ETV Bharat / bharat

ಪ್ರಧಾನಿ ಮೋದಿ 'ಹೀಗೆ' ಮಾಡಿದ್ರೆ ಬಿಜೆಪಿ ಪರ ಪ್ರಚಾರ ಮಾಡುವೆ: ಅರವಿಂದ್​ ಕೇಜ್ರಿವಾಲ್​​ - Kejriwal challenge to PM modi

ನಾನು ಸಕ್ಕರೆ ಕಾಯಿಲೆ ರೋಗಿಯಾಗಿದ್ದರೂ, ಜೈಲಿನಲ್ಲಿದ್ದಾಗ ಇನ್ಸುಲಿನ್ ನಿಲ್ಲಿಸಲಾಗಿತ್ತು. ಇದರಿಂದ ನನ್ನ ಕಿಡ್ನಿ ವಿಫಲವಾಗಬಹುದಿತ್ತು, ಸಾಯುವ ಸಾಧ್ಯತೆಯೂ ಇತ್ತು ಎಂದು ದೆಹಲಿ ಮಾಜಿ ಸಿಎಂ ಅರವಿಂದ್​ ಕೇಜ್ರಿವಾಲ್​ ಹೇಳಿದ್ದಾರೆ.

author img

By PTI

Published : 2 hours ago

ಅರವಿಂದ್​ ಕೇಜ್ರಿವಾಲ್​​
ಅರವಿಂದ್​ ಕೇಜ್ರಿವಾಲ್​​ (ETV Bharat)

ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಜಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಅವರು ಸವಾಲು ಹಾಕಿದ್ದಾರೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಉಚಿತ ವಿದ್ಯುತ್​ ನೀಡಿದಲ್ಲಿ ಕೇಸರಿ ಪಡೆಯ ಪರವಾಗಿಯೇ ಚುನಾವಣಾ ಪ್ರಚಾರ ಮಾಡುವುದಾಗಿ ಹೇಳಿದ್ದಾರೆ.

ಆಪ್​ ಪಕ್ಷದಿಂದ ಭಾನುವಾರ ಹಮ್ಮಿಕೊಂಡಿದ್ದ ಜನತಾ ಕಿ ಅದಾಲತ್​​ನಲ್ಲಿ ಮಾತನಾಡಿದ ಕೇಜ್ರಿವಾಲ್, ಬಿಜೆಪಿಯ ಡಬಲ್ ಇಂಜಿನ್ ಸರ್ಕಾರಗಳು ವಿಫಲವಾಗಿವೆ. ಹರಿಯಾಣ ಮತ್ತು ಜಮ್ಮು-ಕಾಶ್ಮೀರದಲ್ಲಿ ಸೋಲಾಗಲಿದೆ. ನವೆಂಬರ್‌ನಲ್ಲಿ ಜಾರ್ಖಂಡ್ ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅವುಗಳ ಜೊತೆಗೆ ದೆಹಲಿ ವಿಧಾನಸಭಾ ಚುನಾವಣೆಯನ್ನೂ ನಡೆಸಿ. ಇದಕ್ಕೆ ಎಎಪಿ ಸಿದ್ಧವಾಗಿದೆ ಎಂದು ಹೇಳಿದರು.

22 ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ. ಹಣದುಬ್ಬರ, ಭ್ರಷ್ಟಾಚಾರ ಮತ್ತು ನಿರುದ್ಯೋಗ ಆ ರಾಜ್ಯಗಳಲ್ಲಿ ಹೆಚ್ಚಾಗಿದೆ. ಶೀಘ್ರದಲ್ಲೇ ಹರಿಯಾಣ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲೂ ಡಬಲ್​ ಎಂಜಿನ್​ ಪತನವಾಗಲಿದೆ. ಇದಕ್ಕೆ ಇಂಬು ನೀಡುವಂತೆ ಎಕ್ಸಿಟ್​​ ಪೋಲ್​​ ಸಮೀಕ್ಷೆಗಳು ಬಂದಿವೆ ಎಂದರು.

ಆರು ಉಚಿತಗಳ ಸಿಹಿ ಹಂಚಿಕೆ: ಭಾಷಣದ ವೇಳೆ ಕೇಜ್ರಿವಾಲ್ ಅವರು ಆರು ಸಿಹಿ ತಿಂಡಿಗಳ ಪೊಟ್ಟಣ ಹಿಡಿದುಕೊಂಡಿದ್ದರು. ಪ್ರತಿ ಸಿಹಿಯೂ ದಿಲ್ಲಿ ಸರ್ಕಾರ ಜಾರಿ ಮಾಡಿದ ಆರು ಉಚಿತ ಯೋಜನೆಗಳನ್ನು ಸಂಕೇತಿಸುತ್ತದೆ. ಉಚಿತ ವಿದ್ಯುತ್, ನೀರು, ಮಹಿಳೆಯರಿಗೆ ಬಸ್ ಪ್ರಯಾಣ, ವೃದ್ಧರಿಗೆ ತೀರ್ಥಯಾತ್ರೆ, ಆರೋಗ್ಯ ಮತ್ತು ಶಿಕ್ಷಣವನ್ನು ಸರ್ಕಾರ ಉಚಿತವಾಗಿ ನೀಡುತ್ತಿದೆ ಎಂದು ಕೇಜ್ರಿವಾಲ್​ ಹೇಳಿದರು.

ಈ ಪ್ಯಾಕೆಟ್‌ಗಳನ್ನು ಜನರಿಗೆ ವಿತರಿಸಲಾಗುವುದು. ಇದನ್ನು ಪ್ರಸಾದ ಎಂದು ಪರಿಗಣಿಸಿ, ಮನೆಗೆ ಹೋದಾಗ ‘ಪೂಜೆ’ ಮಾಡಿ ಇತರರೊಂದಿಗೆ ಹಂಚಿಕೊಳ್ಳಿ. ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿದರೆ, ನೀವು ಅನುಭವಿಸುತ್ತಿರುವ ಆರು ಉಚಿತ ಯೋಜನೆಗಳು ಬಂದ್​ ಆಗಲಿವೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಡಿಟಿಸಿ, ಸರ್ಕಾರಿ ಶಾಲೆ, ಆಸ್ಪತ್ರೆಗಳಂತಹ ಸೇವೆಗಳನ್ನು ಖಾಸಗಿಯವರಿಗೆ ಹಸ್ತಾಂತರಿಸುತ್ತದೆ ಎಂದು ಮಾಜಿ ಸಿಎಂ ಎಚ್ಚರಿಸಿದರು.

ಡಬಲ್​ ಲೂಟಿ ಸರ್ಕಾರ: ಡಬಲ್ ಇಂಜಿನ್ ಮಾದರಿಯ ಸರ್ಕಾರವನ್ನು ಡಬಲ್ ಲೂಟಿ ಮತ್ತು ಡಬಲ್ ಭ್ರಷ್ಟಾಚಾರ ಎಂದು ಲೇವಡಿ ಮಾಡಿದ ಮಾಜಿ ಸಿಎಂ, ದೆಹಲಿಯ ಬಸ್ ಚಾಲಕರು, ಡೇಟಾ ಎಂಟ್ರಿ ಆಪರೇಟರ್‌ಗಳು, ಹೋಮ್ ಗಾರ್ಡ್‌ಗಳ ಸಂಬಳವನ್ನು ಸ್ಥಗಿತಗೊಳಿಸಿರುವ ಬಿಜೆಪಿ ಬಡವರ ವಿರೋಧಿ ಎಂದು ಆರೋಪಿಸಿದರು.

ನಾನು ಸಕ್ಕರೆ ಕಾಯಿಲೆ ರೋಗಿಯಾಗಿದ್ದರೂ, ಜೈಲಿನಲ್ಲಿ ಇರುವಾಗ ಇನ್ಸುಲಿನ್ ನಿಲ್ಲಿಸಲಾಗಿತ್ತು. ಇದರಿಂದ ನನ್ನ ಕಿಡ್ನಿ ವಿಫಲವಾಗಬಹುದಿತ್ತು, ನಾನು ಸಾಯುವ ಸಾಧ್ಯತೆಯೂ ಇತ್ತು ಎಂದು ಅರವಿಂದ್​ ಕೇಜ್ರಿವಾಲ್​ ದೂರಿದರು.

ಇದನ್ನೂ ಓದಿ: ಸ್ಪಾಟ್​​ ಬುಕ್ಕಿಂಗ್​ ರದ್ದು, ದಿನಕ್ಕೆ 80 ಸಾವಿರ ಭಕ್ತರಿಗೆ ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ: ಕೇರಳ ಸರ್ಕಾರ - SPOT BOOKING CLOSED IN SABARIMALA

ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಜಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಅವರು ಸವಾಲು ಹಾಕಿದ್ದಾರೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಉಚಿತ ವಿದ್ಯುತ್​ ನೀಡಿದಲ್ಲಿ ಕೇಸರಿ ಪಡೆಯ ಪರವಾಗಿಯೇ ಚುನಾವಣಾ ಪ್ರಚಾರ ಮಾಡುವುದಾಗಿ ಹೇಳಿದ್ದಾರೆ.

ಆಪ್​ ಪಕ್ಷದಿಂದ ಭಾನುವಾರ ಹಮ್ಮಿಕೊಂಡಿದ್ದ ಜನತಾ ಕಿ ಅದಾಲತ್​​ನಲ್ಲಿ ಮಾತನಾಡಿದ ಕೇಜ್ರಿವಾಲ್, ಬಿಜೆಪಿಯ ಡಬಲ್ ಇಂಜಿನ್ ಸರ್ಕಾರಗಳು ವಿಫಲವಾಗಿವೆ. ಹರಿಯಾಣ ಮತ್ತು ಜಮ್ಮು-ಕಾಶ್ಮೀರದಲ್ಲಿ ಸೋಲಾಗಲಿದೆ. ನವೆಂಬರ್‌ನಲ್ಲಿ ಜಾರ್ಖಂಡ್ ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅವುಗಳ ಜೊತೆಗೆ ದೆಹಲಿ ವಿಧಾನಸಭಾ ಚುನಾವಣೆಯನ್ನೂ ನಡೆಸಿ. ಇದಕ್ಕೆ ಎಎಪಿ ಸಿದ್ಧವಾಗಿದೆ ಎಂದು ಹೇಳಿದರು.

22 ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ. ಹಣದುಬ್ಬರ, ಭ್ರಷ್ಟಾಚಾರ ಮತ್ತು ನಿರುದ್ಯೋಗ ಆ ರಾಜ್ಯಗಳಲ್ಲಿ ಹೆಚ್ಚಾಗಿದೆ. ಶೀಘ್ರದಲ್ಲೇ ಹರಿಯಾಣ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲೂ ಡಬಲ್​ ಎಂಜಿನ್​ ಪತನವಾಗಲಿದೆ. ಇದಕ್ಕೆ ಇಂಬು ನೀಡುವಂತೆ ಎಕ್ಸಿಟ್​​ ಪೋಲ್​​ ಸಮೀಕ್ಷೆಗಳು ಬಂದಿವೆ ಎಂದರು.

ಆರು ಉಚಿತಗಳ ಸಿಹಿ ಹಂಚಿಕೆ: ಭಾಷಣದ ವೇಳೆ ಕೇಜ್ರಿವಾಲ್ ಅವರು ಆರು ಸಿಹಿ ತಿಂಡಿಗಳ ಪೊಟ್ಟಣ ಹಿಡಿದುಕೊಂಡಿದ್ದರು. ಪ್ರತಿ ಸಿಹಿಯೂ ದಿಲ್ಲಿ ಸರ್ಕಾರ ಜಾರಿ ಮಾಡಿದ ಆರು ಉಚಿತ ಯೋಜನೆಗಳನ್ನು ಸಂಕೇತಿಸುತ್ತದೆ. ಉಚಿತ ವಿದ್ಯುತ್, ನೀರು, ಮಹಿಳೆಯರಿಗೆ ಬಸ್ ಪ್ರಯಾಣ, ವೃದ್ಧರಿಗೆ ತೀರ್ಥಯಾತ್ರೆ, ಆರೋಗ್ಯ ಮತ್ತು ಶಿಕ್ಷಣವನ್ನು ಸರ್ಕಾರ ಉಚಿತವಾಗಿ ನೀಡುತ್ತಿದೆ ಎಂದು ಕೇಜ್ರಿವಾಲ್​ ಹೇಳಿದರು.

ಈ ಪ್ಯಾಕೆಟ್‌ಗಳನ್ನು ಜನರಿಗೆ ವಿತರಿಸಲಾಗುವುದು. ಇದನ್ನು ಪ್ರಸಾದ ಎಂದು ಪರಿಗಣಿಸಿ, ಮನೆಗೆ ಹೋದಾಗ ‘ಪೂಜೆ’ ಮಾಡಿ ಇತರರೊಂದಿಗೆ ಹಂಚಿಕೊಳ್ಳಿ. ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿದರೆ, ನೀವು ಅನುಭವಿಸುತ್ತಿರುವ ಆರು ಉಚಿತ ಯೋಜನೆಗಳು ಬಂದ್​ ಆಗಲಿವೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಡಿಟಿಸಿ, ಸರ್ಕಾರಿ ಶಾಲೆ, ಆಸ್ಪತ್ರೆಗಳಂತಹ ಸೇವೆಗಳನ್ನು ಖಾಸಗಿಯವರಿಗೆ ಹಸ್ತಾಂತರಿಸುತ್ತದೆ ಎಂದು ಮಾಜಿ ಸಿಎಂ ಎಚ್ಚರಿಸಿದರು.

ಡಬಲ್​ ಲೂಟಿ ಸರ್ಕಾರ: ಡಬಲ್ ಇಂಜಿನ್ ಮಾದರಿಯ ಸರ್ಕಾರವನ್ನು ಡಬಲ್ ಲೂಟಿ ಮತ್ತು ಡಬಲ್ ಭ್ರಷ್ಟಾಚಾರ ಎಂದು ಲೇವಡಿ ಮಾಡಿದ ಮಾಜಿ ಸಿಎಂ, ದೆಹಲಿಯ ಬಸ್ ಚಾಲಕರು, ಡೇಟಾ ಎಂಟ್ರಿ ಆಪರೇಟರ್‌ಗಳು, ಹೋಮ್ ಗಾರ್ಡ್‌ಗಳ ಸಂಬಳವನ್ನು ಸ್ಥಗಿತಗೊಳಿಸಿರುವ ಬಿಜೆಪಿ ಬಡವರ ವಿರೋಧಿ ಎಂದು ಆರೋಪಿಸಿದರು.

ನಾನು ಸಕ್ಕರೆ ಕಾಯಿಲೆ ರೋಗಿಯಾಗಿದ್ದರೂ, ಜೈಲಿನಲ್ಲಿ ಇರುವಾಗ ಇನ್ಸುಲಿನ್ ನಿಲ್ಲಿಸಲಾಗಿತ್ತು. ಇದರಿಂದ ನನ್ನ ಕಿಡ್ನಿ ವಿಫಲವಾಗಬಹುದಿತ್ತು, ನಾನು ಸಾಯುವ ಸಾಧ್ಯತೆಯೂ ಇತ್ತು ಎಂದು ಅರವಿಂದ್​ ಕೇಜ್ರಿವಾಲ್​ ದೂರಿದರು.

ಇದನ್ನೂ ಓದಿ: ಸ್ಪಾಟ್​​ ಬುಕ್ಕಿಂಗ್​ ರದ್ದು, ದಿನಕ್ಕೆ 80 ಸಾವಿರ ಭಕ್ತರಿಗೆ ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ: ಕೇರಳ ಸರ್ಕಾರ - SPOT BOOKING CLOSED IN SABARIMALA

ETV Bharat Logo

Copyright © 2024 Ushodaya Enterprises Pvt. Ltd., All Rights Reserved.