ಹಾವೇರಿ: ರಾಣೆಬೆನ್ನೂರು ನಗರದಲ್ಲಿ ಸೂರ್ಯನ ಕಿರಣ ಭೂಮಿಗೆ ತಾಕುವ ಮೊದಲೇ ಬಾರ್ಗಳು ತೆರೆದುಕೊಳ್ತವೆ. ಬೆಳ್ ಬೆಳಗ್ಗೆ 5 ಗಂಟೆಗೆ ಎಣ್ಣೆದಾಸರು ಬಾರ್ಗಳ ಮುಂದೆ ಹಾಜರಾಗ್ತಾರೆ.
ನಗರದ ಶ್ರೀ ಮಾಲತೇಶ ಬಾರ್, ಶಿವಾನಂದ ಬಾರ್ ಮತ್ತು ಸ್ವಾಗತ ವೈನ್ಸ್ ಸೇರಿ ಹಲವು ಮದ್ಯದಂಗಡಿಗಳು ನಸುಕಿನ ಜಾವ 5 ಗಂಟೆಗೆ ಬಾಗಿಲು ತೆರೆಯುತ್ತವೆ ಎಂಬ ಆರೋಪ ಕೇಳಿ ಬಂದಿದೆ. ಸರ್ಕಾರದ ನಿಯಮಗಳ ಪ್ರಕಾರ ಬೆಳಗ್ಗೆ10 ಗಂಟೆ ನಂತರ ಬಾರ್ ಅಂಗಡಿಗಳನ್ನ ತೆರೆಯಬೇಕು. ಆದರೆ, ಬಾರ್ ಮಾಲೀಕರು ಈ ನಿಯಮವನ್ನು ಗಾಳಿಗೆ ತೂರಿ ಬೆಳಗ್ಗೆ ಐದು ಗಂಟೆಗೆ ಮದ್ಯ ಮಾರಾಟ ಮಾಡುತ್ತಿದ್ದಾರೆ.
ಈ ವಿಚಾರ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ತಿಳಿದಿದ್ದರೂ ಕೂಡ ಕಣ್ಣಿಗೆ ಕಾಣದವರಂತ್ತಿದ್ದಾರೆ. ಸಾರ್ವಜನಿಕರು ಇದರ ಬಗ್ಗೆ ದೂರು ನೀಡಿದರೂ ಬೆಲೆಯೇ ಇಲ್ಲದಂತಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.