ETV Bharat / state

ತಮಗೆ ಬೇಕಾದ ಜಾತಿ ಪ್ರಮಾಣಪತ್ರ ಕೊಡ್ಲಿಲ್ಲ ಅಂತಾ ಅಧಿಕಾರಿಗಳ ವಿರುದ್ಧವೇ ಜಾತಿ ನಿಂದನೆ ಕೇಸ್​​​​! -

ತಮಗೆ ಬೇಕಾದ ಜಾತಿ ಪ್ರಮಾಣಪತ್ರ ಸಿಗಲಿಲ್ಲ ಅನ್ನೋ ಕಾರಣಕ್ಕೆ ತಹಶೀಲ್ದಾರ ಸೇರಿದಂತೆ ನಾಲ್ಕು ಜನ ಕಂದಾಯ ಅಧಿಕಾರಿಗಳ ಮೇಲೆ ಕೆಲ ಜನರು ಸೇರಿ ಜಾತಿ ನಿಂದನೆ ಕೇಸ್ ಹಾಕಿರುವ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಡೆದಿದೆ.

ಜಾತಿ ಪತ್ರ ನೀಡಲಿಲ್ಲವೆಂದು ಅಧಿಕಾರಿಗಳ ಮೇಲೆಯೇ ಜಾತಿ ನಿಂದನೆ ಕೇಸ್
author img

By

Published : Jul 25, 2019, 5:10 AM IST

ಗದಗ: ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ತಮಗೆ ಬೇಕಾದ ಜಾತಿ ಪ್ರಮಾಣಪತ್ರ ಸಿಗಲಿಲ್ಲ ಅನ್ನೋ ಕಾರಣಕ್ಕೆ ತಹಶೀಲ್ದಾರ ಸೇರಿದಂತೆ ನಾಲ್ಕು ಜನ ಕಂದಾಯ ಅಧಿಕಾರಿಗಳ ಮೇಲೆ ಕೆಲ ಜನರು ಸೇರಿ ಜಾತಿ ನಿಂದನೆ ಕೇಸ್ ಹಾಕಿದ್ದಾರೆ.

ಜಾತಿ ಪತ್ರ ನೀಡಲಿಲ್ಲವೆಂದು ಅಧಿಕಾರಿಗಳ ಮೇಲೆಯೇ ಜಾತಿ ನಿಂದನೆ ಕೇಸ್

ಇದರಿಂದ ಬೇಸರಗೊಂಡ ತಹಶೀಲ್ದಾರ ಹಾಗೂ ಕಂದಾಯಾಧಿಕಾರಿಗಳು, ಅರ್ಜಿದಾರರು ತಮ್ಮ ಜಾತಿಯ ಪ್ರಮಾಣಪತ್ರವನ್ನ ಕೇಳದೇ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ಕೇಳ್ತಿದ್ದಾರೆ. ಅಲ್ಲದೇ ನಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಅಂತಾ ತಮ್ಮ ಕಚೇರಿ ಬಂದ್ ಮಾಡಿ ಗದಗ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದಾರೆ.

ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಬಾಲೇಹೊಸೂರ ಗ್ರಾಮದ ಕೆಲ ಜನರು ಕಳೆದ ಕೆಲ ದಿನಗಳಿಂದ ತಮಗೆ ಗಂಟಿಚೋರ್ ಅಂದ್ರೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ಕೊಡಿ ಅಂತಾ ಲಕ್ಷ್ಮೇಶ್ವರ ತಹಶೀಲ್ದಾರ ಕಚೇರಿಗೆ ಅಲೆದಾಡ್ತಿದ್ದಾರೆ. ಅಲ್ಲದೇ ಈ ಕುರಿತು ಈ ಹಿಂದೆ ಪ್ರತಿಭಟನೆ ಕೂಡಾ ಮಾಡಿದ್ದಾರೆ. ಆದ್ರೆ ಆ ಜನರ ಕೋರಿಕೆಯ ಮೇರೆಗೆ ಅವರು ಪರಿಶಿಷ್ಟ ಜಾತಿಯ ಜನಾಂಗದವರಲ್ಲ. ಬದಲಾಗಿ ಗಿರಣಿ ವಡ್ಡರ್ ಅನ್ನೋ ಜಾತಿಗೆ ಅವರೆಲ್ಲ ಸೇರಿದ್ದಾರೆ ಅಂತಾ ಈವರೆಗೂ ಅಲ್ಲಿನ ತಹಶೀಲ್ದಾರರು ಕಾನೂನಿನ ಚೌಕಟ್ಟಿನಲ್ಲಿ ನಡೆದು, ಆ ಜನರಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡಿಲ್ಲ.

ಅಲ್ಲದೇ ಖುದ್ದು ತಹಶೀಲ್ದಾರರೇ ಆ ಗ್ರಾಮಕ್ಕೆ ಭೇಟಿ ನೀಡಿ ಪರಿಶಿಷ್ಟ ಜಾತಿ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಿದವರ ಹಾಗೂ ಅರ್ಜಿದಾರರ ತಂದೆ ಹಾಗೂ ತಾತನ ಶಾಲಾ ಪ್ರಮಾಣಪತ್ರ ಪರಿಶೀಲಿಸಿದಾಗ ಅದ್ರಲ್ಲಿ ಅರ್ಜಿದಾರರು ವಡ್ಡರ ಜಾತಿಗೆ ಸೇರಿದ್ದಾಗಿ ಕಂಡು ಬಂದಿದೆ‌. ಈ ವಿಚಾರವನ್ನ ಅರ್ಜಿದಾರರಿಗೆ ತಿಳಿಸಿದರೂ ಕೂಡಾ ಅವರು ಪದೇ ಪದೇ ತಹಶೀಲ್ದಾರ ಕಚೇರಿಗೆ ಬಂದು ಅಧಿಕಾರಿಗಳಿಗೆ ತೊಂದ್ರೆ ಕೊಡ್ತಿದ್ರು ಅನ್ನೋ ಕಾರಣಕ್ಕೆ ತಹಶೀಲ್ದಾರು ಅವರ ವಿರುದ್ಧ ಕರ್ತವ್ಯಕ್ಕೆ ಅಡ್ಡಿಪಡ್ಡಿಸಿದ್ದಾರೆ ಅನ್ನೋ ವಿಚಾರ ಇಟ್ಕೊಂಡು ಕೇಸ್ ಮಾಡಿದ್ದಾರೆ.

ಇದಕ್ಕೆ ಪರ್ಯಾಯವಾಗಿ ಮತ್ತೆ ಕಚೇರಿಗೆ ಬಂದ ಅರ್ಜಿದಾರರಾದ ಅನಂತ್ ಕಟ್ಟಿಮನಿ, ಮಲ್ಲೇಶಪ್ಪ ಚಪ್ಪರಮನಿ, ಹನುಮಪ್ಪ, ಸಾಲಿ, ರಾಮೇಶಪ್ಪ ಮುತ್ನಾಳ್ ಮತ್ತೆ ಗಲಾಟೆ ಮಾಡಿ ತಹಶೀಲ್ದಾರ ಸೇರಿದಂತೆ ನಾಲ್ವರು ಕಂದಾಯಾಧಿಕಾರಿಗಳ ವಿರುದ್ಧವೇ ಜಾತಿ ನಿಂದನೆ ಕೇಸ್ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಗದಗ: ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ತಮಗೆ ಬೇಕಾದ ಜಾತಿ ಪ್ರಮಾಣಪತ್ರ ಸಿಗಲಿಲ್ಲ ಅನ್ನೋ ಕಾರಣಕ್ಕೆ ತಹಶೀಲ್ದಾರ ಸೇರಿದಂತೆ ನಾಲ್ಕು ಜನ ಕಂದಾಯ ಅಧಿಕಾರಿಗಳ ಮೇಲೆ ಕೆಲ ಜನರು ಸೇರಿ ಜಾತಿ ನಿಂದನೆ ಕೇಸ್ ಹಾಕಿದ್ದಾರೆ.

ಜಾತಿ ಪತ್ರ ನೀಡಲಿಲ್ಲವೆಂದು ಅಧಿಕಾರಿಗಳ ಮೇಲೆಯೇ ಜಾತಿ ನಿಂದನೆ ಕೇಸ್

ಇದರಿಂದ ಬೇಸರಗೊಂಡ ತಹಶೀಲ್ದಾರ ಹಾಗೂ ಕಂದಾಯಾಧಿಕಾರಿಗಳು, ಅರ್ಜಿದಾರರು ತಮ್ಮ ಜಾತಿಯ ಪ್ರಮಾಣಪತ್ರವನ್ನ ಕೇಳದೇ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ಕೇಳ್ತಿದ್ದಾರೆ. ಅಲ್ಲದೇ ನಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಅಂತಾ ತಮ್ಮ ಕಚೇರಿ ಬಂದ್ ಮಾಡಿ ಗದಗ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದಾರೆ.

ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಬಾಲೇಹೊಸೂರ ಗ್ರಾಮದ ಕೆಲ ಜನರು ಕಳೆದ ಕೆಲ ದಿನಗಳಿಂದ ತಮಗೆ ಗಂಟಿಚೋರ್ ಅಂದ್ರೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ಕೊಡಿ ಅಂತಾ ಲಕ್ಷ್ಮೇಶ್ವರ ತಹಶೀಲ್ದಾರ ಕಚೇರಿಗೆ ಅಲೆದಾಡ್ತಿದ್ದಾರೆ. ಅಲ್ಲದೇ ಈ ಕುರಿತು ಈ ಹಿಂದೆ ಪ್ರತಿಭಟನೆ ಕೂಡಾ ಮಾಡಿದ್ದಾರೆ. ಆದ್ರೆ ಆ ಜನರ ಕೋರಿಕೆಯ ಮೇರೆಗೆ ಅವರು ಪರಿಶಿಷ್ಟ ಜಾತಿಯ ಜನಾಂಗದವರಲ್ಲ. ಬದಲಾಗಿ ಗಿರಣಿ ವಡ್ಡರ್ ಅನ್ನೋ ಜಾತಿಗೆ ಅವರೆಲ್ಲ ಸೇರಿದ್ದಾರೆ ಅಂತಾ ಈವರೆಗೂ ಅಲ್ಲಿನ ತಹಶೀಲ್ದಾರರು ಕಾನೂನಿನ ಚೌಕಟ್ಟಿನಲ್ಲಿ ನಡೆದು, ಆ ಜನರಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡಿಲ್ಲ.

ಅಲ್ಲದೇ ಖುದ್ದು ತಹಶೀಲ್ದಾರರೇ ಆ ಗ್ರಾಮಕ್ಕೆ ಭೇಟಿ ನೀಡಿ ಪರಿಶಿಷ್ಟ ಜಾತಿ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಿದವರ ಹಾಗೂ ಅರ್ಜಿದಾರರ ತಂದೆ ಹಾಗೂ ತಾತನ ಶಾಲಾ ಪ್ರಮಾಣಪತ್ರ ಪರಿಶೀಲಿಸಿದಾಗ ಅದ್ರಲ್ಲಿ ಅರ್ಜಿದಾರರು ವಡ್ಡರ ಜಾತಿಗೆ ಸೇರಿದ್ದಾಗಿ ಕಂಡು ಬಂದಿದೆ‌. ಈ ವಿಚಾರವನ್ನ ಅರ್ಜಿದಾರರಿಗೆ ತಿಳಿಸಿದರೂ ಕೂಡಾ ಅವರು ಪದೇ ಪದೇ ತಹಶೀಲ್ದಾರ ಕಚೇರಿಗೆ ಬಂದು ಅಧಿಕಾರಿಗಳಿಗೆ ತೊಂದ್ರೆ ಕೊಡ್ತಿದ್ರು ಅನ್ನೋ ಕಾರಣಕ್ಕೆ ತಹಶೀಲ್ದಾರು ಅವರ ವಿರುದ್ಧ ಕರ್ತವ್ಯಕ್ಕೆ ಅಡ್ಡಿಪಡ್ಡಿಸಿದ್ದಾರೆ ಅನ್ನೋ ವಿಚಾರ ಇಟ್ಕೊಂಡು ಕೇಸ್ ಮಾಡಿದ್ದಾರೆ.

ಇದಕ್ಕೆ ಪರ್ಯಾಯವಾಗಿ ಮತ್ತೆ ಕಚೇರಿಗೆ ಬಂದ ಅರ್ಜಿದಾರರಾದ ಅನಂತ್ ಕಟ್ಟಿಮನಿ, ಮಲ್ಲೇಶಪ್ಪ ಚಪ್ಪರಮನಿ, ಹನುಮಪ್ಪ, ಸಾಲಿ, ರಾಮೇಶಪ್ಪ ಮುತ್ನಾಳ್ ಮತ್ತೆ ಗಲಾಟೆ ಮಾಡಿ ತಹಶೀಲ್ದಾರ ಸೇರಿದಂತೆ ನಾಲ್ವರು ಕಂದಾಯಾಧಿಕಾರಿಗಳ ವಿರುದ್ಧವೇ ಜಾತಿ ನಿಂದನೆ ಕೇಸ್ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

Intro:

ಆ್ಯಂಕರ್ :- ತಮಗೆ ಬೇಕಾದ ಜಾತಿ ಪತ್ರ ಸಿಗಲಿಲ್ಲ ಅನ್ನೋ ಕಾರಣಕ್ಕೆ ತಹಶಿಲ್ದಾರ ಸೇರಿದಂತೆ ನಾಲ್ಕುಜನ ಕಂದಾಯ ಅಧಿಕಾರಿಗಳ ಮೇಲೆ ಕೆಲ ಜನರು ಸೇರಿ ಜಾತಿ ನಿಂದನೆ ಕೇಸ್ ಹಾಕಿರುವ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಡೆದಿದೆ.ಇದರಿಂದ ಬೇಸರಗೊಂಡ ತಹಶೀಲ್ದಾರ ಹಾಗೂ ಕಂದಾಯಧಿಕಾರಿಗಳು ಅರ್ಜಿದಾರರು ತಮ್ಮ ಜಾತಿಯ ಪ್ರಮಾಣ ಪತ್ರವನ್ನ ಕೇಳದೇ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ಕೇಳ್ತಿದ್ದಾರೆ. ಅಲ್ಲದೇ ನಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಅಂತಾ ಇಂದು ತಮ್ಮ ಕಛೇರಿ ಬಂದ್ ಮಾಡಿ ಗದಗ ಡಿಸಿ ಆಫೀಸ್ ಎದುರು ಪ್ರತಿಭಟನೆ ನಡೆಸಿ ಡಿಸಿಯವರಿಗೆ ಮನವಿ ಸಲ್ಲಿಸಿದ್ದಾರೆ.

Body:
ಹೌದು ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲ್ಲೂಕಿನ ಬಾಲೇಹೊಸೂರ ಗ್ರಾಮದ ಕೆಲ ಜನರು ಕಳೆದ ಕೆಲ ದಿನಗಳಿಂದ ತಮಗೆ ಗಂಟಿಚೋರ್ ಅಂದ್ರೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಕೊಡಿ ಅಂತಾ ಲಕ್ಷ್ಮೇಶ್ವರ ತಹಶಿಲ್ದಾರ ಕಛೇರಿಗೆ ಅಲೆದಾಡ್ತಿದ್ದಾರೆ.ಅಲ್ಲದೇ ಈ ಕುರಿತು ಈ ಹಿಂದೆ ಪ್ರತಿಭಟನೆಯನ್ನು ಕೂಡಾ ಮಾಡಿದ್ದಾರೆ.ಆದ್ರೆ ಆ ಜನ್ರ ಕೋರಿಕೆಯ ಮೇರೆಗೆ ಅವರು ಪರಿಶಿಷ್ಟ ಜಾತಿಯ ಜನಾಂಗದವರಲ್ಲ ಬದಲಾಗಿ ಗಿರಣಿ ವಡ್ಡರ್ ಅನ್ನೋ ಜಾತಿಗೆ ಅವರೆಲ್ಲ ಸೇರಿದ್ದಾರೆ ಅಂತಾ ಈವರೆಗೂ ಅಲ್ಲಿನ ತಹಶಿಲ್ದಾರರು ಕಾನೂನಿನ ಚೌಕಟ್ಟಿನಲ್ಲಿ ಆ ನಡೆದು ಆ ಜನ್ರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಿಲ್ಲ.ಅಲ್ಲದೇ ಖುದ್ದು ತಹಶಿಲ್ದಾರರೇ ಆ ಗ್ರಾಮಕ್ಕೆ ಭೇಟಿ ನೀಡಿ ಪರಿಶಿಷ್ಟಜಾತಿ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದವರ ಹಾಗೂ ಅರ್ಜಿದಾರರ ತಂದೆ ಹಾಗೂ ತಾತನ ಶಾಲಾಪ್ರಮಾಣ ಪತ್ರ ಪರಿಶೀಲಿಸಿದಾಗ ಅದ್ರಲ್ಲಿ ಅರ್ಜಿದಾರರು ವಡ್ಡರ ಜಾತಿಗೆ ಸೇರಿದ್ದಾಗಿ ಕಂಡು ಬಂದಿದೆ‌.ಈ ವಿಚಾರವನ್ನ ಅರ್ಜಿದಾರರಿಗೆ ತಿಳಿಸಿದ್ರು ಕೂಡಾ ಅವ್ರು ಪದೇಪದೇ ತಹಶಿಲ್ದಾರ ಕಛೇರಿಗೆ ಬಂದು ಅಧಿಕಾರಿಗಳಿಗೆ ತೊಂದ್ರೆ ಕೊಡ್ತಿದ್ರು ಅನ್ನೋ ಕಾರಣಕ್ಕೆ ತಹಶಿಲ್ದಾರು ಅವರ ವಿರುದ್ದ ಕರ್ತವ್ಯಕ್ಕೆ ಅಡ್ಡಿಪಡ್ಡಿಸಿದ್ದಾರೆ ಅನ್ನೊ ವಿಚಾರ ಇಟ್ಕೊಂಡು ಕೇಸ್ ಮಾಡಿದ್ದಾರೆ.ಇದಕ್ಕೆ ಪರ್ಯಾಯವಾಗಿ ಮತ್ತೆ ಕಛೇರಿಗೆ ಬಂದ ಅರ್ಜಿದಾರರಾದ ಅನಂತ್ ಕಟ್ಟಿಮನಿ,ಮಲ್ಲೇಶಪ್ಪ ಚಪ್ಪರಮನಿ,ಹನುಮಪ್ಪ, ಸಾಲಿ, ರಾಮೇಶಪ್ಪ ಮುತ್ನಾಳ್ ಮತ್ತೆ ಗಲಾಟೆ ಮಾಡಿ ತಹಶಿಲ್ದಾರ ಸೇರಿದಂತೆ ನಾಲ್ವರು ಕಂದಾಯಧಿಕಾರಿಗಳ ವಿರುದ್ಧವೇ ಜಾತಿನಿಂದನೆ ಕೇಸ್ ದಾಖಲಿಸಿದ್ದಾರೆ.ಇದ್ರಿಂದಾಗಿ ಇಂದು ಲಕ್ಷ್ಮೇಶ್ವರ ತಹಶಿಲ್ದಾರ ಕಛೇರಿ ಬಂದ್ ಮಾಡಿದ ಅಧಿಕಾರಿಗಳು ಗದಗ ಡಿಸಿ ಕಛೇರಿ ಎದುರು ಪ್ರತಿಭಟನೆ ಮಾಡಿ ಡಿಸಿಯವ್ರಿಗೆ ಮನವಿ ಸಲ್ಲಿಸಿದ್ದಾರೆ

ಬೈಟ್ ೧: ಎಸ್ ಎಸ್ ಪಾಟೀಲ್, ಲಕ್ಷ್ಮೇಶ್ವರ ಕಂದಾಯ ನೀರೀಕ್ಷಕ

ಇನ್ನೂ ಮುಂಚಿನಿಂದಲೂ ಲಕ್ಷ್ಮೇಶ್ವರ ತಾಲ್ಲೂಕಿನ ಬಾಲೇಹೊಸೂರಿನ ಗ್ರಾಮದ ಕೆಲ ಜನ್ರು ತಮ್ಮದಲ್ಲದ ಜಾತಿ ಪತ್ರವನ್ನು ಕೇಳ್ತಾಯಿದ್ದಾರೆ.ಅಲ್ಲದೇ ಕಾನೂನಾತ್ಮಕ ವಾಗಿ ಅವರಿಗೆ ಲಾಭ ದೊರೆತಿಲ್ಲ ಅನ್ನೋ ಕಾರಣಕ್ಕೆ ಅವರು ಜಾತಿ ನಿಂದನೆ ಕೇಸ್ ಹಾಕಿದ್ದಾರೆ.ಅಲ್ಲದೇ ನಮ್ಮ ಕೆಲಸಕ್ಕೂ ಸಹ ಅಡ್ಡಿಪಡಿಸ್ತಾಯಿದ್ದಾರೆ .ಇವ್ರಿಂದ ನಮಗೆ ಸರಕಾರ ನೌಕರಿ ಮಾಡೋಕು ಕಷ್ಟ ಆಗ್ತಾಯಿದೆ.ಹೀಗಾಗಿ ಈ ಸುಳ್ಳು ಆಪಾದನೆಯಿಂದ ನಮಗೆ ಸೂಕ್ತ ರಕ್ಷಣೆ ನೀಡಬೇಕು ಅಂತಾ ಡಿಸಿ ಅವ್ರಿಗೆ ಮನವಿ ಸಲ್ಲಿಸಿದ್ದಾರಂತೆ

ಕುಮಾರ ಅಣ್ಣಿಗೇರಿ .ಕಂದಾಯ ಇಲಾಖೆ ನೌಕರರ ಸಂಘದ ಜಿಲ್ಲಾಧ್ಯಕ್ಷ
Conclusion:ಒಟ್ಟಿನಲ್ಲಿ ಶಾಲಾ ಪ್ರಮಾಣ ಪತ್ರದಲ್ಲಿ ಗಿರಣಿ ವಡ್ಡರ್ ಅಂತಾಯಿದ್ರೂ ಕೂಡಾ ಗಂಟಿಚೋರ್ ಅಂದ್ರೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಕೇಳ್ತಿರೋದೇ ತಪ್ಪು.ಅಂಥದ್ರಲ್ಲಿ ಜಾತಿ ನಿಂದನೆ ಅನ್ನೊ ಸುಳ್ಳು ಆರೋಪ ಮಾಡಿ ತಹಶಿಲ್ದಾರ ವಿರುದ್ಧವೇ ಕೇಸ್ ದಾಖಲು ಮಾಡೋದು ತೀರಾ ತಪ್ಪು ಅಂತಿರೊ ಕಂದಾಯ ಇಲಾಖಾಧಿಕಾರಿಗಳು ಹಾಗೂ ಅವರು ಸಂಘಟನೆಗಳು ಗಂಟಿಚೋರ್ ಜಾತಿಪ್ರಮಾಣಕ್ಕಾಗಿ ಪತ್ರ ಸಲ್ಲಿಸಿರೊ ವಿರುದ್ಧ ಕಾನೂನಾತ್ಮವಾಗಿ ತೊಡೆ ತಟ್ಟಿದ್ದಾರೆ.ಈ ಬಗ್ಗೆ ಡಿಸಿಯವ್ರು ಯಾವ ಕ್ರಮ ಕೈಗೊಳ್ತಾರೆ ಕಾದು ನೋಡಬೇಕಾಗಿದೆ..

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.