ETV Bharat / state

ಚರಂಡಿ ಪಕ್ಕದಲ್ಲಿ ನರಳುತ್ತಿದ್ದ ವೃದ್ಧನನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ವಿಷ್ಣು ಅಭಿಮಾನಿ ಬಳಗ

ಕಾಲಿಲ್ಲಿ ಹುಳ ಬಿದ್ದು, ಕೊಳೆಯುತ್ತಿದ್ದ ವೈಯೋವೃದ್ಧನನ್ನು ವಿಷ್ಣುವರ್ಧನ ಅಭಿಮಾನಿ ಬಳಗ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಿ, ಮಾನವೀಯತೆ ತೋರಿದ ಘಟನೆ ಕಳೆದ ರಾತ್ರಿ ಕೋಲಾರದಲ್ಲಿ ಕಂಡು ಬಂತು.

author img

By

Published : Sep 16, 2020, 5:43 PM IST

vishunuvardana fans hospitalized the  old age stranger in kolar
ಮಾನವೀಯತೆ ಮೆರೆದ ವಿಷ್ಣುವರ್ಧನ ಅಭಿಮಾನಿ ಬಳಗ

ಕೋಲಾರ: ಅಪರಿಚಿತ ವಯೋವೃದ್ಧ ಕಾಯಿಲೆಯಿಂದ ನರಳುತ್ತಿದ್ದು, ನಡೆಯಲು ಬಾರದ ಸ್ಥಿತಿಯಲ್ಲಿ ಚರಂಡಿ ಪಕ್ಕದಲ್ಲಿ ಮಲಗಿದ್ದವನನ್ನು ವಿಷ್ಣುವರ್ಧನ್​ ಅಭಿಮಾನಿ ಬಳಗವು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದೆ.

ನಗರದ ಎಸ್.ಎನ್.ಆರ್ ಜಿಲ್ಲಾಸ್ಪತ್ರೆಯ ಎದುರಿಗಿನ ಚರಂಡಿ ಮೇಲೆ ಮಲಗಿದವನ ಬಲಗಾಲು ಕೊಳೆತು, ಹುಳುಗಳಾಗಿ ದುರ್ನಾತ ಬೀರುತ್ತಿತ್ತು. ಮಳೆಯಲ್ಲಿಯೇ ನೆನೆಯುತ್ತ ಮಲಗಿದ್ದ ಈತನಿಗೆ ಊಟ ನೀಡಿ, ಆಸ್ಪತ್ರೆ ದಾಖಲಿಸಿದ್ದಾರೆ.

ಮಾನವೀಯತೆ ಮೆರೆದ ವಿಷ್ಣುವರ್ಧನ ಅಭಿಮಾನಿ ಬಳಗ

ಬಳಗದ ಮುಖಂಡ ಮದನ್ ಅವರ ತಂಡ ಆತನಿಗೆ ಸ್ನಾನ ಮಾಡಿಸಿ, ಬೇರೆ ಬಟ್ಟೆ ತೊಡಿಸಿದ್ದಾರೆ. ಸದ್ಯ ಆತನಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರತ್ಯೇಕ ವಾರ್ಡ್​ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಈ ಯುವಕರ ತಂಡದ ಕಾರ್ಯಕ್ಕೆ ಸಾರ್ವಜನಿಕರು ಸೇರಿದಂತೆ ಆಸ್ಪತ್ರೆ ಸಿಬ್ಬಂದಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಕೋಲಾರ: ಅಪರಿಚಿತ ವಯೋವೃದ್ಧ ಕಾಯಿಲೆಯಿಂದ ನರಳುತ್ತಿದ್ದು, ನಡೆಯಲು ಬಾರದ ಸ್ಥಿತಿಯಲ್ಲಿ ಚರಂಡಿ ಪಕ್ಕದಲ್ಲಿ ಮಲಗಿದ್ದವನನ್ನು ವಿಷ್ಣುವರ್ಧನ್​ ಅಭಿಮಾನಿ ಬಳಗವು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದೆ.

ನಗರದ ಎಸ್.ಎನ್.ಆರ್ ಜಿಲ್ಲಾಸ್ಪತ್ರೆಯ ಎದುರಿಗಿನ ಚರಂಡಿ ಮೇಲೆ ಮಲಗಿದವನ ಬಲಗಾಲು ಕೊಳೆತು, ಹುಳುಗಳಾಗಿ ದುರ್ನಾತ ಬೀರುತ್ತಿತ್ತು. ಮಳೆಯಲ್ಲಿಯೇ ನೆನೆಯುತ್ತ ಮಲಗಿದ್ದ ಈತನಿಗೆ ಊಟ ನೀಡಿ, ಆಸ್ಪತ್ರೆ ದಾಖಲಿಸಿದ್ದಾರೆ.

ಮಾನವೀಯತೆ ಮೆರೆದ ವಿಷ್ಣುವರ್ಧನ ಅಭಿಮಾನಿ ಬಳಗ

ಬಳಗದ ಮುಖಂಡ ಮದನ್ ಅವರ ತಂಡ ಆತನಿಗೆ ಸ್ನಾನ ಮಾಡಿಸಿ, ಬೇರೆ ಬಟ್ಟೆ ತೊಡಿಸಿದ್ದಾರೆ. ಸದ್ಯ ಆತನಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರತ್ಯೇಕ ವಾರ್ಡ್​ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಈ ಯುವಕರ ತಂಡದ ಕಾರ್ಯಕ್ಕೆ ಸಾರ್ವಜನಿಕರು ಸೇರಿದಂತೆ ಆಸ್ಪತ್ರೆ ಸಿಬ್ಬಂದಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.