ETV Bharat / state

ಬೈಕ್​ ಪರಿಶೀಲನೆ ವೇಳೆ ಪರಾರಿಯಾದ ಕಳ್ಳರು: ಗನ್​ ಹಿಡಿದು ಆರೋಪಿಗಳ ಪತ್ತೆಗಾಗಿ ಫೀಲ್ಡಿಗಿಳಿದ ಕೊಪ್ಪಳ SP

author img

By

Published : Aug 5, 2021, 7:52 PM IST

ಕೊಪ್ಪಳ ತಾಲೂಕಿನ ಅಳವಂಡಿಯಲ್ಲಿ ಬೈಕ್​ ದಾಖಲೆ ಪರಿಶೀಲನೆ ವೇಳೆ ಬೈಕ್​ ಬಿಟ್ಟು ಇಬ್ಬರು ಕಳ್ಳರು ಪರಾರಿಯಾಗಿದ್ದಾರೆ. ಖದೀಮರನ್ನು ಹಿಡಿಯಲು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಸ್ವತಃ ಕಾರ್ಯಾಚರಣೆಯಲ್ಲಿ ಭಾಗಿಯಾಗಿ ಹಳ್ಳ - ಕೊಳ್ಳ ಹೊಲ, ಗದ್ದೆಗಳಲ್ಲಿ ಹುಡುಕಾಟ ನಡೆಸಿದರೂ ಚಾಲಾಕಿ ಕಳ್ಳರು ಎಲ್ಲೂ ಪತ್ತೆಯಾಗಿಲ್ಲ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

koppal-police-operation-for-detection-of-robbers
ಅಳವಂಡಿ ಕಳ್ಳರು

ಕೊಪ್ಪಳ: ವಾಹನಗಳ ದಾಖಲೆ ಪರಿಶೀಲಿಸುವಾಗ ಕಳ್ಳರಿಬ್ಬರು ಬೈಕ್ ಬಿಟ್ಟು ಪರಾರಿಯಾಗಿದ್ದು, ಖದೀಮರನ್ನು ಪತ್ತೆ ಹಚ್ಚಲು ಪೊಲೀಸರು ಸಿನಿಮೀಯ ಶೈಲಿಯಲ್ಲಿ ಕಾರ್ಯಾಚರಣೆ ನಡೆಸಿದ ಘಟನೆ ತಾಲೂಕಿನ ಅಳವಂಡಿ ಗ್ರಾಮದಲ್ಲಿ ನಡೆದಿದೆ. ಆರೋಪಿಗಳನ್ನು ಹಿಡಿಯಲು ಸ್ವತಃ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ. ಶ್ರೀಧರ್ ಅವರು ಮುಂದಾದರೂ ಸಹ ಚಾಲಾಕಿ ಕಳ್ಳರು ಎಸ್ಕೇಪ್ ಆಗಿದ್ದಾರೆ.

ಗನ್​ ಹಿಡಿದು ಆರೋಪಿಗಳ ಪತ್ತೆಯಾಗಿ ಫೀಲ್ಡಿಗಿಳಿದ ಕೊಪ್ಪಳ ಎಸ್ಪಿ

ತಾಲೂಕಿನ ಅಳವಂಡಿ ಗ್ರಾಮದ ಸಮೀಪ ಇಂದು ಬೆಳಿಗ್ಗೆ ಪೊಲೀಸರು ವಾಹನ ದಾಖಲೆ ಪರಿಶೀಲನೆ ಮಾಡುತ್ತಿದ್ದರು. ಆಗ ಆ ರಸ್ತೆಯಲ್ಲಿ ಯೂನಿಕಾರ್ನ್ ಬೈಕ್ ಮೇಲೆ ಬಂದ ಇಬ್ಬರು ವ್ಯಕ್ತಿಗಳು, ಪೊಲೀಸರು ಕೇಳುವ ಮೊದಲೇ ದಂಡ ಪಾವತಿಸಲು ಹೋಗಿದ್ದಾರೆ.

ಅನುಮಾನಗೊಂಡ ಪೊಲೀಸರು ಕೈಯಲ್ಲಿದ್ದ ಬ್ಯಾಗ್ ಪರಿಶೀಲನೆಗೆ ಮುಂದಾದಾಗ ತಕ್ಷಣ ಬ್ಯಾಗ್ ಬಿಟ್ಟು ಆರೋಪಿಗಳು ಓಡಿ ಹೋಗಿದ್ದಾರೆ. ಬ್ಯಾಗ್​ನಲ್ಲಿ ಕಂತೆ ಕಂತೆ ನೋಟು ಪತ್ತೆಯಾಗಿವೆ. ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್ ಹಾಗೂ ತಂಡ ಆರೋಪಿತರ ಪತ್ತೆಗೆ ಕಾರ್ಯಾಚರಣೆ ನಡೆಸಿದರು.

ಕಬ್ಬಿನ ಗದ್ದೆ, ಸೂರ್ಯಕಾಂತಿ ಹೊಲ, ಹಳ್ಳ- ಕೊಳ್ಳದಲ್ಲೆಲ್ಲ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಶ್ವಾನ ದಳದೊಂದಿಗೆ ಅನುಮಾನಾಸ್ಪದ ವ್ಯಕ್ತಿಗಳಿಗಾಗಿ ಶೋಧ ಮಾಡಿದರೂ ಕಳ್ಳರು ಪತ್ತೆಯಾಗಿಲ್ಲ. ಖದೀಮರು ಬಿಟ್ಟು ಹೋದ ಬ್ಯಾಗ್ ನಲ್ಲಿ ಸುಮಾರು 20 ಲಕ್ಷ ರೂ. ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಸುಮಾರು 6-7 ಜನರು ಈ ತಂಡದಲ್ಲಿದ್ದು 3-4 ಬೈಕ್​ನಲ್ಲಿ ತಿರುಗಾಡುತ್ತಿದ್ದಾರೆ. ಈಗ ಪೊಲೀಸರು ಬೇರೆ ಬೇರೆ ರೀತಿಯಿಂದ ಕಾರ್ಯಾಚರಣೆ ನಡೆಸಿದ್ದು ಪತ್ತೆ ಕಾರ್ಯ ಚುರುಕುಗೊಳಿಸಿದ್ದಾರೆ‌.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್ ಅವರೇ ಖುದ್ದು ರಿವಾಲ್ವಾರ್ ಹಿಡಿದು ಸಂಜೆಯವರೆಗೂ ಶೋಧಿಸಿದರೂ ಖದೀಮರು ಪತ್ತೆಯಾಗಿಲ್ಲ. ಹಳ್ಳ, ಪೊದೆಗಳಲ್ಲಿ ಓಡಾಡಿ ಹೈರಾಣಾಗಿರುವ ಪೊಲೀಸರು ಬಿಟ್ಟೂ ಬಿಡದೇ ತಮ್ಮ ಕಾರ್ಯಾಚರಣೆಯನ್ನು ಮುಂದುವರೆಸಿದ್ದಾರೆ.

ಕೊಪ್ಪಳ: ವಾಹನಗಳ ದಾಖಲೆ ಪರಿಶೀಲಿಸುವಾಗ ಕಳ್ಳರಿಬ್ಬರು ಬೈಕ್ ಬಿಟ್ಟು ಪರಾರಿಯಾಗಿದ್ದು, ಖದೀಮರನ್ನು ಪತ್ತೆ ಹಚ್ಚಲು ಪೊಲೀಸರು ಸಿನಿಮೀಯ ಶೈಲಿಯಲ್ಲಿ ಕಾರ್ಯಾಚರಣೆ ನಡೆಸಿದ ಘಟನೆ ತಾಲೂಕಿನ ಅಳವಂಡಿ ಗ್ರಾಮದಲ್ಲಿ ನಡೆದಿದೆ. ಆರೋಪಿಗಳನ್ನು ಹಿಡಿಯಲು ಸ್ವತಃ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ. ಶ್ರೀಧರ್ ಅವರು ಮುಂದಾದರೂ ಸಹ ಚಾಲಾಕಿ ಕಳ್ಳರು ಎಸ್ಕೇಪ್ ಆಗಿದ್ದಾರೆ.

ಗನ್​ ಹಿಡಿದು ಆರೋಪಿಗಳ ಪತ್ತೆಯಾಗಿ ಫೀಲ್ಡಿಗಿಳಿದ ಕೊಪ್ಪಳ ಎಸ್ಪಿ

ತಾಲೂಕಿನ ಅಳವಂಡಿ ಗ್ರಾಮದ ಸಮೀಪ ಇಂದು ಬೆಳಿಗ್ಗೆ ಪೊಲೀಸರು ವಾಹನ ದಾಖಲೆ ಪರಿಶೀಲನೆ ಮಾಡುತ್ತಿದ್ದರು. ಆಗ ಆ ರಸ್ತೆಯಲ್ಲಿ ಯೂನಿಕಾರ್ನ್ ಬೈಕ್ ಮೇಲೆ ಬಂದ ಇಬ್ಬರು ವ್ಯಕ್ತಿಗಳು, ಪೊಲೀಸರು ಕೇಳುವ ಮೊದಲೇ ದಂಡ ಪಾವತಿಸಲು ಹೋಗಿದ್ದಾರೆ.

ಅನುಮಾನಗೊಂಡ ಪೊಲೀಸರು ಕೈಯಲ್ಲಿದ್ದ ಬ್ಯಾಗ್ ಪರಿಶೀಲನೆಗೆ ಮುಂದಾದಾಗ ತಕ್ಷಣ ಬ್ಯಾಗ್ ಬಿಟ್ಟು ಆರೋಪಿಗಳು ಓಡಿ ಹೋಗಿದ್ದಾರೆ. ಬ್ಯಾಗ್​ನಲ್ಲಿ ಕಂತೆ ಕಂತೆ ನೋಟು ಪತ್ತೆಯಾಗಿವೆ. ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್ ಹಾಗೂ ತಂಡ ಆರೋಪಿತರ ಪತ್ತೆಗೆ ಕಾರ್ಯಾಚರಣೆ ನಡೆಸಿದರು.

ಕಬ್ಬಿನ ಗದ್ದೆ, ಸೂರ್ಯಕಾಂತಿ ಹೊಲ, ಹಳ್ಳ- ಕೊಳ್ಳದಲ್ಲೆಲ್ಲ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಶ್ವಾನ ದಳದೊಂದಿಗೆ ಅನುಮಾನಾಸ್ಪದ ವ್ಯಕ್ತಿಗಳಿಗಾಗಿ ಶೋಧ ಮಾಡಿದರೂ ಕಳ್ಳರು ಪತ್ತೆಯಾಗಿಲ್ಲ. ಖದೀಮರು ಬಿಟ್ಟು ಹೋದ ಬ್ಯಾಗ್ ನಲ್ಲಿ ಸುಮಾರು 20 ಲಕ್ಷ ರೂ. ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಸುಮಾರು 6-7 ಜನರು ಈ ತಂಡದಲ್ಲಿದ್ದು 3-4 ಬೈಕ್​ನಲ್ಲಿ ತಿರುಗಾಡುತ್ತಿದ್ದಾರೆ. ಈಗ ಪೊಲೀಸರು ಬೇರೆ ಬೇರೆ ರೀತಿಯಿಂದ ಕಾರ್ಯಾಚರಣೆ ನಡೆಸಿದ್ದು ಪತ್ತೆ ಕಾರ್ಯ ಚುರುಕುಗೊಳಿಸಿದ್ದಾರೆ‌.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್ ಅವರೇ ಖುದ್ದು ರಿವಾಲ್ವಾರ್ ಹಿಡಿದು ಸಂಜೆಯವರೆಗೂ ಶೋಧಿಸಿದರೂ ಖದೀಮರು ಪತ್ತೆಯಾಗಿಲ್ಲ. ಹಳ್ಳ, ಪೊದೆಗಳಲ್ಲಿ ಓಡಾಡಿ ಹೈರಾಣಾಗಿರುವ ಪೊಲೀಸರು ಬಿಟ್ಟೂ ಬಿಡದೇ ತಮ್ಮ ಕಾರ್ಯಾಚರಣೆಯನ್ನು ಮುಂದುವರೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.