ETV Bharat / state

ಪ್ರತಿ ಲೀಟರ್​ ಪೆಟ್ರೋಲ್​ಗೆ ₹ 50 ನಿಗದಿಪಡಿಸಿದ ಕಾಂಗ್ರೆಸ್​: ಕಲಬುರಗಿಯಲ್ಲಿ ಬೆಲೆ ಏರಿಕೆ ವಿರುದ್ಧ ವಿಶೇಷ ಪ್ರತಿಭಟನೆ - Congress allocated petrol as Rs 50

ಯುಪಿಎ ಸರ್ಕಾರದ ಅವಧಿಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ 140 ಡಾಲರ್‌ವರೆಗೂ ಏರಿಕೆಯಾಗಿತ್ತು. ಆಗ 71ರೂ ಪೆಟ್ರೋಲ್ ದರ ನಿಗದಿ‌ ಮಾಡಲಾಗಿತ್ತು. ಆದರೆ, ಇಂದು ಕಚ್ಚಾತೈಲದ ಬೆಲೆ 65 ಡಾಲರ್ ಆಸುಪಾಸಿನಲ್ಲಿದ್ದರೂ ದೇಶದಲ್ಲಿ ಪೆಟ್ರೋಲ್ ಬೆಲೆ‌ 100 ರೂ. ಗಡಿ ತಲುಪಿದೆ ಎಂದು ಕೆಪಿಸಿಸಿ ವಕ್ತಾರ, ಶಾಸಕ ಪ್ರಿಯಾಂಕ್​ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

petrol distribution in kalaburgi
ಕಲಬುರಗಿಯಲ್ಲಿ ಪೆಟ್ರೋಲ್​ ವಿತರಣೆ
author img

By

Published : Jun 15, 2021, 4:35 PM IST

Updated : Jun 15, 2021, 4:52 PM IST

ಕಲಬುರಗಿ: ತೈಲ ಬೆಲೆ ಏರಿಕೆ ಖಂಡಿಸಿದ ಜಿಲ್ಲಾ ಕಾಂಗ್ರೆಸ್, ನಗರದ ಪೆಟ್ರೋಲ್ ಬಂಕ್ ಮುಂಭಾಗದಲ್ಲಿ ಪೆಟ್ರೋಲ್ ಖರೀದಿಸಿದ ಸವಾರರಿಗೆ ಕೇವಲ 50 ರೂಪಾಯಿಯಲ್ಲಿ ವಿತರಿಸುವ ಮೂಲಕ ಬೆಲೆ ಏರಿಕೆ ವಿರುದ್ಧ ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು. ಜೇವರ್ಗಿ ರಸ್ತೆ, ಕೆಳ ಸೇತುವೆ ಹತ್ತಿರದ ಪೆಟ್ರೋಲ್ ಬಂಕ್ ಮುಂದೆ ಅನಗತ್ಯ ಇಂಧನ ತೆರಿಗೆ ಹೊರೆಯನ್ನು ಖಂಡಿಸಿ ಪ್ರತಿ ಲೀಟರ್​ಗೆ 50 ರೂಗಳನ್ನು ವಿಧಿಸಿ ಬಿಲ್​​ ನೀಡಿ, ಬಿಜೆಪಿ ಟ್ಯಾಕ್ಸ್ ಮರುಪಾವತಿ ಎಂಬ ರಸೀದಿ ನೀಡಿದರು.

ತೈಲ ಬೆಲೆ ಏರಿಕೆ ವಿರುದ್ದ ಶಾಸಕ ಪ್ರಿಯಾಂಕ್​ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ

ಈ ವೇಳೆ ಮಾತನಾಡಿದ ಕೆಪಿಸಿಸಿ ವಕ್ತಾರ ಪ್ರಿಯಾಂಕ್​ ಖರ್ಗೆ, ಯುಪಿಎ ಸರ್ಕಾರದ ಅವಧಿಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ 140 ಡಾಲರ್‌ವರೆಗೂ ಏರಿಕೆಯಾಗಿತ್ತು. ಆಗ 71ರೂ ಪೆಟ್ರೋಲ್ ದರ ನಿಗದಿ‌ ಮಾಡಲಾಗಿತ್ತು. ಆದರೆ, ಇಂದು ಕಚ್ಚಾತೈಲದ ಬೆಲೆ 65 ಡಾಲರ್ ಆಸುಪಾಸಿನಲ್ಲಿದ್ದರೂ ದೇಶದಲ್ಲಿ ಪೆಟ್ರೋಲ್ ಬೆಲೆ‌ 100 ರೂ. ಗಡಿ ತಲುಪಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆಲ್ಲಾ ನೇರ ಕಾರಣ ಬಿಜೆಪಿಯ ತೆರಿಗೆ ಲೂಟಿ. ಮೋದಿ ಅವರು ಪ್ರಧಾನಿ ಆಗುವ ವೇಳೆ ಹೇಳಿದ್ದ ಮಾತು ಉಳಿಸಿಕೊಂಡಿಲ್ಲ. ಅದರ ಬದಲು ದುಪ್ಪಟ್ಟು ದರ ಏರಿಸಿ ಜನಸಾಮಾನ್ಯರನ್ನು ತುಳಿಯಲು ಹೊರಟಿದ್ದಾರೆ ಎಂದು ಕಿಡಿಕಾರಿದರು.

ಓದಿ: ಜುಲೈ 15 ರಿಂದ ಪದವಿ ಕೋರ್ಸ್​ಗಳಿಗೆ ಅಡ್ಮಿಷನ್ ಪೋರ್ಟಲ್ ಸಿದ್ಧ: ಡಿಸಿಎಂ ಅಶ್ವತ್ಥ್​ ನಾರಾಯಣ

ಕಲಬುರಗಿ: ತೈಲ ಬೆಲೆ ಏರಿಕೆ ಖಂಡಿಸಿದ ಜಿಲ್ಲಾ ಕಾಂಗ್ರೆಸ್, ನಗರದ ಪೆಟ್ರೋಲ್ ಬಂಕ್ ಮುಂಭಾಗದಲ್ಲಿ ಪೆಟ್ರೋಲ್ ಖರೀದಿಸಿದ ಸವಾರರಿಗೆ ಕೇವಲ 50 ರೂಪಾಯಿಯಲ್ಲಿ ವಿತರಿಸುವ ಮೂಲಕ ಬೆಲೆ ಏರಿಕೆ ವಿರುದ್ಧ ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು. ಜೇವರ್ಗಿ ರಸ್ತೆ, ಕೆಳ ಸೇತುವೆ ಹತ್ತಿರದ ಪೆಟ್ರೋಲ್ ಬಂಕ್ ಮುಂದೆ ಅನಗತ್ಯ ಇಂಧನ ತೆರಿಗೆ ಹೊರೆಯನ್ನು ಖಂಡಿಸಿ ಪ್ರತಿ ಲೀಟರ್​ಗೆ 50 ರೂಗಳನ್ನು ವಿಧಿಸಿ ಬಿಲ್​​ ನೀಡಿ, ಬಿಜೆಪಿ ಟ್ಯಾಕ್ಸ್ ಮರುಪಾವತಿ ಎಂಬ ರಸೀದಿ ನೀಡಿದರು.

ತೈಲ ಬೆಲೆ ಏರಿಕೆ ವಿರುದ್ದ ಶಾಸಕ ಪ್ರಿಯಾಂಕ್​ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ

ಈ ವೇಳೆ ಮಾತನಾಡಿದ ಕೆಪಿಸಿಸಿ ವಕ್ತಾರ ಪ್ರಿಯಾಂಕ್​ ಖರ್ಗೆ, ಯುಪಿಎ ಸರ್ಕಾರದ ಅವಧಿಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ 140 ಡಾಲರ್‌ವರೆಗೂ ಏರಿಕೆಯಾಗಿತ್ತು. ಆಗ 71ರೂ ಪೆಟ್ರೋಲ್ ದರ ನಿಗದಿ‌ ಮಾಡಲಾಗಿತ್ತು. ಆದರೆ, ಇಂದು ಕಚ್ಚಾತೈಲದ ಬೆಲೆ 65 ಡಾಲರ್ ಆಸುಪಾಸಿನಲ್ಲಿದ್ದರೂ ದೇಶದಲ್ಲಿ ಪೆಟ್ರೋಲ್ ಬೆಲೆ‌ 100 ರೂ. ಗಡಿ ತಲುಪಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆಲ್ಲಾ ನೇರ ಕಾರಣ ಬಿಜೆಪಿಯ ತೆರಿಗೆ ಲೂಟಿ. ಮೋದಿ ಅವರು ಪ್ರಧಾನಿ ಆಗುವ ವೇಳೆ ಹೇಳಿದ್ದ ಮಾತು ಉಳಿಸಿಕೊಂಡಿಲ್ಲ. ಅದರ ಬದಲು ದುಪ್ಪಟ್ಟು ದರ ಏರಿಸಿ ಜನಸಾಮಾನ್ಯರನ್ನು ತುಳಿಯಲು ಹೊರಟಿದ್ದಾರೆ ಎಂದು ಕಿಡಿಕಾರಿದರು.

ಓದಿ: ಜುಲೈ 15 ರಿಂದ ಪದವಿ ಕೋರ್ಸ್​ಗಳಿಗೆ ಅಡ್ಮಿಷನ್ ಪೋರ್ಟಲ್ ಸಿದ್ಧ: ಡಿಸಿಎಂ ಅಶ್ವತ್ಥ್​ ನಾರಾಯಣ

Last Updated : Jun 15, 2021, 4:52 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.