ETV Bharat / state

ಕುಕ್ಕರ್​​ ಮೂಲಕ ಸ್ಟ್ರೀಮಿಂಗ್​ ವ್ಯವಸ್ಥೆ... ಗ್ರಾಮದಲ್ಲಿ ಕಡಿಮೆಯಾಯ್ತು ಕೊರೊನಾ ಪಾಸಿಟಿವ್ ಕೇಸ್​!

author img

By

Published : May 27, 2021, 1:39 AM IST

ಮಹಾಮಾರಿ ಕೊರೊನಾ ವೈರಸ್ ವಿರುದ್ಧದ ಹೋರಾಟ ದೇಶದಲ್ಲಿ ಮುಂದುವರೆದಿದ್ದು, ಇದರ ಮಧ್ಯೆ ಇಲ್ಲಿನ ಗ್ರಾಮಸ್ಥರು ಹೊಸದೊಂದು ಐಡಿಯಾ ಕಂಡು ಹಿಡಿದಿದ್ದಾರೆ.

Gadag covid
Gadag covid

ಗದಗ: ಸಾಂಕ್ರಾಮಿಕ ಕೊರೊನಾ ವೈರಸ್​ ಇದೀಗ ಹಳ್ಳಿಗಳಿಗೆ ಲಗ್ಗೆ ಹಾಕಿ ಸಾಲು ಸಾಲು ಸಾವಿಗೆ ಕಾರಣವಾಗ್ತಿದೆ. ಇದೇ ಕಾರಣಕ್ಕಾಗಿ ಅನೇಕ ಹಳ್ಳಿಗಳು ಕೋವಿಡ್​ ಹಾಟ್​ಸ್ಪಾಟ್​ಗಳಾಗಿ ಮಾರ್ಪಟ್ಟಿವೆ.ಆದರೆ ಇಲ್ಲೊಂದು ಗ್ರಾಮದಲ್ಲಿ ಮಹಾಮಾರಿ ಹಾವಳಿ ತಪ್ಪಿಸಲು ಹೊಸದೊಂದು ಐಡಿಯಾ ಹುಡುಕಿಕೊಂಡಿದ್ದಾರೆ.

ಕುಕ್ಕರ್​​ ಮೂಲಕ ಸ್ಟ್ರೀಮಿಂಗ್​ ವ್ಯವಸ್

ಸ್ಟ್ರೀಮಿಂಗ್ ವ್ಯವಸ್ಥೆ ಅಳವಡಿಸಿ ಕೊರೊನಾ ಕಂಟ್ರೋಲ್​ಗೆ ತಂದಿದ್ದಾರೆ.ಗದಗ ತಾಲೂಕಿನ ಹುಲಕೋಟಿ ಗ್ರಾಮದಲ್ಲಿ ಸುಮಾರು ನೂರಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಹೀಗಾಗಿ ಅಲ್ಲಿನ ಜನರ ನಿದ್ದೆಗೆಡಿಸಿತ್ತು. ಸ್ಥಳೀಯ ಶಾಸಕ ಹೆಚ್​​.ಕೆ. ಪಾಟೀಲ್​​ ಕೂಡ ಮುತುವರ್ಜಿಯಿಂದ ಆಯುಷ್​​ ಇಲಾಖೆಗೆ ಮನವಿ ಮಾಡಿದರು. ತಕ್ಷಣವೇ ಅಧಿಕಾರಿಗಳು ಗ್ರಾಮದಲ್ಲಿ ಟೆಂಟ್​​ ಅಳವಡಿಸಿ, ಆಯುರ್ವೇದ ಔಷಧಿ ಮತ್ತು ಸ್ಟ್ರೀಮಿಂಗ್​​ ವ್ಯವಸ್ಥೆ ಕಲ್ಪಿಸಿದ್ದಾರೆ.

ಇದನ್ನೂ ಓದಿ: ಗೌರಿಬಿದನೂರಿನ ಹೆಣ್ಣು ಮಗಳು ಇದೀಗ ತಮಿಳುನಾಡು ಸರ್ಕಾರದ ಮುಖ್ಯ ಕಾರ್ಯದರ್ಶಿ

ಜನರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಔಷಧಿಗಳ ಮೂಲಕ ಐದು ದಿನದ ಕೋರ್ಸ್​​ ಅಳವಡಿಸಿದ್ದಾರೆ. ಹುಲಕೋಟಿ ಗ್ರಾಮದಲ್ಲಿ 10 ಸಾವಿರ ಜನ ಸಂಖ್ಯೆಯಿದ್ದು, ಇದರಲ್ಲಿ ಪ್ರತಿ ದಿನ ನೂರಕ್ಕೂ ಹೆಚ್ಚು ಜನರಿಗೆ ಸ್ಟ್ರೀಮಿಂಗ್ ಮಾಡಲಾಗ್ತಿದೆ. ಆಯುಷ್ಯ ಇಲಾಖೆಯ ವತಿಯಿಂದ ಈ ಸ್ಟ್ರೀಮಿಂಗ್ ವ್ಯವಸ್ಥೆ ಮಾಡಲಾಗಿದೆ. ಇದು ಇಲ್ಲಿನ ಜನರಿಗೆ ಬಹಳಷ್ಟು ಪರಿಣಾಮಕಾರಿಯಾಗಿದೆ.

ಏನಿದು ಸ್ಟ್ರೀಮಿಂಗ್?

ಒಲೆ ಮೇಲೆ ಕುಕ್ಕರ್ ಇಟ್ಟು, ಅದಕ್ಕೆ ನೀರು ಹಾಕಿ ಅದರೊಳಗೆ ಆರಕ್ ಅಜೀಬ್ ಎಂಬ ಆಯುರ್ವೇದ ಔಷಧ ಹಾಕಿ ಬಿಸಿ ಮಾಡುತ್ತಾರೆ. ಆ ಬಿಸಿಯಾದ ನೀರಿನಿಂದ ಬರುವ ಆವಿಯನ್ನ ಪೈಪ್​ಗಳ ಮೂಲಕ ಜನರು ಸೇವಿಸುತ್ತಾರೆ. ಇದರಿಂದ ಜನರ ಶ್ವಾಸಕೋಶದಲ್ಲಿನ ಸಮಸ್ಯೆ ನಿವಾರಣೆಯಾಗಿ ಉಸಿರಾಟ ಸರಳವಾಗುತ್ತದೆ. ಜೊತೆಗೆ ಕ್ರಮೇಣವಾಗಿ ಸೋಂಕು ಕಡಿಮೆಯಾಗಿ ಕೊರೊನಾದಿಂದ ಗುಣಮುಖರಾಗುತ್ತಾರೆ.

ಸುಮಾರು 20 ದಿನಗಳಿಂದ ಗ್ರಾಮದಲ್ಲಿ ಈ ಟೆಂಟ್ ಅಳವಡಿಸಿದ್ದಾರೆ. ಜೊತೆಗೆ ಗ್ರಾಮದಲ್ಲಿ ಮಾಸ್ಕ್ ಹಾಕಿಕೊಳ್ಳುವುದು, ಸಾಮಾಜಿಕ ಅಂತರ ಮತ್ತು ಮನೆಯಲ್ಲಿದ್ದುಕೊಂಡು ಆಯುರ್ವೇದ ಔಷಧಿ ಸೇವನೆಯಿಂದ ಕೊರೊನಾದಿಂದ ತಮ್ಮ ಪ್ರಾಣ ಉಳಿಸಿಕೊಳ್ಳುತ್ತಿದ್ದಾರೆ.

ಗದಗ: ಸಾಂಕ್ರಾಮಿಕ ಕೊರೊನಾ ವೈರಸ್​ ಇದೀಗ ಹಳ್ಳಿಗಳಿಗೆ ಲಗ್ಗೆ ಹಾಕಿ ಸಾಲು ಸಾಲು ಸಾವಿಗೆ ಕಾರಣವಾಗ್ತಿದೆ. ಇದೇ ಕಾರಣಕ್ಕಾಗಿ ಅನೇಕ ಹಳ್ಳಿಗಳು ಕೋವಿಡ್​ ಹಾಟ್​ಸ್ಪಾಟ್​ಗಳಾಗಿ ಮಾರ್ಪಟ್ಟಿವೆ.ಆದರೆ ಇಲ್ಲೊಂದು ಗ್ರಾಮದಲ್ಲಿ ಮಹಾಮಾರಿ ಹಾವಳಿ ತಪ್ಪಿಸಲು ಹೊಸದೊಂದು ಐಡಿಯಾ ಹುಡುಕಿಕೊಂಡಿದ್ದಾರೆ.

ಕುಕ್ಕರ್​​ ಮೂಲಕ ಸ್ಟ್ರೀಮಿಂಗ್​ ವ್ಯವಸ್

ಸ್ಟ್ರೀಮಿಂಗ್ ವ್ಯವಸ್ಥೆ ಅಳವಡಿಸಿ ಕೊರೊನಾ ಕಂಟ್ರೋಲ್​ಗೆ ತಂದಿದ್ದಾರೆ.ಗದಗ ತಾಲೂಕಿನ ಹುಲಕೋಟಿ ಗ್ರಾಮದಲ್ಲಿ ಸುಮಾರು ನೂರಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಹೀಗಾಗಿ ಅಲ್ಲಿನ ಜನರ ನಿದ್ದೆಗೆಡಿಸಿತ್ತು. ಸ್ಥಳೀಯ ಶಾಸಕ ಹೆಚ್​​.ಕೆ. ಪಾಟೀಲ್​​ ಕೂಡ ಮುತುವರ್ಜಿಯಿಂದ ಆಯುಷ್​​ ಇಲಾಖೆಗೆ ಮನವಿ ಮಾಡಿದರು. ತಕ್ಷಣವೇ ಅಧಿಕಾರಿಗಳು ಗ್ರಾಮದಲ್ಲಿ ಟೆಂಟ್​​ ಅಳವಡಿಸಿ, ಆಯುರ್ವೇದ ಔಷಧಿ ಮತ್ತು ಸ್ಟ್ರೀಮಿಂಗ್​​ ವ್ಯವಸ್ಥೆ ಕಲ್ಪಿಸಿದ್ದಾರೆ.

ಇದನ್ನೂ ಓದಿ: ಗೌರಿಬಿದನೂರಿನ ಹೆಣ್ಣು ಮಗಳು ಇದೀಗ ತಮಿಳುನಾಡು ಸರ್ಕಾರದ ಮುಖ್ಯ ಕಾರ್ಯದರ್ಶಿ

ಜನರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಔಷಧಿಗಳ ಮೂಲಕ ಐದು ದಿನದ ಕೋರ್ಸ್​​ ಅಳವಡಿಸಿದ್ದಾರೆ. ಹುಲಕೋಟಿ ಗ್ರಾಮದಲ್ಲಿ 10 ಸಾವಿರ ಜನ ಸಂಖ್ಯೆಯಿದ್ದು, ಇದರಲ್ಲಿ ಪ್ರತಿ ದಿನ ನೂರಕ್ಕೂ ಹೆಚ್ಚು ಜನರಿಗೆ ಸ್ಟ್ರೀಮಿಂಗ್ ಮಾಡಲಾಗ್ತಿದೆ. ಆಯುಷ್ಯ ಇಲಾಖೆಯ ವತಿಯಿಂದ ಈ ಸ್ಟ್ರೀಮಿಂಗ್ ವ್ಯವಸ್ಥೆ ಮಾಡಲಾಗಿದೆ. ಇದು ಇಲ್ಲಿನ ಜನರಿಗೆ ಬಹಳಷ್ಟು ಪರಿಣಾಮಕಾರಿಯಾಗಿದೆ.

ಏನಿದು ಸ್ಟ್ರೀಮಿಂಗ್?

ಒಲೆ ಮೇಲೆ ಕುಕ್ಕರ್ ಇಟ್ಟು, ಅದಕ್ಕೆ ನೀರು ಹಾಕಿ ಅದರೊಳಗೆ ಆರಕ್ ಅಜೀಬ್ ಎಂಬ ಆಯುರ್ವೇದ ಔಷಧ ಹಾಕಿ ಬಿಸಿ ಮಾಡುತ್ತಾರೆ. ಆ ಬಿಸಿಯಾದ ನೀರಿನಿಂದ ಬರುವ ಆವಿಯನ್ನ ಪೈಪ್​ಗಳ ಮೂಲಕ ಜನರು ಸೇವಿಸುತ್ತಾರೆ. ಇದರಿಂದ ಜನರ ಶ್ವಾಸಕೋಶದಲ್ಲಿನ ಸಮಸ್ಯೆ ನಿವಾರಣೆಯಾಗಿ ಉಸಿರಾಟ ಸರಳವಾಗುತ್ತದೆ. ಜೊತೆಗೆ ಕ್ರಮೇಣವಾಗಿ ಸೋಂಕು ಕಡಿಮೆಯಾಗಿ ಕೊರೊನಾದಿಂದ ಗುಣಮುಖರಾಗುತ್ತಾರೆ.

ಸುಮಾರು 20 ದಿನಗಳಿಂದ ಗ್ರಾಮದಲ್ಲಿ ಈ ಟೆಂಟ್ ಅಳವಡಿಸಿದ್ದಾರೆ. ಜೊತೆಗೆ ಗ್ರಾಮದಲ್ಲಿ ಮಾಸ್ಕ್ ಹಾಕಿಕೊಳ್ಳುವುದು, ಸಾಮಾಜಿಕ ಅಂತರ ಮತ್ತು ಮನೆಯಲ್ಲಿದ್ದುಕೊಂಡು ಆಯುರ್ವೇದ ಔಷಧಿ ಸೇವನೆಯಿಂದ ಕೊರೊನಾದಿಂದ ತಮ್ಮ ಪ್ರಾಣ ಉಳಿಸಿಕೊಳ್ಳುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.