ಗಂಗಾವತಿ: ಮಕ್ಕಳ ಹಕ್ಕುಗಳು ಮತ್ತು ಶಾಲಾ ಪರಿಸರ ಸಂರಕ್ಷಣೆಯ ಅಗತ್ಯತೆಗಳ ಕುರಿತು ಮಕ್ಕಳಲ್ಲಿರುವ ಅಭಿಪ್ರಾಯಗಳನ್ನು ಆಲಿಸಲು ತಾಲೂಕಿನ ಸುಳೇಕಲ್ ಗ್ರಾಮ ಪಂಚಾಯತ್ನಲ್ಲಿ ಮಕ್ಕಳ ವಿಶೇಷ ಗ್ರಾಮ ಸಭೆ ಆಯೋಜಿಸಲಾಗಿತ್ತು.
ತಾಲೂಕಿನ ಸುಳೇಕಲ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿಶೇಷ ಮಕ್ಕಳಿಗಾಗಿ ಗ್ರಾಮ ಸಭೆಯನ್ನು ಆಯೋಜನೆ ಮಾಡಲಾಗಿತ್ತು. ಪರಿಸರ ಕುರಿತು ಮಕ್ಕಳ ಹಕ್ಕುಗಳ ಕುರಿತು ಮಕ್ಕಳಲ್ಲಿರುವ ಅಭಿಪ್ರಾಯಗಳನ್ನು ತಿಳಿಯುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಅತಿಥಿಗಳು, ಅಧ್ಯಕ್ಷರು, ನಿರೂಪಕರು, ಪ್ರೇಕ್ಷಕ ವರ್ಗ ಹೀಗೆ ಎಲ್ಲಾ ಹಂತದಲ್ಲೂ ಮಕ್ಕಳೇ ಪ್ರಧಾನ ಪಾತ್ರ ವಹಿಸಿದ್ದು ವಿಶೇಷವಾಗಿತ್ತು. ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಸಿಬ್ಬಂದಿ ಪ್ರೇಕ್ಷಕರಾಗಿದ್ದರು. ಸಭೆಯಲ್ಲಿ ಪಾಲ್ಗೊಂಡಿದ್ದ ತಾಲೂಕು ಪಂಚಾಯತ್ ಇಒ ಡಾ.ಡಿ ಮೋಹನ್, ಮಕ್ಕಳು ಮಂಡಿಸುತ್ತಿದ್ದ ಬೇಡಿಕೆಗಳ ಅಗತ್ಯಗಳನ್ನು ಪಟ್ಟಿ ಮಾಡಿಕೊಂಡು ಸಂಬಂಧಿಸಿದಂತೆ ಸಿಬ್ಬಂದಿಗೆ ನೀಡಿದರು.