ಹಾಸನ(ಸಕಲೇಶಪುರ): ಮದುವೆ ನಿಶ್ಚಯವಾಗಿದ್ದ ಹುಡುಗಿಗೆ ಬಲವಂತವಾಗಿ ತಾಳಿ ಕಟ್ಟಿದ ಘಟನೆಯ ಜಿಲ್ಲೆಯ ಸಕಲೇಶಪುರ ಪಟ್ಟಣದಲ್ಲಿ ನಡೆದಿದೆ.
ಅರಕೆರೆ ಗ್ರಾಮದ ಸತೀಶ್ ಎಂಬಾತ ತನ್ನ ಸ್ನೇಹಿತರೊಂದಿಗೆ ಸಕಲೇಶಪುರದ ಕುಶಾಲನಗರ ಬಡಾವಣೆಯಲ್ಲಿರುವ ಹುಡುಗಿಯ ಮನೆಗೆ ಆಗಮಿಸಿ ಆಕೆ ಮತ್ತು ಆಕೆಯ ತಾಯಿಯನ್ನ ಬೆದರಿಸಿ ಅವಳ ಮನೆಯಲ್ಲಿಯೇ ಬಲವಂತವಾಗಿ ಹಾರ ಬದಲಿಸಿಕೊಂಡು ತಾಳಿ ಕಟ್ಟಿ ತನ್ನ ಮನೆಗೆ ಕರೆದೊಯ್ದಿದ್ದಾನೆ. ಮದುವೆ ನಿಶ್ಚಯವಾಗಿದ್ದ ಹುಡುಗಿಯನ್ನು ತಾನು ಪ್ರೀತಿಸುತ್ತಿರುವುದಾಗಿ ಹೇಳಿಕೊಂಡಿದ್ದ ಸತೀಶ್, ಆಕೆಗೆ ಮದುವೆ ಫಿಕ್ಸ್ ಆಗಿರುವುದು ಗೊತ್ತಾದ ಬಳಿಕ ಆತ್ಮಹತ್ಯೆಗೆ ಮುಂದಾಗಿದ್ದ ಎನ್ನಲಾಗ್ತಿದೆ. ಹೀಗಾಗಿ ಆತನ ಸ್ನೇಹಿತರು ಅವನನ್ನು ಕರೆದುಕೊಂಡು ಹುಡುಗಿಯ ಮನೆಗೆ ಹೋಗಿ ಆಕೆಯ ಜೊತೆಗೇ ಸತೀಶನ ಮದುವೆ ಮಾಡಿಸಿದ್ದಾರೆ. ಅರಿಶಿಣ ಕೊಂಬು ಕಟ್ಟಿ ಸತೀಶ್ ಆಕೆಯನ್ನು ವರಿಸಿದ್ದಾನೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮೂಲದ ವರನೊಂದಿಗೆ ಈ ಹುಡುಗಿಗೆ ಮದುವೆ ನಿಶ್ಚಯವಾಗಿದ್ದು ಜ. 25ರಂದು ಮದುವೆ ಕೂಡಾ ಫಿಕ್ಸ್ ಆಗಿತ್ತು. ಆದ್ರೆ ಪ್ರೀತಿಸುತ್ತಿದ್ದ ಹುಡುಗ ಮಾಡಿರುವ ಎಡವಟ್ಟಿನಿಂದ ಆಕೆಯ ಮದುವೆಯ ಮುರಿದುಬಿದ್ದಿದೆ.
ಇದನ್ನೂ ಓದಿ:ರಾಮೇಶ್ವರಂ: ಸಮುದ್ರದಲ್ಲಿ ಹೊತ್ತಿ ಉರಿದ ಬೋಟ್ - ವಿಡಿಯೋ ನೋಡಿ