ETV Bharat / state

ಹಸೆಮಣೆ ಏರಬೇಕಿದ್ದ ಹುಡುಗಿ ಮನೆಗೆ ನುಗ್ಗಿದ ಭೂಪ : ಸಿನಿಮೀಯ ರೀತಿ ತಾಳಿ ಕಟ್ಟಿ ನಿಂತಲ್ಲೇ ಹಾರ ಬದಲಾಯಿಸಿದ!

ಹಾಸನ ಜಿಲ್ಲೆಯಲ್ಲಿ ಸಿನಿಮೀಯ ಘಟನೆ ನಡೆದಿದೆ. ಮದುವೆ ನಿಶ್ಚಯವಾಗಿದ್ದ ಹುಡುಗಿಯನ್ನು ತಾನು ಪ್ರೀತಿಸುತ್ತಿರುವುದಾಗಿ ಹೇಳಿಕೊಂಡಿದ್ದ ಸತೀಶ್, ಆಕೆಗೆ ಮದುವೆ ಫಿಕ್ಸ್​ ಆಗಿರುವುದು ಗೊತ್ತಾದ ಬಳಿಕ ಆತ್ಮಹತ್ಯೆಗೆ ಮುಂದಾಗಿದ್ದ ಎನ್ನಲಾಗ್ತಿದೆ. ಹೀಗಾಗಿ ಆತನ ಸ್ನೇಹಿತರು ಅವನನ್ನು ಕರೆದುಕೊಂಡು ಹುಡುಗಿಯ ಮನೆಗೆ ಹೋಗಿ ಆಕೆಯ ಜೊತೆ ಸತೀಶನ ಮದುವೆ ಮಾಡಿಸಿದ್ದಾರೆ.

author img

By

Published : Jan 23, 2021, 12:44 PM IST

Updated : Jan 23, 2021, 1:43 PM IST

man gets marriage with girl forcefully
ಮನೆಗೆ ನುಗ್ಗಿ ತಾಳಿ ಕಟ್ಟಿದ ಭೂಪ

ಹಾಸನ(ಸಕಲೇಶಪುರ): ಮದುವೆ ನಿಶ್ಚಯವಾಗಿದ್ದ ಹುಡುಗಿಗೆ ಬಲವಂತವಾಗಿ ತಾಳಿ ಕಟ್ಟಿದ ಘಟನೆಯ ಜಿಲ್ಲೆಯ ಸಕಲೇಶಪುರ ಪಟ್ಟಣದಲ್ಲಿ ನಡೆದಿದೆ.

ಅರಕೆರೆ ಗ್ರಾಮದ ಸತೀಶ್ ಎಂಬಾತ ತನ್ನ ಸ್ನೇಹಿತರೊಂದಿಗೆ ಸಕಲೇಶಪುರದ ಕುಶಾಲನಗರ ಬಡಾವಣೆಯಲ್ಲಿರುವ ಹುಡುಗಿಯ ಮನೆಗೆ ಆಗಮಿಸಿ ಆಕೆ ಮತ್ತು ಆಕೆಯ ತಾಯಿಯನ್ನ ಬೆದರಿಸಿ ಅವಳ ಮನೆಯಲ್ಲಿಯೇ ಬಲವಂತವಾಗಿ ಹಾರ ಬದಲಿಸಿಕೊಂಡು ತಾಳಿ ಕಟ್ಟಿ ತನ್ನ ಮನೆಗೆ ಕರೆದೊಯ್ದಿದ್ದಾನೆ. ಮದುವೆ ನಿಶ್ಚಯವಾಗಿದ್ದ ಹುಡುಗಿಯನ್ನು ತಾನು ಪ್ರೀತಿಸುತ್ತಿರುವುದಾಗಿ ಹೇಳಿಕೊಂಡಿದ್ದ ಸತೀಶ್, ಆಕೆಗೆ ಮದುವೆ ಫಿಕ್ಸ್​ ಆಗಿರುವುದು ಗೊತ್ತಾದ ಬಳಿಕ ಆತ್ಮಹತ್ಯೆಗೆ ಮುಂದಾಗಿದ್ದ ಎನ್ನಲಾಗ್ತಿದೆ. ಹೀಗಾಗಿ ಆತನ ಸ್ನೇಹಿತರು ಅವನನ್ನು ಕರೆದುಕೊಂಡು ಹುಡುಗಿಯ ಮನೆಗೆ ಹೋಗಿ ಆಕೆಯ ಜೊತೆಗೇ ಸತೀಶನ ಮದುವೆ ಮಾಡಿಸಿದ್ದಾರೆ. ಅರಿಶಿಣ ಕೊಂಬು ಕಟ್ಟಿ ಸತೀಶ್ ಆಕೆಯನ್ನು ವರಿಸಿದ್ದಾನೆ.
ಸಕಲೇಶಪುರ
ನಮ್ಮನ್ನು ಬೆದರಿಸಿ ಸತೀಶ್​ ನನ್ನ ಮಗಳನ್ನು ಮದುವೆಯಾಗಿದ್ದಾನೆ. ಇದು ಮಗಳಿಗೆ ಇಷ್ಟವಿಲ್ಲದಿದ್ದರೂ ಬಲವಂತವಾಗಿ ತಾಳಿಕಟ್ಟಿ ಕರೆದೊಯ್ದಿದ್ದಾನೆ. ಆಕೆಗೆ ಪ್ರಾಣ ಬೆದರಿಕೆ ಇದ್ದು, ರಕ್ಷಣೆ ಕೊಡಬೇಕೆಂದು ಹುಡುಗಿಯ ತಾಯಿ ಸಕಲೇಶಪುರ ನಗರ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸುವಂತೆ ಮನವಿ ಮಾಡಿದ್ದಾರೆ.


ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮೂಲದ ವರನೊಂದಿಗೆ ಈ ಹುಡುಗಿಗೆ ಮದುವೆ ನಿಶ್ಚಯವಾಗಿದ್ದು ಜ. 25ರಂದು ಮದುವೆ ಕೂಡಾ ಫಿಕ್ಸ್ ಆಗಿತ್ತು. ಆದ್ರೆ ಪ್ರೀತಿಸುತ್ತಿದ್ದ ಹುಡುಗ ಮಾಡಿರುವ ಎಡವಟ್ಟಿನಿಂದ ಆಕೆಯ ಮದುವೆಯ ಮುರಿದುಬಿದ್ದಿದೆ.

ಇದನ್ನೂ ಓದಿ:ರಾಮೇಶ್ವರಂ: ಸಮುದ್ರದಲ್ಲಿ ಹೊತ್ತಿ ಉರಿದ ಬೋಟ್​ - ವಿಡಿಯೋ ನೋಡಿ

ಹಾಸನ(ಸಕಲೇಶಪುರ): ಮದುವೆ ನಿಶ್ಚಯವಾಗಿದ್ದ ಹುಡುಗಿಗೆ ಬಲವಂತವಾಗಿ ತಾಳಿ ಕಟ್ಟಿದ ಘಟನೆಯ ಜಿಲ್ಲೆಯ ಸಕಲೇಶಪುರ ಪಟ್ಟಣದಲ್ಲಿ ನಡೆದಿದೆ.

ಅರಕೆರೆ ಗ್ರಾಮದ ಸತೀಶ್ ಎಂಬಾತ ತನ್ನ ಸ್ನೇಹಿತರೊಂದಿಗೆ ಸಕಲೇಶಪುರದ ಕುಶಾಲನಗರ ಬಡಾವಣೆಯಲ್ಲಿರುವ ಹುಡುಗಿಯ ಮನೆಗೆ ಆಗಮಿಸಿ ಆಕೆ ಮತ್ತು ಆಕೆಯ ತಾಯಿಯನ್ನ ಬೆದರಿಸಿ ಅವಳ ಮನೆಯಲ್ಲಿಯೇ ಬಲವಂತವಾಗಿ ಹಾರ ಬದಲಿಸಿಕೊಂಡು ತಾಳಿ ಕಟ್ಟಿ ತನ್ನ ಮನೆಗೆ ಕರೆದೊಯ್ದಿದ್ದಾನೆ. ಮದುವೆ ನಿಶ್ಚಯವಾಗಿದ್ದ ಹುಡುಗಿಯನ್ನು ತಾನು ಪ್ರೀತಿಸುತ್ತಿರುವುದಾಗಿ ಹೇಳಿಕೊಂಡಿದ್ದ ಸತೀಶ್, ಆಕೆಗೆ ಮದುವೆ ಫಿಕ್ಸ್​ ಆಗಿರುವುದು ಗೊತ್ತಾದ ಬಳಿಕ ಆತ್ಮಹತ್ಯೆಗೆ ಮುಂದಾಗಿದ್ದ ಎನ್ನಲಾಗ್ತಿದೆ. ಹೀಗಾಗಿ ಆತನ ಸ್ನೇಹಿತರು ಅವನನ್ನು ಕರೆದುಕೊಂಡು ಹುಡುಗಿಯ ಮನೆಗೆ ಹೋಗಿ ಆಕೆಯ ಜೊತೆಗೇ ಸತೀಶನ ಮದುವೆ ಮಾಡಿಸಿದ್ದಾರೆ. ಅರಿಶಿಣ ಕೊಂಬು ಕಟ್ಟಿ ಸತೀಶ್ ಆಕೆಯನ್ನು ವರಿಸಿದ್ದಾನೆ.
ಸಕಲೇಶಪುರ
ನಮ್ಮನ್ನು ಬೆದರಿಸಿ ಸತೀಶ್​ ನನ್ನ ಮಗಳನ್ನು ಮದುವೆಯಾಗಿದ್ದಾನೆ. ಇದು ಮಗಳಿಗೆ ಇಷ್ಟವಿಲ್ಲದಿದ್ದರೂ ಬಲವಂತವಾಗಿ ತಾಳಿಕಟ್ಟಿ ಕರೆದೊಯ್ದಿದ್ದಾನೆ. ಆಕೆಗೆ ಪ್ರಾಣ ಬೆದರಿಕೆ ಇದ್ದು, ರಕ್ಷಣೆ ಕೊಡಬೇಕೆಂದು ಹುಡುಗಿಯ ತಾಯಿ ಸಕಲೇಶಪುರ ನಗರ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸುವಂತೆ ಮನವಿ ಮಾಡಿದ್ದಾರೆ.


ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮೂಲದ ವರನೊಂದಿಗೆ ಈ ಹುಡುಗಿಗೆ ಮದುವೆ ನಿಶ್ಚಯವಾಗಿದ್ದು ಜ. 25ರಂದು ಮದುವೆ ಕೂಡಾ ಫಿಕ್ಸ್ ಆಗಿತ್ತು. ಆದ್ರೆ ಪ್ರೀತಿಸುತ್ತಿದ್ದ ಹುಡುಗ ಮಾಡಿರುವ ಎಡವಟ್ಟಿನಿಂದ ಆಕೆಯ ಮದುವೆಯ ಮುರಿದುಬಿದ್ದಿದೆ.

ಇದನ್ನೂ ಓದಿ:ರಾಮೇಶ್ವರಂ: ಸಮುದ್ರದಲ್ಲಿ ಹೊತ್ತಿ ಉರಿದ ಬೋಟ್​ - ವಿಡಿಯೋ ನೋಡಿ

Last Updated : Jan 23, 2021, 1:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.