ETV Bharat / state

ಪಂಪಾಸರೋವರದಲ್ಲಿ ನಿಧಿಗಾಗಿ ದೇವಿ ಮೂರ್ತಿ ತೆಗೆದಿಲ್ಲ: ಶ್ರೀರಾಮುಲು - ಪಂಪಾಸರೋವರದಲ್ಲಿ ನಿಧಿಗಾಗಿ ದೇವಿ ಮೂರ್ತಿ ತೆಗೆದಿಲ್ಲ ಎಂದ ಶ್ರೀರಾಮುಲು

ಯಾರೋ ಕೆಲವರು ಆರೋಪ‌ ಮಾಡಿ ಗೊಂದಲ ಸೃಷ್ಟಿಯಾಗಿದೆ. ದೇವರ ಮೂರ್ತಿಗಳನ್ನ ತೆರವುಗೊಳಿಸಿದ್ದು ಇದೇ ಮೊದಲೇನಲ್ಲ. ಈ ಹಿಂದೆ ಹಂಪಿಯಲ್ಲಿ ದೇವಸ್ಥಾನಗಳ ಜೀರ್ಣೋದ್ಧಾರ ಕೈಗೊಂಡ ಸಂದರ್ಭದಲ್ಲಿ ಮೂರ್ತಿ ತೆಗೆಯಲಾಗಿತ್ತು. ನಿಧಿಗಾಗಿ ದೇವಿ ಮೂರ್ತಿ ತೆರವುಗೊಳಿಸಿದ್ದಾರೆ ಎಂಬುದು ಸುಳ್ಳು ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ.

ಸಚಿವ ಶ್ರೀರಾಮುಲು
ಸಚಿವ ಶ್ರೀರಾಮುಲು
author img

By

Published : Jun 8, 2022, 5:12 PM IST

ಕೊಪ್ಪಳ: ಪಂಪಾಸರೋವರದಲ್ಲಿ ನಿಧಿಗಾಗಿ ದೇವಿ ಮೂರ್ತಿ ತೆರವುಗೊಳಿಸಿದ್ದಾರೆ ಎನ್ನುವುದೆಲ್ಲ ಶುದ್ಧ ಸುಳ್ಳು. ದೇವಿ ನನ್ನಿಂದ ಜೀರ್ಣೋದ್ಧಾರ ಕಾರ್ಯ ಮಾಡಿಸುತ್ತಿದ್ದಾಳೆ. ಈಗ ನಡೆದಿರುವ ಜೀರ್ಣೋದ್ಧಾರ ಕಾರ್ಯ ಪೂರ್ಣಗೊಳಿಸಲಾಗುವುದು. ಯಾರೋ ಕೆಲವರು ಆರೋಪ‌ ಮಾಡಿ ಗೊಂದಲ ಸೃಷ್ಟಿಯಾಗಿದೆ ಎಂದು ಸಚಿವ ಬಿ ಶ್ರೀರಾಮುಲು ಹೇಳಿದರು.

ಕೊಪ್ಪಳದಲ್ಲಿ ಸಚಿವ ಶ್ರೀರಾಮುಲು ಸ್ಪಷ್ಟನೆ

ಪಂಪಾಸರೋವರದಲ್ಲಿ ಮಾಧ್ಯಮದವರೊಂದಿಗೆ ಬುಧವಾರ ಮಾತನಾಡಿದ ಅವರು, ದೇವರ ಮೂರ್ತಿಗಳನ್ನ ತೆರವುಗೊಳಿಸಿದ್ದು, ಇದೇ ಮೊದಲೇನಲ್ಲ. ಈ ಹಿಂದೆ ಹಂಪಿಯಲ್ಲಿ ದೇವಸ್ಥಾನಗಳ ಜೀರ್ಣೋದ್ಧಾರ ಕೈಗೊಂಡ ಸಂದರ್ಭದಲ್ಲಿ ಮೂರ್ತಿ ತೆಗೆಯಲಾಗಿತ್ತು ಎಂದರು.

ಆರ್​ಎಸ್​ಎಸ್ ಬಗ್ಗೆ ಸಿದ್ದರಾಮಯ್ಯ ಅವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅವರಿಗೆ ಆರ್​ಎಸ್​ಎಸ್ ಬಗ್ಗೆ ತಿಳುವಳಿಕೆ ಕಡಿಮೆ ಇದೆ. ಅದಕ್ಕಿಂತ ಮುಖ್ಯವಾಗಿ ಅವರಿಗೆ ಆರ್​ಎಸ್​ಎಸ್ ಭಯ ಹೆಚ್ಚಾಗಿದೆ ಎಂದು ಇದೇ ಸಂದರ್ಭದಲ್ಲಿ ಸಚಿವ ಶ್ರೀರಾಮುಲು ತಿರುಗೇಟು ನೀಡಿದರು.

ಇದನ್ನೂ ಓದಿ: ಮುಂದಿನ ಸಿಎಂ ಅಭ್ಯರ್ಥಿ ಜಿ. ಪರಮೇಶ್ವರ್​ ಅಂತಾ ಘೋಷಣೆ ಮಾಡಲಿ: ಡಿಕೆಶಿ-ಸಿದ್ದರಾಮಯ್ಯಗೆ ಶೆಟ್ಟರ್ ಸವಾಲು

ಕೊಪ್ಪಳ: ಪಂಪಾಸರೋವರದಲ್ಲಿ ನಿಧಿಗಾಗಿ ದೇವಿ ಮೂರ್ತಿ ತೆರವುಗೊಳಿಸಿದ್ದಾರೆ ಎನ್ನುವುದೆಲ್ಲ ಶುದ್ಧ ಸುಳ್ಳು. ದೇವಿ ನನ್ನಿಂದ ಜೀರ್ಣೋದ್ಧಾರ ಕಾರ್ಯ ಮಾಡಿಸುತ್ತಿದ್ದಾಳೆ. ಈಗ ನಡೆದಿರುವ ಜೀರ್ಣೋದ್ಧಾರ ಕಾರ್ಯ ಪೂರ್ಣಗೊಳಿಸಲಾಗುವುದು. ಯಾರೋ ಕೆಲವರು ಆರೋಪ‌ ಮಾಡಿ ಗೊಂದಲ ಸೃಷ್ಟಿಯಾಗಿದೆ ಎಂದು ಸಚಿವ ಬಿ ಶ್ರೀರಾಮುಲು ಹೇಳಿದರು.

ಕೊಪ್ಪಳದಲ್ಲಿ ಸಚಿವ ಶ್ರೀರಾಮುಲು ಸ್ಪಷ್ಟನೆ

ಪಂಪಾಸರೋವರದಲ್ಲಿ ಮಾಧ್ಯಮದವರೊಂದಿಗೆ ಬುಧವಾರ ಮಾತನಾಡಿದ ಅವರು, ದೇವರ ಮೂರ್ತಿಗಳನ್ನ ತೆರವುಗೊಳಿಸಿದ್ದು, ಇದೇ ಮೊದಲೇನಲ್ಲ. ಈ ಹಿಂದೆ ಹಂಪಿಯಲ್ಲಿ ದೇವಸ್ಥಾನಗಳ ಜೀರ್ಣೋದ್ಧಾರ ಕೈಗೊಂಡ ಸಂದರ್ಭದಲ್ಲಿ ಮೂರ್ತಿ ತೆಗೆಯಲಾಗಿತ್ತು ಎಂದರು.

ಆರ್​ಎಸ್​ಎಸ್ ಬಗ್ಗೆ ಸಿದ್ದರಾಮಯ್ಯ ಅವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅವರಿಗೆ ಆರ್​ಎಸ್​ಎಸ್ ಬಗ್ಗೆ ತಿಳುವಳಿಕೆ ಕಡಿಮೆ ಇದೆ. ಅದಕ್ಕಿಂತ ಮುಖ್ಯವಾಗಿ ಅವರಿಗೆ ಆರ್​ಎಸ್​ಎಸ್ ಭಯ ಹೆಚ್ಚಾಗಿದೆ ಎಂದು ಇದೇ ಸಂದರ್ಭದಲ್ಲಿ ಸಚಿವ ಶ್ರೀರಾಮುಲು ತಿರುಗೇಟು ನೀಡಿದರು.

ಇದನ್ನೂ ಓದಿ: ಮುಂದಿನ ಸಿಎಂ ಅಭ್ಯರ್ಥಿ ಜಿ. ಪರಮೇಶ್ವರ್​ ಅಂತಾ ಘೋಷಣೆ ಮಾಡಲಿ: ಡಿಕೆಶಿ-ಸಿದ್ದರಾಮಯ್ಯಗೆ ಶೆಟ್ಟರ್ ಸವಾಲು

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.