ETV Bharat / state

ಸಿಎಎದಿಂದ ಯಾವುದೇ ಅಪಾಯವಿಲ್ಲ.. ಪಾಕ್​, ಬಾಂಗ್ಲಾದ ಮುಸ್ಲಿಮೇತರರಿಗೆ ಪೌರತ್ವ ನೀಡುತ್ತೆ: ಪರ್ವತಯ್ಯ - ಕಾನೂನು ಸಚಿವ ಜಿನೇಂದ್ರನಾಥ್ ಮಂಡಲ್ ಸಿಂಗ್

ಬಿಜೆಪಿ ಮುಖಂಡ ಹಾಗೂ ತಾ.ಪಂ ಮಾಜಿ ಅಧ್ಯಕ್ಷ ಪರ್ವತಯ್ಯ ಹಾಸನದಲ್ಲಿ ಮಾತನಾಡಿ, ಪೌರತ್ವ ತಿದ್ದುಪಡಿ ಮಸೂದೆಯಡಿ ಭಾರತಕ್ಕೆ ಬಂದ ನಿರಾಶ್ರಿತರಿಗೆ ಭಾರತೀಯ ಪೌರತ್ವ ನೀಡಲಾಗುವುದು ಎಂದರು.

Giving Indian citizenship
ಬಿಜೆಪಿ ಮುಖಂಡ ಪರ್ವತಯ್ಯ
author img

By

Published : Jan 8, 2020, 8:17 AM IST

ಹಾಸನ: ಭಾರತಕ್ಕೆ ವಲಸೆ ಬಂದ ನಿರಾಶ್ರಿತರಿಗೆ ಪೌರತ್ವ ತಿದ್ದುಪಡಿ ಕಾಯ್ದೆಯಡಿ ಭಾರತೀಯ ಪೌರತ್ವ ನೀಡಲಾಗುತ್ತಿದೆ ಎಂದು ಬಿಜೆಪಿ ಮುಖಂಡ ಹಾಗೂ ತಾಪಂ ಮಾಜಿ ಅಧ್ಯಕ್ಷ ಪರ್ವತಯ್ಯ ಹಾಸನದಲ್ಲಿ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಮಸೂದೆಯು ಕಾಯ್ದೆಯಾಗಿ ಬದಲಾಗಿದೆ. ಭಾರತದ ನೆರೆಯ ಪಾಕಿಸ್ತಾನ ಮತ್ತು ಬಾಂಗ್ಲಾದೇಶ, ಆಫ್ಘಾನಿಸ್ಥಾನ ದೇಶಗಳಿಂದ ಧಾರ್ಮಿಕ ಕಿರುಕುಳಕ್ಕೊಳಗಾಗಿ ಭಾರತಕ್ಕೆ ವಲಸೆ ಬಂದ ನಿರಾಶ್ರಿತರಿಗೆ ಈ ಕಾಯ್ದೆಯಡಿ ಭಾರತೀಯ ಪೌರತ್ವ ನೀಡಲಾಗುತ್ತದೆ.

ನಿರಾಶ್ರಿತರಿಗೆ ಭಾರತೀಯ ಪೌರತ್ವ ನೀಡಲಾಗುವುದು- ಪರ್ವತಯ್ಯ

ಪೌರತ್ವ ಕಾಯ್ದೆಯ ಪ್ರಕಾರ ಅಕ್ರಮ ವಲಸಿಗರಿಗೆ ಭಾರತದ ಪೌರತ್ವ ನೀಡಲು ಅವಕಾಶವಿಲ್ಲ. ಆದರೆ ಹೊಸ ತಿದ್ದುಪಡಿಯ ಮಸೂದೆಯ ಅನ್ವಯ ಇಲ್ಲಿ ಬಂದು ನೆಲೆಸಿರುವ ಅಲ್ಪಸಂಖ್ಯಾತರಾದ ಮುಸ್ಲಿಂ, ಜೈನ್, ಬೌದ್ಧರು, ಪಾರ್ಸಿ, ಕ್ರಿಶ್ಚಿಯನ್ನರು ಅನೇಕ ವರ್ಷಗಳಿಂದ ಭಾರತದಲ್ಲಿ ನೆಲಸಿದ್ದರೆ. ಈ ಕಾಯ್ದೆಯ ಪ್ರಕಾರ ಇಲ್ಲಿನ ಪೌರತ್ವಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ ಎಂದರು.

1955ರ ಪೌರತ್ವ ಕಾಯ್ದೆಗೆ ತಿದ್ದುಪಡಿಯನ್ನು ತರಲಾಗಿದ್ದು, ಪೌರತ್ವ ಕಾಯ್ದೆಯು ಕಲಂ 6(3) ಒಂದು ತಿದ್ದುಪಡಿ ಮಾಡಲಾಗಿದೆ. ಪಾಕಿಸ್ತಾನದ ಮೊದಲ ದಲಿತರಾಗಿದ್ದ ಕಾನೂನು ಸಚಿವ ಜಿನೇಂದ್ರನಾಥ್ ಮಂಡಲ್ ಸಿಂಗ್ ಪಾಕಿಸ್ತಾನದ ಸಚಿವ ಸಂಪುಟಕ್ಕೆ ನೀಡಿದ ರಾಜೀನಾಮೆ ಪತ್ರದಲ್ಲಿ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿದ್ದ ಗಂಭೀರ ಸ್ವರೂಪದ ದೌರ್ಜನ್ಯವನ್ನು ಉಲ್ಲೇಖಿಸಿದ್ದಾರೆ. ಪಾಕಿಸ್ತಾನದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತಡೆಯಲು ವಿಫಲನಾಗಿರುವುದರಿಂದಲೇ ರಾಜೀನಾಮೆ ನೀಡುತ್ತಿದ್ದೇನೆ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ ಎಂದರು.

ಹಾಸನ: ಭಾರತಕ್ಕೆ ವಲಸೆ ಬಂದ ನಿರಾಶ್ರಿತರಿಗೆ ಪೌರತ್ವ ತಿದ್ದುಪಡಿ ಕಾಯ್ದೆಯಡಿ ಭಾರತೀಯ ಪೌರತ್ವ ನೀಡಲಾಗುತ್ತಿದೆ ಎಂದು ಬಿಜೆಪಿ ಮುಖಂಡ ಹಾಗೂ ತಾಪಂ ಮಾಜಿ ಅಧ್ಯಕ್ಷ ಪರ್ವತಯ್ಯ ಹಾಸನದಲ್ಲಿ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಮಸೂದೆಯು ಕಾಯ್ದೆಯಾಗಿ ಬದಲಾಗಿದೆ. ಭಾರತದ ನೆರೆಯ ಪಾಕಿಸ್ತಾನ ಮತ್ತು ಬಾಂಗ್ಲಾದೇಶ, ಆಫ್ಘಾನಿಸ್ಥಾನ ದೇಶಗಳಿಂದ ಧಾರ್ಮಿಕ ಕಿರುಕುಳಕ್ಕೊಳಗಾಗಿ ಭಾರತಕ್ಕೆ ವಲಸೆ ಬಂದ ನಿರಾಶ್ರಿತರಿಗೆ ಈ ಕಾಯ್ದೆಯಡಿ ಭಾರತೀಯ ಪೌರತ್ವ ನೀಡಲಾಗುತ್ತದೆ.

ನಿರಾಶ್ರಿತರಿಗೆ ಭಾರತೀಯ ಪೌರತ್ವ ನೀಡಲಾಗುವುದು- ಪರ್ವತಯ್ಯ

ಪೌರತ್ವ ಕಾಯ್ದೆಯ ಪ್ರಕಾರ ಅಕ್ರಮ ವಲಸಿಗರಿಗೆ ಭಾರತದ ಪೌರತ್ವ ನೀಡಲು ಅವಕಾಶವಿಲ್ಲ. ಆದರೆ ಹೊಸ ತಿದ್ದುಪಡಿಯ ಮಸೂದೆಯ ಅನ್ವಯ ಇಲ್ಲಿ ಬಂದು ನೆಲೆಸಿರುವ ಅಲ್ಪಸಂಖ್ಯಾತರಾದ ಮುಸ್ಲಿಂ, ಜೈನ್, ಬೌದ್ಧರು, ಪಾರ್ಸಿ, ಕ್ರಿಶ್ಚಿಯನ್ನರು ಅನೇಕ ವರ್ಷಗಳಿಂದ ಭಾರತದಲ್ಲಿ ನೆಲಸಿದ್ದರೆ. ಈ ಕಾಯ್ದೆಯ ಪ್ರಕಾರ ಇಲ್ಲಿನ ಪೌರತ್ವಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ ಎಂದರು.

1955ರ ಪೌರತ್ವ ಕಾಯ್ದೆಗೆ ತಿದ್ದುಪಡಿಯನ್ನು ತರಲಾಗಿದ್ದು, ಪೌರತ್ವ ಕಾಯ್ದೆಯು ಕಲಂ 6(3) ಒಂದು ತಿದ್ದುಪಡಿ ಮಾಡಲಾಗಿದೆ. ಪಾಕಿಸ್ತಾನದ ಮೊದಲ ದಲಿತರಾಗಿದ್ದ ಕಾನೂನು ಸಚಿವ ಜಿನೇಂದ್ರನಾಥ್ ಮಂಡಲ್ ಸಿಂಗ್ ಪಾಕಿಸ್ತಾನದ ಸಚಿವ ಸಂಪುಟಕ್ಕೆ ನೀಡಿದ ರಾಜೀನಾಮೆ ಪತ್ರದಲ್ಲಿ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿದ್ದ ಗಂಭೀರ ಸ್ವರೂಪದ ದೌರ್ಜನ್ಯವನ್ನು ಉಲ್ಲೇಖಿಸಿದ್ದಾರೆ. ಪಾಕಿಸ್ತಾನದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತಡೆಯಲು ವಿಫಲನಾಗಿರುವುದರಿಂದಲೇ ರಾಜೀನಾಮೆ ನೀಡುತ್ತಿದ್ದೇನೆ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ ಎಂದರು.

Intro:ಹಾಸನ: ಭಾರತಕ್ಕೆ ವಲಸೆ ಬಂದ ನಿರಾಶ್ರಿತರಿಗೆ ಈ ಕಾಯಿದೆಯಡಿ ಭಾರತೀಯ ಪೌರತ್ವ ನೀಡಲಾಗುತ್ತಿದೆ ಎಂದು ಬಿಜೆಪಿ ಮುಖಂಡ ಹಾಗೂ ತಾಪಂ ಮಾಜಿ ಅಧ್ಯಕ್ಷ ಪರ್ವತಯ್ಯ ತಿಳಿಸಿದರು.
      ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿ, ಪೌರತ್ವ ಕುರಿತು ಪೌರತ್ವ ತಿದ್ದುಪಡಿ ಮಸೂದೆಯು ಕಾಯ್ದೆಯಾಗಿ ಬದಲಾಗಿದೆ. ಭಾರತದ ನೆರೆಯ ಪಾಕಿಸ್ತಾನ ಮತ್ತು ಬಾಂಗ್ಲಾದೇಶ, ಆಫ್ಘಾನಿಸ್ತಾನ ದೇಶಗಳಿಂದ ಧಾರ್ಮಿಕ ಕಿರುಕುಳಗಳ ಕಾರಣದಿಂದ ಭಾರತಕ್ಕೆ ವಲಸೆ ಬಂದ ನಿರಾಶ್ರಿತರಿಗೆ ಈ ಕಾಯ್ದೆಯಡಿ ಭಾರತೀಯ ಪೌರತ್ವ ನೀಡಲಾಗುತ್ತದೆ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಮುಸ್ಲಿಮರು ನಮಗೆ ಧರ್ಮದ ಆಧಾರದಲ್ಲಿ ಪೂರ್ವ ಪಾಕಿಸ್ತಾನ ಪಶ್ಚಿಮ ಪಾಕಿಸ್ಥಾನವನ್ನು ಕೇಳಿದರು. ಆಗ ಡಾ|| ಬಿ.ಆರ್. ಅಂಬೇಡ್ಕರ್ ರವರು, ಈ ದೇಶವನ್ನು ವಿಭಜನೆ ಮಾಡುವುದನ್ನು ವಿರೋಧಿಸಿದ್ದರು ಎಂದರು.
 ಪೌರತ್ವ ಕಾಯ್ದೆಯ ಪ್ರಕಾರ ಅಕ್ರಮ ವಲಸಿಗರಿಗೆ ಭಾರತದ ಪೌರತ್ವ ನೀಡಲು ಅವಕಾಶವಿಲ್ಲ. ಆದರೆ ಹೊಸ ತಿದ್ದುಪಡಿಯ ಮಸೂದೆಯ ಅನ್ವಯ ಮುಸ್ಲಿಮರಿಗೆ ಸೇರಿದ ಅಂದರೆ ಪಾಕಿಸ್ತಾನ, ಆಫ್ಘಾನಿಸ್ತಾನದಿಂದ ನೊಂದಿರುವ ಧಾರ್ಮಿಕ ಸ್ವಾತಂತ್ಯವು ಇಲ್ಲದೇ ಹಿಂಸೆ ಅನುಭವಿಸಿ ಅಲ್ಲಿ ಬದುಕಲು ಸಾಧ್ಯವಿಲ್ಲದೆ ತಮ್ಮ ಜೀವನವನ್ನು ಉಳಿಸಿಕೊಳ್ಳಲು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಆ ಮೂರು ದೇಶಗಳಿಂದ ಅಲ್ಪಸಂಖ್ಯಾತರಾದ ಹಿಂದು, ದಲಿತರು, ಜೈನ್, ಬೌದ್ಧರು, ಪಾರ್ಸಿ, ಕ್ರಿಶ್ಚಿಯನ್ನರು ಅನೇಕ ವರ್ಷಗಳಿಂದ ಭಾರತದಲ್ಲಿ ನೆಲಸಿದ್ದರೆ. ಈ ಕಾಯ್ದೆಯ ಪ್ರಕಾರ ಇಲ್ಲಿನ ಪೌರತ್ವಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.
೧೯೫೫ರ ಪೌರತ್ವ ಕಾಯ್ದೆಗೆ ತಿದ್ದುಪಡಿಯನ್ನು ತರಲಾಗಿದ್ದು, ಪೌರತ್ವ ಕಾಯ್ದೆಯು ಕಾಲಂ ೬ (೩) ಒಂದು ತಿದ್ದುಪಣಿ ಮಾಡಲಾಗಿದೆ ಅಷ್ಟೆ. ಅದು ಏನಂದರೆ ಮೂರು ದೇಶಗಳಲ್ಲಿ ಯಾರು ಧಾರ್ಮಿಕ ಅಲ್ಪಸಂಖ್ಯಾತರಿದ್ದಾರೆ ಅಲ್ಲಿ ನೊಂದು ಚಿತ್ರಹಿಂಸೆ ಅನುಭವಿಸಿ ಬಂದಿದ್ದಾರೆ ಅವರಿಗೆ ನಮ್ಮ ದೇಶದ ಪೌರತ್ವ ನೀಡಲಾಗುತ್ತಿದೆ. ನಮ್ಮ ದೇಶಕ್ಕೆ ಬಂದು ೬ ವರ್ಷ ಆಗಿರಬೇಕು. ಈ ಪೌರತ್ವ ಕಾಯ್ದೆಯ ನಿರ್ದಾರ ಇದೇ ಮೊದಲು ತೆಗೆದುಕೊಂಡ ನಿರ್ಧಾರವಲ್ಲ, ೧೯೭೧ ರಲ್ಲಿ ಬಾಂಗ್ಲಾದೇಶ ವಿಭಜನೆಯಾದಾಗ ಬಾಂಗ್ಲಾದೇಶದಿಂದ ಬಂದ ನಿರಾಶ್ರಿತರಿಗೆ ಪೌರತ್ವ ನೀಡಲಾಯಿತು. ಆದರೆ ಪಾಕಿಸ್ಥಾನದಿಂದ ಬಂದವರಿಗೆ ಪೌರತ್ವ ನೀಡಲಿಲ್ಲ ಎಂದು ಹೇಳಿದರು.
      ಪಾಕಿಸ್ಥಾನದ ಮೊದಲ ದಲಿತನಾಗಿದ್ದ ಕಾನೂನು ಸಚಿವ ಜಿನೇಂದ್ರನಾಥ್ ಮಂಡಲ್ ಸಿಂಗ್ ಪಾಕಿಸ್ಥಾನದ ಸಚಿವ ಸಂಪುಟಕ್ಕೆ ನೀಡಿದ ರಾಜಿನಾಮೆ ಪತ್ರದಲ್ಲಿ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿದ್ದ ಗಂಭೀರ ಸ್ವರೂಪದ ದೌರ್ಜನ್ಯವನ್ನು ಉಲ್ಲೇಖಿಸಿದ್ದಾರೆ. ಪಾಕಿಸ್ಥಾನದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತಡೆಯಲು ವಿಫಲನಾಗಿರುವುದರಿಂದಲೇ ರಾಜೀನಾಮೆ ನೀಡುತ್ತಿದ್ದೇನೆ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.
 ೧೯೪೭ ರಲ್ಲಿ ಭಾರತ ವಿಭಜನೆ ಆದಾಗ ದೇಶದ ಮುಸ್ಲಿಮರ ಸಂಖ್ಯೆ ಶೇ.೯.೮ ರಷ್ಟಿತ್ತು. ಅಂದರೆ ೩ ಕೋಟಿ ಮುಸ್ಲಿಂರು ಇದ್ದರು. ಈಗ ಅವರು ಸುಮಾರು ೧೭.೨೫ ಕೋಟಿಗೂ ಹೆಚ್ಚು ಜನ ಇದ್ದಾರೆ. ಈ ಕಾಯ್ದೆಯಿಂದ ಯಾವುದೇ ಮುಸ್ಲಿಮರಿಗೆ ಆಗಲಿ, ದಲಿತರಿಗಾಗಲೀ ತೊಂದರೆ ಆಗುವುದಿಲ್ಲ. ಈ ಮಸೂದೆಗೆ ಎಲ್ಲಾ ದಲಿತ ಬಾಂಧವರು ಬೆಂಬಲ ನೀಡುತ್ತಿದ್ದೇವೆ ಎಂದು ಹೇಳಿದರು.
 ಜನವರಿ ೧೨ನೇ ತಾರೀಕಿನಿಂದ ೧೭ರವರೆಗೆ ಈ ಬಗ್ಗೆ ಜಾಗೃತಿ ಅಭಿಯಾನವನ್ನು ಹಮ್ಮಿಕೊಂಡಿದ್ದು, ಮನೆ ಮನೆಗೆ ತಲುಪಿ ಪ್ರಬುದ್ಧರ ಗೋಷ್ಟಿಯನ್ನು ಮಾಡಿ ೧೫, ೧೬, ೧೭ನೇ ತಾರೀಕು ಮಂಗಳೂರಿನಲ್ಲಿ ರಾಷ್ಟ್ರೀಯ ನಾಯಕರು ಸಭೆ ನಡೆಸಲಿದ್ದಾರೆ ಎಂದು ಕಾರ್ಯಕ್ರಮದ ವಿವರ ನೀಡಿದರು.
     
ಬೈಟ್ : ಪರ್ವತಯ್ಯ, ಬಿಜೆಪಿ ಮುಖಂಡ ಹಾಗೂ ತಾಪಂ ಮಾಜಿ ಅಧ್ಯಕ್ಷ.

- ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.


Body:0


Conclusion:0
ETV Bharat Logo

Copyright © 2025 Ushodaya Enterprises Pvt. Ltd., All Rights Reserved.