್ತಿಸಿ ವಿಕೃತಿ ಮೆರೆದ ಚಾಲಕ: ಸಿಸಿಟಿವಿಯಲ್ಲಿ ದುಷ್ಕೃತ್ಯ ಸೆರೆ

ನಡುರಸ್ತೆಯಲ್ಲಿ ಕ್ರೂಷರ್ ವಾಹನ ಹೊತ್ತಿ ಉರಿದಿದ್ದು, ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ವಾಹನದ ಮಾಲೀಕ ಸುಭಾಷಚಂದ್ರ ಸದ್ಯ ಕೊಪ್ಪಳ ನಗರ ಪೊಲೀಸರ ವಶದಲ್ಲಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಕೊಪ್ಪಳ: ಖಾಸಗಿ ಫೈನಾನ್ಸ್​​ನವರ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ ವ್ಯಕ್ತಿಯೋರ್ವ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾನೆ. ಬೇಸತ್ತ ವ್ಯಕ್ತಿ ತನ್ನ ಕ್ರೂಸರ್ ವಾಹನಕ್ಕೆ‌‌ ನಡುರಸ್ತೆಯಲ್ಲಿಯೇ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ನಗರದ ಬಸ್ ನಿಲ್ದಾಣದ ಬಳಿ ನಡೆದಿದೆ.

ಕೊಪ್ಪಳದಲ್ಲಿ ವಾಹನಕ್ಕೆ ಬೆಂಕಿ ಹಚ್ಚಿದ ಮಾಲೀಕ

ವಾಹನದ ಮಾಲೀಕ‌‌ ಸುಭಾಷಚಂದ್ರ ಎಂಬುವವರು ನಡುರಸ್ತೆಯಲ್ಲಿ ವಾಹನಕ್ಕೆ ಬೆಂಕಿ ಹಚ್ಚಿ ಈಗ ಪೊಲೀಸರ ಅತಿಥಿಯಾಗಿದ್ದಾರೆ. ಮಂಜುಳಾ ದಾನಸೂರ ಎಂಬುವವರ ಹೆಸರಿನಲ್ಲಿರುವ ಈ ವಾಹನ ಬಾಗಲಕೋಟೆ ಆರ್​​​​​​ಟಿಒ ಕಚೇರಿಯಲ್ಲಿ ನೋಂದಣಿಯಾಗಿತ್ತು. ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಸಾಲದ ಹಿನ್ನೆಲೆಯಲ್ಲಿ ವಾಹನವನ್ನು ಧಾರವಾಡದ ಆರ್​ಟಿಒ ಬ್ಲಾಕ್ ಲಿಸ್ಟ್​​​​ಗೆ ಸೇರಿಸಿದೆಯಂತೆ.

ವಾಹನದ ಎರಡು ಕಂತು ಬಾಕಿ ಇದ್ದ ಹಿನ್ನೆಲೆಯಲ್ಲಿ ಜನವರಿ 28 ರಂದು ವಾಹನದ ಮಾಲೀಕ‌ ಕಂತು ಕಟ್ಟಬೇಕಿತ್ತು. ಹಣ ಕಟ್ಟುವಂತೆ ಫೈನಾನ್ಸ್​​​​​​ನವರು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ವಾಹನಕ್ಕೂ ಬೆಂಕಿ ಹಚ್ಚಿ, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿರುವುದಾಗಿ ಮಾಲೀಕ ಸುಭಾಷಚಂದ್ರ ಪೊಲೀಸರಿಗೆ ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಮಲಗಿದ್ದ ನಾಯಿ ಮೇಲೆ ಕಾರು ಹತ್ತಿಸಿ ವಿಕೃತಿ ಮೆರೆದ ಚಾಲಕ: ಸಿಸಿಟಿವಿಯಲ್ಲಿ ದುಷ್ಕೃತ್ಯ ಸೆರೆ

ನಡುರಸ್ತೆಯಲ್ಲಿ ಕ್ರೂಷರ್ ವಾಹನ ಹೊತ್ತಿ ಉರಿದಿದ್ದು, ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ವಾಹನದ ಮಾಲೀಕ ಸುಭಾಷಚಂದ್ರ ಸದ್ಯ ಕೊಪ್ಪಳ ನಗರ ಪೊಲೀಸರ ವಶದಲ್ಲಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.