ETV Bharat / state

ಹಾನಗಲ್: ಕೈಕೊಟ್ಟ ವರುಣ, ಹೇಳತೀರದಾಗಿದೆ ಅನ್ನದಾತನ ಬವಣೆ - ಹಾವೇರಿಯ ಹಾನಗಲ್​ನಲ್ಲಿ ಮಳೆ ಕೊರತೆ

ದೇಶದಲ್ಲಿ ಕೃಷಿ ಅಂದರೆ ಅದು ರೈತ ಮತ್ತು ಮಳೆಯ ಕಣ್ಣಾಮುಚ್ಚಾಲೆ ಆಟ. ಬಹುತೇಕ ಕೃಷಿ ಮಳೆಯಾಧಾರಿತ ಆಗಿರುವುದರಿಂದ ವರುಣ ಕರುಣೆ ತೋರದಿದ್ದರೆ ಅನ್ನದಾತ ಕಂಗಾಲಾಗುತ್ತಾನೆ. ಹಾವೇರಿಯಲ್ಲಿ ಆಗಿದ್ದು ಇದೇ..

Framers in Hardship due to Lack of rain in Hanagal
ಕೈಕೊಟ್ಟ ವರುಣ ಕಂಗಾಲಾದ ರೈತ
author img

By

Published : Jun 30, 2020, 11:53 AM IST

ಹಾನಗಲ್(ಹಾವೇರಿ) : ಸರಿಯಾದ ಸಮಯಕ್ಕೆ ಮಳೆಯಾಗದ ಪರಿಣಾಮ ತಾಲೂಕಿನ ರೈತರು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವ ಸನ್ನಿವೇಶ ಬಂದೊದಗಿದೆ.

ತಾಲೂಕಿನಲ್ಲಿ ಮಳೆಯಾಗದೆ 15 ದಿನಗಳಾಗುತ್ತಿವೆ. ಮೊದಲ ಮಳೆಯನ್ನೇ ನಂಬಿ ಹತ್ತಿ, ಗೋವಿನ ಜೋಳ, ಸೋಯಾಬಿನ್, ಭತ್ತ ಬಿತ್ತಿದ್ದ ರೈತರು ಮಳೆ ಬಾರದೆ ಬೆಳೆ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.

ವರುಣ ಕೈಕೊಟ್ಟಿದ್ದರಿಂದ ಹಾನಗಲ್‌ನಲ್ಲಿ ರೈತರ ಬವಣೆ ಹೇಳತೀರದಾಗಿದೆ.

ಸಾಲ ಮಾಡಿ ತಂದು ಬಿತ್ತಿದ ಬೀಜಗಳು ಭೂಮಿಯಲ್ಲಿ ಹುದುಗಿ ಹೋಗಿವೆ. ಅಲ್ಪಸ್ವಲ್ಪ ಬೆಳೆದ ಬೆಳೆ ನೀರಿಲ್ಲದೆ ಬಾಡುತ್ತಿದೆ. ಸರಿಯಾಗಿ ಮಳೆ ಬಾರದಿದ್ದರೆ ನಾವು ಸಾಲದ ಸುಳಿಗೆ ಸಿಲುಕಿ ನರಳುವುದು ಖಚಿತ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಹಾನಗಲ್(ಹಾವೇರಿ) : ಸರಿಯಾದ ಸಮಯಕ್ಕೆ ಮಳೆಯಾಗದ ಪರಿಣಾಮ ತಾಲೂಕಿನ ರೈತರು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವ ಸನ್ನಿವೇಶ ಬಂದೊದಗಿದೆ.

ತಾಲೂಕಿನಲ್ಲಿ ಮಳೆಯಾಗದೆ 15 ದಿನಗಳಾಗುತ್ತಿವೆ. ಮೊದಲ ಮಳೆಯನ್ನೇ ನಂಬಿ ಹತ್ತಿ, ಗೋವಿನ ಜೋಳ, ಸೋಯಾಬಿನ್, ಭತ್ತ ಬಿತ್ತಿದ್ದ ರೈತರು ಮಳೆ ಬಾರದೆ ಬೆಳೆ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.

ವರುಣ ಕೈಕೊಟ್ಟಿದ್ದರಿಂದ ಹಾನಗಲ್‌ನಲ್ಲಿ ರೈತರ ಬವಣೆ ಹೇಳತೀರದಾಗಿದೆ.

ಸಾಲ ಮಾಡಿ ತಂದು ಬಿತ್ತಿದ ಬೀಜಗಳು ಭೂಮಿಯಲ್ಲಿ ಹುದುಗಿ ಹೋಗಿವೆ. ಅಲ್ಪಸ್ವಲ್ಪ ಬೆಳೆದ ಬೆಳೆ ನೀರಿಲ್ಲದೆ ಬಾಡುತ್ತಿದೆ. ಸರಿಯಾಗಿ ಮಳೆ ಬಾರದಿದ್ದರೆ ನಾವು ಸಾಲದ ಸುಳಿಗೆ ಸಿಲುಕಿ ನರಳುವುದು ಖಚಿತ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.