ಹಾವೇರಿ: ಜಿಲ್ಲಾ ಕೇಂದ್ರ ಹಾವೇರಿಯಲ್ಲಿ ಹಾವು ಕಂಡರೆ ಸಾಕು, ಜನ ತಕ್ಷಣ ಫೋನ್ ಮಾಡುವುದು ಪೊಲೀಸ್ ಕಾನ್ಸ್ಟೇಬಲ್ ರಮೇಶ್ ಅವರಿಗೆ. ಇವರು ಹಾವುಗಳ ರಕ್ಷಣೆ ಮಾಡುವುದರ ಜೊತೆಗೆ ಪರಿಸರದಲ್ಲಿ ಅವುಗಳ ಮಹತ್ವವನ್ನು ಜನರಿಗೆ ತಿಳಿಸುವ ಕೆಲಸ ಮಾಡುತ್ತಿದ್ದಾರೆ.
ಜಿಲ್ಲೆಯಲ್ಲಿ ಯಾವ ಯಾವ ಬಗೆಯ ಹಾವುಗಳಿವೆ? ಹಾವುಗಳು ಕಡಿದಾಗ ಏನು ಮಾಡಬೇಕು?, ವಿಷದ ಹಾವುಗಳು ಯಾವುವು? ಸಾಮಾನ್ಯ ಹಾವುಗಳ ಕುರಿತಂತೆ ಇವರು ಜನಸಾಮಾನ್ಯರಿಗೆ ಮಾಹಿತಿ ನೀಡುತ್ತಿದ್ದಾರೆ. ಆಹಾರ ಸರಪಳಿಯಲ್ಲಿ ಹಾವಿನ ಪಾತ್ರವನ್ನೂ ಜನರಿಗೆ ಮನದಟ್ಟು ಮಾಡುತ್ತಿದ್ದಾರೆ.
ಮೊದಮೊದಲು ಹಾವು ಬಂದರೆ ದೊಣ್ಣೆಗಳನ್ನು ಹಿಡಿಯುತ್ತಿದ್ದ ಮಂದಿ ಫೋನ್ ಹಿಡಿದು ಸ್ನೇಕ್ ರಮೇಶ್ ಅವರಿಗೆ ಕರೆ ಮಾಡುತ್ತಾರೆ. ತಕ್ಷಣ ಸ್ಥಳಕ್ಕೆ ಬರುವ ಇವರು ಹಾವುಗಳನ್ನು ಹಿಡಿಸಿ ಸುರಕ್ಷಿತ ಸ್ಥಳಗಳಿಗೆ ಕಳುಹಿಸುತ್ತಾರೆ.