ಹಾವೇರಿ: ಜಿಲ್ಲೆಯ ಹಂದಿಗೆನೂರು ಗ್ರಾಮದ ನದಿಯಲ್ಲಿ ಕೊಚ್ಚಿ ಹೋಗಿದ್ದ ಇಬ್ಬರಲ್ಲಿ, ಒಬ್ಬ ವ್ಯಕ್ತಿಯ ಶವ ಪತ್ತೆಯಾಗಿದೆ.
ಗ್ರಾಮದ ಪರಮೇಶಪ್ಪ ಕಮ್ಮಾರ (62) ಎಂಬುವವರ ಮೃತದೇಹ ನದಿಯಲ್ಲಿ ಪತ್ತೆಯಾಗಿದ್ದು, ಪ್ರಶಾಂತನ ಶವಕ್ಕಾಗಿ ಎನ್ಡಿಆರ್ಎಫ್ ತಂಡ ಶೋಧ ಕಾರ್ಯ ಮುಂದುವರೆಸಿದೆ.
ಗುರುವಾರ ಬೆಳಗ್ಗೆ ಪ್ರಶಾಂತ ಮತ್ತು ಪರಮೇಶಪ್ಪ ಎತ್ತಿನ ಮೈತೊಳೆಯಲು ನದಿಗೆ ಹೋದಾಗ ಈ ದುರ್ಘಟನೆ ನಡೆದಿತ್ತು. ಕಾಲು ಜಾರಿ ನದಿಯಲ್ಲಿ ಮುಳುಗುತ್ತಿದ್ದ ಪರಮೇಶಪ್ಪನನ್ನು ರಕ್ಷಿಸಲು ಹೋದ ಪ್ರಶಾಂತ ಕೂಡಾ ನದಿಯಲ್ಲಿ ಕೊಚ್ಚಿ ಹೋಗಿದ್ದರು.