ಕುಷ್ಟಗಿ (ಕೊಪ್ಪಳ): ಜಿಲ್ಲೆಯ ಕುಷ್ಟಗಿ ತಾಲೂಕಿನ ಟೆಂಗುಂಟಿ ಗ್ರಾಮದ ನಿರುಪಯುಕ್ತ ಶುದ್ಧ ನೀರಿನ ಘಟಕಗಳಿಗೆ ಗ್ರಾಮೀಣ ನೀರು ಪೂರೈಕೆ, ನೈರ್ಮಲ್ಯ ಇಲಾಖೆ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಎಂ.ಪಿ. ಮಂಜುನಾಥ ಅವರು ಗ್ರಾಪಂ ಪಿಡಿಓ ಅವರೊಂದಿಗೆ ಖುದ್ದಾಗಿ ಭೇಟಿ ನೀಡಿ ವಾಸ್ತವ ಪರಿಸ್ಥಿತಿ ಪರಿಶೀಲಿಸಿದರು.
![AEE visit to the Tengunti Purified Water Unit](https://etvbharatimages.akamaized.net/etvbharat/prod-images/kn-kst-08-24-tengunti-water-filter-aee-visit-kac10028_24072020201128_2407f_1595601688_973.jpg)
ಈಟಿವಿ ಭಾರತದಲ್ಲಿ ಜು. 22ರಂದು ಪ್ರಸಾರವಾದ ವರದಿಗೆ ಸ್ಪಂದಿಸಿದ ಎಇಇ ಮಂಜುನಾಥ ಅವರು, ಪ್ಯಾನ್ ಏಷಿಯಾ ಕಂಪನಿಗೆ ಅಗತ್ಯ ಕ್ರಮಕ್ಕೆ ಸೂಚಿಸಿದ್ದಾರೆ. ಈ ನೀರು ಶುದ್ದೀಕರಣಕ್ಕೆ ಯೋಗ್ಯವೇ ಎನ್ನುವುದನ್ನು ಪರಿಶೀಲಿಸಲು ನೀರನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು, ವರದಿ ಆಧರಿಸಿ ಮುಂದಿನ ಕ್ರಮದ ಭರವಸೆ ನೀಡಿದ್ದಾರೆ.
![AEE visit to the Tengunti Purified Water Unit](https://etvbharatimages.akamaized.net/etvbharat/prod-images/kn-kst-08-24-tengunti-water-filter-aee-visit-kac10028_24072020201128_2407f_1595601688_837.jpg)