ಮಡಿಕೇರಿ: ಕುಟ್ಟ-ಶ್ರೀಮಂಗಲ ನಡುವಿನ ಪೂಜೆಕಲ್ ಬಳಿ ಬೈಕ್ ಹಾಗೂ ಜೀಪ್ ನಡುವೆ ಸಂಭವಿಸಿದ್ದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ಯುವಕ ಮೈಸೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.
ಪೂಜೆಕಲ್ ನಿವಾಸಿ ಗಣೇಶ್ (27) ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುವ ಯುವಕ. ಸೋಮವಾರ ಸಂಜೆ ಬೈಕ್ನಲ್ಲಿ ಗಣೇಶ್ ಮತ್ತು ಆತನ ಸ್ನೇಹಿತ ಅಕ್ಷಯ್ ಶ್ರೀಮಂಗಲ ಕಡೆಯಿಂದ ಕುಟ್ಟ ಕಡೆಗೆ ಹೊರಟಿದ್ದರು. ಈ ವೇಳೆ ಕುರ್ಕೆ ಗ್ರಾಮದ ನಿವಾಸಿ ಸಂಜು ಎಂಬುವರ ಜೀಪ್ ಡಿಕ್ಕಿಯಿಂದ ನೆಲಕ್ಕೆ ಬಿದ್ದಿದ್ದ ಗಣೇಶನ ತಲೆ ಭಾಗಕ್ಕೆ ಗಂಭೀರ ಗಾಯವಾಗಿತ್ತು. ಹಿಂಬದಿ ಕುಳಿತಿದ್ದ ಅಕ್ಷಯ್ಗೂ ಗಾಯಗಳಾಗಿದ್ದವು. ಇವರನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಗಣೇಶ್ ಮೃತಪಟ್ಟಿದ್ದಾನೆ.
ಈ ಸಂಬಂಧ ಕುಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.